ಇಬ್ಬರ ಕವಿತೆಗಳು : ಎಂ.ಎಂಸ್. ಕೃಷ್ಣಮೂರ್ತಿ, ಮೋಹನ್. ಡಿ.

ಇರಲಿರಲಿ ಈ ಗರ್ಭ
ಪ್ರಸವಕ್ಕಿನ್ನೂ ಒಂಬತ್ತು ದಿನ

ಒಂಬತ್ತು ನಿಮಿಷ

ಒಂಬತ್ತು ಘಳಿಗೆಗಳಿವೆಯಂತೆ

ಏದುಸಿರು ನಿಟ್ಟಿಸುರಿನೊಂದಿಗೆ ಮಿಳಿತವಾಗಿದೆ

ಗರ್ಭ ಕಟ್ಟುವುದು ಒಂದು ಅಮೃತ ಘಳಿಗೆಯಂತೆ

ಸತ್ತ ವೀರ್ಯದ ಜೋತೆಗೆ ಒಂದೇ ಒಂದು ಗೆದ್ದ ವೀರ್ಯ

ಕಾದು ಕುಳಿತ ಅಂಡಾಣು

ಕೂಡುವಿಕೆಗೆ ಮಹೂರ್ತವಿಟ್ಟುಕೊಂಡಿರಬೇಕಂತೆ ಮನಸ್ಸು ಮನಸ್ಸು ಒಂದಾಗಿ

ಆದರೆ ನನ್ನದು

ಕೊಳಕು ಮನಸ್ಸಿನ, ಅವನ ದೇಹ ಮುಗಿಬಿದ್ದು ತೆವಲು ತಿರಿಸಿಕೊಳ್ಳಲು
ತೊಟ್ಟಿಯೊಳಗೆ ಸುರಿವ ಕೊಳಕಿನಂತೆ ಸ್ರವಿಸಿ ಬಿಟ್ಟ ವೀರ್ಯಧಾರೆ

ಮನಸ್ಸು, ದೇಹವನ್ನು ಕಿತ್ತು ತಿಂದು ಅತ್ಯಾಚಾರ ಮಾಡಿಟ್ಟುಬಿಟ್ಟ

ಆ ಮೃಗದ ದಿನಂಪ್ರತಿ ಅತ್ಯಾಚಾರಕ್ಕೆ ಧಿಕ್ಕಾರವಾಗಿ

ನಿರಾಕರಿಸಿದ್ದೇನೆ ಅವನ ಕೊಳಕು ದೇಹ, ಮನಸ್ಸು,

ಇರಲಿರಲಿ ಈ ಗರ್ಭ

ಗೆಲುವು ಸಾದಿಸಿತ್ತೇನೆ ದೇಹದ ಮೇಲೆ

ಹುಟ್ಟುವ ಕಂದನಿಗೂ ಹೇಳಿಕೊಡುತ್ತೇನೆ ವೀರ್ಯದ ಮಹತ್ವವ.

ಬದುಕಿಗೊಂದು ಅರ್ಥಕಂಡುಕೊಳ್ಳುತ್ತೇನೆ

ಮನಸ್ಸು ಗೆಲ್ಲದೆ ಹೋದ ಈ ವೀರ್ಯದೊಂದಿಗೆ.

ನನ್ನದೊಂದು ಜೀವಕಣ ಸೇರಿಸಿ………

-ಎಂ.ಎಂಸ್. ಕೃಷ್ಣಮೂರ್ತಿ.

 

 

 

 

 

ಕನ್ನಡಿ

ಕನ್ನಡಿಯೂ ಅಸಹ್ಯ ಪಡುತ್ತಿತ್ತು
ಗೋಸುಂಬೆಗಳನ್ನೂ ಮೀರಿಸುವಂತವರ ಕಂಡು…

ಕೂಗಿಕೊಳ್ಳುತ್ತಿತ್ತು ಹಕ್ಕಿಯೊಂದು ಗೂಡು ಉಳಿಸಿಕೊಳ್ಳಲು…

ಕುಣಿಸುತ್ತಿತ್ತು, ಕುಣಿಯುತ್ತಿತ್ತು,
ತುಳಿಯುತ್ತಿತ್ತು,
ಕರುಣೆಯಿಲ್ಲದ
ದುಡ್ಡು…

ಆದರೂ ಮಲಗಿದ್ದಾಳೆ
ಶಾಂತಿ
ದರಿದ್ರ, ಆಲಸ್ಯ, ದಿವ್ಯ ನಿರ್ಲಕ್ಷ್ಯದಿಂದ ಮತ್ತು ಭಯದಿಂದ…

-ಮೋಹನ್, ಡಿ.
ಚಿತ್ರದುರ್ಗ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

19 Comments
Oldest
Newest Most Voted
Inline Feedbacks
View all comments
Utham Danihalli
11 years ago

Kisnana thumba chenagidhe athiyollagina mithiyollage
gathi kannisuvanthe

Mohan avara kavanavu sogasagidhe

M..S.Krishna Murthy
M..S.Krishna Murthy
11 years ago

ಧನ್ಯವಾದಗಳು ಉತ್ತಂ

sharada moleyar
sharada moleyar
11 years ago

"ಇರಲಿರಲಿ ಈ ಗರ್ಭ"    kavite thumba hidisitu.
kaviya kalpanege namo namaha……………

M..S.Krishna Murthy
M..S.Krishna Murthy
11 years ago

ಧನ್ಯವಾದಗಳು ,

ಶ್ರೀವತ್ಸ ಕಂಚೀಮನೆ.

ನಿಜಕ್ಕೂ ಎರಡೂ ಕವಿತೆಗಳು  ತುಂಬಾನೇ ಇಷ್ಟವಾದವು….

M..S.Krishna Murthy
M..S.Krishna Murthy
11 years ago

ಧನ್ಯವಾದಗಳು

Upendra
Upendra
11 years ago

ಅರ್ಥಗರ್ಭಿತ  …ಈ ಗರ್ಭ. ಉಚ್ಚ ವಿಚಾರಧಾರೆ.
ಕನ್ನಡಿಯಲ್ಲಿ  ಬೇಂದ್ರೆಯವರ 'ಕುರುಡು ಕಾಂಚಾಣ'ದ ನೆರಳಿದೆ. ಸೊಗಸಾಗಿದೆ.

M..S.Krishna Murthy
M..S.Krishna Murthy
11 years ago
Reply to  Upendra

ಧನ್ಯವಾದಗಳು ಉಪೇಂದ್ರ ಸರ್

ಸುಮತಿ ದೀಪ ಹೆಗ್ಡೆ

ಕೃಷ್ಣಮೂರ್ತಿ ಸರ್ ಮತ್ತು ಮೋಹನ್ ಅವರೆ, ನಿಮ್ಮಿಬ್ಬರ  ಕವಿತೆ ತುಂಬಾನೇ ಚೆನ್ನಾಗಿದೆ. ಇಷ್ಟ ಆಯ್ತು.. 

M..S.Krishna Murthy
M..S.Krishna Murthy
11 years ago

ಧನ್ಯವಾದಗಳು ಸುಮತಿಯವರೆ

M..S.Krishna Murthy
M..S.Krishna Murthy
11 years ago

ನಿಮ್ಮ "ಕನ್ನಡಿ" ಕವಿತೆ ಚೆನ್ನಾಗಿದೆ ಮೊಹನ್ ಡಿ ಅವರೆ, ಪಂಜು ವಿನಲ್ಲಿ ಪ್ರಕಟವಾಗಿರುವುದಕ್ಕಾಗಿ ಅಭಿನಂದನೆಗಳು

Raghunandan K
11 years ago

ಗೆದ್ದ ವೀರ್ಯ ಸೋಲಿಸಿ ಕಾಡುವಂತೆ ಅರಂಭವಾಗಿ, ಸೋತ ನೋವನ್ನ ಕಣದೊಳಗೆ ಸೇರಿಸಿ ಗೆಲ್ಲಿಸುವ ಹಪಹಪಿಯಂತೆ ಮುಕ್ತಾಯವಾದ ಕವನದ ತೀವ್ರತೆ ಇಷ್ಟವಾಯಿತು… ಎಂದಿನಂತೆ ಕೃಷ್ಣಮೂರ್ತಿಯವರಿಂದ ಿಷ್ಟವಾಗುವಂತಹ ಕವನ…
ಕನ್ನಡಿ ಇನ್ನಷ್ಟು ಹೊಳೆಯಬೇಕಿದೆ…

Sharath Chakravarthi
Sharath Chakravarthi
11 years ago

ಎರಡು ಕೂಡ ತುಂಬಾ ಚನ್ನಾಗಿವೆ

M.S.Krishna Murthy
M.S.Krishna Murthy
11 years ago

ಧನ್ಯವಾದಗಳು ಶರತ್ ಜಿ 

ಆತ್ರಾಡಿ ಸುರೇಶ ಹೆಗ್ಡೆ

ಎಂ. ಎಸ್.  ಕೃಷ್ಣಮೂರ್ತಿ:

"ಪ್ರಸವಕ್ಕಿನ್ನೂ ಒಂಬತ್ತು ದಿನ
ಒಂಬತ್ತು ನಿಮಿಷ
ಒಂಬತ್ತು ಘಳಿಗೆಗಳಿವೆಯಂತೆ" ಇದರ ಬದಲು:

"ಪ್ರಸವಕ್ಕಿನ್ನೂ ಒಂಬತ್ತು ದಿನ
ಒಂಬತ್ತು ಘಳಿಗೆ
ಒಂಬತ್ತು ನಿಮಿಷಗಳಿವೆಯಂತೆ" ಇದು ಸೂಕ್ತ.

ಪ್ರವಕ್ಕಿನ್ನು ಕೇವಲ ಒಂಬತ್ತು ದಿನಗಳಿರುವಾಗ ಗರ್ಭ ಇರಬೇಕೋ ಅಥವಾ ಬೇಡವೋ ಅನ್ನುವ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯವೇ?

ಕವಿತೆಯಲ್ಲಿನ ಇನ್ನುಳಿದ ಭಾವ, ಭಾವಾಭಿವ್ಯಕ್ತಿ ಹಾಗೂ  ಆಶಯಗಳಿಗೆ ನನ್ನ ಮೆಚ್ಚುಗೆಗಳಿವೆ!

M.S.Krishna Murthy
M.S.Krishna Murthy
11 years ago

ಧನ್ಯವಾದ ,, ಗರ್ಭ ಇರಬೇಕು ಎಂಬ ನಿರ್ದಾರ ತೆಗೆದುಕೊಂಡಾದ( ನಂಬಿಕೆ ದ್ರೋಹ- ಮತ್ತು ಅನಿವಾರ್ಯವಾಗಿ) ಮೇಲೆ ತನಗೆ ತಾನೆ ಹೇಳಿಕೊಳ್ಳುವ ಸಾಲುಗಳು ಅವು… ಒಂದು ರೀತಿಯ ಆತಂಕದಿಂದ ಹೇಳಿಕೊಳ್ಳುವುದು…

ಆತ್ರಾಡಿ ಸುರೇಶ ಹೆಗ್ಡೆ

ಮೋಹನ್. ಡಿ. ಇದು ತಪ್ಪು.
ಮೋಹನ್ ಡಿ. ಇದು ಸರಿ

ಒಂಟಿ ಬಿಂದು (.) ಬಳಕೆಯಾಗುವುದು ಸಂಕ್ಷಿಪ್ತ ರೂಪದೊಂದಿಗೆ  ಅಥವಾ ವಾಕ್ಯದ ಕೊನೆಯಲ್ಲಿ ಮಾತ್ರ.
 

chinmay mathapati
chinmay mathapati
11 years ago

ಎರಡೂ ಕವಿತೆಗಳು ಅನನ್ಯವಾಗಿ ಮೂಡಿ ಬಂದಿವೆ…………………

Jaya Nanaiah
Jaya Nanaiah
11 years ago

eradu kavana galu chennagive..

19
0
Would love your thoughts, please comment.x
()
x