ಶೇಕ್ಸಪಿಯರನ ‘ Measure for measure ’ – ಡಂಭ ಚಹರೆ ಮತ್ತು ಕಟು ವಾಸ್ತವಗಳು: ನಾಗರೇಖ ಗಾಂವಕರ

ಡಾರ್ಕ ಕಾಮೆಡಿ ಎಂದೇ ಪ್ರಸಿದ್ಧವಾದ ಶೇಕ್ಸಪಿಯರನ Measure for measure ನಾಟಕ ತಾತ್ವಿಕ ಮತ್ತು ನೈತಿಕ ಸಂಘರ್ಷಗಳನ್ನು ಆಳವಾಗಿ ವಿಶ್ಲೇಷಿಸುವ ಮೂಲಕ ಗಮನ ಸೆಳೆಯುತ್ತದೆ. ನಾಟಕದ ಮುಖ್ಯ ಪಾತ್ರ ಎಂಜೆಲ್ಲೋ ಹಾಗೂ ಮತ್ತೊಬ್ಬಳು ಇಸಾಬೆಲ್ಲಾ ಈ ಸಂಘರ್ಷದ ಅಡಕತ್ತರಿಯಲ್ಲಿ ಸಿಕ್ಕಿ ಬೀಳುತ್ತಾರೆ. ನಾಟಕದ ಕೇಂದ್ರ ವಸ್ತುವೇ ಅದಾಗಿದ್ದು ತನ್ನ ಶೀಲವನ್ನು ರಕ್ಷಿಸಿಕೊಂಡು ತನ್ನತನವನ್ನು ಉಳಿಸಿಕೊಳ್ಳುವ ಇಲ್ಲವೇ ಅಣ್ಣನ ಪ್ರಾಣ ಉಳಿಸಲು ನೈತಿಕತೆಯನ್ನು ಮಾರಿಕೊಳ್ಳುವ ಸಂದಿಗ್ಧತೆಯಲ್ಲಿ ಇಸಾಬೆಲ್ಲಾ ತೊಳಲಾಡುತ್ತಾಳೆ. ಮುಖವಾಡದ ಧರ್ಮನಿಷ್ಠೆಯನ್ನು, ಸೈದ್ಧಾಂತಿಕ ಪ್ರತಿಪಾದನೆಯನ್ನು ಮಾಡುವ ಎಂಜೆಲ್ಲೋ ವ್ಯಕ್ತಿಗತ … Read more

ಶೇಕ್ಸಪಿಯರ್‍ನ ಮ್ಯಾಕ್ ಬೆತ್ -ಮಹತ್ವಾಕಾಂಕ್ಷೆಯ ದುರಂತ: ನಾಗರೇಖ ಗಾಂವಕರ

ಸ್ಕಾಟ್‍ಲ್ಯಾಂಡಿನ ರಾಜ ಡಂಕನ್. ಆತನಿಗೆ ಇಬ್ಬರು ಪುತ್ರರು. (Malcolm and Donalbain)ಮಾಲ್‍ಕಮ್ ಮತ್ತು ಡೊನಾಲಬೇನ್. ವಯಸ್ಸಾದ ಡಂಕನ್ ರಾಜ್ಯಭಾರವನ್ನು ನಿಭಾಯಿಸಲಾಗದ ಸ್ಥಿತಿಯಲ್ಲಿ, ತನ್ನ ಉತ್ತರಾಧಿಕಾರಿಗಳನ್ನು ಪಟ್ಟಕ್ಕೆ ತರುವ ಸಮಯದಲ್ಲೇ ಆತನ ಥೇನ್ಸ್ ಆಫ್ ಕೌಡರ್ ಎಂಬ ಪ್ರಾಂತಾಧಿಕಾರಿ ನಾರ್ವೆಯ ರಾಜನ ಜೊತೆಗೂಡಿ ಸ್ಕಾಟ್‍ಲ್ಯಾಂಡಿನ ಮೇಲೆ ಆಕ್ರಮಣ ಮಾಡುತ್ತಾನೆ. [ಥೇನ್ಸ್ ಎಂದರೆ ಗವರ್ನರ ಎಂದರ್ಥ] ಆ ಸಮಯದಲ್ಲಿ ಡಂಕನ್ ತನ್ನ ಸಹೋದರ ಸಂಬಂಧಿಗಳಾದ ಮ್ಯಾಕಬೆತ್ ಮತ್ತು (Banquo) ಬ್ಯಾಂಕೊ ಸಹಾಯದಿಂದ ಆ ಸೈನ್ಯವನ್ನು ಸದೆಬಡಿದು ಕೌಡರನ್ನು ವಶಪಡಿಸಿಕೊಳ್ಳುತ್ತಾರೆ. ವಿಜಯಿಶಾಲಿಗಳಾದ … Read more

ಕ್ಷಮೆ ಮತ್ತು ರಾಜಿ ಸೂತ್ರ ಪ್ರತಿಪಾದಿಸುವ The tempest: ನಾಗರೇಖ ಗಾಂವಕರ

ಆಫ್ರಿಕಾದ ಟ್ಯುನಿಸ್‍ನಲ್ಲಿ ವಿವಾಹಕಾರ್ಯದಲ್ಲಿ ಭಾಗವಹಿಸಿ ಮರಳುತ್ತಿದ್ದ Neapolitansಗಳಾದ [ನೇಪಲ್ಸ್‍ನ ನಿವಾಸಿಗಳು] ಇಟಲಿಯ ನೇಪಲ್ಸ್‍ನ ರಾಜ ಅಲೆನ್ಸೋ ಆತನ ಪುತ್ರ ಫರ್ಡಿನಾಂಡ್, ಸಹೋದರ ಸೆಬಾಸ್ಟಿಯನ್ ಹಾಗೂ ಮಿಲನ್‍ನ ಡ್ಯೂಕ್ ಅಂಟೋನಿಯೋ ಮತ್ತು ಇತರ ಸಂಗಡಿಗರಿದ್ದ ಹಡಗು ಸಮುದ್ರ ಮಧ್ಯೆ ಬಿರುಗಾಳಿಯ ಹೊಡೆತಕ್ಕೆ ನಲುಗಿ ಹೋಗಿದೆ. ಇದಕ್ಕೆ ಕಾರಣ ಪ್ರೊಸ್ಪೆರೋ. ಆತನ ಉದ್ದೇಶವೆಂದರೆ ಅವರೆಲ್ಲಾ ತಾನು ವಾಸವಾಗಿದ್ದ ಆ ನಡುಗಡ್ಡೆಗೆ ಬರುವಂತಾಗಬೇಕು. ಅದಕ್ಕಾಗಿ ಅತ ತನ್ನ ಮಾಂತ್ರಿಕ ವಿದ್ಯೆಯನ್ನು ಬಳಸಿ ಚಂಡಮಾರುತವನ್ನೆಬ್ಬಿಸಿದ್ದಾನೆ. ಇದಕ್ಕೆ ಕಾರಣವಿದೆ. ಆತನಿಗೆ ಅವರಿಂದ ಅನ್ಯಾಯವಾಗಿದೆ. ಮಿಲನ್‍ನ … Read more

ಕನಸುಗಳಿಗೆ ಒಂದಿಷ್ಟು ಪುಷಪ್ ಕೊಡಿ: ಕೃಷ್ಣ ಶ್ರೀಕಾಂತ ದೇವಾಂಗಮಠ

ಮನುಷ್ಯರೆಲ್ಲರಿಗೂ ಕನಸು ಬೀಳುತ್ತವೆ. ಅದರಲ್ಲಿ ಕೆಲವು ಬರಿ ಕಾಣುವ ಕನಸುಗಳು ಮಾತ್ರ, ಆದರೆ ಕನಸುಗಳನ್ನು ಕಟ್ಟುವವರು ಬಹಳ ಕಡಿಮೆ ಹಾಗೆಯೇ ಕಟ್ಟಿದ ಕನಸುಗಳಿಗೆ ರೆಕ್ಕೆ ಕೊಡುವವರು ಇನ್ನೂ ಬಹಳ ಕಡಿಮೆ. ಹಾಗಾದರೆ ಮೊದಲು ನೀವು ಕನಸು ಕಾಣುವುದು ಮತ್ತು ಕಟ್ಟುವುದರ ಮಧ್ಯೆಯ ಸೂಕ್ಷ್ಮ ವ್ಯತ್ಯಾಸವನ್ನು  ತಿಳಿದುಕೊಳ್ಳಬೇಕು. ಇದನ್ನು ನಿಮಗೆ ಅಬ್ದುಲ್ ಕಲಾಂ ಅವರ ಮಾತುಗಳಿಂದ ಬೇಗ  ತಿಳಸಬಹುದು ಅನ್ನಿಸುತ್ತದೆ. ಅಬ್ದುಲ್ ಕಲಾಂ ಹೇಳುತ್ತಾರೆ " ಮಲಗಿದಾಗ ಬೀಳುವುದು ಕನಸಲ್ಲ , ನಿಮ್ಮನ್ನು ಯಾವುದು ಮಲಗಲು ಬಿಡುವುದಿಲ್ಲವೋ ಅದು … Read more

ನೆನಪಿನ ಪಯಣ – ಭಾಗ 6: ಪಾರ್ಥಸಾರಥಿ ಎನ್ 

ಇಲ್ಲಿಯವರೆಗೆ ಈಗ ನನಗೆ ಅನ್ನಿಸುತ್ತಿದೆ. ನಮ್ಮಿಂದ ದೊಡ್ಡದೊಂದು ತಪ್ಪು ಆದ ಹಾಗಿದೆ. ಇದನ್ನು ಸರಿಪಡಿಸಲು ಹೊರಗಿನವರ ಸಹಾಯ ಇಲ್ಲದೆ ಆಗಲ್ಲ. ನೆನಪಿಸಿಕೊಂಡೆ. ಪುಣೆಯಲ್ಲಿ ನನ್ನ ತಮ್ಮನ ಮಗ ಒಬ್ಬನಿದ್ದಾನೆ ಅಚ್ಯುತ. ಅವನು ಡಾಕ್ಟರ್ , ಮನೋವೈದ್ಯಕೀಯದಲ್ಲಿ ಪರಿಣಿತ. ರೂಮಿನಿಂದ ಹೊರಗೆ ಬಂದು, ಹಾಲಿನಲ್ಲಿ ಕುಳಿತು. ನನ್ನ ಮೊಬೈಲ್ ತೆಗೆದು ಅವನ ನಂಬರ್ ಹುಡುಕಿ ಕಾಲ್ ಮಾಡಿದೆ ಹಲೋ ,ನಾನಪ್ಪ ನಿಮ್ಮ ದೊಡ್ಡಪ್ಪ ಹೇಳಿ ದೊಡ್ಡಪ್ಪ, ಅಪರೂಪಕ್ಕೆ ಕರೆ ಮಾಡಿದ್ದೀರಿ. ದೊಡ್ಡಮ್ಮ ಹೇಗಿದ್ದಾರೆ ? ಎಂದೆಲ್ಲ ವಿಚಾರಿಸಿದ. ಎಲ್ಲ … Read more

ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ: ಉದಯ ಪುರಾಣಿಕ

ಪ್ರಾಚೀನ ಕರ್ನಾಟಕದ ಪ್ರಮುಖ ಅಗ್ರಹಾರಗಳಲ್ಲಿ ಕುಕನೂರು ಕೂಡಾ ಒಂದಾಗಿತ್ತು. ಶಾಸನಗಳ ಪ್ರಕಾರ “ಶ್ರೀಮನ್ಮಹಾಗ್ರಾರ ಕುಕ್ಕನೂರು” ಎಂದು ಕರೆಯುವ ಈ ಅಗ್ರಹಾರದ ಉತ್ತರದಲ್ಲಿ ಸುಮಾರು ಒಂದು ಮೈಲಿ ದೂರದಲ್ಲಿ ದ್ಯಾಂಪುರ (ದೇವಿಪುರ)ವನ್ನುವ ಪುಟ್ಟ ಗ್ರಾಮವಿದೆ. ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲೂಕಿನಲ್ಲಿರುವುದು ಈ ದ್ಯಾಂಪುರ. ಕನ್ನಡ ಭಾಷೆಯಲ್ಲಿ 12 ಪುರಾಣಗಳನ್ನು ರಚಿಸಿರುವ, ವೇದಾಂತಿ, ದಾರ್ಶನಿಕ ಮತ್ತು ಪ್ರಸಿದ್ಧ ಪ್ರವಚನಕಾರರಾದ ಚೆನ್ನಕವಿಗಳು ಮತ್ತು ಅವರ ಅಣ್ನನ ಮಗನಾದ ಕವಿರತ್ನ ಕಲ್ಲಿನಾಥ ಶಾಸ್ತ್ರಿ ಪುರಾಣಿಕರವರು ಕನ್ನಡ ನಾಡು-ನುಡಿಗಾಗಿ ಅವಿರತ ಮತ್ತು ಅನುಪಮ ಸೇವೆಯನ್ನು … Read more

ಮುಳುಗುತ್ತಿರುವ ಕುತುಬ್‍ದಿಯಾ!: ಅಖಿಲೇಶ್ ಚಿಪ್ಪಳಿ

ಜರ್ಮನಿಯ ಹಿಟ್ಲರ್ ಹೆಸರು ಯಾರಿಗೆ ಗೊತ್ತಿಲ್ಲ? ಖೈದಿಗಳನ್ನು ಕೊಲ್ಲಲು ವಿಷದ ಅನಿಲದ ಕೊಠಡಿಯನ್ನೇ ನಿರ್ಮಿಸಿದ್ದ ಕುಖ್ಯಾತಿ ಒಳಗಾಗಿದ್ದವ. ಹಿಂಸೆಯ ಪ್ರತಿರೂಪ! ಲಕ್ಷಾಂತರ ಯಹೂದಿಗಳು ಈ ಸರ್ವಾಧಿಕಾರಿಯ ಹಿಂಸೆಗೆ, ಕ್ರೂರತ್ವಕ್ಕೆ ಬಲಿಯಾದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇತಿಹಾಸವೆಂದರೆ ಒಳಿತು-ಕೆಡುಕುಗಳ ಸಮಗ್ರ ಮಾಹಿತಿ. ಇದರಲ್ಲಿ ಒಳಿತನ್ನೂ ನೋಡಬಹುದು, ಕೆಡುಕನ್ನು ಕಾಣಬಹುದು. ಪ್ರಸ್ತುತ ವಿದ್ಯಮಾನಗಳು ಮುಂದೊಂದು ದಿನ ಇತಿಹಾಸದ ಪುಟದಲ್ಲಿ ಸೇರುತ್ತವೆ. ಆಧುನಿಕ ಅಭಿವೃದ್ಧಿ, ಐಷಾರಾಮಿತನಗಳು ಇಡೀ ವಿಶ್ವವನ್ನೇ ಹಿಟ್ಲರ್‍ನ ವಿಷಕಾರಕ ಕೊಠಡಿಯನ್ನಾಗಿ ಮಾಡುತ್ತಿವೆ. ಇದರಲ್ಲಿ ಮೊದಲಿಗೆ ಬಲಿಯಾಗುವವರು ಮಾತ್ರ ಬಡದೇಶದ … Read more

ಪ್ರೇಮಖೈದಿ-೩: ಅಭಿಸಾರಿಕೆ

ಇಲ್ಲಿಯವರೆಗೆ ಹೀಗೆ ಯೋಚಿಸುತ್ತಿದ್ದ ವಿಶ್ವನಿಗೆ ಸಮಯವಾಗಿದ್ದೆ ತಿಳಿಯಲಿಲ್ಲ, ಈ ಮಧ್ಯೆ ನರ್ಸ್ ಬಂದು ಎರಡು ಬಾರಿ ಡ್ರಿಪ್ಸ್ ಬದಲಾಯಿಸಿ ಹೋಗಿದ್ದಳು. ವಿಶ್ವ ಬೆಳಗ್ಗೆ ಸ್ಪಂದನ ಕೊಟ್ಟ ಮೊಬೈಲ್ ತೆಗೆಯಲು ಪ್ರಯತ್ನಿಸಿದ, ತುಂಬಾ ಕಷ್ಟವಾಯಿತು ಕೈಗಳಿಗೆ ಆದರೂ ತೆಗೆದು ಸಮಯ ನೋಡಿದ, ಸಂಜೆ ಐದಾಗಿತ್ತು ಸ್ಪಂದನ ಬರಬಹುದೆಂದು ಕಾದು ಕುಳಿತ, ಅವಳ ಸುಳಿವಿರಲಿಲ್ಲ, ಆರಕ್ಕೆ ವಿಶ್ವನಿಗೆ ಕರೆ ಮಾಡಿದ ಸ್ಪಂದನ ತನಗೆ ತುಂಬಾ ಕೆಲಸವಿರುವುದಾಗಿಯೂ ತಾನಿಂದು ಬರುವುದಿಲ್ಲವೆಂದು ಹೇಳಿದಳು, "ನಿನ್ನ ಸ್ನೇಹಿತ ಪ್ರಕಾಶ್ ಫೋನ್ ಮಾಡಿದ್ದರು ಬೆಳಿಗ್ಗೆ ನಿನ್ನ … Read more

ಪ್ರೇಮಖೈದಿ-೨: ಅಭಿ ಸಾರಿಕೆ

ಸ್ಪಂದನ ಅವನೊಂದಿಗೆ ಮಾತಾನಾಡಲು ನಿಲ್ಲಿಸಿದ ಬಳಿಕ ವಿಶ್ವನಿಗೆ ಹುಚ್ಚು ಹಿಡಿದಂತೆನಿಸಿತು, ಹೇಗಾದರೂ ಅವಳ ಸ್ನೇಹ ಮತ್ತೆ ಬೇಕೆನಿಸಿತು. ಅವತ್ತಿಗೆ ಸ್ಪಂದನಳ ಪರೀಕ್ಷೆ ಮುಗಿದಿತ್ತು. ಇಷ್ಟು ದಿವಸಗಳ ಪರೀಕ್ಷೆಯ ಗುಂಗಲ್ಲಿ ವಿಶ್ವನನ್ನು ಸ್ವಲ್ಪಮಟ್ಟಿಗೆ ಮರೆಯಲು ಸಾಧ್ಯವಾಗಿದ್ದರೂ ಪೂರ್ತಿ ಮರೆತಿರಲಿಲ್ಲ, ಹೇಗಿರುವನೋ ಏನೋ ಎಂದುಕೊಳ್ಳುತ್ತ ಊರಿಗೆ ಹೊರಡುವ ತಯಾರಿಯಲ್ಲಿದ್ದಳು, ಇನ್ನೇನು ಬಸ್ ನಿಲ್ದಾಣ ತಲುಪುವ ವೇಳೆಗೆ ಧುತ್ತನೆ ಪ್ರತ್ಯಕ್ಷನಾದ ವಿಶ್ವ, ಕೈಯಲ್ಲಿ ಪುಟ್ಟ ಕವರ್ ಇತ್ತು, ಸ್ಪಂದನಳನ್ನು ನೋಡಿ ಮುಗುಳ್ನಕ್ಕು ಆದರೆ ಇವಳು ನಗಲಿಲ್ಲ, ಅವನೇ ಮಾತಿಗಿಳಿದ, "ದಯವಿಟ್ಟು ನನ್ನನ್ನು … Read more

ಪ್ರೇಮಖೈದಿ-೧: ಅಭಿ ಸಾರಿಕೆ

ವಿಶ್ವನಿಗೆ ಪ್ರಜ್ಞೆ ಬಂದಾಗ ತಾನೊಂದು ಆಸ್ಪತ್ರೆಯಲ್ಲಿರುವುದು ತಿಳಿಯಿತು,  ಎದ್ದು ಕುಳಿತುಕೊಳ್ಳಲು ಹೋದವನಿಗೆ, ತಲೆ ಭಾರವಾದಂತ ಅನುಭವ, ಬಲಗೈ, ಎರಡು ಕಾಲು, ತಲೆ ಪೂರ್ತಿ ಬ್ಯಾಂಡೇಜ್ ಮಾಡಿದ್ದರು, ತಕ್ಷಣಕ್ಕೆ ಅವನಿಗೆ ಯಾವುದು ಗುರುತಿಗೆ ಬರಲಿಲ್ಲ, ಎಷ್ಟು ದಿನವಾಗಿದೆಯೋ ನಾನಿಲ್ಲಿ ಬಂದು ಎಂದುಕೊಂಡ,  ನಿಧಾನವಾಗಿ ನಡೆದ ಘಟನೆ ನೆನೆಸಿಕೊಂಡ, ಅಂದು ಪಾರ್ಸಲ್ ಡೆಲಿವರಿ ಕೊಡಲು ಇಂದಿರಾನಗರದ ಕಡೆಗೆ ಹೊರಟಿದ್ದ, ಸಮಯ ಆಗಲೇ ಐದೂವರೆ ಇದೇ ಕೊನೆಯ ಡೆಲಿವರಿ, ಬೇಗ ಹಿಂದಿರುಗದಿದ್ದರೆ ಕೊರಿಯರ್ ಆಫೀಸು ಬಾಗಿಲು ಮುಚ್ಚುತ್ತಾರೆ, ಮತ್ತೆ ನಾಳೆ ಮ್ಯಾನೆಜರ್ನಿಂದ … Read more

ಹೊಸ ವಿದ್ಯೆಯ ಪ್ರವಚನ: ಫ್ಲಾಪಿಬಾಯ್

(ಹಿಂದಿನ ಸಂಚಿಕೆಯಿಂದ) ಬಾಬಾ.. ಬಾಬಾ.. ಓಡುತ್ತಾ ಬಂದ ಫ್ಲಾಪಿಬಾಯ್. ಲಗೋರಿಬಾಬಾ ಕೊನೆಗೂ ಬಹಳ ಕಷ್ಟಪಟ್ಟು ನೀವು ಹೇಳಿದ ವಿದ್ಯೆ ಬಗ್ಗೆ ಹಲವರಲ್ಲಿ ವಿಚಾರಿಸಿ ಅದು ಏನಂತ ತಿಳ್ಕೊಂಡ್ ಬಂದಿದ್ದೀನಿ. ನೀವು ಹೇಳಿದ ವಿದ್ಯೆ ಹೆಸರು ‘ರೇಕಿ’. ಅದು ಜಪಾನಿ ಭಾಷೆ ಪದ. ರೇ ಅಂದ್ರೆ ಬ್ರಹ್ಮಾಂಡ ಮತ್ತು ಕಿ ಅಂದ್ರೆ ಪ್ರಾಣಶಕ್ತಿ. ಸರಿ ತಾನೆ?” ಎಂದ ಖುಷಿಯಿಂದ. ಅದಕ್ಕೆ ಲಗೋರಿಬಾಬಾ, “ಶಭಾಶ್ ಫ್ಲಾಪಿ ನಾನು ಊಹಿಸಿದ್ದೆ ನೀನು ಹೇಳೇ ಹೇಳ್ತೀಯ ಅಂತಾ” ಎಂದು ನುಡಿದ ಮೆಚ್ಚುಗೆಯಿಂದ. “ಹೇಳ್ಕೊಡಿ … Read more

ಹೊಸ ವಿದ್ಯೆ ಕಲಿತು ಬಂದ ಲಗೋರಿಬಾಬಾ: ಫ್ಲಾಪಿಬಾಯ್

“ಬಾಬಾ ಎಲ್ಲೋಗಿದ್ದೆ ಇಷ್ಟು ದಿನ? ನೀನಿಲ್ಲದೆ ನಂಗಿಲ್ಲಿ ಒಬ್ನಿಗೆ ತಲೆ ಕೆಟ್ಟೋಗಿತ್ತು! ಜೀವನಾನೇ ಶೂನ್ಯ ಅನ್ನೋ ಸ್ಥಿತಿಗೆ ಬಂದು ಬಿಟ್ಟಿದ್ದೆ! ಒಂದೂ ಸ್ಟೇಟಸ್ ಅಪ್ಡೇಟ್ ಇಲ್ಲಾ, ಫೋಟೋ ಅಪ್ಲೋಡ್ ಇಲ್ಲ.. ಎಲ್ಲಾ ಬೋರಿಂಗ್ ಲೈಫ್ ಬಾಬಾ ನೀನಿಲ್ದೆ..” ಓವರ್ ಎಕ್ಸೈಟ್ ಆಗಿ ಒಂದೇ ಸಮನೇ ಬಡಬಡಿಸಹತ್ತಿದ ಫ್ಲಾಪಿಬಾಯ್. ಲಗೋರಿಬಾಬಾಗೆ ಗೊತ್ತಿದ್ತೆ, ಫ್ಲಾಪಿಬಾಯ್ ತನ್ನ ಎಷ್ಟು ಹಚ್ಕೊಂಡಿದಾನೆ ಅಂತ! ಪಾಪ ಅತನಿಗಾದ್ರೂ ನನ್ನ ಬಿಟ್ರೆ ಯಾರಿದ್ದಾರೆ? ಆಂದುಕೊಂಡ್ರೂ ಅದನ್ನ ತೋರಿಸಿಕೊಳ್ಳದೇ, “ಸಾರಿ ಫ್ಲಾಪಿ, ಒಂದು ರಹಸ್ಯ ವಿದ್ಯೆಯನ್ನು ತ್ವರಿತವಾಗಿ … Read more

ಕರ್ನಾಟಕ ಪರಿಶೆ (ಭಾಗ-1): ಎಸ್. ಜಿ. ಸೀತಾರಾಮ್, ಮೈಸೂರು

ಭೂತಮೂಲಗನ್ನಡಿಯಿಂದ          ಕನ್ನಡ ಭುವನೇಶ್ವರಿಯ ಛಾಯಾವತಾರಳಾದ “ಮಾತೃ ಭೂತೇಶ್ವರಿ” ಮೈಸೂರಿನಲ್ಲಿ ಮೊನ್ನೆ ಮಹಾಲಯ ಅಮಾವಾಸ್ಯೆಯ ಡಾಕಿಣಿ ಮುಹೂರ್ತದಲ್ಲಿ (ರಾತ್ರಿ 2ರ ಸಮಯ) ವಾಯುಸಂಚಾರದಲ್ಲಿದ್ದಾಗ, ಅಲ್ಲಿ ನೂತನವಾಗಿ ಕಟ್ಟ್ಟಲಾಗಿರುವ ‘ಮಿನಿ’ ವಿಧಾನಸೌಧದ ಮೇಲಿರುವ ಮೂರು ಘೋಷಣೆಗಳನ್ನು ಕಂಡು, ಭಯಭೀತೇಶ್ವರಿ ಆದಳೆಂದೂ, ಆಕ್ಷಣವೇ ‘ಕನ್ನಡ’, ‘ಕರ್ನಾಟಕ’, ‘ರಾಜ್ಯೋತ್ಸವ’ ಇತ್ಯಾದಿ ಘನವಿಚಾರಗಳ ಹುಚ್ಚುಚ್ಚು ಆಲೋಚನೆಗಳು ಆಕೆಯ ಮನಸ್ಸಿನಲ್ಲಿ ಉಕ್ಕುಕ್ಕಿಬಂದು, ಕಡೆಗೆ ಅವಳು ಅಲ್ಲೇ ಇವೆಲ್ಲವನ್ನೂ ‘ಠೀವಿ-007’ ಮುಂದೆ ಹೃದಯಾಘಾತಪೂರ್ವಕವಾಗಿ ಕಾರಿಕೊಂಡಳೆಂದೂ ವರದಿಯಾಗಿದೆ. ಆ ವಿಪರೀತ ಆಲೋಚನೆಗಳ ಆಯ್ದ ಭಾಗಗಳನ್ನು … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 8

ಕಾಲೇಜಿನ ಉಪನ್ಯಾಸ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇವರ ಅಪರಿಮಿತ ಬುದ್ಧಿವಂತಿಕೆ, ಜ್ಞಾನಕ್ಕೆ ಮೆಚ್ಚಿದ ನಗರದ ನಾಗರಿಕರು ಬೆರೆ ಬೇರೆ ಕಡೆ ಉಪನ್ಯಾಸಕ್ಕೆ ಕರೆಯುತ್ತಿದ್ದರು. ಹೊಸ ಕೆಲಸ ಹೊಸ ಉತ್ಸಾಹ ಇಬ್ರೂ ಕರೆದಲ್ಲೆಲ್ಲಾ ಹೋಗಿ ಭಾಷಣ ಬಿಗಿದು ಸಿಳ್ಳೆ ಗಿಟ್ಟಿಸಿ ಬರುತ್ತಿದ್ದರು. ಹೀಗೆ ಒಮ್ಮೆ ಅವರಿಬ್ಬರನ್ನ ಉಪನ್ಯಾಸ ಕೊಡಲು ನಗರದ ಒಂದು ಕಾಲೇಜಿನಿಂದ ಕರೆ ಬಂತು. ಆಯ್ತು ಅಂತ ಇಬ್ರೂ ಹೊರಟ್ರು.  ಫ್ಲಾಪಿಬಾಯ್ ಇರಲಿ, ಲಗೋರಿಬಾಬಾನೆ ಆಗಿರಲಿ ಜನರನ್ನ ನೋಡಿ ಮಾತಾಡೋವಂತವ್ರು. ಮೊದಲೇ … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 7

ಪತ್ರಕರ್ತೆಯೊಂದಿಗೆ ಲಗೋರಿಬಾಬಾ ಫ್ಲಾಪಿಬಾಯ್ ಮತ್ತು ಲಗೋರಿಬಾಬಾನೊಂದಿಗೆ ಸಂದರ್ಶನ ಮಾಡಲು ಬಂದಿದ್ದ ಪತ್ರಕರ್ತೆ ವರದಾ ಫ್ಲಾಪಿಬಾಯ್‍ನೊಂದಿಗೆ ಮಾತುಕತೆ ನಡೆಸಿ ನಂತರ ಲಗೋರಿಬಾಬಾನೊಮದಿಗೆ ಚಿಟ್ ಚಾಟ್ ಮಾಡಲು ಭಲೇ ಉತ್ಸುಕಳಾಗಿದ್ದಳು. ತರುಣ ಯುವಕ ಲಗೋರಿಬಾಬಾ ನೊಡಲು ಹ್ಯಾಂಡ್‍ಸಮ್ ಆಗಿದ್ರೂ ಅಘೋರಿಯಾಗಿ ವಿಕಾರಿತರ ಇದ್ದ. ಮೊದಲ ನೋಟಕ್ಕೇ ಭಯಪಡಿಸುವಂತಿದ್ದ ಆತನ ಚಹರೆಯ ಜೊತೆಗೇ.., ಮೊದಮೊದಲಿಗೆ ಆತನ ಮಾತೂ ಹೆದರಿಕೆ ಹುಟ್ಟಿಸುವಂತಿತ್ತು. ಆದರೆ ಅಪರಿಮಿತ ಜ್ಞಾನಿಯಾದ ಲಗೋರಿಬಾಬಾನನ್ನು ಮಾತನಾಡಿಸಲೇಬೇಕೆಂದು ವರದಾ ಹಠ ಹಿಡಿದು ಅವನ ಬಳಿ ಬಂದಳು.. ಮುಂದೆ..?? ಇನ್ನೇನು..?? ಓದಿ ಗೊತ್ತಾಗತ್ತೆ..! … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 6

ಪತ್ರಕರ್ತೆಯೊಂದಿಗೆ ಫ್ಲಾಪಿಬಾಯ್ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಒಂದು ಹಳ್ಳಿಯಲ್ಲಿ ಜನೋಪಕಾರಿಯಾಗಿ ಅತ್ಯುತ್ತಮ ಸಲಹೆ ನೀಡುತ್ತಾ, ಬಡ ಜನರ ಸೇವೆ ಮಾಡುತ್ತಿದ್ದರೂ- ತಮ್ಮಷ್ಟಕ್ಕೆ ತಾವು ಆಶ್ರಮ ಕಟ್ಟಿಕೊಂಡು ಒಂದೆಡೆ ಇದ್ದರು. ಇಂತಹ ಅಪರೂಪದ ಜನ ನಮ್ಮ ಸಮಾಜದಲ್ಲಿ ಪ್ರಚಾರಕ್ಕೆ ಬರುವುದು ಅಪರೂಪ. ಅದೇನು ವಿಧಿ ಲಿಖಿತವೋ, ಇವರ ಒಳ್ಳೆಯತನ ಗುರುತಿಸುವ ಶಕ್ತಿ ಸತ್ತ ಪ್ರಜೆಗಳಿಗೆ ಜಾಗೃತೆಯಾಗಿ ಸತ್ಪ್ರಜೆಯಾದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಗೆ ವ್ಯಾಪಕ ಪ್ರಚಾರವಂತೂ ಜನರ ಬಾಯಿಮಾತಿನಿಂದಲೇ ಹೆಚ್ಚೆಚ್ಚು ದೊರಕಿತ್ತು. ಆಗ ತಾನೆ ಕೆಲಸಕ್ಕೆ ಸೇರಿದ್ದ ಟಿವಿ ರಿಪೋರ್ಟರ್ … Read more

ಹೀಗೊಂದು ಸ್ವ-ವಿಮರ್ಶೆ: ಅಭಿ ಸಾರಿಕೆ

ಬದುಕು ಸುಂದರ ಎನ್ನುವುದು ಎಷ್ಟು ನಿಜವೋ ಸಂಕೀರ್ಣ ಅನ್ನೋದು ಅಷ್ಟೆ ನಿಜ. ಕಣ್ಮುಂದಿರುವ ಭೂಮಿಯ ಬಿಟ್ಟು ಕಾಣದ ಸ್ವರ್ಗಕ್ಕೆ ಹಂಬಲಿಸೋ ಕತ್ತಲು. ನಮ್ಮನ್ನು ಪ್ರೀತಿಸುವ ಹೃದಯವ ಬಿಟ್ಟು ನಮ್ಮತ್ತ ತಿರುಗಿಯೂ ನೋಡದವರನ್ನು ತಿರು ತಿರುಗಿ ನೋಡುವ ಚಪಲ. ಬೇವು ಬೆಲ್ಲ ಕಲೆಸಿ ಬೆಲ್ಲವನ್ನು ಮಾತ್ರ ತಿನ್ನುವಂತ ರೀತಿ ಈ ಬದುಕು, ಯಾರಿಗೂ ಕಷ್ಟ ಬೇಕಿಲ್ಲ,  ಸುಖವನ್ನು ಬಯಸದವರು ಯಾರು ಇಲ್ಲ. ಬಲಪಕ್ಕದಲ್ಲಿರುವನಿಗೆ ಎರಡಂತಸ್ತಿನ ಮನೆ, ಎಡಪಕ್ಕದಲ್ಲಿರುವ ನಿಲ್ಲಲು ಸೂರಿಲ್ಲದ ಭಿಕಾರಿ, ಒಂದಸ್ತಿನ ಮನೆಯಲ್ಲಿರುವ ನಾವು ಎರಡಂತಸ್ತಿರುವನನ್ನು ನೋಡಿ … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-5

ಕುರುಸಾಡಿ ದ್ವೀಪದಲ್ಲಿ.. ಕಳೆದ ವಾರ ಶ್ರೀಲಂಕಾದಲ್ಲಿನ ಬೆಳಕಿನ ಮರಗಳ ರಹಸ್ಯ ಬೇಧಿಸಿದ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಮರಳಿ ತಮ್ಮ ಊರಿಗೆ ಬರುವಾಗ ಎರಡು ದಿನಗಳ ಮಟ್ಟಿಗೆ ರಾಮೇಶ್ವರದಲ್ಲಿಯೇ ಉಳಿಯುವ ಅನಿವಾರ್ಯತೆ ಎದುರಾಯ್ತು. ಗುಂಡ್ರುಗೋವಿ ಲಗೋರಿಬಾಬಾ ಮತ್ತು ತುಂಡೈದ ಫ್ಲಾಪಿಗೆ ಅವರು ಎಲ್ಲಿದ್ರೂ ಒಂದೇ! “ಆಯ್ತು” ಅಂತ ಇಬ್ರೂ ಅಲ್ಲಿಯೇ ಹೊಟೇಲೊಂದ್ರಲ್ಲಿ ರೂಮ್ ಮಾಡಿ ಉಳಿದುಕೊಂಡ್ರು. ಟಿವಿ, ಪೇಪರ್, ಪುಸ್ತಕ ಇತ್ಯಾದಿಗಳೆಲ್ಲಾ ಇಬ್ಬರಿಗೂ ಇರೋ ಆಸಕ್ತಿ ಅಷ್ಟಕ್ಕಷ್ಟೆ! ಲಗೋರಿಬಾಬಾಗೆ ಹೆಚ್ಚಿನ ಸಮಯ ಧ್ಯಾನ, ನಿದ್ದೆ, ಭಂಗಿ ಸೇದೋದ್ರಲ್ಲೇ ಕಳೆದೊದ್ರೆ, … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-4

ಬೆಳಕಿನ ಮರಗಳ ರಹಸ್ಯ     “ಲಗೋರಿಬಾಬಾ ಫ್ರೀ ಇದೀರಾ ಈ ವಾರ? ಸಾಧ್ಯವಾದ್ರೆ ನನ್ನ ಜೊತೆ ಶ್ರೀಲಂಕಾಗೆ ಬನ್ನಿ. ಒಂದು ರಹಸ್ಯದ ಬಗ್ಗೆ ಅಧ್ಯಯನ ಮಾಡಲು ಡಾ.ಕೋವೂರ್ ಜೊತೆ ಹೋಗೋಣ.” ಫ್ಲಾಪಿಬಾಯ್ ಕೇಳಿದ ಲಗೋರಿಬಾಬಾನಿಗೆ.     “ಏನು ರಹಸ್ಯ? ಡಾ. ಕೋವೂರ್ ಅಂದ್ರೆ ಯಾರು? ಸಿಲೋನ್‍ಗೆ ಅವಶ್ಯವಾಗಿ ಹೋಗೋಣ. ನಾನು ಎಲ್ಲಿಗಾದರೂ ಸೈ” ಲಗೋರಿಬಾಬಾ ಪ್ರತ್ಯುತ್ತರಿಸಿದ.     “ಶ್ರೀಲಂಕಾದ ಉತ್ತರ ಭಾಗದಲ್ಲಿ ಮನ್‍ಕುಳಮ್ ಅಂತ ಊರಿದೆ. ಆ ಊರಿನ ಕಾಡಿನ ಬೇಟೆಗೆ ಬೇರೆ ಬೇರೆ ಕಡೆಯಿಂದ … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-3: ಫ್ಲಾಪಿಬಾಯ್

ಗಣೇಶ ಬಂದ ಫ್ಲಾಪಿಬಾಯ್ ಮಾತಿಂದ ಕರೆಂಟ್ ಕಂಡುಹಿಡಿಯಬೇಕೆಂದು ಶತಾಯಗತಾಯ ಪ್ರಯೋಗನಿರತನಾಗಿದ್ದ. ಲಗೋರಿಬಾಬಾ ಎಲ್ಲಿಂದಲೋ ಒಂದಷ್ಟು ಬೂದಿ ತಂದ್ಕೊಂಡು ಮುಲ್ತಾನಿ ಮಿಟ್ಟಿ ತರಾ ಮೈಗೆಲ್ಲಾ ಹಚ್ಕೊಂಡು ಇಡೀ ಬಾಡಿನೇ ಫೇಷಿಯಲ್ ಮಾಡ್ಕೊಳ್ತಾ ಇದ್ದ. ಅದೇ ಟೈಮಿಗೆ ಬಂದ್ರು ನಾಲ್ಕಾರು ಜನರು- ಕೈಲಿ ರಶೀದಿ ಪುಸ್ತಕ ಹಿಡ್ಕಂಡು! “ಅಣಾ ಏರಿಯಾದಲ್ಲಿ ಗಣೇಶನ್ನ ಕೂರಿಸ್ತಾ ಇದೀವಿ ಚಂದಾ ಕೊಡಿ, ಏಯ್! ಫ್ಲಾಪಿ ಅಣ್ಣನ ಹೆಸ್ರಲ್ಲಿ ಬರ್ಕೊಳೋ ಎರಡು ಸಾವಿರ” ತಮ್ಮವರತ್ರಾನೆ ಹೇಳಿ ಬರ್ಕೊಳೊಕೆ ಅಣಿಯಾದ ಗಣೇಶ ಕೂರಿಸೋ ಕಬಳೇಶ. “ತಡ್ರಪಾ, ನನ್ನತ್ರ … Read more

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-2: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ.. ಅಡಿಗೆ ಮನೆಯಲ್ಲಿ ಫ್ಲಾಪಿಬಾಯ್ ಅಡಿಗೆ ಮನೆಯಲ್ಲಿ ಹೊಸರುಚಿ ಕಂಡು ಹಿಡಿಯಲು ಪ್ರಯೋಗ ನಿರತನಾಗಿದ್ದ. ಲಗೋರಿಬಾಬಾ ಚುಟ್ಟಾ ಹೊಡಿತಾ ಇವ ಮಾಡೋದನ್ನ ನೋಡ್ತಾ ಇದ್ದ. ಆಗ ಫ್ಲಾಪಿಬಾಯ್ “ಬಾಬಾ ಲೈಫಲ್ಲಿ ಹೆಂಗಿರ್ಬೇಕು ಅಂತಾನೇ ಗೊತ್ತಾಗ್ತಿಲ್ಲ ನಂಗೆ! ಹಂಗಿದ್ರೆ ಹಿಂಗಿರು ಅಂತಾರೆ, ಹಿಂಗಿದ್ರೆ ಹಂಗಿರು ಅಂತಾರೆ! ಏನ್ ಮಾಡೋದಂತಾನೇ ತಿಳಿತಿಲ್ಲ ಥತ್!!” ಅಂದ ನಿರಾಸಕ್ತಿಯಿಂದ. “ಸಿಂಪಲ್ಲು ಕಣೋ, ಅದೇನು? ಅಂದ ಲಗೋರಿಬಾಬಾ ಕೈತೋರಿಸ್ತಾ. “ಕ್ಯಾರೆಟ್ಟು” ಅಂದ ಫ್ಲಾಪಿಬಾಯ್.  “ಮತ್ತೆ ಅದು?”- “ಅಷ್ಟೂ ಗೊತ್ತಿಲ್ವಾ ಮೊಟ್ಟೆ, ಎಗ್ … Read more

ಫ್ಲಾಪಿ ಬಾಯ್ ಮತ್ತು ಲಗೋರಿಬಾಬಾ-1: ಫ್ಲಾಪಿ ಬಾಯ್

ಅರ್ಥವಾಗುವವರಿಗೆ ಮಾತ್ರ! ಎಲ್ಲರಿಗಲ್ಲ.. ಬ್ಯಾಂಕ್ ಅಕೌಂಟು ಫ್ಲಾಪಿ ಬಾಯ್ ಕೆರೆಬದಿ ಕುಂತು ಆಕಾಶದಲ್ಲಿ ಹಾರೋ ಕಾಗೆ ನೋಡ್ತಾ ಇದ್ದ. ಅದೇ ಟೇಮಿಗೆ ನಮ್ ಲಗೋರಿಬಾಬಾ ಕೆರೆ ಕಡೆ ಕೆಲ್ಸ ಮುಗಿಸ್ಕಂಡ್ ಬಂದ. “ಏನ್ಲಾ ಮಾಡ್ತಿದ್ದಿ ಪ್ಲಾಪಿ? ತಂತ್ರಜ್ಞಾನಿ ಬ್ರಹ್ಮಚಾರಿ ಅಂತ ಊರಲ್ಲೆಲ್ಲಾ ಹೇಳ್ಕಂಡ್ ತಿರುಗ್ತಿ ಇತ್ತೀಚೆಗೆ ಏನೂ ಕಂಡು ಹಿಡಿದಿಲ್ವಾ?” ಅಂತ ಕೇಳ್ದ. ಪಾಪ ನಮ್ ಫ್ಲಾಪಿ ಬಾಯ್ ಗೆ ಲಗೋರಿಬಾಬಾನ ನೋಡ್ತಾ ಇದ್ದಂಗೆ ದುಃಖ ಕಿತ್ಗಂಡ್ ಕಿತ್ಗಂಡ್ ಬಂತು. ಅಳುಅಳುತ್ತಾ ಅಂದ, “ಲಗೋರಿಬಾಬಾ, ಲೈಫಲ್ಲಿ ತುಂಬಾ … Read more

ಅಕ್ಕಿ ಭಾಗ್ಯ….: ರಾಘವೇಂದ್ರ ತೆಕ್ಕಾರ್

ನನಗೆ ದೋಸೆ, ಇಡ್ಲಿ, ಕಡುಬು ಈ ತರದ ಅಕ್ಕಿತಿಂಡಿಗಳೆಂದರೆ ಪಂಚ ಪ್ರಾಣ. ಬೆಳಿಗ್ಗಿನ ಉಪಹಾರಕ್ಕೆ ಈ ಚೌ ಚೌ ಬಾತ್, ಬೇಳೆ ಬಾತ್,ಪೂರಿ, ಪಲಾವು, ರೈಸ್ ಬಾತ್ ಇವುಗಳೆಲ್ಲ ಅಷ್ಟಕಷ್ಟೆ. ಏನಿದ್ದರೂ ಅಕ್ಕಿ ರುಬ್ಬಿ ಮಾಡಿದ ತಿಂಡಿಗಳತ್ತಲೆ ನನ್ನೊಲುಮೆ. ಅಪರೂಪಕ್ಕೆ ಅನ್ನವನ್ನು ಲಿಂಬೂ ನೀರು ಹಿಂಡಿದ ಈರುಳ್ಳಿ ವಗ್ಗರಣೆಗೆ ಬೆರೆಸಿದ ಚಿತ್ರಾನ್ನ ತರದೆಂತದ್ದನ್ನೊ ತಿನ್ನುವದು ಇದೆ.ಈ ನನ್ನ ಚಪಲ ನನ್ನ ಮನೆಯಾಕೆಗೆ ನುಂಗಲಾರದ ತುತ್ತು. ಆ ಮಿಕ್ಸಿಯಲ್ಲಿ ಗಿರ ಗಿರ ಸದ್ದು ಮಾಡಿಸುತ್ತಾ ಅಕ್ಕಿ ರುಬ್ಬ ಬೇಕಾದುದು … Read more

ಬದಲಾವಣೆ-ಬಟ್ಟಂಗಿಗಳು-ಸ್ವಂತಿಕೆ: ರಾಘವೇಂದ್ರ ತೆಕ್ಕಾರ್

ನಮ್ಮೊಂದಿಗೆ ಸದಾ ಇದ್ದು ತುಸು ಹೆಚ್ಚಾಗೆ ನಮ್ಮನ್ನು ಹೊಗಳುತ್ತಿರುವವರನ್ನು ತುಸು ದೂರವೆ ಇಡೋಣ. ಸುಮ್ಮನೆ ಸುಮ್ಮನೆ ಹಲುಬುವವರನ್ನು ನಿರ್ಲಕ್ಷಿಸೋಣ. ಅನುಕೂಲಕ್ಕೆ ತಕ್ಕಂತೆ ವ್ಯಕ್ತಿತ್ವವನ್ನ ಬದಲಾಯಿಸಿಕೊಳ್ಳುವ ಒಂದು ವರ್ಗದ ಜನರಿವರು. ಯಾವತ್ತು ಇಂಥವರನ್ನು ನಾವು ನಿರ್ಲಕ್ಷಿಸಿಕೊಂಡು ಮುಂದುವರಿಯುತ್ತೇವೆಯೊ ಅದು ನಮ್ಮಲ್ಲಿನ ಕ್ರೀಯಾಶೀಲತೆಯನ್ನು ಸಾಣೆ ಹಿಡಿಯುತ್ತಲೆ ನಾವು ಮುನ್ನಡೆಯುತಿದ್ದೇವೆ ಎಂಬುದರ ಅರ್ಥ. ಮನುಷ್ಯ ಹೊಸ ಸವಾಲುಗಳನ್ನು ಎದುರಿಸುತ್ತ ಕೆಲವೊಮ್ಮೆ ಗೊತ್ತಿದ್ದು ಇನ್ನೂ ಕೆಲವೊಮ್ಮೆ ತನಗೆ ಗೊತ್ತಿಲ್ಲದಂತೆ ಕೂಡ ತನ್ನೊಳಗೆ ಅಪ್ ಡೇಟ್ ಆಗುತ್ತಾನೆ ಇರುತ್ತಾನೆ.ಹಾಗೆ ನೋಡಿದಲ್ಲಿ ಹೊಸ ಬದಲಾವಣೆಗೆ ತೆರದುಕೊಳ್ಳದವರ್ಯಾರು?ಎಲ್ಲೋ … Read more

ವಾಸ್ತವಕ್ಕೆ ಮುಖಮಾಡದ ಸಾವುಗಳು: ರಾಘವೇಂದ್ರ ತೆಕ್ಕಾರ್

ಕಳೆದೆರಡು ವಾರದ ಎರಡು ದಿನಗಳಲ್ಲಿ ಎರಡು ಡೆತ್ ನೋಟ್ಗಳನ್ನು ನೋಡಿದೆ of course ಸಾವನ್ನು ಕೂಡ. ವಯಸ್ಸು ಆಜುಬಾಜು 24 ರಿಂದ 28ರ ಮಂದಿ. ಮಹಿಳೆ ಒಳಗೊಂಡಂತೆ ಮತ್ತೋರ್ವ. ಇಬ್ಬರು ವಿವಾಹಿತರು. 2ರಿಂದ 3 ವರುಷದ ದಾಂಪತ್ಯ ಜೀವನ ಇವರುಗಳದ್ದು. ನಾವೆಲ್ಲರೂ ಪ್ರೇಮಿಗಳು ಸಂಗಾತಿಗಳಾಗಲು ಸಾದ್ಯವಿಲ್ಲ ಮನೆಯವರು ಒಪ್ಪಲ್ಲ ಜಾತಿ ಸಮಸ್ಯೆ ಇತ್ಯಾದಿ ಇತ್ಯಾದಿ ಗಳಿಂದಾಗಿ ಆತ್ಮಹತ್ಯೆಗೆ ಶರಣಾಗುವದನ್ನು ಕೇಳಿಯೆ ಇರುತ್ತೇವೆ. ಆದರೆ ಇವಕ್ಕೆ ಹೊರತಾದದ್ದು ಮೇಲೆ ತಿಳಿಸಿದ ಎರಡು ಸಾವುಗಳು.ಕಾರಣ ಕೌಟುಂಬಿಕ ಕಲಹ, ಜೀವನದಲ್ಲಿ ಜಿಗುಪ್ಸೆ. … Read more

ವಿದ್ಯೆ ಮತ್ತು ಸಹೃದಯಿಗರು: ರಾಘವೇಂದ್ರ ತೆಕ್ಕಾರ್

“ಇದು ಸುಮಾರು 2002 ನೆ ಇಸವಿಯ ಘಟನೆಗಳು……” ಬಹುರಾಷ್ಟ್ರೀಯ ಕಂಪೆನಿಯೊಂದು ತನ್ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂದರ್ಶನವೊಂದನ್ನು ನಗರದ ಪ್ರತಿಷ್ಟಿತ ಹೋಟೇಲ್ ಒಂದರಲ್ಲಿ ಕರೆದಿತ್ತು. ಸೂಟು ಬೂಟಲ್ಲಿ ಖಡಕ್ ಇಸ್ತರೀ ಬಟ್ಟೆಗಳ ಮೇಳೈಕೆಗಳ ಜೊತೆ ಕೈಯಲ್ಲಿ ಒಂದೀಟುದ್ದದ ಫೈಲ್ ಹಿಡಿದು ಇದ್ದ ಬದ್ದ ಕಾಗದ ಪತ್ರವನ್ನು ತುಂಬಿ ಸರತಿಯಲ್ಲಿ ಸಂದರ್ಶನವನ್ನು ಎದುರುಗೊಳ್ಳಲು ತಲೆ ಮೇಲೆ ಆಕಾಶ ಉದುರಿಸಿಕೊಂಡಂತೆ ನಿಂತವರ ಮಧ್ಯದಲ್ಲಿ…….. ಕಾಲಿಗೆ ಪ್ಯಾರಗಾನ್ ಹವಾಯಿ ಚಪ್ಪಲ್ ಸಿಗಿಸಿಕೊಂಡು ದೊಗಲೆ ಪ್ಯಾಂಟ್ ಜೋಬಲ್ಲಿ ಒಂದು ಪೆನ್ … Read more

ಕರಿಯನ ಕತೆ: ಅಖಿಲೇಶ್ ಚಿಪ್ಪಳಿ

ಊರಿನಲ್ಲಿ ಹೊಸ ಮನೆ ಕಟ್ಟಿಕೊಂಡು, ಬೇಕಾದಷ್ಟು ತರಕಾರಿ ಬೆಳೆದುಕೊಂಡು, ಸೊಂಪಾಗಿ ತಿನ್ನಬಹುದು ಎಂದು ಕನಸು ಕಾಣುತ್ತಿದ್ದವನಿಗೆ, ಎರವಾಗಿದ್ದು ಮಂಗಗಳು, ಏನೇ ಬೆಳೆದರೂ ಅದ್ಯಾವುದೋ ಹೊತ್ತಿನಲ್ಲಿ ಬಂದು ತಿಂದು, ಗಿಡಗಳನ್ನು ಹಾಳು ಮಾಡಿ, ಇಡೀ ಶ್ರಮವನ್ನು ವ್ಯರ್ಥಮಾಡಿ ಹೋಗುತ್ತಿದ್ದವು, ಮಂಗಗಳ ಅಸಹಾಯಕತೆ ಗೊತ್ತಿದ್ದರೂ, ಅದೇಕೋ ಅವುಗಳ ಮೇಲೆ ಸ್ವಲ್ಪ ಕೋಪವೂ ಬರುತ್ತಿತ್ತು. ತರಕಾರಿಗಳನ್ನು ತಿನ್ನುವುದಲ್ಲದೇ, ಗಿಡಗಳನ್ನು ಹಾಳು ಮಾಡುವ ಪರಿಗೆ ಕೆಲವೊಂದು ಬಾರಿ ಖಿನ್ನತೆಯೂ ಆವರಿಸುತ್ತಿತ್ತೇನೋ ಎಂಬ ಅನುಮಾನವೂ ಕಾಡುತ್ತಿತ್ತು. ಇದಕ್ಕೊಂದು ಉಪಾಯವೆಂದರೆ, ನಾಯಿಯೊಂದನ್ನು ತಂದು ಸಾಕುವುದು, ನಾಯಿ … Read more

ತಿರಸ್ಕಾರ (ಭಾಗ 6): ಜೆ.ವಿ.ಕಾರ್ಲೊ, ಹಾಸನ

ಇಲ್ಲಿಯವರೆಗೆ ಮರುದಿನ ಹ್ಯಾನ್ಸ್ ಬಂದ. ಆನ್ನೆಟ್ ಅವನನ್ನು ಗಮನಿಸಿದಳಾದರೂ ಅವಳ ಕಣ್ಣುಗಳು ಸುಣ್ಣ ಬಳಿದ ಗೋಡೆಗಳಂತೆ ನಿರ್ಬಾವುಕವಾಗಿದ್ದವು. ಇಬ್ಬರೂ ಏನೂ ಮಾತನಾಡಲಿಲ್ಲ. ಹ್ಯಾನ್ಸ್ ಮುಗುಳ್ನಕ್ಕ. ’ಎದ್ದು ಹೋಗದಿದ್ದಕ್ಕಾಗಿ ಧನ್ಯವಾದಗಳು!’ ಅವನು ಹೇಳಿದ. ’ನನ್ನ ತಂದೆ-ತಾಯಿಯರಿಬ್ಬರೂ ನಿನ್ನನ್ನು ಆಹ್ವಾನಿಸಿದ್ದಾರೆ. ಅವರಿಬ್ಬರೂ ಈಗ ಮನೆಯಲ್ಲಿಲ್ಲ. ಒಳ್ಳೇದೆ ಆಯ್ತು. ನಿನ್ನೊಡನೆ ಮುಕ್ತವಾಗಿ ಮಾತನಾಡಲು ಇದೇ ಒಳ್ಳೆಯ ಸಮಯ. ಬಾ. ಕೂತುಕೊ.’ ಅವನು ಕೋಟ್ ಮತ್ತು ಹೆಲ್ಮೆಟನ್ನು ತೆಗೆದಿಟ್ಟು ಅವಳಿಗೆ ಎದುರಾಗಿ ಕುರ್ಚಿಯನ್ನು ಎಳೆದು ಕುಳಿತುಕೊಂಡ. ’ನನ್ನ ಮನೆಯವರು ನಾನು ನಿನ್ನನ್ನೇ ಮದುವೆಯಾಗಬೇಕೆಂದು … Read more

ತಿರಸ್ಕಾರ (ಭಾಗ 4): ಜೆ.ವಿ.ಕಾರ್ಲೊ, ಹಾಸನ

’ರಾಕ್ಷಸರು. ಪಾಪ ಹುಡುಗಿ!’ ಅವಳು ಅನುಕಂಪ ವ್ಯಕ್ತಪಡಿಸಿದಳು. ಒಬ್ಬ ಮಿಡ್‌ವೈಫಳ ವಿಳಾಸವನ್ನು ಕೊಟ್ಟು ’ನಾನು ಕಳುಹಿಸಿದೆ ಎಂದು ಹೇಳಿ’ ಎಂದಳು. ಮಿಡ್‌ವೈಫ್ ಯಾವುದೋ ಔಷದವನ್ನು ಕೊಟ್ಟಳು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಆನ್ನೆಟ್ ಮತ್ತೂ ಕಾಹಿಲೆ ಬಿದ್ದಳು. ಗರ್ಭ ಬೆಳೆಯುತ್ತಲೇ ಹೋಯ್ತು. ಮೇಡಮ್ ಪೆರಿಯೆರ್‌ಳ ವೃತ್ತಾಂತವನ್ನು ಕೇಳಿದ ಹ್ಯಾನ್ಸ್ ಅರೆಗಳಿಗೆ ಸ್ತಬ್ಧನಾದ. ನಂತರ, ’ನಾಳೆ ಭಾನುವಾರ. ನಾವು ಪುರುಸೊತ್ತಾಗಿ ಕುಳಿತು ಮಾತನಾಡುವ.’ ಎಂದ. ’ನಮ್ಮಲ್ಲಿ ಹೊಲಿಯಲು ಸೂಜಿಗಳಿಲ್ಲ! ಮತ್ತೆ ಬರುವಾಗ ತರುವೆಯಾ?’ ಮೇಡಮ್ ಪೆರಿಯೆರ್ ಕೇಳಿದಳು. ’ಪ್ರಯತ್ನ ಮಾಡುತ್ತೇನೆ … Read more

ತಿರಸ್ಕಾರ (ಭಾಗ 3): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ) ಉದ್ದೇಶ? ಅದು ಅವನಿಗೂ ಗೊತ್ತಿರಲಿಲ್ಲ. ಪ್ರೀತಿಯ ಹಸಿವು, ಕಾಡುತ್ತಿರುವ ತಬ್ಬಲಿತನ ಎಂದು ಹೇಳಲು ಅವನಿಗೆ ನಾಲಿಗೆ ಹೊರಳಲಿಲ್ಲ. ಊರ ಜನರ ತಿರಸ್ಕಾರ ಅವನನ್ನು ಉಸಿರುಗಟ್ಟಿಸಿತ್ತು. ಅವರ ಇರುವನ್ನೇ ಕಡೆಗಣಿಸಿ ಪಕ್ಕಕ್ಕೆ ಮುಖ ತಿರುಗಿಸಿ ನಡೆಯುವ ಫ್ರಾನ್ಸಿಗರ ಕತ್ತನ್ನು ಹಿಡಿದು ಮುರಿಯಬೇಕೆನ್ನಿಸುವಷ್ಟು ಕ್ರೋಧ ಅವನಲ್ಲಿ ಉಂಟಾಗುತ್ತಿತ್ತು. ಕೆಲವೊಮ್ಮೆ ಅಸಹಾಯಕತೆಯಿಂದ ಗಳಗಳನೆ ಅಳಬೇಕೆಂದು ಅವನಿಗೆ ಅನಿಸುತ್ತಿತ್ತು. ತನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ಸ್ವಾಗತಿಸುವ ಒಂದು ಮನೆಯಿದ್ದಿದ್ದರೆ! ಇದು ಅವನ ಗುಪ್ತ ಆಸೆಯಾಗಿತ್ತು. ಆನ್ನೆಟಳಂತ ಹುಡುಗಿ ತನ್ನ ಜಾಯಮಾನಕ್ಕೆ ತಕ್ಕ ಹುಡುಗಿ … Read more