ಇಲ್ಲಿಯವರೆಗೆ ಪಂಜುವಿಗಾಗಿ ಬರೆದವರ ಪಟ್ಟಿ

ಸಹೃದಯಿಗಳೇ, ಮುಂದಿನ ಜನವರಿ ತಿಂಗಳು 21ನೇ ತಾರೀಖು ಬಂದರೆ ಪಂಜು ಶುರುವಾಗಿ ಐದು ವರ್ಷವಾಗುತ್ತದೆ. ಈ ಐದು ವರ್ಷಗಳಲ್ಲಿ ಪಂಜು ತನ್ನದೇ ಆದ ದೊಡ್ಡ ಓದುಗ ಬಳಗವನ್ನೇ ಹೊಂದಿದೆ. ಹಾಗೆಯೇ ಇಲ್ಲಿಯವರೆಗೂ 680 ಲೇಖಕರು ವಿವಿಧ ಲೇಖನಗಳನ್ನು ಪಂಜುವಿಗಾಗಿ ಬರೆದಿದ್ದಾರೆ. ಆ ಅಷ್ಟು ಲೇಖಕರ ಲಿಸ್ಟ್ ಅನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮೆಲ್ಲರ ಪ್ರೀತಿಯಿಂದ ಪಂಜುವಿನ ಪುಟಗಳ ಹಿಟ್ಸ್ ಇಲ್ಲಿಯವರೆಗೆ 33 ಲಕ್ಷಕ್ಕೂ ಅಧಿಕವಾಗಿದೆ. ಪಂಜುವಿನ ಮೇಲಿನ ನಿಮ್ಮ ಪ್ರೀತಿ ಹೀಗೆಯೇ ಇರಲಿ.  “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ … Read more

ಪಂಜು ಕಾವ್ಯಧಾರೆ

ಹಲ್ಕಾ ಸಾಲುಗಳು ತೆರೆದ ದಾರಿಯ "ಸ್ವಾತಿ" ಮಳೆಯಲ್ಲಿ ಮೊದಲು ಮುತ್ತಿಡುವಾಗ ನೀಲಾಕಾಶದಲಿ ಮಂಕಾಗಿರುವ ನಕ್ಷತ್ರ ನೋಡುವ ಕಣ್ಗಳು…! ಭುವಿಯ ನೋಡಿ ಹೆಣ್ತನದ ವಸಂತದ ಒಲುಮೆಯ ಮೇಲೆ ಒಂದಾದೆವು…! ಬಾನಂಗಳದಿ ಒಂಟಿಯಂತಿರುವ ಚಂದ್ರನು ನಗುತ್ತಿದ್ದಾನೆ ನಮ್ಮಯ ಒಲುಮೆಯ ಪರಿ ಕಂಡು…! ಬಾಡಿದ ಹಸಿರೆಲೆಗಳೂ ನಮಗಷ್ಟಲ್ಲದೆ ಅವಕ್ಕೆಲ್ಲ ಈಗ ವಸಂತ ಕಾಲ ಒಂದಕ್ಕಿಂಥ ಒಂದು  ಚಿಗುರೊಡೆಯುವ ತವಕ…! ಮೋಡದ ಬಸಿರು ಹೆಚ್ಚಾಗಿ ಹನಿಗಳು  ಹುಟ್ಟುತ್ತಿವೆ ನಾ ಮುಂದು ತಾ ಮುಂದೆಂದು  ಜೋಡಿಯ ಸ್ಪರ್ಶಕ್ಕೆ…! ಆದಾವ ಹನಿ ಹಣೆಯ ಮೇಲೆ ಬಿತ್ತೊ … Read more

ಜಾಣಸುದ್ದಿ: ಕೊಳ್ಳೇಗಾಲ ಶರ್ಮ

  ವಿ.ಸೂ.: ವಿಜ್ಞಾನ, ವಿಸ್ಮಯ, ವಿಚಾರಗಳನ್ನು ಜನರಿಗೆ ಅದರಲ್ಲೂ ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರೀ ಕೊಳ್ಳೇಗಾಲ ಶರ್ಮರವರು ಈ ಜಾಣಸುದ್ದಿ ಧ್ವನಿಮುದ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಕನ್ನಡದ ಕೆಲವೇ ಕೆಲವು ವಿಜ್ಞಾನ ಬರಹಗಾರರಲ್ಲಿ ಶರ್ಮರವರು ಒಬ್ಬರು. ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ … Read more

ಬಲ್ಲವನೇ ಬಲ್ಲ ರಂಗದ ರುಚಿ: ಮಲ್ಲಮ್ಮ ಯಾಟಗಲ್, ದೇವದುರ್ಗ

    ರಂಗಭೂಮಿ ಎಂದರೆ ಬೇರೆ  ರೀತಿಯಲ್ಲಿ ಅರ್ಥೈಸಿಕೊಂಡಿರುವ  ಪಾಲಕರಿಗೆ ಮನವರಿಕೆ ಮಾಡುವವರು ಯಾರು ? ಶಾಲಾ ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ರಂಗಭೂಮಿಯ ರುಚಿಯನ್ನು ನೀಡಬೇಕೆಂದು ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಕುವೆಂಪುರವರ ಸ್ಮಶಾನ ಕುರುಕ್ಷೇತ್ರದ ನಾಟಕ ಮಾಡಿಸಿದಾಗ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ಧಾರವಾಡದಲ್ಲಿ ನಡೆದ ವಿಭಾಗೀಯ ಮಟ್ಟಕ್ಕೆ ಅಯ್ಕೆಯಾದ ಸಂದರ್ಭದಲ್ಲಿ ನನಗೇನು ರಂಗಭೂಮಿಯ ಬಗ್ಗೆ ಅಷ್ಟೊಂದು ಆಸಕ್ತಿ ಉಳಿದಿರಲಿಲ್ಲ. ಯಾಕೆಂದರೆ ಪಾಲಕರು ತಿಳಿದುಕೊಂಡ ನಾಟಕ ನಮ್ಮದಾಗಿರಲಿಲ್ಲ. ಅಂದು ಸಂಜೆ ಧಾರವಾಡದಲ್ಲಿ ಶೋ ಇತ್ತು. … Read more

ಬಲ್ಲಾಳರ ಬಂಡಾಯ: ಪ್ರೇಮಾ ಟಿ ಎಮ್ ಆರ್

ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ  ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ 'ನನ್ನ ಪುಟ'ದಲ್ಲಿ?  ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ  ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ 'ಬಂಡಾಯ'.  ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು ೩೦೦೮ರಲ್ಲಿ ನಿಧನರಾದ  ಹಿರಿಯ ಸಾಹಿತಿ ವ್ಯಾಸರಾಯ … Read more

ಸಂಜೆ ಬಂದಾಗ ಹೊಳೆಯುತ್ತಿರಬೇಕು ಸಿಂಕು-ಹೊರ ದುಡಿಮೆಯ ಯುವ ಮಹಿಳೆಯ ಅಭಿಲಾಷೆ: ನಾಗರೇಖಾ ಗಾಂವಕರ

ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/ ಒಂದೂ ಪಾತ್ರೆಯಿಲ್ಲದೇ ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/  ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/ ಒಂದು ಹನಿ ಬಿದ್ದಿರದೇ ಕಾಮೋಡಿನ  ಗೋಲದ ಮೇಲೆ/  ಬಾತ್ ರೂಮು ಕ್ಲೀನಾಗಿ ನಳನಳಿಸುತ್ತಿರಬೇಕು……….. ಆಗ ಮಾತ್ರ ನಾನು/ ಹೊಚ್ಚಗೆ ಮಿಂದು ಬಂದು/ ರುಚಿ ಅಡುಗೆಯ ಮಾಡಿ/ತಿನ್ನಿಸಬಲ್ಲೇ ನಿನಗೆ ಮುದ್ದು ಮಾಡುತ್ತ. ಎನ್ನುತ್ತಾರೆ  ಯುವ ಕವಯತ್ರಿ ಕಾವ್ಯಾ ಕಡಮೆ ನಾಗರಕಟ್ಟೆ ತಮ್ಮ “ಜೀನ್ಸ್ ತೊಟ್ಟ ದೇವರು” ಎಂಬ ಕವನ ಸಂಕಲನದ ಒಂದು ಕವನ. ಆಧುನಿಕತೆಯಲ್ಲಿ … Read more

ನ್ಯಾನೋ ಕಥೆಗಳು: ಪ್ರೇಮ್ (ಪ್ರೇಮ ಉದಯಕುಮಾರ್)

ಹಣೆಬರಹ ಬೆಳಗೆದ್ದು ಮಾವನ ಮನೆಗೆ ಹೋಗಬೇಕಿತ್ತು. ಟಿ.ವಿ. ಹಾಕಿದ ರಾಕೇಶ್. ಸ್ವಾಮೀಜಿಯೊಬ್ಬರು ಭವಿಷ್ಯ ಹೇಳುತ್ತಿದ್ದರು. ಅವನ ಕುಂಭ ರಾಶಿ ಬರುವವರೆಗೆ ಕಾದ. ಈ ರಾಶಿಯವರು ಪ್ರಯಾಣವನ್ನು ಮುಂದೂಡಿ ಎಂದರು. ಸೌಖ್ಯವಿಲ್ಲದ ಮಾವನನ್ನು ನೋಡಲು ನಾಳೆ ಹೋಗೋಣ ಎಂದು ಸುಮ್ಮನಾದ. ಮರುದಿನ ಹೊರಟ ಬಸ್ಸು ಬ್ರೇಕ್ ಫೈಲ್ಯೂರ್ ಆಗಿ ನುಜ್ಜುಗುಜ್ಜಾಯಿತು. ಜಿಪುಣತನ ರಾಮಣ್ಣ ಹಲ್ಲು ನೋವಿನಿಂದ ಬಳಲುತ್ತಿದ್ದರು. ಯಾವತ್ತೂ ಡಾಕ್ಟರ್ ಬಳಿ ಹೋಗುತ್ತಿರಲಿಲ್ಲ.ಡಾಕ್ಟರ್ ಎಂದರೆ ಭಯ. ಅವರಿವರ ಪುಕ್ಕಟೆ ಸಲಹೆ ಪಡೆಯುತ್ತಿದ್ದರು. ಯಾರೋ ಮಾತ್ರೆ ಇಡಲು ಹೇಳಿದರೆ, ಮತ್ತೊಬ್ಬರು … Read more

ಹಿಮಾಲಯವೆಂಬ ಸ್ವರ್ಗ (ಭಾಗ 8): ವೃಂದಾ ಸಂಗಮ್

ಇಲ್ಲಿಯವರೆಗೆ  ರಾತ್ರಿ ಹರಿದ್ವಾರದಲ್ಲಿ ನಮ್ಮ ಕೊಚ ಕೊಚ ಕೊಯಾಂ ಕೊಯಾಂ ನೆಂಟರು, ಬಡೇ ಹನುಮಾನ ಮಂದಿರದಲ್ಲಿ, ನಮಗಿಂತ ಮೊದಲೇ. ಅವರೆಲ್ಲ ಬದರಿಯ ವಿಷಯ ಮಾತಾಡುತ್ತಿದ್ದರು. ನನ್ನ ಪಕ್ಕದಲ್ಲಿ ಊಟಕ್ಕೆ ಕುಳಿತವಳು, ಎದುರಿಗೆ ಇದ್ದವಳಿಗೆ ಆ ದಿನ ನಡೆದ ಘಟನೆಯ ಬಗ್ಗೆ ತನ್ನ ಗಂಡನ ಪ್ರಶಂಸೆ ಮಾಡುತ್ತಿದ್ದಳು. ನನಗೆ ಬದರಿ ದೇವಸ್ಥಾನದ ಮುಂದೆ ಫೋಟೋ ತೆಗೆಸಿಕೊಳ್ಳಬೇಕೆಂದಿತ್ತು. ಆದರೆ ಆತ ಬೇಡ ಎಂದು ಬಿಟ್ಟ. ನನಗೆ ತುಂಬಾ ಬೇಜಾರಾಯಿತು. ಆಮೇಲೆ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದು ನೋಡಿ, ಬಾ ನಾವೂ ತೆಗೆಸಿಕೊಳ್ಳೋಣ … Read more

ಬದಲಾದ ಗಣೇಶೋತ್ಸವದ ಸ್ವರೂಪ!: ಹೊರಾ.ಪರಮೇಶ್ ಹೊಡೇನೂರು

ನಮ್ಮ ಭಾರತೀಯ ಪರಂಪರೆಯಲ್ಲಿ ಹಬ್ಬಗಳು ವಿಶೇಷ ಸ್ಥಾನ ಪಡೆದಿವೆ. ಅದರಲ್ಲೂ  ಹಿಂದೂ ಪಂಚಾಂಗದ ಹೊಸ ವರ್ಷದ ದಿನವೆಂದೇ ಸಂಭ್ರಮಪಡುವ ಚಾಂದ್ರಮಾನ ಯುಗಾದಿಯಿಂದ ಹಿಡಿದು ನಾಗರ ಪಂಚಮಿ, ರಕ್ಷಾ ಬಂಧನ, ವರಲಕ್ಷ್ಮೀ ವ್ರತ, ಗೌರೀ ಗಣೇಶ ಚತುರ್ಥಿ, ನಾಡ ಹಬ್ಬ ದಸರಾ, ನರಕ ಚತುರ್ದಶಿ, ಬಲಿಪಾಡ್ಯಮಿ, ಸಂಕ್ರಾಂತಿ ಮುಂತಾದ ಹಬ್ಬಗಳ ಜೊತೆಗೆ ವಿವಿಧ ಹರಿದಿನಗಳನ್ನೂ ಆಚರಿಸುವ ಮೂಲಕ ಸಂಭ್ರಪಡುತ್ತೇವೆ.           ಈ ಎಲ್ಲಾ ಹಬ್ಬಗಳು ಒಂದೊಂದು ಪೌರಾಣಿಕ ಹಿನ್ನೆಲೆಯಲ್ಲಿ,  ಆಯಾ ಋತುಮಾನಗಳ ಹೊಂದಿಕೆಗೆ … Read more

ವ್ಯಕ್ತಿತ್ವದ ವಿಕಸನ: ಕೆ ಟಿ ಸೋಮಶೇಖರ ಹೊಳಲ್ಕೆರೆ.

        ಹೂವು ಅರಳುವುದನ್ನು ' ವಿಕಸನ  ' ಎನ್ನುತ್ತೇವೆ. ಹೂವು ಪೂರ್ಣವಾಗಿ ಅರಳಿದಾಗ ಅದರ ನಿಜವಾದ ಬಣ್ಣ, ಆಕಾರ ಪಡೆದು ಪೂರ್ಣ ಸೌಂದರ್ಯ ಹೊರಹೊಮ್ಮಿ ಸುಂದರವಾಗಿ ಕಾಣುತ್ತದೆ. ಪೂರ್ಣವಾಗಿ ವಿಕಸಿಸಿದಾಗ ಪರಿಮಳ ಹೊಮ್ಮುತ್ತದೆ. ಸುತ್ತಣ ಪರಿಸರವನ್ನು ಪರಿಮಳದಲ್ಲಿ ಮುಳುಗಿಸಿ ಸುವಾಸನೆ ಸೂಸಿ ಕ್ರಿಮಿ, ಕೀಟ, ಜೀವಿಗಳ ಆಕರ್ಷಿಸುತ್ತದೆ. ಮಧುಪಾತ್ರೆ ತೆರೆದು ದುಂಬಿಗೆ ಹಬ್ಬ ಉಂಟು ಮಾಡುತ್ತದೆ. ದುಂಬಿಯ ಝೇಂಕಾರ ಎಲ್ಲೆಡೆ ಮೊಳಗಲು ಕಾರಣವಾಗುತ್ತದೆ. ಮೊಗ್ಗು ಹಿಗ್ಗಿ ತಾನು ಸುಂದರವಾಗಿ ಕಾಣುವುದಲ್ಲದೆ ಗಿಡದ ಸೌಂದರ್ಯವನ್ನು … Read more

ಗುಡವಿ ಪಕ್ಷಿಧಾಮ: ವಸಂತ ಬಿ ಈಶ್ವರಗೆರೆ

ಹಸಿರ ಹಾದಿಯ ಪಯಣ, ಮನ ತಣಿಸುವ ಕಾನನ. ಸವಿಯುತ್ತಾ ಸವಿಯುತ್ತಾ ಮುಂದೆ ಸಾಗಿದರೇ ಮಲೆನಾಡ ಹಬ್ಬಾಗಿಲಿನಲ್ಲಿ ಕೈ ಬೀಡಿ ಕರೆಯುವುದೇ ಗುಡವಿ ಎಂಬ ಪಕ್ಷಿಗಳ ಲೋಕ. ಈ ಪ್ರವಾಸಿ ತಾಣಕ್ಕೆ ಕಾಡಿನ ಮಧ್ಯದ ಹಾದಿಯ ಮೂಲಕ ಸಾಗುತ್ತಾ ಹೋದ ಹಾಗೆ, ಪ್ರವಾಸಿಗರ ಮನ ಮಿಡಿಯುತ್ತದೆ. ತಂಪಾದ ಹಾದಿಯ ಪಯಣ ನಿಮಗೆ ಮುಗಗೊಳಿಸುತ್ತದೆ.  ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಸುಮಾರು 23 ಬಗೆಯ ಹಕ್ಕಿಗಳ ಕಲರವದ ತಾಣ ಗುಡವಿ ಪಕ್ಷಿಧಾಮ. 1986 ರಲ್ಲಿ ಜೆ.ಎಚ್.ಪಟೇಲ್ … Read more