ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಪೀಸು: ದಿವ್ಯ ಆಂಜನಪ್ಪ

 

ಹೊಸ ದಿಗಂತದೆಡೆಗೆ ಎಂಬ ತಲೆಬರಹದಡಿಯಲ್ಲಿ ಲೇಖಕರು ನವ್ಯ ಸಾಹಿತ್ಯದೆಡೆಗೆ ಅಸಮಧಾನಗೊಳ್ಳುತ್ತ ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ, ಎಂದು ಖಂಡಿಸುತ್ತ, ಅದಕ್ಕೆ ಅವರು ಮೂರು ಕಾರಣಗಳನ್ನು ಹೀಗೆ ನೀಡುತ್ತಾರೆ.  ಮೊದಲನೇಯದಾಗಿ, ಯಾಂತ್ರಿಕವಾಗಿರುವ ಸಾಹಿತ್ಯದ ಸಾಂಕೇತಿಕ ಸಿದ್ಧಶೈಲಿ ಮತ್ತು ತಂತ್ರಗಳು ಎರಡನೇಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತ್ಯ ವರ್ಗ ಮೂರನೇಯದಾಗಿ ಸಾಹಿತ್ಯದ ಮಟ್ಟಿಗೆ ಶ್ರೀಮಿತಹೊಂದಿರುವ ಅದರ ಕ್ರಾಂತಿಕಾರಕತನ.  ಈ ಮೂರು ಕಾರಣಗಳಿಂದ ನವ್ಯ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ.  ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೇ ಇದರ ಸ್ಫೂರ್ತಿ ಮೂಲಗಳು, ಅಭಿವ್ಯಕ್ತಿ ಪರಿಕರಗಳು, ಇದರ ಮೌಲ್ಯಗಳು ಎಲ್ಲವನ್ನೂ ತ್ಯಜಿಸಿ ರಾಜಕೀಯವಾಗಿ, ಸಾಮಾಜಿಕವಾಗಿ, ತಾತ್ಪಿಕವಾಗಿ ಸಮಗ್ರವಾಗಿ ಬದಲಾವಣೆಯಾಗುವುದರಿಂದ ಮಾತ್ರವೇ ಹೊಸ ಸಾಹಿತ್ಯ ಬಂದೀತು.  ಹೊಸ ಉಪಮಾನಗಳು, ಹೊಸ ಪದಪುಂಜಗಳು, ಹೊಸ ಅಚ್ಚು ಮಾಡುವ ಕ್ರಮ ಇವುಗಳಿಂದಲ್ಲ ವೆಂದು ತೀವ್ರವಾಗಿ ತೇಜಸ್ವಿರವರು ಖಂಡಿಸಿದ್ದಾರೆ.  (೧೯೭೩)

ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಕೃಷಿ ಕಾರಂತರ ಜೀವನದೃಷ್ಠಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ತನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿದೆ ಎಂದು ಹೇಳುತ್ತ ನಮ್ಮೆದುರಿಗೆ ಅಬಚೂರಿನ ಪೋಸ್ಟಾಫೀಸು ಎಂಬ ಕಥಾ ಸಂಕಲನವನ್ನು ಇರಿಸಿದ್ದಾರೆ.

ಈ ಕಥಾ ಸಂಕಲನವು ಏಳು ಕಥೆಗಳನ್ನು ಒಳಗೊಂಡಿದೆ ಅಬಚೂರಿನ ಪೋಸ್ಟಾಪೀಸು, ಅವನತ ಕುಬಿ ಮತ್ತು ಇಯಾಲ, ತುಕ್ಕೋಜಿ, ಡೇರ್ ಡೆವಿಲ್ ಮುಸ್ತಷಾ, ತಬರನ ಕಥೆ ಮತ್ತು ತ್ಯಕ್ತ.

ಪ್ರಾರಂಭದ ಕಥೆ, ಅಬಚೂರಿನ ಪೋಸ್ಟಾಫೀಸು, ಓದುಗರಲ್ಲಿ ಕುತೂಹಲವನ್ನು ಮೂಡಿಸುವಂತ ಪ್ರಾರಂಭವೇ ಆಗಿದೆ.  ಕುಗ್ರಾಮವೊಂದರಲ್ಲಿ ಪೋಸ್ಟಾಫೀಸಿನ ಆರಂಭ, ಅಚಾನಕ್ಕಾಗಿ ನಾಯಕ ಬೋಪಣ್ಣನಿಗೆ ಪೋಸ್ಟ ಮಾಸ್ಟರ್‌ಗಿರಿ ಒದಗಿ ಬಂದದ್ದು, ಈ ಸಮಯದಲ್ಲಿ ಯಾರಿಗೋ ಬಂದಂತಹ ಪೋಸ್ಟ್ ಕವರನ್ನು ಕುತೂಹಲಕ್ಕೆ ತೆರೆದು ನೋಡಿ ಅಲ್ಲಿನ ಸ್ತ್ರೀಯ ನಗ್ನ ಚಿತ್ರಕ್ಕೆ ಬೆಸ್ತು ಬಿದ್ದದ್ದು.  ಇದೇ ಕಾರಣವಾಗಿ ಸಭ್ಯನಾದ ಬೋಪಣ್ಣರಲ್ಲಿ ಕುಛೇಷ್ಟೆಗಳು ಆರಂಭವಾಗಿ ಹೆಂಡತಿ ಮತ್ತು ಹೆಂಡತಿಯ ತಾಯಿಗೆ ಮನೆಯ ವಾತಾವರಣದಲ್ಲಿ ಕಿರಿಕಿರಿ ಎನಿಸಿ, ಇವನೆಡೆಗೆ ತಿರಸ್ಕಾರ ಮನೋಭಾವ ಹೊಂದುತ್ತಾರೆ.  ಹೆಂಡತಿಗೆ ಗಂಡನ ಚೇಷ್ಠೆಗಳಿಂದ ತಾಯಿಗೆ ಏನೆನಿಸುತ್ತದೋ ಎಂಬ ಭಯ, ತಾಯಿಗೆ (ವಿಧವೆ) ತನಗೆ ಇನ್ಯಾರು ದಿಕ್ಕು, ಮಗಳು ಅಳಿಯನ ಮೇಲೆ ಮೋಹಗೊಂಡು ಎಲ್ಲಿ ತನ್ನನ್ನು ತೊರೆದು ಹೊರಡುವಳೋ ಎಂಬ ಆತಂಕ, ಈ ಸಂದರ್ಭಗಳಲ್ಲಿ ಕಥೆಗಾರರು ಮನುಷ್ಯನ ಆಂತರಿಕ ಅವಲಂಬನೆಗಳ ಮುಗ್ಗಲುಗಳನ್ನು ನಮಗೆ ಪರಿಚಯರಿಸುತ್ತಾರೆ.

ತನ್ನ ಮಗಳೇ ಆದರೂ ಮೊದಲು ತನಗೆ ಪ್ರಾಶಸ್ತ್ಯ ನೀಡಬೇಕು, ಮಗಳು ಗಂಡನನ್ನು ಬಿಟ್ಟು ಒಂಟಿಯಾಗಿದ್ದರೂ ಸರಿಯೇ ತನ್ನನ ಕೊನೆಗಾಲದಲ್ಲಿ ನನ್ನೊಂದಿಗಿರಬೇಕು ಎಂಬ ತಾಯಿಯ ಸ್ವಾರ್ಥ ಇಲ್ಲಿ ಕಂಡುಬರುತ್ತದೆ.   ಬೇಲಾಯದವನ ಮಗಳ ಚಾರಿತ್ಯದ ಕುರಿತಾದ ಹಗರಣದಲ್ಲಿ ಮೂಗೂರಿನ ಮೇಸ್ತ್ರಿ ತನ್ನ ಮಾನ ರಕ್ಷಣೆಗಾಗಿ ಬೋಪಣ್ಣನನ್ನು ನಿಂದಿಸಲು ನಿಂತಾಗ ಮಾತಿಗೆ ಮಾತು ಬೆಳೆದು, ಬೋಪಣ್ಣನಿಗೆ, ಹೌದೌದು ನೀನೊಬ್ಬ ಅಪ್ಪಂತವ, ಊರವರೆಲ್ಲಾ ಪೋಲಿಗಳು, ನಿನ್ನ ಮನೆ, ನಿನ್ನ ಹೆಣ್ತಿ ಬಂದೋಬಸ್ತು ಮಾಡಿಕೊಂಡು ಊರವರ ಮಾತಾಡು, ನಿನ್ನ ಕೈ ಹಿಡಿದೊಳು ಎಷ್ಟು ಜನರ ಮನೇಲಿದ್ದು ಬಂದವಳೋ ನೋಡಿಕೋ. ಎಂದು ಮನ ನೋಯಿಸಲೇಂದು ಚುಚ್ಚಾಡುತ್ತಾನೆ.  ಅತೀ ಕೋಪದಿಂದ ತಾಳ್ಮೆಯನ್ನು ಕಳೆದುಕೊಂಡು ಬೋಪಣ್ಣ ಮುಷ್ಟಿಕಟ್ಟಿ ಬಲವಾಗಿ ಮೂಗೂರಿನ ಮೇಸ್ತ್ರಿ ಮುಸುಡಿಗೆ ಗುದ್ದಿಬಿಡುತ್ತಾನೆ. ಮೇಸ್ತ್ರಿ ನೆಲಕುರುಳುತ್ತಾನೆ. ಈ ಸನ್ನಿವೇಶದಲ್ಲಿ ತನ್ನ ಪ್ರೀತಿಯನ್ನು ಸ್ವೀಕರಿಸದ, ತನ್ನನ್ನು ತಿರಸ್ಕರಿಸುವ ಹೆಂಡಂತಿಯನ್ನು ಚಾರಿತ್ಯದ ಬಗ್ಗೆ ಮತ್ತೊಬ್ಬನು ಮಾತನಾಡುವಾಗ ಬೋಪಣ್ಣ ಸಿಡಿದೇಳುತ್ತಾನೆ.  ಕಥೆ ನಿರೂಪಣೆಯಲ್ಲಿ ರಸಿಕ, ಪುಂಡ, ಚಪಲಚಿತ್ತನನ್ನಾಗಿ ಚಿತ್ರಿಸಿದ ಬೋಪಣ್ಣನಲ್ಲಿ ಅತೀ ಗಾಂಭೀರ್ಯ ಮತ್ತು ಹೆಂಡತಿ ಕಡೆಗಿನ ನಂಬಿಕೆಯು ಆತನ ಉದ್ರಿಗ್ನ ಕೋಪದಲ್ಲಿ ವ್ಯಕ್ತವಾಗಿದೆ.

ಮುಂದಿನ ಕಥೆ ಅವನತಿ ಯಲ್ಲಿ ಸುರಸುಂದರಿಯಾದ ಗೌರಿ, ಸುಬ್ಬಯ್ಯನ ಹೆಂಡತಿ, ಮದುವೆಯಾಗಿ ನಾಲ್ಕು ವರ್ಷಗಳಲ್ಲಿ ಮೂರು ಮಕ್ಕಳನ್ನು ಹಡೆದಿದ್ದು, ಶೈಸವವಸ್ಥೆಯಲ್ಲಿಯೇ ತೀರಿಕೊಳ್ಳುತ್ತಿರುತ್ತದೆ. ಮಳೆಗಾಲದಲ್ಲಿ ಮಕ್ಕಳು ಜನಿಸುತ್ತಿದ್ದರಿಂದ ಹೀಗಾಗುತ್ತಿದೆ ಎಂದು ಗೌರಿ ಬಗೆದಿದ್ದಳು.  ಸುಬ್ಬಯ್ಯನಿಗೆ ಯಾವುದೋ ಗುಪ್ತ ರೋಗವಿದ್ದುದರಿಂದ ಮಕ್ಕಳು ಸಾಯುತ್ತಿವೆ ಎಂದು ಅವರಿವರು ಊರಿನಲ್ಲಿ ನಗೆಯಾಡುತ್ತಲಿರುತ್ತಾರೆ.  ಹೇಗೆ ನೋಡಿದರೂ ಸ್ಫುರದ್ರೂಪಿಯಾದ ಗೌರಿ ಅದು ಹೇಗೆ ಸುಬ್ಬಯ್ಯನನ್ನು ಮದುವೆಯಾದಳೋ ಎಂದು ಹೇಳುವಾಗ ಕಥೆಗಾರರು ಗೌರಿಯನ್ನು ದೋಷಮುಕ್ತಳಾಗಿ ನಮ್ಮೆದುರಿಗೆ ನಿಲ್ಲಿಸುತ್ತಾರೆ. ಇಂತಹ ಗೌರಿಯ ಮೇಲೆ ಗಂಡನಾದ ಸುಬ್ಬಯ್ಯನು ದೋಷದ ಹೊರೆ ಹೊರಿಸಿ ಅವಳಿಗೆ ವೈದ್ಯವಾಗಬೇಕೆಂದು ಬರೆಯುವುದರ ಮೂಲಕ ಪುರುಷ ಪ್ರಧಾನ ಸಮಾಜವನ್ನು ಚಿತ್ರಣವನ್ನು ಬಿಂಬಿಸಿದ್ದಾರೆ.

ಕುಬಿ ಮತ್ತು ಇಯಾಲ ಕಥೆಯಲ್ಲಿ ಅಜ್ಞಾನದಿಂದ ಬಾಲೆಯೊಬ್ಬಳ ಕೊಲೆ ಮತ್ತು ಅದರ ಸುತ್ತಮುತ್ತಲಿನ ರಾಜಕೀಯ, ಬಲಿಷ್ಟರ ದಬ್ಬಾಳಿಕೆಗಳ ಚಿತ್ರಣವನ್ನು ನೋಡಬಹುದು.  ಕೊಲೆಯ ರಹಸ್ಯವನ್ನು ಕೊನೆವರೆಗೂ ಉಳಿಸಿ ಡಾ}} ಕುಬಿ ಮತ್ತು ಇಯಾಲಳ ಕೊಲೆಯ ಸುತ್ತ ನಮ್ಮನ್ನು ಗಿರಕಿ ಹೊಡಿಸಿ, ಬಾಲೆಯ ಮುಗ್ಧತೆ ಮತ್ತು ಕೊಲೆಯ ಕರಾಳತೆಯನ್ನು ಬಿಬ್ಬೆಡುತ್ತ ಕೊಲೆಯ ರಹಸ್ಯವು ತೆರೆದುಕೊಳ್ಳುವಂತೆ ಕಥಾ ನಿರೂಪಣೆಯಿದ್ದೆ. ಇಯಾಲಳ ಕೊಲೆ ಓದುಗರಲ್ಲಿ ಅವ್ಯಕ್ತ ನೋವನ್ನುಂಟು ಮಾಡುವುದಂತೂ ಖಂಡಿತ.  ಅಜ್ಞಾನಕ್ಕೂ, ಸ್ವಾರ್ಥಕ್ಕೂ ಅನಾದಿಕಾಲದಿಂದಲೂ ಮುಗ್ಧರ ಬಲಿ ನಡೆಯುತ್ತಲೇ ಬಂದಿದೆ.

ಗುರುಗಳ್ಳಿ ಬೆಳೆಯುತ್ತಿರುವ ಭಾರತದೊಂದಿಗೆ ವಿಕಾಸಗೊಳ್ಳುತ್ತಿದ್ದ ಹಳ್ಳಿ ಅಲ್ಲಿನ ದರ್ಜೆ ತುಕ್ಕೋಜಿ, ಆಧುನಿಕತೆಗೆ ತಕ್ಕಂತೆ ಹೊಸ ಹೊಸ ಬಗೆಯ ಶೈಲಿಯಲ್ಲಿ ಬಟ್ಟೆಗಳನ್ನು ಹೊಲೆದು ಕೊಡುತ್ತಿದ್ದನು.  ಆಧುನಿಕತೆಯ ದಿಕ್ಕಿನಲ್ಲಿ ಮನುಷ್ಯರ ಮನದ ನಡೆಯನ್ನು ಈ ಪ್ರಕಾರವಾಗಿ ಲೇಖಕರು ಬಿಂಬಿಸಿದ್ದಾರೆ.  ದರ್ಜೆ ತುಕ್ಕೋಜಿಗೆ ಅನುಯಾಯಿಯಂತಹ ಹೆಂಡತಿ ಸಿಕ್ಕು ಸುಖ ಸಂಸಾರ ಅವರದಾಗಿತ್ತು.   ಅವರಿಗೆ ಮಕ್ಕಳಿಲ್ಲದ್ದೇ ಅವರ ದೊಡ್ಡ ಚಿಂತೆಯಾಗಿತ್ತು. ಬಯಸಿ-ಬಯಸಿ ಕೊನೆಗೂ ಒಂದು ಗಂಡು ಮಗುವಾಯಿತು.  ಆ ಮಗುವನ್ನು ನಿಬಾಯಿಸುವಲ್ಲಿ ಗಂಡ-ಹೆಂಡತಿಯರ ಸೆಣೆಸಾಟದ ಸನ್ನಿವೇಶಗಳು, ಒಬ್ಬರಿಗೊಬ್ಬರಾಗಿದ್ದ ಅವರು ಸದಾಕಾಲ ಒಬ್ಬರನ್ನೊಬ್ಬರು ನಿಂದಿಸುತ್ತ ತಮ್ಮ ಜಗಳದಲ್ಲಿ ಮಗವನ್ನು ಮೂದಲಿಸುತ್ತ ಬಯಸಿ ಪಡೆದ ಮಗುವನ್ನು ಕಡೆಗಣಿಸುವಂತಾಗಿದ್ದರು.  ಒಮ್ಮೆ ಯಾರೋ ಒಬ್ಬ ಕ್ರಾಲರ್‌ನ ಡ್ರೈವರ್, ಮಗುವನ್ನು ಆಡಿಸುವಂತೆ ಎತ್ತಿಕೊಂಡು ಕುಲಕಾಲ ಕಣ್ಮರೆಯಾದಾಗ ಗಂಡ-ಹೆಂಡಿರಿಬ್ಬರು ದಿಗ್ಬಾಂತರಾಗಿ, ದಿಕ್ಕು ತೋಚದಾಗಿ ಒಬ್ಬರ ಮುಖವನ್ನೋಬ್ಬರು ನೋಡದಂತ ಅಪರಾಧಿ ಮನೋಭಾವವನ್ನು ಅನುಭವಿಸುವ ವೇಳೆಗೆ ಮಗುವನ್ನು ಕರೆದೊಯ್ದ ಕ್ರಾಲರ್‌ನ ಡ್ರೈವರ್ ಮತ್ತೆ ಮರಳಿ ಬರುವುದು ಕಾಣುತ್ತದೆ.  ಕಳೆದೇ ಹೋಯ್ತು ಎನ್ನುವ ಮಗು ಮತ್ತೆ ಸಿಗುವುದರ ಮೂಲಕ ಮಗುವಿನ ಬೆಲೆಯನ್ನು ಕಂಡುಕೊಳ್ಳುತ್ತಾರೆ.  ಮಾನವ ಸಂಬಂಧಗಳ ಮೌಲ್ಯದ ಬಗ್ಗೆ ಈ ಕಥೆಯ ಬೆಳಕು ಚೆಲ್ಲಿದೆ.

ಇಡೀ ಕಥಾ ಸಂಕಲನದಲ್ಲಿ ಡೇರ್ ಡೆವಿಲ್ ಮುಸ್ತಫಾ ವಿಶಿಷ್ಟವಾಗಿಯೂ, ವಿನೋಧಕರವಾಗಿಯೂ ಮೂಡಿಬಂದಿದೆ. ಕಥೆಯಲ್ಲಿ ಅಂದಿನ ಧರ್ಮಾಂಧತೆ, ಒಬ್ಬ ಇಸ್ಲಾಂ ಧರ್ಮದ ಹುಡುಗ ಹೇಗೆ ಬಂದು ಹಿಂದೂಗಳ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುತ್ತಾನೆ.  ಸಹಪಾಠಿಗಳು ಗುರುಗಳು, ಮತ್ತು ಸಮಾಜದ ಧೋರಣ ಇಲ್ಲಿ ವ್ಯಕ್ತವಾಗಿದೆ.  ಗಣೇಶನ ಹಬ್ಬದುತ್ಸವದಂದು ಎಲ್ಲಿ ಹಿಂದೂ-ಮುಸ್ಲಿಂ ಜಗಳವಾಗುತ್ತದೋ ಎಂದು ಎಲ್ಲರೂ ಎಣಿಸುವಾಗ ಗಣಪನ ಮುಂದೆ ಮೆರವಣಿಗೆ ಬರುತ್ತಿದು ಬಸವನ ಬೆನ್ನಿಗೆ ಪೂಂಜಿನ ಕೊಳವು ತಾಗಿ ಬಸವ ಅಪಾಯದಲ್ಲಿದ್ದಾಗ ಮುಸ್ತಫಾ ಅವನಿಗೆ ಸಹಾಯ ನೀಡಿ ಅಪಾಯದಿಂದ ಪಾರುಮಾಡಿ ಎಲ್ಲರ ಮನವನ್ನು ಗೆಲ್ಲುತ್ತಾನೆ  ಜಾತಿಗಿಂತ ಮನಸ್ಸು ದೊಡ್ಡದು.  ಎಂಬುದನ್ನು ನಾವು ಅಲ್ಲಗಳಿಯುವಂತಿಲ್ಲ.  ಕಾಲೇಜ್ ಯೂನಿಯನ್ ದಿನದಂದು ಮುಸ್ತಫಾ ಜಾದು ಮಾಡುವ ಭರದಲ್ಲಿ ಅಚಾತುರ್ಯದಿಂದ ಶಾಖಾಹಾರಿಯಾದ ಕಾಪ್ಟನ್ ರಾಮಾನುಜಂ ತನ್ನ ಜೇಬಿನಲ್ಲಿ ತಾನೇ ಮೊಟ್ಟೆಹೊಡೆದುಕೊಳ್ಳುವಂತೆ ಮಾಡಿಬಿಡುತ್ತಾನೆ.  ಸ್ವಾರಸ್ಯಕರ ಹಾಸ್ಯ ನಿರೂಪಣೆಯನ್ನು ನಾವಿಲ್ಲಿ ಕಾಣಬಹುದು.  ಕಥೆಯ ಪ್ರಾರಂಭದಲ್ಲಿ ತಿರಸ್ಕೃತನಾಗಿದ್ದ ಮುಸ್ತಫಾ ಸಮಯ ಪ್ರಜ್ಞೆ-ಜಾಣತನ ಮತ್ತು ಹಾಸ್ಯದಿಂದ ಎಲ್ಲರೊಳಗೊಂದಾಗಿಬಿಡುತ್ತಾನೆ.

ತಬರನ ಕಥೆಯಲ್ಲಿ ಬ್ರಿಟೀಷರ ಕಾಲದಲ್ಲಿ ಕೆಲಸಕ್ಕೆ ಸೇರಿದ್ದ ತಬರ ಸ್ವಾತಂತ್ರ್ಯ ಬಂದ ನಂತರ ನಿವೃತ್ತಿ ಹೊಂದುತ್ತಾನ ಅನೇಕ ಇಲಾಖೆಗಳಲ್ಲಿ ಕೆಲಸ ಮಾಡಿದ ತಬರನಿಗೆ ಆಚಾತುರ್ಯದಿಂದ ಸುಂಕದ ಎರಡು ರಶೀದಿಗಳನ್ನು ಬರೆದು ತಾನೇ ಅದನ್ನು ಭರಿಸುವ ಬಾಬತ್ತಿಗೆ ಬೀಳುವಂತಾಗಿದ್ದೇ ಕಥೆಯ ಮೂಲ, ತಬರನ ಸಂಕಷ್ಟಗಳ ಮೂಲ ತನ್ನ ಸಂಬಳಕ್ಕಿಂತ ಜುಲ್ಮಾನೆ ಸುಂಕವೇ ಹೆಚ್ಚಾಗಿರುತ್ತದೆ ಕೊನೆಗೆ ತನಗೆ ಪಿಂಚಣಿಯಾದರೂ ಬರಬಹುದೇನೋ ಅದರಿಂದ ತನ್ನ ಹೆಂಡತಿಯ ಉಲ್ಬಣಗೊಂಡ ಸಕ್ಕರೆ ಖಾಯಿಲೆಯನ್ನು ಗುಣಪಡಿಸಬಹುದೆನೋ ಎಂದು ಎಲ್ಲಾ ಕಛೇರಿಗಳಿಗೂ ತನ್ನ ಸೇವೆಯ ಅಸ್ಥಿತ್ವಕ್ಕಾಗಿ ಪತ್ರಗಳನ್ನು ಸಂಗ್ರಹಿಸುತ್ತಾನೆ.  ಫೈಲುಗಳು ಮುಂದಕ್ಕೆ ಹೋಗುವುದೇ ತಡ ಅದರಲ್ಲಿ ಒಂದೊಂದು ಕ್ವೈರಿಗಳನ್ನು ಹಾಕತ್ತಾ ಹಿಂದಕ್ಕೆ ಬರುತ್ತಿದ್ದಾರೆ.  ಇತ್ತ ಕಡೆ ಹೆಂಡತಿಯ ಅಸ್ವಸ್ಥತೆಯಿಂದ ಕಂಗೆಟ್ಟ ತಬರನಿಗೊ ಹುಚ್ಚು ಹಿಡಿದಂತಾಗಿರುತ್ತದೆ.

ಗಾಂಗ್ರಿನ್‌ನಿಂದ ಹೆಂಡತಿಯ ಕಾಲನ್ನು ಮಂಡಿಯವರೆಗೂ ಕತ್ತರಿಸಬೇಕಾಗಿ ವೈದ್ಯರು ಹೇಳಿದಾಗ ಹಣದ ದಾರಿದ್ರ್ಯದಿಂದ ಕಂಗಿಟ್ಟು ತಬರ ಮಾಂಸದಂಗಡಿಯ ಯೂಸೆಫ್‌ನನ್ನು ತನ್ನ ಹೆಂಡತಿಯ ಕಾಲನ್ನು ಮಂಡಿಯ ಕಾಲಿನವರಿಗೆ ಕಡಿದುಕೊಡುತ್ತೀಯಾ?, ಎಂದು ಕೇಳಿಕೊಳ್ಳುತ್ತಾನೆ.  ಇದರಿಂದ ಖಾಯಿಲೆಯ ಬಗೆಗಿನ ಮೂಢ ನಂಬಿಕೆ, ಹಣದ ಅಭಾವದಿಂದ ಅಸ್ವಸ್ಥಗೊಂಡ ತಬರನ ಮನೋಸ್ಥಿತಿಯು ನಮ್ಮರಿವಿಗೆ ಬರುತ್ತದೆ. ಹಾಗೇಯೇ ಸರ್ಕಾರದ ವ್ಯವಸ್ಥೆ.

ಕೊನೆಗೂ ಹೆಂಡತಿಯೂ ತೀರಿಕೊಂಡು ಅರೆ ಹುಚ್ಚನಂತೆ ತಬರ ಅಲೆಯುತ್ತಿರಲು ಅವನಾಡುವ ಅನುಭವದ ಮಾತುಗಳು ಸ್ವಾತಂತ್ರ ಪೂರ್ವದ ಸರ್ಕಾರ ವ್ಯವಸ್ಥೆಯನ್ನು ಹೊಗಳುತ್ತಿರುತ್ತದೆ.  ಅರ್ಥವಾದವರಿಗೆ ಆತ ವೇದಾಂತಿ-ಮೇಧಾವಿ, ಇತರರಿಗೆ ಹುಚ್ಚ.

ತ್ಯಕ್ತದಲ್ಲಿ ಲೇಖಕರು ತಾವು ಕಾಣಬಯಸುವ, ಬರೆಯ ಬಯಸುವ ಸಾಹಿತ್ಯದ ಹೊಸ ಸೆಲೆಯನ್ನು ಸೋಮನ ವ್ಯಕ್ತಿತ್ವದಲ್ಲಿ ತಂದುಕೊಂಡಂತೆಯೂ, ಅದನ್ನು ಅರ್ಥೈಸಲು ಸೆಣಸಾಡುವ ಪರಿ, ಗೆಳೆಯ ಹೇಮ ನಿಂದ ಅರ್ಥವಾಗದ ಪ್ರತಿಕ್ರಿಯ, ಎಲ್ಲರನ್ನೂ ಹೆದರಿಸುವ ದುರಾತ್ಮ ನಾಗಿದ್ದೀಯ ಎಂಬ ಗೆಳೆಯನ ಸಂಬೋಧಗಳು-ಇವು ನವ ರೀತಿಯ ಪ್ರಯೋಗದಲ್ಲಿ ಎದುರಾದ ಸನ್ನಿವೇಶಗಳ ಊಹೆಯನ್ನು ಈ ಕಥೆಯ ಪ್ರಾತ್ರಗಳ ಮೂಲಕ ಒಳಾರ್ಥದಲ್ಲಿ ವ್ಯಕ್ತಪಡಿಸಿರುವಂತೆ ನನಗೆ ಭಾಸವಾಗುತ್ತದೆ.  ಪುಟ್ಟ ಕಂದ ಕಿಟ್ಟಿಯಲ್ಲಿ ಜೀವಿಸುವ ಸ್ವಾತಂತ್ರವನ್ನು (ಪುಟಿಯುವ ಜೀವದ ಮಿಡಿತ) ವೆಂದು ಪ್ರಸ್ತುತಪಡಿಸಿದ್ದಾರೆ.

ಆ ಪುಟ್ಟ ಮಗುವಿನ ಜೀವಿಸುವ ಛಲ, ತುಂಟತನದ ಹಕ್ಕುಗಳನ್ನು ಲೇಖಕರು ಸಮರ್ಥಿಸುತ್ತಾರೆ.  ಈ ಮೂಲಕ ಹೊಸ ಶೈಲಿಯ ಪ್ರಯೋಗದ ಹಕ್ಕಿಗೆ ಅವರು ಒತ್ತು ನೀಡಿರಬಹುದು.

ಮಾತನ್ನು ತನ್ನೊಳಗೆ ಮಾತಿನ ಆಚೆಗೆ ಇರೋದರ ಮೇಲೆ ದಾಳಿ ಮಾಡೋದಕ್ಕೆ, ಅಂಧಕಾರದಲ್ಲಿ ಒಂದು ಸಾರಿಯಾದರೂ ಸತ್ಯವನ್ನು ನೋಡೋದಕ್ಕೆ ಸಾಧ್ಯವಯ್ಯ, ಎಂಬ ಸೋಮನ ಮಾತಿನಿಂದ ನಾವು ಅಂತರಾತ್ಮಾವಲೋಖನದ  ದಾರಿಗಳನ್ನು ಕಂಡುಕೊಳ್ಳುವಂತೆ ಮಾತಿನಿಂದ ಸೆಳೆದಿದ್ದಾರೆ.

ಮನೆಯ ಅಜ್ಜಿಯ ಸಾವಿನಲ್ಲಿ ಆ ಪುಟ್ಟ ಮಗು ಅನುಭಾವಿಸುವ ಸತ್ಯದ ಅರಿವಿನ ಭಾವವನ್ನು ಲೇಖಕರು ಸುಲಲಿತವಾಗಿ ಆ ಅದೇ ಮಾತಿನಾಚೆಯ ಭಾವವನ್ನೂ ಪರಿಚಯಿಸಿದ್ದಾರೆ.  ಹೌದು ನಮ್ಮ ಮಾತಿನಾಚೆಗೆ ಅದೆಷ್ಟೋ ಮಾತುಗಳಿವೆ, ಭಾವಗಳಿವೆ.  ಎಲ್ಲವನ್ನೂ ಶಬ್ದ ರೂಪಕ್ಕಿಳಿಸಲು ಸಾಧ್ಯವಾಗದ್ದೇನೋ ಆ ಅದೇ ಬಾವಗಳನ್ನು ಕೆಲವೊಮ್ಮೆ ಮೌನಗಳು ಅಲಂಕರಿಸಿರುತ್ತದೆ.  ಹಾಗಾಗಿ ಮೌನಕ್ಕೆ ಬೆಲೆ ಹೆಚ್ಚು ಎಂದೆನಿಸುತ್ತದೆ.

ಒಟ್ಟಾರೆಯಾಗಿ ಈ ಪುಸ್ತಕದ ಕುರಿತಾಗಿ ಹೇಳುವುದಾದರೆ, ಈ ಕಥಾ ಸಂಕಲನ ಜೀವನದ ಹಲವು ಮಜಲುಗಳನ್ನು ಸುತ್ತಿಸಿ, ಜೀವನಾನುಭವವನ್ನು ನೀಡುವುದರೊಂದಿಗೆ ತೇಜಸ್ವಿರವರ ಭಾಷೆಯಲ್ಲಿ ನವೀನತೆಯ ಸ್ವೀಕಾರ, ಕಾರಣ, ಪರಿಣಾಮಗಳನ್ನು ಅವರ ಊಹೆಗಳಂತೆ ಕಥೆಗಳಲ್ಲಿ ಅಲ್ಲಲಿ ವ್ಯಕ್ತಪರಿಸಲಾಗಿದೆ.  ಮೊದಲ ಬಾರಿ ಓದಿದಾಗ ಕಥೆಗಳನ್ನು ನಾವು ಅಸ್ವಾಧಿಸಿದರೆ ನಂತರದ ಓದಿನಲ್ಲಿ ಲೇಖಕರ ಭಾಷೆ ಬಗೆಗಿನ ಧೋರಣೆ, ಹೊಸ ನೀತಿಗಳನ್ನು ಕಂಡು ಅರ್ಥಗಳನ್ನು ಅರಗಿಸಿಕೊಳ್ಳುತ್ತ ನಮ್ಮನ್ನು ವಿಮರ್ಶಕತೆಗೆ ಈಡುಮಾಡುತ್ತದೆ.

ಧನ್ಯವಾದಗಳು

-ದಿವ್ಯ ಆಂಜನಪ್ಪ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
10 years ago

ಮೇಡಮ್, ಪಂಜು ಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಪೀಸು ಲೇಖನವನ್ನು ಮೊದಲ ಸಲ ಓದಿದಾಗ ಮತ್ತೊಮ್ಮೆ ಓದಬೇಕೆನಿಸಿತು. ಹೀಗೆ 2-3 ಸಲ ಓದಿದಾಗ ಖುಷಿಯಾಯಿತು. ವಿಶಿಷ್ಟ ಶೈಲಿಯ ಜನಪ್ರಿಯ ಕೃತಿಯೊಂದನ್ನು ಆಯ್ಕೆ ಮಾಡಿಕೊಂಡು ಚೊಕ್ಕದಾಗಿ ಸುಂದರ ನಿರೂಪಣೆಯೊಂದಿಗೆ ವಿಶ್ಲೇಷಣೆ ಮಾಡಿರುವುದು ಖುಷಿ ನೀಡಿತು. ಈ ಮೊದಲು ನಾನು ಈ ಕೃತಿಯನ್ನು ಓದಿದ್ದೆನಾದರೂ ಈ ಲೇಖನದ ಓದಿದ ನಂತರ ಮತ್ತೊಮ್ಮೆ ಓದಬೇಕೆನಿಸಿದೆ. ಮತ್ತೊಮ್ಮೆ ಅಬಚೂರಿನ ಪೋಸ್ಟಾಪೀಸನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು…ಶುಭದಿನ

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಧನ್ಯವಾದಗಳು ಸರ್ ಮತ್ತೋಮ್ಮೆ ಸಂಪೂರ್ಣ ಲೇಖನ ಓದಿಬಿಡಿ 🙂

ಡಿ.ವಿ.ಪಿ
10 years ago

ಇಡೀ ಪುಸ್ತಕವನ್ನು ಚಿಕ್ಕವಾಗಿ ಚೊಕ್ಕವಾಗಿ ನಿರೂಪಿಸಿದ್ದೀರಿ. ಅಭಿನಂದನೆಗಳು. ಪೂಚಂತೆ ದಿಗಂತದಂತೆ. ಅದೆಷ್ಟು ಬೇಧಿಸಿದರೂ ಕೈಗೆ ಸಿಗರು. ನಾನೂ ಅವರ ಬರಹಗಳ ಭಕ್ತ.!! 

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಧನ್ಯವಾದಗಳು ಸರ್ 

parthasarathyn
10 years ago

ವಂದನೆಗಳು ದಿವ್ಯ ಅಂಜನಪ್ಪ
ಹಿಂದೊಮ್ಮೆ ಓದಿದ ಪುಸ್ತಕ ನಿಮ್ಮ ವಿಮರ್ಷೆ ಓದುವಾಗ ಮತ್ತೊಮ್ಮೆ ಓದುವ ಮನಸ್ಸಾಯಿತು. ತೇಜಸ್ವಿರವರ ಕತೆಗಳು ಬೇರೆಯೆ ಲೋಕವನ್ನು ಸೃಷ್ಟಿ ಸುತ್ತವೆ, ಹಾಗೆ ಅವರ 'ನಿಗೂಡ ಮನುಷ್ಯರು' ಹಾಗು ಇತರ ಕತೆಗಳ ಸಂಕಲವನ್ನು ಒಮ್ಮೆ ಓದಿ ಬರೆಯಿರಿ 
ಪಾರ್ಥಸಾರಥಿ

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago
Reply to  parthasarathyn

ಧನ್ಯವಾದಗಳು ಸರ್ . ಪ್ರಯತ್ನಿಸುತ್ತೇನೆ 🙂

Upendra
Upendra
10 years ago

ತುಂಬಾ ಚೆನ್ನಾಗಿದೆ.  Typing errors ಬಗ್ಗೆ ಸ್ವಲ್ಪ ನಿಗಾ ಇರಲಿ 🙂

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago
Reply to  Upendra

ಧನ್ಯವಾದಗಳು ಸರ್. ಈ ಲೇಖನವನ್ನು ಕಾರಣಾಂತರಗಳಿಂದ ನಾನೇ ಟೈಪ್ ಮಾಡಲು ಸಾಧ್ಯವಾಗದೆ ಹೊರಗೆ ಕೊಟ್ಟು ಮಾಡಿಸಿ ಕಳಿಸಿದ್ದೆ. ನಾನೂ ಸಣ್ಣ ಪುಟ್ಟ ತಪ್ಪುಗಳನ್ನು ಮಾಡ್ತೀನಿ ಇಲ್ಲ ಅಂತಿಲ್ಲ. ನನಗೆ "ಪದ" ಗೊತ್ತು " ನುಡಿ" ಗೊತ್ತಿಲ್ಲ. ಅವರು ಟೈಪ್ ಮಾಡಿದ್ದು ಕೋಡ್ಸ್ ತರ ಇದ್ದದನ್ನು ಹಾಗೆಯೇ ಕಳಿಸಿದ್ದೆ. ಅಲ್ಲೇ ತಪ್ಪಾಗಿದ್ದು. ಮುಂದೆ ಈ ತಪ್ಪುಗಳು ಮರುಕಳಿಸದಂತೆ ನಿಗಾ ವಹಿಸುವೆ. 🙂

gaviswamy
10 years ago

ಅ. ಪೋ ಪೂರ್ತಿ ಓದಿದ್ದೇನೆ . ನಿಮ್ಮ ವಿವರಣೆ ಚೆನ್ನಾಗಿದೆ .

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago
Reply to  gaviswamy

ಧನ್ಯವಾದಗಳು ಸರ್ 🙂

noorullathyamagondlu
noorullathyamagondlu
8 years ago

ನಿರ್ದಿಷ್ಟವಾಗಿ ಹೇಳುವ ಬರಹದ ಜಾಣ್ಮೆ ಚೆನ್ನಾಗಿದೆ.

11
0
Would love your thoughts, please comment.x
()
x