ಸಾಮಾನ್ಯ ಜ್ಞಾನ (ವಾರ 49): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ಇತ್ತೀಚಿಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨.    ಇತ್ತೀಚಿಗೆ ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು?
೩.    ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ ಎಲ್ಲಿದೆ?
೪.    ವಿಜಯ ವಿಠಲ ಇದು ಯಾರ ಅಂಕಿತನಾಮವಾಗಿದೆ?
೫.    ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು?
೬.    ಸನಾದಿ ಅಪ್ಪಣ್ಣ ಕಾದಂಬರಿಯನ್ನು ಬರೆದವರು ಯಾರು?
೭.    ಮಾನವನ ದೇಹದಲ್ಲಿ ಮೂತ್ರಜನಕಾಂಗದ ಮೇಲೆ ಇರುವ ಗ್ರಂಥಿಯ ಹೆಸರೇನು?
೮.    ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಈ ಗೀತೆಯನ್ನು ಬರೆದವರು ಯಾರು?
೯.    ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಯಾರು ಪ್ರಾರಂಭಿಸಿದರು?
೧೦.    ನಿಸರ್ಗ ಪ್ರಿಯ ಇದು ಯಾರ ಕಾವ್ಯನಾಮ?
೧೧.    ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
೧೨.    ಹಸಿರು – ಹೊನ್ನು ಈ ಜನಪ್ರಿಯ ಪುಸ್ತಕದ ಲೇಖಕರು ಯಾರು?
೧೩.    ವಾಸ್ಕೋಡಿಗಾಮ ಭಾರತಕ್ಕೆ ಸಮುದ್ರದ ಮೂಲಕ ಕಾಲಿಟ್ಟ ವರ್ಷ ಯಾವುದು?
೧೪.    ಡಾ||ಎಂ.ಎಸ್.ಸ್ವಾಮಿನಾಥರವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ?
೧೫.    ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೬.    ಹರಿದ್ವಾರ ಯಾವ ನದಿಯ ದಡದ ಮೇಲಿದೆ?
೧೭.    ಕಸೌಲಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೮.    ಗುರೂಜಿ ಎಂದು ಬಿರುದು ಹೊಂದಿದ ಭಾರತ ಪ್ರಸಿದ್ಧ ವ್ಯಕ್ತಿ ಯಾರು?
೧೯.    ಫಿರಾಕ್ ಗೋರಖ್ ಪುರಿ ಉರ್ದು ಲೇಖಕ ಅವರ ಯಾವ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ?
೨೦.    ಮಿಝೋರಾಂ ರಾಜ್ಯದ ರಾಜಧಾನಿ ಯಾವುದು?
೨೧.    ಖ್ವಾಜಾ ಬಂದಾನವಾಜ್ ದರ್ಗಾ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨೨.    ೧೯೯೪ರಲ್ಲಿ ಗಿರೀಶ್ ಕಾರ್ನಾಡರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
೨೩.    ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್‌ಆರ್ಟ್ ಎಲ್ಲಿದೆ?
೨೪.    ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ ಮಹಿಳೆ ಯಾರು?
೨೫.    ಇತ್ತೀಚಿಗೆ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಕೈಗೊಂಡಾಗ ನ್ಯೂಯಾರ್ಕಿನ ಯಾವ ಸ್ಥಳದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು?
೨೬.    ಇತ್ತೀಚಿಗೆ ನಡೆದ ಹದಿನೇಳನೆಯ ಏಷ್ಯಾನ್ ಕ್ರೀಡಾಕೂಟದಲ್ಲಿ ಯೋಗೇಶ್ವರ ದತ್ತ ರವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರಕಿದೆ?
೨೭.    ವಾಂಖೆಡೆ ಕ್ರೀಡಾಂಗಣ ಯಾವ ನಗರದಲ್ಲಿದೆ?
೨೮.    ಕನ್ನಡದ ಮೊದಲ ಚಲನಚಿತ್ರ ಪತ್ರಿಕೆ ಯಾವುದು?
೨೯.    ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದು ಹಾಕಿದ ವರ್ಷ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.


ಈ ವಾರದ ಪ್ರಸಿದ್ದ ದಿನಾಚರಣೆಗಳು
ಅಕ್ಟೋಬರ್ – ೧೪ ವಿಶ್ವ ಮಾಪಕ ದಿನ 
ಅಕ್ಟೋಬರ್ – ೧೬ ವಿಶ್ವ ಆಹಾರ ದಿನ 

ಉತ್ತರಗಳು:
೧.    ತುಮಕೂರು
೨.    ಪನ್ನೀರ್ ಸೆಲ್ವಂ
೩.    ಮಂಗಳೂರು
೪.    ವಿಜಯದಾಸರು
೫.    ಶಾಂತಿಗಾಗಿ ಪ್ರಯತ್ನಿಸಿದವರಿಗೆ
೬.    ಕೃಷ್ಣಮೂರ್ತಿ ಪುರಾಣಿಕ 
೭.    ಜನನಗ್ರಂಥಿ
೮.    ಹುಯಿಲ್‌ಗೋಳ ನಾರಾಯಣ್‌ರಾವ್ 
೯.    ಸ್ಟ್ಯಾಲಿನ್
೧೦.    ಸಿದ್ದಲಿಂಗಯ್ಯ
೧೧.    ಬಿಹಾರ
೧೨.    ಬಿ.ಜಿ.ಎಲ್.ಸ್ವಾಮಿ
೧೩.    ೧೪೫೮
೧೪.    ಕೃಷಿ
೧೫.    ಬಾಗಲಕೋಟೆ
೧೬.    ಗಂಗಾ
೧೭.    ಹಿಮಾಚಲ ಪ್ರದೇಶ
೧೮.    ಶ್ರೀ ಎಂ.ಎನ್.ಗೋಳೆಲ್ಕರ್
೧೯.    ಗುಲ್-ಎ-ನಗ್ಮಾ
೨೦.    ಐಜ್ವಾಲ್
೨೧.    ಗುಲ್ಬರ್ಗಾ
೨೨.    ತಲೆದಂಡ 
೨೩.    ದೆಹಲಿ
೨೪.    ಮೇಡಮ್ ರೂಸ್ತುಂ ಕಾಯಾ
೨೫.    ಮ್ಯಾಡಿಸನ್ ಸ್ಕ್ವೇರ್
೨೬.    ಕುಸ್ತಿ
೨೭.    ಮುಂಬೈ
೨೮.    ಸಿನಿಮಾ (೧೯೩೬)
೨೯.    ೧೯೭೭
೩೦.    ಟಿ.ಆರ್.ಮಹಾಲಿಂಗಂ (ಪ್ರಸಿದ್ಧ ಕೊಳಲು ವಾದಕರು)

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x