ಪಂಜು ಕಾವ್ಯಧಾರೆ

Me too ಮುಗಿದು ಹೋದ ಕಥೆಗೆ ಅನುಭವಿಸಿಯಾದ ವ್ಯಥೆಗೆ ಯಾಕೆ ಬೇಕಿತ್ತು ಈಗ Me too ಬಿಸಿ ಇರುವಾಗಲೇ ಮುಗಿಸಬೇಕಿತ್ತು ಕಂಪ್ಲೆಂಟ್ ಕೊಟ್ಟು ಆಗುತ್ತಿತ್ತಾಗಲೇ ಗುಟ್ಟು ರಟ್ಟು ಅಂದು ಅನುಭವಿಸುವಾಗ ಮಜ ಈಗ ಅದು ಸಜ ಇರಬಹುದು ಇದಕೆ ಕಾರಣ ದ್ವೇಷ ಜೊತೆಗೆ ಹಣದ ಆಮಿಷ ಯೋಚಿಸಲಿ ಪೂರ್ವಾಗ್ರಹ ಬದಿಗಿಟ್ಟು ಸತ್ಯಾಸತ್ಯತೆಗೆ ಬೆಲೆಕೊಟ್ಟು ಬಲಿಯಾಗದಿರಲಿ ಮರ್ಯಾದೆ ಸುಮ್ಮ ಸುಮ್ಮನೆ ತೆಗೆಯದಿರಲಿ ತಗಾದೆ ನಿಜಕೂ ಅನ್ಯಾಯವಾಗಿದ್ದರೆ ಅದು ಸರಿ ಬರಲಿ ಬೆಳಕಿಗೆ ರಕ್ಕಸರ ತೇವಲಿ ಅನ್ಯಾಯವಾದರೂ ಆಗಿಹರಾಗಲೇ ಬಲಿ … Read more

ಕ್ಯಾ ಯಹೀ ಪ್ಯಾರ್ ಹೇ…..: ಗಿರಿಜಾ ಜ್ಞಾನಸುಂದರ್

ಬೆಳಿಗ್ಗೆ ಏಳುತ್ತಲೇ ಗಲಾಟೆ ಮಾಡುತ್ತಿದ್ದ ತನ್ನ ಪುಟ್ಟ ಅಚಿಂತ್ಯನನ್ನ ತನ್ನ ಕಂಕುಳಲ್ಲಿ ಹೊತ್ತುಕೊಂಡು ಅಡುಗೆ ಮನೆಗೆ ಧರಿತ್ರಿ ಬಂದಳು. ಗಂಟೆ ಆಗಲೇ ೬ ಆಗಿತ್ತು. ಗಂಡನಿಗೆ ಅಡುಗೆ ಮಾಡಿ ಡಬ್ಬಿಗೆ ಹಾಕಬೇಕು, ಹೆಚ್ಚು ಸಮಯವಿಲ್ಲ ಎಂದು ದಡಬಡ ಕೆಲಸ ಮಾಡುತ್ತಿದ್ದಳು. ಗಂಡನ ಪ್ರೀತಿಯ ವಾಂಗೀಬಾತ್ ಮಾಡುತ್ತ ಜೊತೆಯಲ್ಲಿ ಗಸಗಸೆ ಪಾಯಸ ಮಾಡುವುದರಲ್ಲಿ ಮಗ್ನಳಾಗಿದ್ದಳು. ಪುಟ್ಟ ಮಗು ಕೈಬಿಡುತ್ತಿಲ್ಲ. ಆದರೂ ಅವನ ಹುಟ್ಟುಹಬ್ಬಕ್ಕೆಂದು ಅವನಿಗೆ ಮತ್ತು ಅವನ ಸಹೋದ್ಯೋಗಿಗಳಿಗೂ ಆಗುವಂತೆ ಪ್ರೀತಿಯಿಂದ ತಯಾರು ಮಾಡಿ, ಡಬ್ಬಿಗೆ ಹಾಕಿದಳು. ಅಷ್ಟರಲ್ಲಿ … Read more

ಜಾಣಸುದ್ದಿ 18: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ನಿಷೇಧಕ್ಕೊಳಪಟ್ಟ ಆ ಒಂದು ನೋಟು- ವಿಮರ್ಶೆ: ಸಚಿನ್ ಅಂಕೋಲಾ..

ಕವಿತೆಗಳ ಮೂಲಕವೇ ಪರಿಚಿತರಾದ ವಿಲ್ಸನ್ ಕಟೀಲ್ ಅವರ ಚೊಚ್ಚಲ ಕನ್ನಡ ಕವಿತೆಗಳ ಸಂಕಲನವನ್ನು ಓದುವ ಈ ಹೊತ್ತಿಗೆ ಅವರೊಬ್ಬ ಪ್ರಭುದ್ಧ, ವೈಚಾರಿಕ, ಸಾಮಾಜಿಕ ಕಳಕಳಿಯುಳ್ಳ, ಸರಳ ವ್ಯಕ್ತಿತ್ವದ ವಿಶೇಷ ಕವಿಯಾಗಿ ನಮ್ಮೆಲ್ಲರಿಗೂ ಆಪ್ತರಾದವರು.. ಸಮಾಜದಲ್ಲಿ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಘಾಸಿಯಾದಂತೆಲ್ಲಾ ತಾವು ಲೇಖನಿಯ ಮೂಲಕ ತಕ್ಷಣದಲ್ಲಿ ಪ್ರತಿಕ್ರಿಯಿಸುವ ವಿಲ್ಸನ್ ಕಟೀಲ್ ಅವರು ಈ ದಿನಗಳ ಬಹಳ ಅಗತ್ಯದ ಕವಿ ಮತ್ತು ಅವರ ಕವಿತೆಗಳು ಇಂದಿನ ಅತ್ಯಾವಶ್ಯಕ ರಚನೆಗಳಾಗಿವೆ.. ಪ್ರಸ್ತುತ “ನಿಷೇಧಕ್ಕೊಳಪಟ್ಟ ಒಂದು ನೋಟು” ಕವಿತೆಗಳ ಸಂಕಲನ ಯಾವ … Read more

ಯುವಜನರ ಹಕ್ಕುಗಳ ರಕ್ಷಣೆಗೂ ಆಯೋಗ ಬೇಕಲ್ಲವೇ?: ರುಕ್ಮಿಣಿ ನಾಗಣ್ಣವರ

ಫಕ್ಕೀರಪ್ಪ. ಹುಟ್ಟಿ-ಬೆಳೆದದ್ದು ಬೆಳಗಾವಿ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ. ದೊಡ್ಡ ವ್ಯಕ್ತಿಯಾಗುವ ಅಥವಾ ಉನ್ನತ ಸಾಧನೆ ಮಾಡುವ ಅದಮ್ಯ ಕನಸುಗಳೇನೂ ಇರಲಿಲ್ಲ. ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಪೂರ್ಣಗೊಳಿಸಿದ ಅವರಿಗೆ ವಿಶ್ವವಿದ್ಯಾಲಯದ ಮೆಟ್ಟಿಲೇರುವ ಗುರಿ ಇರಲಿಲ್ಲ. ಅಷ್ಟೇ ಅಲ್ಲ, ಪಿಯು ಕಾಲೇಜಿಗೆ ಹೋಗುವ ಸ್ಪಷ್ಟ ಕಲ್ಪನೆಯೂ ಇರಲಿಲ್ಲ. ಆಯಾ ದಿನದ ದುಡಿಮೆಯನ್ನೇ ನಂಬಿದ್ದ ತಂದೆ, ತಾಯಿಗೂ ಮಗನಿಗೆ ಉನ್ನತ ಶಿಕ್ಷಣ ಕೊಡಿಸುವ ಶಕ್ತಿ ಇರಲಿಲ್ಲ. ಸಾಂವಿಧಾನಿಕ ಹಕ್ಕು ಇದ್ದರೂ ಆರ್ಥಿಕ ಮತ್ತು ಇನ್ನಿತರ ಸೌಲಭ್ಯದ ಕೊರತೆಯಿಂದ ಫಕ್ಕೀರಪ್ಪಗೆ ಶಾಲೆಯ … Read more

ವಿಶ್ವ ರೇಡಿಯೋ ದಿನಾಚರಣೆ: ಎಂ.ಎಚ್.ಮೊಕಾಶಿ

ನಾಲಿಗೆಯಿಲ್ಲದೇ ಮಾತನಾಡುವ ವಸ್ತು ಎಂದೇ ಖ್ಯಾತಿಯಾದ ರೇಡಿಯೋವನ್ನು ಇಟಲಿ ದೇಶದ ವಿಜ್ಞಾನಿ ಗುಗ್ಲಿಯೊಲ್ಮೋ ಮಾರ್ಕೋನಿ ಆವಿಷ್ಕಾರ ಮಾಡಿದರು. 1886 ರಲ್ಲಿ ‘ಹೆನರಿಜ್ ಹಟ್ರ್ಜ್’ ಎಂಬ ವಿಜ್ಞಾನಿ ತರಂಗಗಳ ಸಂಶೋಧನೆಯನ್ನಾರಂಭಿಸಿದರು. ಮಾರ್ಕೊನಿಯು ಹಟ್ರ್ಜ್‍ರವರ ತರಂಗಗಳ ಕುರಿತು ಅಧ್ಯಯನ ಕೈಗೊಂಡು ಕೊನೆಗೆ ಜಯ ಪಡೆದರು. ಹೀಗಾಗಿ ಮಾರ್ಕೋನಿಯನ್ನು ರೇಡಿಯೋದ ಜನಕನೆಂದು ಕರೆಯುವರು. ಮಾರ್ಕೊನಿಯು 1896ರಲ್ಲಿ ಒಂದು ಏರಿಯಲ್ ಮುಖಾಂತರ 15 ಕಿಲೋ ಮೀಟರ್ ದೂರದಲ್ಲಿದ್ದ ಒಂದು ಸ್ಥಳಕ್ಕೆ ತಂತಿ ಇಲ್ಲದೇ ಸಂದೇಶ ಕಳಿಸಿದರು. ಇದೇ ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ಕಾರಣವಾಯಿತು. … Read more

ನನ್ನೂರು -ನನ್ನ ಜನ, ಬೋಳೂರು ಪಾಟ್ಲೆನ ಎತ್ತಿನ ನಾಲು: ಮಂಜಯ್ಯ ದೇವರಮನಿ.

ನಮ್ಮೂರು ರೈತಾಪಿ ಚಟುವಟಿಕೆಯಿಂದ ಕೂಡಿದ ಸಣ್ಣ ಹಳ್ಳಿ. ಪ್ರತಿ ಮನೆಯಲ್ಲಿ ಏನಿಲ್ಲವೆಂದರು ಒಂದು ಜೊತೆ ಇಲ್ಲವೇ ಎರಡು ಜೊತೆ ಎತ್ತುಗಳು ಸಾಮಾನ್ಯ. ರಾಮನಗೌಡರ ಮನೆಯಲ್ಲಿ ಮಾತ್ರ ಏಳೆಂಟು ಜೊತೆ ರಾಸುಗಳು. ನೊಣ ಕೂತರೆ ಜಾರಬೇಕು ಅಷ್ಟು ಪೊಗರ್ದಸ್ಥಾಗಿದ್ದವು. ಅವುಗಳ ಚಾಕರಿ ಮಾಡಲೆಂದೇ ಇಬ್ಬರನ್ನು ನೇಮಿಸಲಾಗಿತ್ತು. ಏರೆ ಜಮೀನಿನಲ್ಲಿ ಬೆಳೆದ ಹಸಿಯಾದ ಎಳೆ ಬಿಳಿಜೋಳದ ತೆನೆಗಳನ್ನು ಮೇಯಲು ಹಾಕುತ್ತಿದ್ದರು. ಆದ್ದರಿಂದ ಅವುಗಳಿಗೆ ದುಡಿಯುವದಕ್ಕಿಂತ ಮೇಯೆಯುವುದೇ ಕೆಲಸವಾಗಿತ್ತು. ಹೀಗೆ ಊರ ದನಗಳಿಗೆ ನಾಲು ಕಟ್ಟಲು (ನಾಲು ಎಂದರೆ ಎತ್ತಿನ ಕಾಲಿನ … Read more

ಮಹಿಳೆಗೆ ಶೋಭೆ ನೀಡುವ ಮಂಗಲದ್ರವ್ಯಗಳು: ಜಯಶ್ರೀ ಭ.ಭಂಡಾರಿ.

ಭಾರತೀಯ ಸಂಸ್ಕೃತಿ ಶ್ರೀಮಂತಿಕೆಯಿಂದ ಕೂಡಿದೆ. ಅದರಲ್ಲೂ ಮಹಿಳೆಯರಿಗೆ ವಿಶೇಷವಾದ ಸಂಸ್ಕೃತಿ ಆಚರಣೆಗಳಿವೆ. “ಗೃಹಿಣಿ ಗೃಹಮುಚ್ಯತೆ ಎಂಬಂತೆ ಒಂದು ಮನೆಯಲ್ಲಿ ಒಬ್ಬ ಸ್ತ್ರೀ ಆಚರಿಸುವ ಧಾರ್ಮಿಕ, ಪೂಜೆ ಪುನಸ್ಕಾರಗಳು ಆ ಇಡೀ ಕುಟುಂಬವನ್ನೇ ಉನ್ನತ ಮಟ್ಟಕ್ಕೆ ಒಯ್ಯುತ್ತವೆ. ಅಂತಹ ಸ್ತ್ರೀಗೆ ಪಂಚರೀತಿಯ ಮಂಗಲದ್ರವ್ಯಗಳು ಭೂಷಣಪ್ರದವಾಗಿರುತ್ತವೆ. ಆ ಮಂಗಲ ದ್ರವ್ಯಗಳೆಂದರೆ . . “ಕುಂಕುಮಂ ಕವಚಂ ದಿವ್ಯಂ ಕಜ್ಜಲಂ ಕಂಠಸೂತ್ರತಾ ಕಂಕಣಂಚತು ಪಂಚೈತೆ ಕಕಾರಂ ಮಂಗಲಪ್ರದಾ” ಈ ಶ್ಲೋಕದ ಮೂಲಕ ಆ ಐದು ಮಂಗಲದ್ರವ್ಯಗಳು ತಿಳಿಯುತ್ತವೆ. ಕುಂಕುಮ, ಕವಚ(ವಸ್ತು), ಕಜ್ಜಲ(ಕಾಡಿಗೆ), … Read more

ಪೋಷಕಾಂಶಗಳೇ ಅಲ್ಲದ ನಾರು ನೀರಿಗೇಕೆ ಅಷ್ಟು ಪ್ರಾಮುಖ್ಯತೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಆಹಾರದ ಘಟಕಗಳು ಎಂದು ಕರೆಯುವ ಕಾರ್ಬೋಹೈಡ್ರೇಟುಗಳು, ಪ್ರೋಟೀನುಗಳು, ವಿಟಮಿನುಗಳು, ಲಿಪಿಡ್ ಗಳು, ಖನಿಜಗಳನ್ನು ಜೀವಿಯ ಪೋಷಕಾಂಶಗಳು ಎನ್ನುತ್ತೇವೆ. ಏಕೆಂದರೆ ಇವು ಜೀವಿಗಳನ್ನು ಪೋಷಿಸುತ್ತವೆ. ಜೀವಿ ಬೆಳೆಯಲು, ಅದರ ಸರ್ವಾಂಗಗಳು ವೃದ್ದಿಸಲು, ಜೀವಿ ಸದಾ ಚಟುವಟಿಕೆಯಿಂದ ಕೆಲಸಮಾಡುವಂತಾಗಲು, ಜೈವಿಕ ಚಟುವಟಿಕೆ ನಡೆಸಲು ಅವಶ್ಯಕ! ನಾರು, ನೀರು ಇವು ಸಹ ಆಹಾರದ ಘಟಕಗಳೇ ಆದರೂ ಪೋಷಕಾಂಶಗಳೇ ಅಲ್ಲ! ಅವು ದೇಹದ ಬೆಳವಣಿಗೆಗಾಗಲಿ, ಅಂಗಾಗಗಳ ವೃದ್ದಿಗಾಗಲಿ ಪೂರಕಗಳಲ್ಲ! ಆದರೆ ಅವಿಲ್ಲದೆ ಪೋಷಕಾಂಶಗಳು ದೇಹಗತವಾಗುವುದಿಲ್ಲ! ಅಷ್ಟೇ ಅಲ್ಲ ಜೀವಿಯ ಯಾವ ಕ್ರಿಯೆಗಳು  ನಡೆಯುವುದಿಲ್ಲ. … Read more

ನಾಲ್ಕು ವೇದಗಳೊಂದಿಗೆ ಐದನೇ ನಾಟ್ಯವೇದ: ಕೆ.ಪಿ.ಎಂ. ಗಣೇಶಯ್ಯ

ಎಲ್ಲವನ್ನೂ ತಿಳಿದ ನಾವು ನಮ್ಮ ತನುವನ್ನ ಬಿಟ್ಟು ಕೊಡುವುದಿಲ್ಲವೇಕೆ.? ಅಪ್ಪ ಹಾಕಿದ ಆಲದ ಮರವಿದೆ. ಬೇಕಾದ ರೀತಿಯಲ್ಲಿ, ಬೇಕಾದ ಹಾಗೆ ಬದುಕು ಕಂಡುಕೊಂಡ ಎಷ್ಟೋ ಜೀವಿಗಳು ನಮ್ಮ ಕಣ್ಣ ಮುಂದಿವೆ. ಹಾಗಂತ ಎಲ್ಲರನ್ನೂ ದೂಷಿಸಲು ಬರುವುದಿಲ್ಲ. ಕೆಲವರಾದರೂ ತಮ್ಮ ಕುಟುಂಬದ ಘನತೆಗೆ ತಕ್ಕಂತೆ “ಪರೋಪ ಕಾರ್ಯಾರ್ಥಂ ಮಿದಂ ಶರೀರಂ” ಎನ್ನುವ ಹಾಗೆ ಪರೋಪ ಕಾರ್ಯದಲ್ಲಿ ತೊಡಗಿರುವವರು ಎಷ್ಟೋ ಜನ..? ನಮ್ಮಷ್ಟಕ್ಕೇ ನಾವು ಅಂದುಕೊಂಡು ಇತರರನ್ನೂ ಕಡೆಗಣಿಸಿ ತಮ್ಮಿಷ್ಟದಂತೆ ಬದುಕು ನಡೆಸಿಕೊಂಡು ಹೋದರಾಯ್ತು ಎಂಬುವವರಿಗೆ ನಮ್ಮ ದೇಶದಲ್ಲೇನೂ ಕೊರತೆಯಿಲ್ಲ. … Read more

ಅಭ್ಯಾಗತ 2 ಕನ್ನಡ ಕಿರುಚಿತ್ರ

ಡೈರೆಕ್ಷನ್, ಕಥೆ, ಚಿತ್ರಕಥೆ, ಸಂಭಾಷಣೆ: ಮಂಜು ಎಂ ದೊಡ್ಡಮನಿ ಕ್ಯಾಮರಾ : ಶಶಾಂಕ್ ಮೈಸೂರು ಮತ್ತು ಶಶಿ.ಬಿ.ಈಶ್ವರಗೆರೆ ಸಂಕಲನ & ಗ್ರಾಫಿಕ್ಸ್ : ದರ್ಶನ್ ದೊಡ್ಡಮನಿ ಸಂಗೀತ : ಹರೀಶ್ ಮೈಸೂರು ನಿರ್ಮಾಣ & ನಿರ್ವಹಣೆ : ಶ್ರೀಹರ್ಷ ಹುಣಸೂರ್ ಪತ್ರಿಕ ಪ್ರಚಾರ : ವಸಂತ್ ಬಿ ಈಶ್ವರಗೆರೆ ಕಲಾವಿದರು :  ಟಿ.ಜಿ.ನಂದೀಶ್ ಮೇಘನ ಚತುರೆ ಬೇಬಿ.ರಿಷಿತಾ ಮಂಜು ಎಂ ದೊಡ್ಡಮನಿ ನಾಯ್ಕಲದೊಡ್ಡಿ ಚಂದ್ರಶೇಖರ್ ರಾಘವೇಂದ್ರ ಎಚ್ ಇ ಗಿರೀಶ್ (ಜೆಕೆ) ಶ್ರೀಹರ್ಷ ಹುಣಸೂರು ಸುನೀಲ್ ಶಶಿ.ಬಿ.ಈಶ್ವರಗೆರೆ … Read more

ನೀನಿಲ್ಲದೆ…..!!: ವೆಂಕಟೇಶ ಚಾಗಿ

ಅಂತೂ ಈ ವರ್ಷದ ಫೆಬ್ರುವರಿ ೧೪ ಮರೆಯಾಯ್ತು. ಪ್ರತಿ ವರ್ಷದ ಹಾಗೆ ನನ್ನ ನಿರೀಕ್ಷೆ ಹುಸಿಯಾಯ್ತು. ಅದೆಷ್ಟೋ ದಿನಗಳಾದವು ನಿನ್ನ ದ್ವನಿ ಕೇಳಿ. ಈ ದಿನ ಬಂದಿತೆಂದರೆ ಸಾಕು ಅದೆಷ್ಟು ಸಂತಸ ನಿನಗೆ. ಆ ಮಾತುಗಳನ್ನು ನುಡಿಯದಿದ್ದರೆ ನಿನಗೆ ಸಮಾಧಾನವಾಗುತ್ತಿರಲಿಲ್ಲ. ಮತ್ತೆ ಮತ್ತೆ ಆ ನಿನ್ನ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ. ನಾನೋ ಹುಡುಗಿಯರೆಂದರೆ ಮಾರುದ್ದ ದೂರ ಸರಿಯುವ ಆಸಾಮಿ. ಅದೇಗೋ ನನ್ನ ನಿನ್ನ ನಡುವೆ ಸ್ನೇಹ ಬೆಳೆಯಿತು. ಸ್ನೇಹ ವೆಂದೂ ಪ್ರೇಮಕ್ಕೆ ತಿರುಗಬಾರದೆಂದು ಲಕ್ಷ್ಮಣ … Read more

‘ಅಂತರ್ವಾಣಿ’ 6ನೆಯ ಆವೃತ್ತಿಗೆ ಸಂಶೋಧನ ಲೇಖನಗಳ ಆಹ್ವಾನ

ಕನ್ನಡ ಸಾಹಿತ್ಯ ಮತ್ತು ಸಮಾಜ ವಿಜ್ಞಾನ (ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ವಿಷಯಗಳ ಸಂಶೋಧನ ಲೇಖನಗಳನ್ನು ಪ್ರಕಟಿಸುವ ಸಲುವಾಗಿ ‘ಅಂತರ್ವಾಣಿ’ ಪುಸ್ತಿಕೆಯ 6ನೆಯ ಆವೃತ್ತಿಗೆ ಸಂಶೋಧಕರ ಲೇಖನಗಳಿಗೆ ಆಹ್ವಾನ ನೀಡಲಾಗಿದೆ. ಲೇಖನಗಳನ್ನು ISಃಓ ಸಂಖ್ಯೆಯ ಪುಸ್ತಿಕೆಯಲ್ಲಿ ಪ್ರಕಟಿಸಲಾಗುವುದು. ಈಗಾಗಲೇ ಯಶಸ್ವಿಯಾಗಿ ಅಂತರ್ವಾಣಿ ಪುಸ್ತಿಕೆಯ ಆರು ಆವೃತ್ತಿಗಳು ಪ್ರಕಟವಾಗಿವೆ. ಈ ನಮ್ಮ ಯಶಸ್ಸಿಗೆ ನಾಡಿನ ಸಮಸ್ತ ಯುವ, ಹಿರಿಯ ಸಂಶೋಧಕರು ಸಾಕಷ್ಟು ಪ್ರೋತ್ಸಾಹ ಹಾಗೂ ಬೆಂಬಲಗಳನ್ನು ನೀಡಿದ್ದಾರೆ. ಅವರ ಉತ್ತಮ ಪ್ರತಿಕ್ರಿಯೆಯನ್ನು ಸ್ಮರಿಸುತ್ತ, ಕೃತಜ್ಞರಾಗಿ 6ನೆಯ ಆವೃತ್ತಿಗೆ ಈ … Read more