ಪಂಜು ಕಾವ್ಯಧಾರೆ
“ಬುನಾದಿ ಇಲ್ಲದ ಬದುಕು “ ಕೂಡಿಟ್ಟ ಕನಸುಗಳ ಜೊತೆ ಪಾದಯಾತ್ರೆ ಮಾಡುತ್ತಿರುವೆ. ಅರಮನೆಗಲ್ಲ, ಹೊತ್ತಿನ ಅಂಬಲಿಗಾಗಿ! ಕಟ್ಟಿಕೊಂಡ ಆಸೆಗಳನ್ನ ಒಟ್ಟುಗೂಡಿಸಿ ಸಮಾಧಿ ಮಾಡಿರುವೆ. ಚಂದದ ಬಟ್ಟೆಗಲ್ಲ, ಹಸಿದ ಹೊಟ್ಟೆಗಾಗಿ! ನನ್ನೊಳಗಿನ ಖುಷಿಯನ್ನ ಮಾಯಾ ಬಜಾರಿನಲ್ಲಿ ಮಾರಿಕೊಂಡಿರುವೆ. ದುಡ್ಡಿಗಲ್ಲ, ಮನದ ದುಃಖಕ್ಕಾಗಿ! ಬುನಾದಿಯೇ ಇಲ್ಲದ ಬದುಕನ್ನ ನಡು ಬೀದಿಯಲ್ಲೆ ಕಳೆದುಕೊಂಡಿರುವೆ. ನನ್ನ ಸೋಲಿಗಲ್ಲ, ಗೆದ್ದ ಬಡತನಕ್ಕಾಗಿ! –ಹರೀಶ್ ಹಾದಿಮನಿ (ಹಾಹರೀ) ಸದಾ ಕಾಡುವೆ ಏಕೆ? ನೀ ಅಗಲಿದ ಕ್ಷಣವ ಮರೆಯಲಾಗದು ಎಂದಿಗೂ, ನಿನ್ನ ನೆನಪಿನ ಬುತ್ತಿ ಹೊತ್ತು ಸಾಗುತ್ತಿರುವ … Read more