ಎರಡು ಪ್ರೇಮ ಕವನಗಳು: ಸುಮಿತ ಮೇತ್ರಿ, ನವೀನ್ ಮಧುಗಿರಿ

ರಾಧೆ… ನನ್ನ ನೆನಪಿಗಾಗಿ ನವಿಲು ಗರಿಯನೊಂದನಿಟ್ಟುಕೊ ನಿಂಗೆ ಬೇಸರವಾದಾಗ ನಿನ್ನ ಮಡಿಲಾಗಿ ಮನದ ಮಿದುವಾಗಿ ನಿನಗೆ ಚೈತನ್ಯ ತಂದೇನು ರಾಧೆ… ನನ್ನ ನೆನಪಿಗಾಗಿ ಕೊಳಲನೊಂದಿಟ್ಟುಕೊ ನಿಂಗೆ ನೋವಾದಾಗ ನಿನ್ನ ಇನಿಯನಾಗಿ ಇನಿಯನ ಒಡಲಾಗಿ ನಿನಗೆ ನಲಿವು ತಂದೇನು ರಾಧೆ… ನನ್ನ ನೆನಪಿಗಾಗಿ ಮುಡಿಗೆ ಹೂವಂದನಿಟ್ಟುಕೊ ನಿಂಗೆ ಹಿತವಲ್ಲದ ಸಮಯದಿ ನಿನ್ನ ಗೆಳಯನಾಗಿ ಹಿತೈಸಿಯಾಗಿ ನಿನಗೆ ಆತ್ಮಸಖನಾದೆನು. –ಸುಮಿತ ಮೇತ್ರಿ, ಹಲಸಂಗಿ                         ಬಿಳಿಹಾಳೆಯ … Read more

ಖಾಲಿ ಕಿಸೆಯ ರಾಜಕುಮಾರನಿಗೆ ಕಾಗದದ ಮೇಲೆ ಮನದಾಕ್ಷರ: ಹೇಮಾ ಎಸ್.

ಮುದ್ದು ರಾಜಕುಮಾರ…. ಪ್ರೀತಿಯ ಹೊರತಾಗಿ ನಿನ್ನಿಂದ ನನಗೆ ಯಾವ ನಿರೀಕ್ಷೆಗಳು ಇಲ್ಲ. ನೀನು ಸಿರಿವಂತನಲ್ಲ ಎಂಬ ಸತ್ಯವು ಗೊತ್ತಾದ ಮೇಲೆಯೇ ನಾನು ನಿನ್ನನ್ನು ಮೆಚ್ಚಿದ್ದು. ನಿನ್ನನ್ನು ಪ್ರೀತಿಸಿದ್ದು. ನಿನ್ನಲ್ಲಿ ನನಗೆ ತುಂಬಾ ಇಷ್ಟವಾದ ಗುಣವೇನು ಗೊತ್ತಾ? ನೀನು ಇರುವುದನ್ನ ಇರುವಂತೆಯೇ ಹೇಳಿಬಿಡುತ್ತೀಯ. ಯಾವ ಮಾತಿಗೂ ಕೂಡ  ಸುಳ್ಳು ಕಪಟತೆಗಳ ಬಣ್ಣ ಲೇಪಿಸುವುದಿಲ್ಲ. ಸುಳ್ಳು ಸುಳ್ಳೇ ಆಡಂಬರದ ಮಾತುಗಳನ್ನಾಡಿ ಒಂದು ಹೆಣ್ಣಿನ ಮನವೊಲಿಸಿಕೊಳ್ಳುವ ಪ್ರಯತ್ನವನ್ನು ನೀನು ಮಾಡಲಿಲ್ಲ. ಮಾಡುವುದಿಲ್ಲ. ಇರುವುದರಲ್ಲಿಯೇ ಸಂತೃಪ್ತಿಯಿಂದ ಬದುಕುವ ನಿನಗೆ ಸೋತುಬಿಟ್ಟೆ. ನಾ ನಿನ್ನ … Read more

ಪ್ರೇಮ ಪ್ರೀತಿ ಇತ್ಯಾದಿ: ಶಮ್ಮಿ ಸಂಜೀವ್

ಹೂವೊಂದು ಬಳಿಬಂದು  ತಾಕಿತು ಎನ್ನೆದೆಯಾ  ಏನೆಂದು  ಕೇಳಲು  ಹೇಳಿತು ಜೇನಂಥ ಸವಿನುಡಿಯಾ …  ಎದೆ ತುಂಬಾ ಭಾವಗಳ ಧಾರೆ ಇತ್ತು…ಮೊದಲ ಪ್ರೇಮ ಪತ್ರಕ್ಕೆ ಅದೆಷ್ಟು ನಾಚಿಕೆಯ ಘಮವಿತ್ತು …ಕಾಲ ಓಡಿತು ..ಪ್ರೀತಿ ಪ್ರೇಮಕ್ಕೆ ಬೇರೆಯದೇ ಹೆಸರಿತ್ತು!! ಆಗಷ್ಟೇ ಅರಳಿದ ಹೂವೊಂದರ ಜೇನ  ಹೀರುವ ಮುನ್ನ ಪಿಸುನುಡಿಯಿತು ದುಂಬಿ .."ನೋವು ಮಾಡೋದಿಲ್ಲ ..ನಿನ್ನ ಪರಾಗ ಜೇನು ನನಗೆ..ನಿನ್ನ ಕಾಯಾಗಿಸಿ ಹಣ್ಣಾಗಿಸುವ ಜೀವನ ಪ್ರೀತಿ ನಿನಗೆ!!" ಅಂಜಲಿಲ್ಲ ಅಳುಕಲಿಲ್ಲ ತನ್ನ ಜೇನ ಒಡಲನ್ನ ಒಮ್ಮೆಗೆ ತೆರೆದು ಅರ್ಪಿಸಿ ಕೊಂಡಿತು .. … Read more

ಎದ್ದೇಳು ಮಂಜುನಾಥ”ನೂ “ಹ್ಯಾಪಿ ಡೇಸ್” ನ ಅಮಲಿನವನೂ: ಅಮರ್ ದೀಪ್ ಪಿ. ಎಸ್.

ನನ್ನೊಬ್ಬ  ಹಳೆಯ ಗೆಳೆಯ ನೆನಪಾದ. ಇತ್ತೀಚಿಗೆ ನಾನು ಕಂಡ ಹೊಸ ಹುಡುಗನ ಅತಿಯಾದ ಆತ್ಮವಿಶ್ವಾಸವೋ ಅಹಮಿಕೆಯೋ ಒಟ್ಟಿನಲ್ಲಿ ಬೇಜಾರು ತರಿಸಿತು. ಪ್ರತಿ ದಿನ ಬಂದು ನಗು ನಗುತ್ತಾ, ಹಳೆಯ, ಕಿಶೋರನದೋ, ರಫಿ ಸಾಹೇಬರದೋ ಇಲ್ಲಾ ಮುಖೇಶನದೋ ಹಾಡನ್ನು ಗುನುಗುತ್ತಾ, ತನಗೆ ತಿಳಿದ ತಿಳಿ ಹಾಸ್ಯದ ಮಾತನ್ನೂ ಬಿಂದಾಸ್ ಆಗಿ  ಹೇಳುತ್ತಾ ನಾಲಗೆ ಮೇಲೆ ಬಹಳ ಹೊತ್ತು ರುಚಿ ಆರದಂತಿರುವ ಚಹಾ ಅಥವಾ ಕಾಫಿ ಕೊಟ್ಟು ಹೋಗುವ ವಿಷ್ಣು ಈಗತಾನೇ ಕೊಟ್ಟು ಹೋದ ಕಾಫಿ ಹೀರುತ್ತಿದ್ದೆ.  ಒಂದಕ್ಕೊಂದು ತಾಳೆಯಿಲ್ಲದ … Read more

ಕನಸಿನ ಹೊತ್ತು: ಪದ್ಮಾ ಭಟ್

                       ಒಂದೇ ಸಮನೆ ಹರಿಯುವ ನದಿಯಲ್ಲಿ ಬಿಟ್ಟ ಕಾಗದದ ದೋಣಿ.. ಎತ್ತ ಪಯಣಿಸಬೇಕೆಂಬುದೇ ಗೊತ್ತಿಲ್ಲದ ಗೊಂದಲದ ನಡುವೆ ಒಂದೇ ಸಮನೆ ನಕ್ಕು ನಗಿಸುವ ನಾನು ಮತ್ತು ನೀನು. ಬಿಚ್ಚಿಕೊಂಡ ಭರವಸೆಗಳನೆಲ್ಲ ಒಂದೆಡೆ ಒಟ್ಟುಗೂಡಿಸಿ ಕಾಪಾಡುವ ತವಕ..ನಿನ್ನ ಕಣ್ಣಿನಲಿ ಹರಿಯುವ ಸಂತಸದ ಹೊನಲಿನಲಿ ನಾನೂ ಸೇರಿಹೋಗುವ ನಲುಮೆ.. ಓಹ್ ಇದೆಲ್ಲ ಕನಸು ಎಂದು ಎದ್ದ ಕೂಡಲೇ ಗೊತ್ತಾಗಿತ್ತು..ನೀನು ಎಂಬುವವನೇ ಇಲ್ಲದವನ ಬಗೆಗೆ ಇಲ್ಲ ಸಲ್ಲದ … Read more

ಲಕ್ಷ್ಮಣ ರೇಖೆ: ಅಖಿಲೇಶ್ ಚಿಪ್ಪಳಿ

ಜಗತ್ತಿನ ಶ್ರೇಷ್ಠ ಗ್ರಂಥಗಳಲ್ಲಿ ರಾಮಾಯಣವು ಒಂದು. ರಾಮಾಯಣ-ಮಹಾಭಾರತವು ಸಮಕಾಲೀನ ರಾಜಕಾರಣಕ್ಕೆ ಹೊಂದಿಕೊಳ್ಳುವಂತೆ ರಚಿತವಾಗಿದೆ. ಆಗೆಲ್ಲಾ ಮಂತ್ರ-ತಂತ್ರಗಳಿಂದ ತಯಾರಿಸಲಾದ ಬಾಣ-ಬಿಲ್ಲುಗಳನ್ನು ಕವಿ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಹಾರಿ ಬಿಟ್ಟು ಏನೇನೋ ಅಸಾಧ್ಯವಾದುದನ್ನು ಸೃಷ್ಟಿಸಿ ರಂಜಿಸಿದ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಬ್ಬ ವ್ಯಕ್ತಿ ಹೇಗಿರಬಾರದು ಎಂಬ ಸಂದೇಶವನ್ನು ಬೀರುವ ಹಲವು ಘಟನೆಗಳಿವೆ. ರಾವಣನಂತಹ ಪರಮ ದೈವಭಕ್ತ ಯ:ಕಶ್ಚಿತ್ ಸೀತೆಗಾಗಿ ತನ್ನ ರಾಜ್ಯ, ಮಕ್ಕಳು, ಬಂಧುಗಳು ಕಡೆಗೆ ತನ್ನ ಪ್ರಾಣವನ್ನು ಕಳೆದುಕೊಂಡ. ರಾಮ ವಾಲಿಯನ್ನು ಕೊಂದ ಬಗೆಯನ್ನು ವಿದ್ವಾಂಸರು ಹೇಗೆ … Read more

ಚೈಲ್ಡ್ ಲೇಬರ್: ಕ್ರಾಕ್ ಬಾಯ್

        ನವೆಂಬರ್ ತಿಂಗಳ ಚುಮು ಚುಮಿ ಚಳಿಯಲ್ಲಿ ಮಲೆನಾಡಿನಿಂದ ತಂದ ಕೊಟ್ಟೆ ಕಂಬಳಿಯ ಒಳಗೆ ಬೆಚ್ಚಗೆ ಮಲಗಿ ಸುಖ ನಿದ್ರೆಯಲ್ಲಿ ತೇಲುತ್ತಿದ್ದೆ, ಮಲಗಿದ್ದವನನ್ನು ಬಡಿದೆಬ್ಬಿಸುವಂತೆ ಒಂದೇ ಸಮನೆ ನನ್ನ ಮೊಬೈಲ್ ಕೂಗಿಕೊಳ್ಳತೊಡಗಿತು, ಈ ಹಾಳ್ ಮೊಬೈಲು ನನ್ ನಿದ್ದೆ ಹಾಳ್ ಮಾಡಕ್ಕೇ ಇರದೇನೋ ಅನ್ನೋವಷ್ಟು ಸಿಟ್ಟು ಬಂದಿತ್ತು ಆ ಮೊಬೈಲ್ ಮೇಲೆ, ಕೋಪದಿಂದ ಅದರ ಕಡೆಗೆ ತೀಕ್ಷ್ಣ ದೃಷ್ಠಿಯನ್ನು ಬೀರಿ ಅದನ್ನು ಕೈಗೆತ್ತಿಕೊಂಡು, ಬಡ್ಕೋತಿದ್ದ ಅಲಾರಾಂ ಅನ್ನು ಆಫ್ ಮಾಡಿಟ್ಟೆ,  ಟೈಂ ಆಗ್ಲೇ … Read more

ಕಾಲೇಜಿನ ಆ ದಿನಗಳು: ಸುಮನ್ ದೇಸಾಯಿ

ನೆನಪುಗಳ ಹಾರದ ಗುಚ್ಛವನ್ನು ಹೇಂಗ ಬಿಡಸಬೇಕೊ ತಿಳಿಯಂಗಿಲ್ಲ,.. ಯಾವ ಎಳಿ ಹಿಡದರು ಇದ ಮೊದಲು ಇದ ಮೊದಲು ಅನಿಸ್ತದ. ಹೀಂಗ ಒಂದ ದಿನಾ ಸಂಜಿ ಮುಂದ ಮನಿ ಹತ್ರ ನ ಇದ್ದ ಪಾರ್ಕಿಗೆ ವಾಕಿಂಗ ಹೋಗಿದ್ದೆ. ನನ್ನ ಮಗ ಮತ್ತು ಮಗಳು ಆಟ ಆಡಲಿಕತ್ತಿದ್ರು, ಸ್ವಲ್ಪ ಹೊತ್ತು ಅವರ ಜೊತಿಗೆ ಆಡಿ ಬಂದು ಅಲ್ಲೇ ಇದ್ದ ಒಂದು ಬೇಂಚ್ ಮ್ಯಾಲೆ ಕುತೆ. ಎಷ್ಟು ಛಂದ ಬಾಲ್ಯ ಅಲ್ಲಾ? ಯಾವ ಕಪಟತನ ಇರಂಗಿಲ್ಲಾ.ಎಷ್ಟ ಹಿತಾ ಇರತದ ಗತಿಸಿಹೊದ ನೆನಪುಗಳನ್ನು … Read more

ಸಾಮಾನ್ಯ ಜ್ಞಾನ (ವಾರ 14): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು? ೨.    ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? ೩.    ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು? ೪.    ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು? ೫.    ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು? ೬.    ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು? ೭.    ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ … Read more

ಕಲಿಕೆ ಮತ್ತು ಶಿಕ್ಷಣ: ನಾರಾಯಣ ಎಂ.ಎಸ್.

      ಬೆಳಗಿನ ಕಾಫಿಯೊಂದಿಗೆ ಭಾನುವಾರದ ವೃತ್ತ ಪತ್ರಿಕೆ ಓದುವ ಮಜವೇ ಬೇರೆ ಎಂದುಕೊಳ್ಳುತ್ತಾ ಪೇಪರ್ ಕೈಗೆತ್ತಿಕೊಂಡೆ. “ಖಾಸಗೀ ಕಾಲೇಜುಗಳಲ್ಲಿನ್ನು ಸರ್ಕಾರೀ ಸೀಟುಗಳಿಲ್ಲ, ವೃತ್ತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಬರೆ” ಎಂಬ ತಲೆಬರಹ ನೋಡಿ ಗಾಬರಿಯಾಯಿತು. ವಿದ್ಯಾರ್ಥಿಗಳಿಗೆ ಎಲ್ಲಿಯ ಬರೆ, ಬರೆಯೇನಿದ್ದರೂ ವಿದ್ಯಾರ್ಥಿಗಳ ಪೋಷಕರಿಗೆ ತಾನೆ, ಎಂದು ಕೊಳ್ಳುತ್ತಾ ಲೇಖನದ ವಿವರಗಳತ್ತ ಕಣ್ಣಾಡಿಸಿದೆ. ನಿಯಮಗಳಲ್ಲಿ ಈಗ ಮಾಡಲಾಗುತ್ತಿರುವ ಬದಲಾವಣೆಯಿಂದ ಪ್ರಸಕ್ತ ನಲವತ್ತೈದು ಸಾವಿರವಿರುವ ವಾರ್ಷಿಕ ಶುಲ್ಕ ಮುಂದಿನ ವರುಷದಿಂದ ಕನಿಷ್ಟ ಮೂರು ಪಟ್ಟು ಹೆಚ್ಚುವುದಾಗಿ ಬರೆದಿದ್ದರು. ಹಾಗಾಗಿ … Read more

ಮೂವರ ಕವಿತೆಗಳು: ನಾಗರಾಜ್ ಹರಪನಹಳ್ಳಿ, ವೀಣಾ ರಾಘವೇಂದ್ರ, ಮಂಜು ಹಿಚ್ಕಡ್

          ಕಾವ್ಯ ದಕ್ಕುವತನಕ  ಬೆಕ್ಕಿನಂತೆ ಹೆಜ್ಜೆ ಇಟ್ಟು ಬಂದವರು ಚಿಟ್ಟೆಯಂತೆ ಸುಳಿದು ಮಾಯವಾದವರು ಮನದ ಹಾಳಾದ ಭಾವನೆಗಳಿಗೆ ಅಕ್ಷರ ರೂಪದಲ್ಲಿ ಸಿಗದವರು ಹೇಗೆ ಬರೆಯುವುದು ಇದನೆಲ್ಲಾ ಕವಿತೆಯಲಿ   ಇದ್ದು ಇಲ್ಲದಂತೆ ಸುಳಿದು ಅಳಿದುಹೋಗುವ ಕನಸುಗಳಿಗೆ ಏನು ಹೇಳುವುದು ಕಾಡಿಬೇಡಿದ ಹೆಜ್ಜೆ ಗುರುತುಗಳೇ ಇಲ್ಲ ಅಲ್ಲಿಯ ಆ ಕ್ಷಣಗಳ ನೇವರಿಕೆಗಳ ಸಲ್ಲಾಪಗಳ  ಹಿಡಿದು ತಂದು ಬಿತ್ತಬೇಕೆಂದು ಕೊಂಡಿದ್ದೆ ಅವು ಕವಿತೆಯಾಗಿ ಮೊಳೆಯಲಿ ಅಂದು ಕೊಂಡಿದ್ದೆ ಆದರೆ………..   ಹಗಲುಗಳು ಜಾರಿ ಹೋಗುತ್ತಿವೆ … Read more

ಗೆಳೆಯನಿಗೊಂದು ಪತ್ರ: ಜಯಪ್ರಕಾಶ್ ಪುತ್ತೂರು

ಪ್ರೀತಿಯ ಗೆಳೆಯನಿಗೆ ನಿನ್ನ ಗೆಳೆಯನ ನಮಸ್ಕಾರ. ಹೇಗಿದ್ದಿಯಾ ಎಂದು ಕೇಳುವುದಿಲ್ಲ, ಇತ್ತಿಚೆಗೆ ನಿನ್ನಲ್ಲಾದ ಕೆಲವು ಬದಲಾವಣೆಗಳನ್ನು ಗಮನಿಸಿಯೇ ಈ ಪತ್ರ ಬರೆಯುತ್ತಿದ್ದೇನೆ. ಬದುಕೇ ಮುಗಿದುಹೋಯಿತು ಎಂಬಂತೆ ಆತ್ಮಹತ್ಯೆಗೆ ಪ್ರಯತ್ನಿಸಿದಿಯಂತೆ? ಯಾಕೊ ನನ್ನ ಗೆಳೆಯ ನೀನು ಸದಾ ಜೀವನೋತ್ಸಾಹದ ಬಗ್ಗೆ ಮಾತನಾಡುತ್ತಿದ್ದವನು, ನಿನಗೆ ಜೀವನದ ಮೇಲೆ ಬೇಸರವೇ? ನಂಬೋಕೆ ಆಗ್ತಾ ಇಲ್ಲ ಕಣೋ. ಆದ್ರೂ ನಂಬಲೇಬೇಕು, ನಿನ್ನ ಇತ್ತಿಚೆಗಿನ ಬದಲಾದ ಮನೋಸ್ಥಿತಿಯನ್ನು. ಅಲ್ಲಾ ಕಣೋ ನೀನು ಪ್ರೀತಿಸಿದ ಹುಡುಗಿ ನಿನಗೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ನಿರ್ಧಾರವೇ? … Read more

ಬರೆಯೋ ಮೂಡಿನ ಹಿಂದೆ: ಪ್ರಶಸ್ತಿ ಪಿ.

ತುಂಬಾ ದಿನವಾಗಿಬಿಟ್ಟಿದೆ. ಏನೂ ಬರೆದಿಲ್ಲ . ಹೌದಲ್ಲಾ ? ಏನಾದರೂ ಬರಿಬೇಕು.  ಹೌದು. ಏನು ಬರಿಯೋದು ? ಬೆಂಗಳೂರು ಬಿಂಟಿಸಿಯಲ್ಲಿನ ಕನ್ನಡ ಪ್ರೇಮದ ಬಗ್ಗೆ ಬರೆಯಲಾ ? ಬನವಾಸಿಗೆ ಹೋದ ನೆನಪುಗಳ ಬಗ್ಗೆ ಬರೆಯಲಾ ? ಬರುತ್ತಿರೋ ಪ್ರೇಮಿಗಳ ದಿನದ ನೆನಪಿಗೆ ಕೈಕೊಟ್ಟ ಪ್ರೀತಿಗಳ ಬಗ್ಗೆ ಬರೆಯಲಾ ? ಮೈಕ್ರೋಸಾಫ್ಟಿನ ಮೂರನೇ ಸಿ.ಇ.ಓ ಸತ್ಯಣ್ಣನ ಬಗ್ಗೆ ಬರೆಯಲಾ ? ಟೀವಿಯಲ್ಲೆಲ್ಲಾ ಸುತ್ತಾಡುತ್ತಿರೋ ನಮೋ-ರಾಗಾ ಅಲೆಯ ಬಗ್ಗೆ ಬರೆಯಲಾ .. ಬರೆಯಬಹುದಾದದ್ದು , ಬರೆಯಲಾಗದ್ದು, ಬರೆಯಬಾರದ್ದು ನೂರೆಂಟು ವಿಷಯಗಳಿವೆಯಲ್ಲಾ. … Read more