ಸಾಮಾನ್ಯ ಜ್ಞಾನ (ವಾರ 86): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು
1.    ನೆಹರೂ ಸಾಕ್ಷರತಾ ಪ್ರಶಸ್ತಿಯನ್ನು ನೀಡುವ ಸಂಸ್ಥೆ ಯಾವುದು?
2.    ಎಸ್.ಐ.ಟಿ.ಈ ನ ವಿಸ್ತೃತ ರೂಪವೇನು?
3.    ಬೀರ್‍ಬಲ್ ಸಾಹ್ನಿ ಇನ್ಸ್‍ಸ್ಟಿಟ್ಯೂಟ್ ಫಾರ್ ಪಾಲಿಯೊಬಾಟನಿ ಎಲ್ಲಿದೆ?
4.    ಲವಂಗಗಳ ದ್ವೀಪ ಎಂದು ಯಾವುದನ್ನು ಕರೆಯುತ್ತಾರೆ?
5.    ಭಾಕ್ರನಂಗಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
6.    ‘ಎ ಫಾರೆನ್ ಪಾಲಿಸಿ ಫಾರ್ ಇಂಡಿಯಾ’ ಕೃತಿಯ ಕರ್ತೃ ಯಾರು?
7.    ಕೋಲ್‍ಟಾರ್‍ನ ತಯಾರಿಕೆಯಲ್ಲಿ ಬಳಸುವ ಕಲ್ಲಿದ್ದಲು ಯಾವುದು?
8.    ಕರ್ನಾಟಕದಲ್ಲಿ ಭೂಗರ್ಭ ಇಲಾಖೆಯನ್ನು ಸ್ಥಾಪಿಸಲಾದ ವರ್ಷ ಯಾವುದು?
9.    ವಿದ್ಯುತ್ ಪ್ಯೂಜ್‍ನಲ್ಲಿ ಬಳಸುವ ಲೋಹ ಯಾವುದು?
10.    ಕನ್ನಡ ಕಾವ್ಯದಲ್ಲಿ ಮೊಟ್ಟಮೊದಲು ರಗಳೆ ಬಳಸಿದ ಕವಿ ಯಾರು?
11.    ಪದ್ಮಾವತಿ ಎಂಬ ಉರ್ದು ಕಾವ್ಯವನ್ನು ರಚಿಸಿದ ಸಂತ ಯಾರು?
12.    ಎ.ಆರ್.ಕೃಷ್ಣಶಾಸ್ತ್ರಿಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದೆ?
13.    ಕೇಂದ್ರ ಸರ್ಕಾರದ ಎಮೆರೈಟೀಸ್ ಫೆಲೋಶಿಫ್ ಪಡೆದ ಕರ್ನಾಟಕದ ಮೊದಲ ಲೇಖಕಿ ಯಾರು?
14.    ಇಂಡಿಯನ್ ಒಪಿನಿಯನ್ ಪತ್ರಿಕೆಯ ಸಂಪಾದಕರು ಯಾರಾಗಿದ್ದರು?
15.    ಡೆನ್ಮಾರ್ಕ್‍ನಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
16.    ಸರ್ದಾರ್ ವಲ್ಲಭಬಾಯಿ ಪಟೇಲ ವಿಮಾಣ ನಿಲ್ದಾಣ ಎಲ್ಲಿದೆ?
17.    ಯಾವ ನದಿಗೆ ತೆಹರಿ ಅಣೆಕಟ್ಟನ್ನು ಕಟ್ಟಲಾಗಿದೆ?
18.    ಶಂಬು ಮಹಾರಾಜ ಯಾವ ನಾಟ್ಯದಲ್ಲಿ ಹೆಸರು ಮಾಡಿದ್ದಾರೆ?
19.    ಫರ್ಸಿಯಾದ ರಾಂiÀiಭಾರಿಯಾಗಿ 1403 ರಲ್ಲಿ ವಿಜಯನಗರಕ್ಕೆ ಬಂದ ಪ್ರವಾಸಿಗ ಯಾರು?
20.    ಹಜಾರ ರಾಮಸ್ವಾಮಿಯ ದೇವಾಲಯವನ್ನು ನಿರ್ಮಿಸಿದ ವಿಜಯ ನಗರದ ದೊರೆ ಯಾರು?
21.    1920ರಲ್ಲಿ ನಡೆದ ಮೊದಲ ಕರ್ನಾಟಕ ರಾಜಕೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ಯಾರು?
22.    ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದವರು ಯಾರು?
23.    ಇತ್ಮ್‍ದ್-ಉದ್-ದೌಲಾ ಗೋಪುರ ಎಲ್ಲಿದೆ?
24.    ವಾಟರ್ ಲೂ ಕದನ ನಡೆದ ವರ್ಷ ಯಾವುದು?
25.    ಸಸ್ಯದ ಆಹಾರವನ್ನು ತಯಾರಿಸುವ ಹಾಗೂ ನೀರನ್ನು ವಿಸರ್ಜಿಸುವ ಸಸ್ಯದ ಭಾಗ ಯಾವುದು?
26.    ದೇಶದ ಪ್ರಥಮ ಮುಂಗಡ ಪತ್ರವನ್ನು ಲೋಕಸಭೆಯಲ್ಲಿ ಮಂಡಿಸಿದವರು ಯಾರು?
27.    ರಾಷ್ಟ್ರೀಯ ಆದಾಯವನ್ನು ಮಾಪನ ಮಾಡುವ ಸಂಸ್ಥೆ ಯಾವುದು?
28.    ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆ ಯಾವುದು?
29.    ಹಂಪೆಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿ ಇದೆ?
30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.


ಉತ್ತರಗಳು:-
1.    ಭಾರತೀಯ ವಯಸ್ಕರ ಶಿಕ್ಷಣ ಸಂಸ್ಥೆ
2.    ಸ್ಯಾಟ್‍ಲೈಟ್ ಇನ್ಸ್‍ಟ್ರಕ್ಸನಲ್ ಟೆಲಿವಿಷನ್ ಎಕ್ಸ್‍ಪರಿಮೆಂಟ್
3.    ಲಕ್ನೋ
4.    ಜಾಂಜಿಬಾರ್
5.    ಸಟ್ಲೇಜ್
6.    ಐ.ಕೆ.ಗುಜ್ರಾಲ್
7.    ಬಿಟುಮಿನಸ್
8.    1894
9.    ಸೀಸ&ತವರ
10.    ಹರಿಹರ
11.    ಮೊಹಮ್ಮದ್ ಜಾಯಸಿ
12.    ಬಂಕಿಮಚಂದ್ರ
13.    ಶ್ರೀಮತಿ ಸುಲೋಚನಾದೇವಿ ಆರಾದ್ಯ
14.    ಮಹಾತ್ಮ ಗಾಂಧಿ
15.    ಕ್ರೋನೆ
16.    ಅಹಮದಾಬಾದ್
17.    ಭಾಗೀರಥಿ
18.    ಕಥಕ್
19.    ಅಬ್ದುಲ್ ರಝಾಕ್
20.    ಕೃಷ್ಣದೇವರಾಯ
21.    ವಿ.ಪಿ.ಮಾಧವರಾವ್
22.    ಜಯಪ್ರಕಾಶ್ ನಾರಾಯಣ್
23.    ಆಗ್ರಾ
24.    1815
25.    ಎಲೆ
26.    ಷಣ್ಮುಗಂ ಚೆಟ್ಟಿ
27.    ಕೇಂದ್ರೀಯ ಅಂಕಿ ಅಂಶ ಸಂಸ್ಥೆ
28.    ಹಾಕಿ
29.    ವಿಜಯ ವಿಠ್ಠಲ
30.    ಪಂಡಿತ್ ರವಿಶಂಕರ್ (ಭಾರತರತ್ನ ಪ್ರಶಸ್ತಿ ಪುರಸ್ಕøತರು)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Lakshman Patath
Lakshman Patath
6 years ago

ತುಂಬಾ ದನ್ಯವಾದಗಳು ಮಹಾಂತೇಶ ಸರ್. ಬಹಳ ಉಪಯುಕ್ತವಾಗುವಂತಹ ಮಾಹಿತಿ. 

1
0
Would love your thoughts, please comment.x
()
x