ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು
ಕಿರಣಗಳು ಹೊಳಪಿಸಿದ ಬಣ್ಣಗಳನು
ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು?
ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು.
ಇದು ಕೆಂಪು ನಾಲಗೆಯು ಹೊರಳಿ ಕೇಸರಿಯಾಗಿ
ಮೂಡಿ ಕಾಮನಬಿಲ್ಲು ಹನಿಗಳೊಳಗೆ
ಮತ್ತೇನನೋ ತಂದು ತನ್ನ ವ್ಯಾಪ್ತಿಯ ಪರಿಧಿ
ಮೀರಿ ಸಾಗುವ ಮನಕೆ ಎಷ್ಟು ಘಳಿಗೆ?
ಸತ್ಯಕ್ಕೆ ಬಿಳಿಮುಖವೆ? ರವಿಯಕಿರಣವು ನೆಪವೆ?
ಆರಿಹೋಗುವುದೇನು ಖಚಿತ ಸಾವೆ?
ಮಂಜು ಹುಟ್ಟುವುದೆಂತು ಹನಿಯ ಹಡೆಯುವುದೆಂತು
ರಾತ್ರಿ ಬೆಳಗಿನ ವರೆಗೆ ಸುಖದ ನಾವೆ
ನಾಳೆ ನಾ ಕಾಯುವೆನು ಇನ್ನೊಂದು ಹನಿಗಾಗಿ
ಹನಿಗಳೊಳಗಿನ ಬಣ್ಣ ಕನಸಿಗಾಗಿ
ಸುಖದಮಲು ಕರಗೀತು, ಬಾಳು ನಿಜ ತೆರೆದೀತು
ಎದೆಯೊಳಗೆ ಉಳಿಯಲದು ಶಾಂತಿಯಾಗಿ.
-ಈಶ್ವರ ಭಟ್
ಈಗೆಲ್ಲಾ ಬರುತ್ತಿಲ್ಲಾ ಕನಸಲ್ಲಿ ಆ ರಾಜಕುಮಾರ
ಬೀಳಿ ಕುದುರೆಯ ಮೇಲ
ಮಂದಹಾಸದ ಸುರಸುಂದರಾಂಗ ಆ ರಾಜಕುಮಾರ
ಹಾರಿಬಂದಿಳಿಯುತ್ತಿದ್ದ ಕನಸಲ್ಲಿ
ನಗಿಸಿ, ಮೋಹಿಸಿ, ಮುದ್ದಿಸಿ
ಸಪ್ತಸಾಗರದಾಚಿಗಿನ ದ್ವೀಪದ ಬಣ್ಣ ಬಣ್ಣದ
ಗಿಳಿಯ ಕಥೆ ಹೇಳಿ ರಮಿಸುತ್ತಿದ್ದ
ಈಗೆಲ್ಲಾ ಬರುತ್ತಿಲ್ಲಾ ಕನಸಲ್ಲಿ ಆ ರಾಜಕುಮಾರ
ನಡುರಾತ್ರಿ ಮೀರಿದಂತೆಲ್ಲಾ ಕನಸುಗಳ
ಮಬ್ಬೆಳಕಿನಲಿ ಮೂಳೆ ಮೂಳೆಗಳು ಪುಡಿ ಪುಡಿಯಾದಂತೆ,
ಉಸಿರುಗಟ್ಟಿ, ನೆತ್ತರು ಚಿಮ್ಮಿ ಕಾರಂಜಿಯಾಗಿ,
ಸಂದಿಗೊಂದಿಗಳಲ್ಲೇಲ್ಲಾ ಅಂಟು ಅಂಟು
ತಿವಿದು ಮೀಟಿದ ಹಾರೆ ಚೂಪು ಚೂಪು,
ಹೊಡೆತ,ಕೇಕೆ,ಆಟ್ಟಾಹಾಸ,ತಿರಸ್ಕಾರ,
ಮಾಯಾ ಮಾಂತ್ರಿಕನ ಉಗುರುಗುರಲ್ಲಿ
ದೇಹ ಕಿತ್ತು ತಿಂದ ಮಾಂಸ
ಚಿಟ್ಟನೆ ಚೀರಿ ಕೂರುವಾಗ,… ಕನಸು ಕರಗುವಾಗ
ಒಮ್ಮೊಮ್ಮೆ …
ಬೆಳ್ಳಂಬೆಳಗಿನ ಕನಸಲ್ಲಿ ಬರುತ್ತಾನೆ ರಾಜಕುಮಾರ
ನಡುನಡುಗವ ಕಣ್ಣೀರಿಡುವ
ಮೋಹಕ, ಮಾಯಾಮೃಗದ ಮೇಲೆ
ಅದರ ಕೊಂಬಿಡಿದು, ಚಾಟಿ ಬೀಸುತ್ತಾ
ಥೂ… ಹೋಗು… ಹೋಗು.. ಅನ್ನುವಾಗ
ಅರೆ ಎಚ್ಚರಗೊಂಡ
ಮಗಳೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ
ತೋಡೆಯ ಮೇಲೆ ತಲೆಯಿಟ್ಟು ಚೀರುತ್ತಾಳೆ
"ಅಮ್ಮಾ ಅಮ್ಮಾ ಹಿಂಸೆ,ಬಸ್ಸು,ಕಾಲೇಜು,ಮಾರ್ಕೆಟ್,
"ಹಿಂಸೆ,ಹಿಂಸೆ,ಹಿಂಸೆ
-ಎಂ.ಎಸ್.ಕೃಷ್ಣಮೂರ್ತಿ
good
ಮೂರಕ್ಕೆ ಮೂರು ಉತ್ತಮ …
ಮೂರು ಕವನಗಳು ಚೆನ್ನಾಗಿವೆ….
ಒಂದಕಿಂತ ಒಂದು…ಎಲ್ಲವೂ ಉತ್ತಮ…
ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು
ಕಿರಣಗಳು ಹೊಳಪಿಸಿದ ಬಣ್ಣಗಳನು
ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು?
ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು.
Waaaaaaaaw … superb lines
ಮೂರು ಕವನಗಳು ಉತ್ತಮ…
ಎಲ್ಲವೂ ಚೆನ್ನಾಗಿವೆ
Odide, chennaagide, innoo bareyutthiri. ee mooru kavanagaLa vishayagaLu eegina kaalakke anwayisuvudarinda matthashtu kuthoohalakaariyaagi ive. the first poem displays an intelligent imaginative mind in dreamy observation of nature, the second one is about the dreamy hopeful and anxiety filled emotions of a youthful mind. the third one is about the concerns, desperation, hollowness experienced by an old person in retirement home. all very relevant to the times.
ಮೂರು ಕವನಗಳು ಚೆನ್ನಾಗಿವೆ…
superb !! ಅರ್ಥ ಗರ್ಬಿತವಾಗಿದೆ.