ಕಾವ್ಯಧಾರೆ

ಕವಿತೆಗಳು:ಅಶೋಕ್ ಕುಮಾರ್ ವಳದೂರು, ಸ್ವರೂಪಾನಂದ ಕೆ., ಶಿದ್ರಾಮ ಸುರೇಶ ತಳವಾರ

ಸಂಘರ್ಷ ಇಂದು ನಿನ್ನೆಗಳದಲ್ಲ ಇದು ಹುಟ್ಟು ಸಾವೆಂಬ ಭವ -ಭಯ ಮೊಳಕೆಗೆ ಝರಿ ನೀರಲಿ ಕೊಳೆಯುವ ಕಳೆಯುವ ಅಂಜಿಕೆ   ಮೊಣಕಾಲೂರಿ ದೈನನಾಗಿ ಪ್ರಪಂಚ ನೋಡಿದಂದಿನಿಂದ ಸಾಧನೆಯ ಹುಚ್ಚು ಮೇಲೇರುವ ಕೆಚ್ಚು ಅಂದೇ ಶುರುವಾಯಿತು ನೋಡಿ ಸಂಘರ್ಷ !   ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು ಜರ್ಜರಿತ  ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !   ಬೇಸರಾಗಿ  ಬೇಡದ  ಜೀವಕ್ಕೆ ಸಮಾಜ ಕಟ್ಟಿದ್ದ […]

ಕಾವ್ಯಧಾರೆ

ಎರಡು ಕವಿತೆಗಳು: ಅನುರಾಧ ಪಿ. ಸಾಮಗ, ಅಶೋಕ್ ಕುಮಾರ್ ವಳದೂರು

ಒಮ್ಮೊಮ್ಮೆ.. ಜಾಗೃತಾವಸ್ಥೆಯೊಂದು ರಾಜ್ಯ, ನಂಬಿಕೆಯ ನಿರಂಕುಶಪ್ರಭುತ್ವ. ಅನಭಿಷಿಕ್ತ ದೊರೆ, ಸರಾಗ ಆಳ್ವಿಕೆ. ಎಲ್ಲೋ ಒಮ್ಮೊಮ್ಮೆ ಪರಿಸ್ಥಿತಿ ದಂಗೇಳುತ್ತವೆ, ಪಟ್ಟ ಅಲ್ಲಾಡುತದೆ, ಕಿರೀಟವುರುಳಿ ಮೀಸೆ ಮಣ್ಣುಮುಕ್ಕಾಗಿ…. ಹೊರಗಿಷ್ಟೆಲ್ಲ ಆದರೂ ಒಳಸುಳಿಯಲೆಲ್ಲೋ ಅದೇ ರಾಜನುಳಿಯುತಾನೆ, ಅಹಿತಕಾಲದ ಹೆಜ್ಜೆಗೆ ಯತ್ನದ ಗೆಜ್ಜೆ ತೊಡಿಸುತಲೇ ಸಕಾಲ ಪ್ರಕಟನಾಗುತ್ತಾನೆ.   ಸ್ವಪ್ನಸಾಮ್ರಾಜ್ಯದಲೆಲ್ಲ ಬುಡಮೇಲು ತಟ್ಟೆಯ ಕಾಳು ಬಿಟ್ಟು ಭ್ರಮನಿರಸನದ ಗೊಬ್ಬರಗುಂಡಿಯಲಿ ಅಪನಂಬಿಕೆಯ ಹುಳಕೆ ಕೆದಕುವ ಕೋಳಿಕನಸ ರಾಜ್ಯಭಾರ. ಒಮ್ಮೊಮ್ಮೆ ಸಂತೃಪ್ತ, ಒಮ್ಮೊಮ್ಮೆ ಅಲ್ಲ.   ಭಯಸಂಶಯ ಕೆಡುಕೆದುರು ನೋಡುತಾವೆ ಚಂದ್ರನೂ ಸೂರ್ಯನಂತುರಿಯುತಾ, ತಾರೆಸಾಲು ಮಿಂಚೆರಗಿದಂತೆರಗುತಾ, […]