ಪಂಜು ಕಾವ್ಯಧಾರೆ
ಗುರುದಕ್ಷಿಣೆ ಬಿಳುಪಿಗೂ ಬಿಲ್ಲಿಗೂ ಹೊಸ್ತಿಲಾದ ಹನಿಗೆ ಹುದುಗಿದ್ದ ಚೈತನ್ಯದ ಗುರು ಕಿರಣವೇನೇ? ಮಳೆಹನಿಯ ರಭಸಕ್ಕೆ ತಾಳಿಕೆಯ ತೋರಿಸಿದ ಮರದೆಲೆಯು ಹನಿಗೆ ಗುರು ತಾನೇ? ಹರಿವ ಆಸೆಗೆ ತಗ್ಗಿಗೆ ನುಗ್ಗಿದೊಡೆ ಸಾಗರದ ಹಾದಿಗೊಯ್ದ ಗುರುವು ಭುವಿ ತಾನೇ? ಕಣ್ಣಹನಿ ಮುತ್ತೆಂದು ಒಡನೆ ಚಾಚಿದ ಬೊಗಸೆ ಮೌಲ್ಯದ ಮತಿಹೇಳೋ ಗುರು ತಾನೇ? ರಕ್ತ ಮಾಂಸವಂತೆ ಬುದ್ಧಿ ಭಾವಗಳಂತೆ ಪಂಚಭೂತಗಳಂತೆ ಜೀವದಾ ರಚನೆಗೆ. ಜೀವಿಯ ಜೀವಂತಿಕೆಗೆ ಪಂಚವೆಲ್ಲಾ ಕೊಂಚ! ಕಣಕಣದೊಳೊಕ್ಕಿ ಕಲಿಕೆ ಹುಚ್ಚ ಹಚ್ಚೋ ಅಸಂಖ್ಯಾಣು ಅದ್ಭುತಗಳೇ ಶಿಲ್ಪಿ ಬದುಕೀಗೆ. ದಕ್ಷಿಣೆಯ … Read more