ಸಾಮಾನ್ಯ ಜ್ಞಾನ (ವಾರ 64): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು 
೧.    ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ ಆಯೋಗ ಯಾವುದು?
೨.    ಕೆಎಸ್‌ಆರ್‌ಪಿ (KSRP) ನ ವಿಸ್ತೃತ ರೂಪವೇನು?
೩.    ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.
೪.    ಡಿ.ಟಿ.ಹೆಚ್. ಸೇವೆ ಆರಂಭವಾದ ವರ್ಷ  ಯಾವುದು?
೫.    ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ?
೬.    ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾಧ್ಯ ಯಾವುದು?
೭.    ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ ಯಾವ ಕ್ರೀಡಾಂಗಣದಲ್ಲಿದೆ?
೮.    ಸೋಮೇಶ್ವರ ವನ್ಯಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೯.    ಲಾಲ್‌ಲಜಪತ್‌ರಾಯರ ವಂದೇ ಮಾತರಂ ಯಾವ ಭಾಷೆಯ ಪತ್ರಿಕೆಯಾಗಿತ್ತು?
೧೦.    ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯನ್ನು ತಂದ ಗೌವರ್ನರ್ ಜನರಲ್ ಯಾರು?
೧೧.    ಅಂಗಾರಕ ಹೆಸರಿನ ಗ್ರಹ ಯಾವುದು?
೧೨.    ವಿಕಿರಣಗಳು ಸೂಸುವ ಮೂರು ವಿಧವಾದ ಕಿರಣಗಳು ಯಾವವು?
೧೩.    ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು?
೧೪.    ಭಾರತೀಯ ಮಾವು ಸಂಶೋಧನಾ ಸಂಸ್ಥೆ ಎಲ್ಲಿದೆ?
೧೫.    ನಿಜಾತ್ಮ ರಾಮರಾಯ ಇದು ಯಾರ ಅಂಕಿತನಾಮವಾಗಿದೆ?
೧೬.    ಡಾ||ಸಲೀಂ ಅಲಿ ಪಕ್ಷಿಗಳ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
೧೭.    ಕಾಂಬೋಡಿಯಾ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಹೆಸರೇನು?
೧೮.    ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ ಆಯೋಗ ಯಾವುದು?
೧೯.    ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ ಯಾವುದು?
೨೦.    ಏ ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು ರಚಿಸಿದವರು ಯಾರು?
೨೧.    ಒಂದು ಮಸೂರದ ಸಾಮರ್ಥ್ಯವನ್ನು ಅಳೆಯುವ ಮಾನ ಯಾವುದು?
೨೨.    ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ?
೨೩.    ಶ್ರೀನಿವಾಸ ರಾಮಾನುಜಂ ರವರ ಹುಟ್ಟೂರು ಯಾವುದು?
೨೪.    ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ ಯಾವ ನದಿಯ ದಂಡೆಯ ಮೇಲಿದೆ?
೨೫.    ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಯಾರು?
೨೬.    ಚುಟುಕು ಬ್ರಹ್ಮ ಎಂದು ಕನ್ನಡದ ಯಾವ ಸಾಹಿತಿಯನ್ನು ಕರೆಯುತ್ತಾರೆ?
೨೭.    ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ ಯಾರು?
೨೮.    ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
೨೯.    ಕನ್ನಡದ ನಟಿ ತಾರಾಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಚಲನಚಿತ್ರ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಉತ್ತರಗಳು:
೧.    ಡಾ||ರಾಧಾಕೃಷ್ಣನ್ ಆಯೋಗ
೨.    ಕರ್ನಾಟಕ ಸ್ಟೇಟ್ ರಿಸರ್ವ್ ಪೋಲಿಸ್
೩.    ದ್ಯುತಿಸಂಶ್ಲೇಷಣೆ ಕ್ರಿಯೆ
೪.    ಜೂನ್ ೨೦೦೪
೫.    ಬಿ.ಶಿವಮೂರ್ತಿ
೬.    ತಬಲಾ
೭.    ಮೆಲ್ಬೋರ್ನ್ ಕ್ರೀಡಾಂಗಣ
೮.    ದಕ್ಷಿಣ ಕನ್ನಡ
೯.    ಉರ್ದು
೧೦.    ಲಾರ್ಡ್ ಕಾರ್ನ್‌ವಾಲಿಸ್ 
೧೧.    ಮಂಗಳ ಗ್ರಹ
೧೨.    ಅಲ್ಟಾ ಬೀಟ ಗಾಮಾ
೧೩.    ೧೯೬೩
೧೪.    ವಿಜಯವಾಡ (ಆಂಧ್ರಪ್ರದೇಶ)
೧೫.    ಮಾದರ ಚನ್ನಯ್ಯ
೧೬.    ಗೋವಾ
೧೭.    ರೀಯಲ್ 
೧೮.    ಕೊಠಾರಿ ಆಯೋಗ
೧೯.    ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ ಪ್ರದೇಶ
೨೦.    ಮೌಲಾನಾ ಆಜಾದ್
೨೧.    ಡಯಾಪ್ಟರ್
೨೨.    ವಿಜಯಪುರ
೨೩.    ಈರೋಡ (ತಮಿಳುನಾಡು)
೨೪.    ನೇತ್ರಾವತಿ
೨೫.    ಸರ್. ಅಹಮ್ಮದ್ ಖಾನ್
೨೬.    ದಿನಕರ ದೇಸಾಯಿ
೨೭.    ಗ್ಯಾನಿ ಜೇಲ್‌ಸಿಂಗ್
೨೮.    ೩೦ಮೇ – ೧೯೮೭
೨೯.    ಹಸೀನಾ
೩೦.    ಉದಯಕುಮಾರ್ (ಚಿತ್ರ ನಟ)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x