ಬದುಕೆಂಬ ಬಂದೀಖಾನೆಯಲ್ಲಿ…: ವಾಸುಕಿ ರಾಘವನ್

ಆಗಿನ್ನೂ ನನಗೆ ಈ ಪರಿ ಸಿನಿಮಾ ಹುಚ್ಚು ಹತ್ತಿರಲಿಲ್ಲ. ಆಫೀಸ್ ಗೆ ಕ್ಯಾಬ್ ಅಲ್ಲಿ ಹೋಗೋವಾಗ “ಡಂಬ್ ಶರಾಡ್ಸ್” ಆಡ್ತಾ ಇದ್ವಿ. ಸ್ವಲ್ಪ ದಿನದಲ್ಲೇ ಎಕ್ಸ್‌ಪರ್ಟ್ಸ್ ಆಗೋದ್ವಿ ತುಂಬಾ ಜನ, ಸಿನಿಮಾ ಹೆಸರನ್ನ ಸುಲಭವಾಗಿ ಊಹಿಸಿಬಿಡ್ತಿದ್ವಿ. ಆಗ ಕಷ್ಟಕಷ್ಟದ ಹೆಸರುಗಳನ್ನು ಹುಡುಕಿ ಕೊಡೋ ಪರಿಪಾಠ ಶುರು ಆಗಿತ್ತು. ಒಂದು ದಿನ ಗೆಳೆಯ ಪ್ರದೀಪ್ “ಶಾಶ್ಯಾಂಕ್ ರಿಡೆಂಪ್ಶನ್” ಅಂತ ನನ್ನ ಕಿವಿಯಲ್ಲಿ ಉಸುರಿದರು. “ಏನು? ಶಶಾಂಕ್ ರಿಡೆಂಪ್ಶನ್ ಅಂತಾನಾ? ಆ ಥರ ಯಾವ ಫಿಲ್ಮ್ ಇದೆ? ತಮಾಷೆ ಮಾಡ್ತಿಲ್ಲ … Read more

ಕನಸೆಂಬೋ ಕುದುರೆಯನೇರಿ:ಮಹಾದೇವ ಹಡಪದ

ಜಗತ್ತಿನ ಶ್ರೇಷ್ಠ ಚಿತ್ರನಿರ್ದೇಶಕರಾದ ಜಪಾನಿನ ಕುರೊಸವಾ ಅವರ ರಶೊಮನ್ ಗೇಟ್ ಚಿತ್ರದ ಮಾದರಿಯಲ್ಲಿ ಕನಸೆಂಬೋ ಕುದುರೆಯನೇರಿ ಸಿನಿಮಾವನ್ನು ಕಾಸರವಳ್ಳಿಯವರು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಒಂದು ಘಟನೆಯನ್ನು ಏಳೆಂಟು ಜನ ತಮಗೆ ಕಂಡ ಸತ್ಯದ ಎಳೆಯಲ್ಲಿ, ಗ್ರಹಿಸಿದ ರೀತಿಯಲ್ಲಿ ಹೇಳುವ ರಶೋಮನ್ ಗೇಟ್ ಸಿನಿಮಾದ ನಿರೂಪಣಾ ತಂತ್ರವನ್ನು ಕನಸೆಂಬೋ ಕುದುರೆಯನೇರಿ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಆದರೆ ರಶೋಮನ್ ಚಿತ್ರದ ಸಾಧ್ಯತೆಗಳಿಗಿಂತ ಹೆಚ್ಚು ಸಾತ್ವಿಕವಾದ ವಿಭಿನ್ನ ಹಾದಿ ತುಳಿದಿದೆ. ಈ ಚಿತ್ರದಲ್ಲಿ ವಾಸ್ತವದ ಮತ್ತೊಂದು ಮಜಲು ಕಾಣಿಸುತ್ತದೆ.  ಕನಸು, ನಂಬಿಕೆಗಳು ಸುಳ್ಳಾಗುತ್ತ ಹೋದಂತೆ … Read more

ಮೂವರ ಕವಿತೆಗಳು: ರಾಘವ ಭಟ್ ಲಾಲಗುಳಿ, ದಿಲೀಪ್ ರಾಥೋಡ್, ರುಕ್ಮಿಣಿ.ಎನ್.

ಮಾತು-ಮೌನ ಮೌನ ಬದುಕಿಗೆ ಅರ್ಥ ಮೌನ ಮಾತಿಗೆ ವ್ಯರ್ಥ ಭಾವ ಭಾವದ ತುಣುಕು ಮೃದು ಮೌನದಲಿ ಹುಡುಕು ||   ಮೌನ ಸಾಗರವಹುದು  ಮಾತೊಂದು ಕೆರೆ ಹುಚ್ಛ ಮೌನ ಸಂವೇದನೆಗೆ ಮೌನದರ್ಥವೇ ಸ್ವಚ್ಛ ||   ಕಳೆದದ್ದು ಮಾತು ಹುಡುಕಿದ್ದು ಮೌನ ಮೌನ ಪ್ರಖರತೆ ಮುಂದೆ ಮಾತೊಂದು ಗೌಣ ||   ಮಾತು ತಾರಿಕೆಯಾಯ್ತು ಮೌನ ತಾ ಚಂದ್ರಮನು ಮೌನ ಹಗಲೂ ಇರುಳು ಮಾತು ಬೆಳಕಿಗೆ ಮರುಳು||   ಮಾತು ಮಾಣಿಕ ನಿಜ ಮಾತೆಲ್ಲ ಮಾಣಿಕವಲ್ಲ ಮೌನದಲಿ … Read more

ನಾಟಕಕಾರರಾಗಿ ಕುವೆಂಪು (ಭಾಗ-6): ಹಿಪ್ಪರಗಿ ಸಿದ್ದರಾಮ್

ಅಲ್ಪನೋರ್ವ ಆಡಿದನೆಂಬ ಕೊಂಕು ಮಾತಿಗೆ ಕಿವಿಗೊಟ್ಟು ಅರಮನೆಯಿಂದಲೇ ಗರ್ಭಿಣಿಯಾಗಿದ್ದ ಅರ್ಧಾಂಗಿಯನ್ನು ಕಾಡಿಗಟ್ಟುವ ಭರತಖಂಡದ ಆದರ್ಶ ವ್ಯಕ್ತಿತ್ವದ ರಾಮನ ವಿವಾದಾಸ್ಪದ ವಿಚಾರದಿಂದ ನಡೆಯುವ ಪ್ರಸಂಗದಲ್ಲಿ ಭಾಗ್ಯಶಾಲಿಯಾದ ರಾಮಾಯಣದ ಪಾತ್ರವೆಂದರೆ ವಾಲ್ಮೀಕಿ ಮಹರ್ಷಿಗಳು. ಮಹಾಕವಿ ಕುವೆಂಪು ಅವರ ತರ್ಕದ ಹಿನ್ನಲೆಯು ಈ ಪ್ರಸಂಗಕ್ಕೆ ಸೂತ್ರಧಾರಕ ಶಕ್ತಿಯಂತೆ ತೋರುವುದರೊಂದಿಗೆ ‘ವಾಲ್ಮೀಕಿಯ ಭಾಗ್ಯವೇ !’ ಎಂದು ರಂಗಕೃತಿಯ ಪ್ರಸಂಗದ ಕೊನೆಯಲ್ಲಿ ಮಹರ್ಷಿಗಳ ಬಾಯಿಯಿಂದಲೇ ಹೇಳಿಸುವುದರೊಂದಿಗೆ ಮಹಾಕವಿಗಳು ಆಧುನಿಕ ರಂಗತಂತ್ರಗಳ ಝಲಕ್ ಎಂಬಂತೆ ಚಮಾತ್ಕಾರಿಕ ಸಂಭಾಷಣೆಯ ಅಂತ್ಯ ನೀಡಿರುವುದನ್ನು ಹಿಂದಿನ ಸಂಚಿಕಯಲ್ಲಿ ನೋಡಿದ್ದೇವೆ. ಈಗ … Read more

ನಮ್ಮ ಅಣ್ಣಾವ್ರು ಅಂದರೆ ಕಡಿಮೇನಾ?: ಶ್ರೀಧರ್ ಬನವಾಸಿ

ಭಾರತೀಯ ಸಿನಿಮಾದಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು, ಕಲಾವಿದರು ಬಂದು ಹೋಗಿದ್ದಾರೆ. ಈಗಲೂ ಬರುತ್ತಲೇ ಇದ್ದಾರೆ. ಆದರೆ ನೂರು ವರ್ಷದ ಭಾರತೀಯ ಸಿನಿಮಾ ಇತಿಹಾಸದಲ್ಲಿ ಡಾ. ರಾಜ್‌ಕುಮಾರ್ ಹೇಗೆ ವಿಭಿನ್ನ ಅನ್ನುವುದಕ್ಕೆ ಒಂದು ಮಾತನ್ನು ನೆನಪಿಸಿಕೊಳ್ಳಲೇಬೇಕು. ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ತೆಲುಗಿನ ಮೇರುನಟ ನಾಗೇಶ್ವರರಾಯರು (ತೆಲುಗು ಸೂಪರ್‌ಸ್ಟಾರ್  ನಾಗಾರ್ಜುನ ಅವರ ತಂದೆ)  ರಾಜ್‌ಕುಮಾರ್ ಮೇಲೆ ಅಪಾರ ಗೌರವವನ್ನು ಹೊಂದಿದ್ದ ನಾಗೇಶ್ವರರಾಯರು, ವೈಯಕ್ತಿಕವಾಗಿ ಅವರದ್ದು ಸುಮಾರು ೫೦ ವರ್ಷಗಳ ಸ್ನೇಹವಾಗಿತ್ತು. ರಾಜ್‌ಕುಮಾರ್ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಭಿನಯಿಸುವಾಗ … Read more

ಚುಟುಕಗಳು: ಹೇಮಲತಾ ಪುಟ್ಟನರಸಯ್ಯ

ಉಗುರುಗಳದು ನೆನಪಿನದು , ಕತ್ತರಿಸಿದಷ್ಟು ವೇಗದಲಿ ಮೂಡುವುದು , ಸಿಬಿರಾಗಿ ನಿಂತು ಚುಚುತ್ತಲೇ ಇರುವುದು ******************** ನೀ ಕೊಟ್ಟ ನೋವಿನ ವಿಷವನ್ನು  ಗಟಗಟನೆ ಕುಡಿದೂ ಸಾಯದೆ ಉಳಿಯಲು ನಾನೇನು ನೀಲಕಂಠನಲ್ಲ ಒಳಗೆ ಸತ್ತಿರುವೆ ಆದರು ಇನ್ನು ಬದುಕೇ ಇರುವೆ *************** ಅವನ ಗಂಡಸುತನವ ದಿಕ್ಕರಿಸಿದ ನನ್ನ ಹೆಣ್ತನ ಕದವಿಕ್ಕಿ ಅಳುತ್ತಿತ್ತು ಒಳಗೆ ********** ಇಂಚಿಂಚು ಕೊಂದಿರುವೆ ಚುಚ್ಚಿ ಚುಚ್ಚಿ ಹುಡುಕಲು ನಿನ್ನ ಬಿಂಬವನ್ನು ಚೂರುಗಳಲ್ಲಿ ನಾನೇನು ಕನ್ನಡಿಯಲ್ಲ ********** ನವಿಲಿಗೆ ಕುಣಿವುದೇ ಧರ್ಮ ಕೆಂಬೂತದ ಸಹವಾಸಕ್ಕೆ ಕುಣಿವುದ … Read more

ಓ ಮನಸೇ, ಸ್ವಲ್ಪ ರಿಲ್ಯಾಕ್ಸ್ ಪ್ಲೀಸ್:ಪ್ರಶಸ್ತಿ ಅಂಕಣ

ಇವತ್ತಿನ ಯಶಸ್ಸನ್ನು ನಾಳೆಯ ಗುರಿಗಳೆದುರು ನಿಲ್ಲಿಸಿ ಕಡೆಗಣಿಸೋ ಮುನ್ನ.. ಜೀವನದೋಟದಲಿ ಎಲ್ಲರಿಗಿಂತ ಮುಂದಿರೋ ಬಯಕೆಯಲಿ ದಾಟಿದ ಎಷ್ಟೋ ಮೈಲುಗಳ ಮರೆಯೋ ಮುನ್ನ.. ಜತೆಗಿದ್ದವರ ನೋವಲ್ಲಿ ದನಿಯಾಗಿ, ನಲಿವಲ್ಲಿ ಅನಾಥನಾಗೋ ಮುನ್ನ.. ಓ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್.. ಯಶವೆಂಬುದು ಗುರಿಯಲ್ಲ, ಅನುದಿನದ ದಾರಿ.. ಓ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ 🙂 ಬಾಳು, ಗೋಳು, ನೋವು, ನಲಿವು .. ಉಫ್ ಏನಪ್ಪಾ ಇದು ವೇದಾಂತ ಅಂದ್ಕೊಂಡ್ರಾ ? ಹಾಗೇನಿಲ್ಲ. ಪ್ರತೀ ವಾರದಂತೆಯೇ.. ಆದರೆ ಸ್ವಲ್ಪ ಭಿನ್ನವಾಗಿ. ಸ್ವಗತದ ಮಾತುಗಳನ್ನು ಪದಗಳಿಗಿಳಿಸೋ … Read more

ಮನಸ್ಸು ಒಮ್ಮೊಮ್ಮೆ ಹೀಗೆಲ್ಲಾ ಯೋಚಿಸುವುದು೦ಟು…!: ರಾಮಚಂದ್ರ ಶೆಟ್ಟಿ

"ನನಗೆ ದೇವರು ಏನನ್ನೂ ಕೊಟ್ಟಿಲ್ಲ" ಇದು ಸಾಮಾನ್ಯವಾಗಿ ಎಲ್ಲಾ ಇರುವವರ ಒ೦ದು ದೂರು,ಒ೦ದು ಹೇಳಿಕೆ ದೇವರೆಡೆಗೆ .ನನ್ನನ್ನೂ ಸಹ ಸೇರಿಸಿ..ಸಾಮಾನ್ಯವಾಗಿ ನಾವು ನೋವಿನ ಪರಿಧಿಯೊಳಗೆ ಸಿಕ್ಕಿಕೊ೦ಡು ಒದ್ದಾಡುತ್ತಿರುವಾಗ ,ನಾವು ಆಸೆ ಪಟ್ಟಿದ್ದು ನಮಗೆ ದಕ್ಕದಿದ್ದಾಗ, ಅಥವಾ ನಮಗೆ ಹತ್ತಿರ ಎ೦ದೆನಿಸಿದವರೂ ನಮ್ಮಿ೦ದ ದೂರ ನಡೆದಾಗ ಇ೦ಥ ಅನೇಕ ಸ೦ಧರ್ಭದಲ್ಲಿ ಅದರ ಪರಿಣಾಮವನ್ನು ಸ್ವೀಕರಿಸಲಾಗದೆ ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಯವಾಗಿ ಅಥವಾ ಗೊ೦ದಲವಾಗಿ ನಾವು ಪೂರ್ತಿಯಾಗಿ ಸೋತು ಬಿಟ್ಟೆವು ಅ೦ದುಕೊ೦ಡುಬಿಡುತ್ತೇವೆ..ಈ ಸಮಯದಲ್ಲಿನ ನೋವು, ನಿರಾಶೆ ಹತಾಶೆಯನ್ನು ಹತ್ತಿಕ್ಕಲಾಗದೆ ಗೊ೦ದಲದಲ್ಲಿದ್ದಾಗ ಈ … Read more

ಹಳ್ಳಿಯಾವ ಕಳಿಸಿಕೊಟ್ಟ ಪಾಠ: ಶ್ರೀಕಾಂತ್ ಮಂಜುನಾಥ್

ನಾಗರೀಕ ಸಮಾಜ ಎಂದು ಬೀಗುವ ಪಟ್ಟಣದಲ್ಲಿ ಸಂಸ್ಕೃತಿ ಮರೆತು ಹೇಗೆ ಆಡುತ್ತೇವೆ ಅನ್ನುವ ಭಾವ ಇರುವ ಒಂದು ಕಿರು ಲೇಖನ. ಗುಡ್ಡ-ಗಾಡುಗಳನ್ನು ಸುತ್ತಿ ಬಸವಳಿದಿದ್ದ ಒಂದು ಗುಂಪು, ತುಂಬಾ ದಿನಗಳಾದ ಮೇಲೆ, ಒಂದೇ ಛಾವಣಿಯಡಿಯಲ್ಲಿ ಸೇರಿದ್ದವು. ಹೊರಗಡೆ ಬಿಸಿಲು ಚೆನ್ನಾಗಿ ಕಾದಿತ್ತು, ಒಳಗೆ ಹೊಟ್ಟೆ ಹಸಿವಿನಿಂದ ಕುದಿಯುತ್ತಿತ್ತು. ಏನು ಸಿಕ್ಕಿದರು ತಿಂದು ತೇಗಿಬಿಡುವ ಧಾವಂತದಲ್ಲಿದ್ದರು. ಸುಮಾರು ಎಂಟು ಮಂದಿಯಿದ್ದ ಗುಂಪಾದ್ದರಿಂದ ಹೋಟೆಲ್ನಲ್ಲಿ ಒಂದೇ ಟೇಬಲ್ ನಲ್ಲಿ ಜಾಗ ಸಿಗುವುದು ಕಷ್ಟವಾಗಿತ್ತು. ಅಲ್ಲಿದ್ದ ಮೇಲ್ವಿಚಾರಕರು "ಸರ್ ಸ್ವಲ್ಪ ಹೊತ್ತು … Read more

ಅಲೆಮಾರಿ ಏಕಲವ್ಯ ಮುನಿತಿಮ್ಮಯ್ಯ – ಡಾ. ರಾಜರಿಂದ ಪ್ರೇರಣೆ: ಪ್ರಮೋದ್ ಶೇಟ್ ಗುಂಡಬಾಳ

ಯೋಗಾ ಇದು ಭಾರತ ದೇಶದ ಪಾರಂಪರಿಕ ವಿದ್ಯೆ. ಇದರಿಂದ ಆಕರ್ಷಿತರಾದವರಿಗೇನು ಕಡಿಮೆ ಇಲ್ಲ. ಇದರ ಬಗ್ಗೆ ಒಬ್ಬೊಬ್ಬರು ಒಂದೊದು ರೀತಿಯಲ್ಲಿ ಆಕರ್ಷಿತರಾಗುತ್ತಾರೆ, ಅಂತವರಲ್ಲಿ ಶ್ರೀ ಮುನಿತಿಮ್ಮಯ್ಯ ಕೂಡ ಒಬ್ಬರು. ಇವರು ಒಬ್ಬ ಏಕಲವ್ಯನಿದ್ದಂತೆ. ಇವರಿಗೆ ಪ್ರೇರಣೆ ಕನ್ನಡದ ಮೇರು ನಟ ಡಾ. ರಾಜಕುಮಾರವರು. ೮೦ರ ದಶಕದಲ್ಲಿದ್ದಂತಹ ಪ್ರಜಾಮತ ಪತ್ರಿಕೆಯಲ್ಲಿ ಡಾ. ರಾಜ್ ರವರ ಯೋಗಾಸನದ ಕುರಿತು ವಿವಿದ ಭಂಗಿಯ ಚಿತ್ರಗಳ ಸಹಿತ ಲೇಖನ ಪ್ರಕಟವಾಗುತಿತ್ತು. ಅದನ್ನು ನೋಡಿ ಪ್ರೇರಿತರಾದವರು ಶ್ರೀ ಮುನಿತಿಮ್ಮಯ್ಯನವರು. ಬೆಂಗಳೂರಿನ ಹೆಬ್ಬಾಳದ ನಿವಾಸಿಯಾದ ಇವರು … Read more

ನಾನು ನಿನ್ನ ಮಿಸ್ ಮಾಡಿಕೊಂಡರೂ ಪರವಾಗಿಲ್ಲ: ರೂಪ ರಾವ್

ನನ್ನ ಪ್ರೀತಿಯ ವಿಕಿಗೆ,   ನೆನ್ನೆ ನೀನು ಐ ಲವ್ ಯು ಸುಮಾ ಅಂದಾಗ ಎಷ್ಟು ಖುಷಿಯಾಯ್ತು ಗೊತ್ತಾ ಮಾತಾಡೋಕೆ ಆಗಲಿಲ್ಲ. ಒಂದು ವರ್ಷದಿಂದ ಪ್ರೀತ್ಸೋ ಪ್ರೀತ್ಸೋ ಅಂತ ನಿನ್ನ ಹಿಂದೆ ಬಿದ್ದಿದ್ದ ನನ್ನನ್ನ ಫ್ರೆಂಡ್ ಆಗೇ ನೋಡ್ತಿದ್ದ ನೀನು ಇದ್ದಕಿದ್ದ ಹಾಗೆ ಬೇಸಿಗೆಕಾಲದ ಮಳೆ ಥರ ಪ್ರೀತಿಸ್ತೀನಿ ಅಂದ್ರೆ……. ಒಂದು ಕ್ಷಣ ಎದೆ ಝಲ್ಲೆಂತು… ಪ್ರೀತಿಸಿದ ಹುಡುಗನ ಬಾಯಲ್ಲಿ ಇಂಥ ಮಾತು ಕೇಳುವಾಗಿನ ಸ್ವರ್ಗ ಸುಖವೇ ಬೇರೆ ಕಣೋ..ಅಂತಹ ಗಾಳೀಲಿ ತೇಲ್ತಾ ತೇಲ್ತಾ ನಗ್ತಾ  ಇದ್ದ … Read more