ಪಂಜು ಚುಟುಕ ಸ್ಪರ್ಧೆ ಫಲಿತಾಂಶ

  ಪಂಜು ಚುಟುಕ ಸ್ಪರ್ಧೆಯ 2013 ಫಲಿತಾಂಶ….   ಮೊದಲ ಬಹುಮಾನ:  ಸುಷ್ಮಾ ಮೂಡುಬಿದರೆ ಎರಡನೇ ಬಹುಮಾನ:  ಮಂಜುನಾಥ್ ಪಿ. ಮೂರನೇ ಬಹುಮಾನ:  ಕೃಷ್ಣಮೂರ್ತಿ ಎನ್.   ಸಮಾಧಾನಕರ ಬಹುಮಾನಗಳು: ಶರತ್ ಚಕ್ರವರ್ತಿ, ಈಶ್ವರ ಕಿರಣ ಭಟ್, ಮಾಲಿನಿ ವಿ. ಭಟ್ಟ, ರಾಘವೇಂದ್ರ ಭಟ್ಟ, ಡಂಕಿನ್ ಝಳಕಿ..   ಒಟ್ಟು 42 ಜನ ಕವಿಗಳು ನಾಡಿನ ಮೂಲೆಮೂಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.    ಖ್ಯಾತ ಕವಿಗಳಾದ ಪ್ರೊ. ಎಲ್.ಎನ್. ಮುಕುಂದರಾಜ್ ಈ ಚುಟುಕ ಸ್ಪರ್ಧೆಯ ತೀರ್ಪುಗಾರರಾಗಿದ್ದರು.   ಬಹುಮಾನಿತ … Read more

ಪುಸ್ತಕ ಬಿಡುಗಡೆ ಸಮಾರಂಭ

  ಪುಸ್ತಕ ಬಿಡುಗಡೆ 'ಪಂಜು ಅಂತರ್ಜಾಲ ಪತ್ರಿಕೆ' ಚುಟುಕ ಸ್ಪರ್ಧೆಯ ಬಹುಮಾನ ವಿತರಣೆ ಈಶಾನ್ಯ ಭಾರತೀಯ ನೃತ್ಯಗಳ ಕಿರುಚಿತ್ರ ಪ್ರದರ್ಶನ     ಡಾ. ಎಸ್.ಎಂ.ನಟರಾಜು ಅವರ 'ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ… ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ…' ಹಾಗೂ 'ಎಲೆಮರೆಕಾಯಿ' ಕೃತಿಗಳ ಬಿಡುಗಡೆ ಗೋಪಾಲ ವಾಜಪೇಯಿ ಅವರಿಂದ 'ಪಂಜು' ಅಂತರ್ಜಾಲ ತಾಣ ಬಿಡುಗಡೆ: ಡಾ. ಬಾನಂದೂರು ಕೆಂಪಯ್ಯ, ಗಾಯಕರು, ಅಧ್ಯಕ್ಷರು, ಜಾನಪದ ಅಕಾಡೆಮಿ ಚುಟುಕ ಸ್ಪರ್ಧೆಯ ಬಹುಮಾನ ವಿತರಣೆ:  ಜರಗನಹಳ್ಳಿ ಶಿವಶಂಕರ್, ಕವಿಗಳು ಅಧ್ಯಕ್ಷತೆ: … Read more

ಕೋಡುವಳ್ಳಿಯ ಕರೆ:ಪಾರ್ಥಸಾರಥಿ ಎನ್

  ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೇ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ ಬಸ್ಸಿಗೆ ಕಾಯುತ್ತಿದ್ದರು. ಎಲ್ಲರದ್ದೂ ಹೆಚ್ಚು-ಕಡಿಮೆ ಒಂದೇ ವಯಸ್ಸು. ಹತ್ತೊಂಬತ್ತು ಇಪ್ಪತ್ತರ ಉತ್ಸಾಹದ ಚಿಲುಮೆಗಳು. ಮೈಸೂರು ರಸ್ತೆಯಲ್ಲಿರುವ ಡಾನ್ ಬಾಸ್ಕೋನಲ್ಲಿ ಇಂಜಿನೀಯರಿಂಗ್ ಕಾಲೇಜಿನ ಐ.ಎಸ್ ವಿಭಾಗದ ಮೂರನೆ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿದ ಎಲ್ಲರೂ, ರಜೆ ಇರುವ ಕಾರಣ ಒಂದು ವಾರ ಸಮಯ ಕಳೆಯಲು ಪ್ರಕೃತಿಯ ಮಡಿಲು ಚಿಕ್ಕಮಗಳೂರಿಗೆ ಹೊರಟಿರುವರು.   … Read more

ಚೇತನ: ದಿವ್ಯ ಆಂಜನಪ್ಪ

"ಜಗತ್ಚೇತನದೆದುರು, ನಾನು ನನ್ನದು ಎಂಬ ಅಹಂ ಭಾವಕ್ಕಿಂತ, ನೀನು ನಿನ್ನದು ನಿನ್ನದೇ ಎಂಬ ಸಮರ್ಪಣಾ ಮನೋಭಾವ ಮಿಗಿಲು. ಸಕಲ ಜೀವ-ಸಂಕುಲಗಳನ್ನು ನಿಯಮಬದ್ದವಾಗಿ, ನಿಖರವಾಗಿ, ಆಯಾಯ ಪಾತ್ರಗಳನ್ನು ಸಮರ್ಪಕವಾಗಿ ನಿರ್ವವಹಿಸುವಂತೆ ಮಾಡುವ ವ್ಯವಸ್ಥಾಪಕ-ಕಾಣದ ಕೈಯೊಂದು ಇರಲೇಬೇಕು" ಎಂದು ಎಷ್ಟೋ ಸಂದರ್ಭಗಳಲ್ಲಿ ನಮ್ಮೆಲ್ಲರ ಮನಸ್ಸಿಗೆ ಅನ್ನಿಸಿರುತ್ತದೆ. ಆ ಕಾಣದ ಕೈ ಕೆಲವೊಮ್ಮೆ ವರಕೊಡುವ ಕೈಯಾಗಿಯೂ, ಬುದ್ಧಿ ಕಲಿಸುವ ಕೈಯಾಗಿಯೂ, ದಾರಿ ತೋರುವ ಕೈಯಾಗಿಯೂ ನಮ್ಮ ಅನುಭವಕ್ಕೆ ಬಂದಿರುವುದು. ಜೀವಸಂಕುಲದಲ್ಲಿನ ಬುದ್ಧಿ ಜೀವಿ ಮಾನವಕುಲವೊಂದು ತನ್ನ ಉಪಕುಲಗಳು-ಧರ್ಮಗಳ ನೆಲೆಗಳಲ್ಲಿ ಆ ಕೈಯನ್ನು 'ದೇವ'ನೆಂದು:ಕೃಷ್ಣ, ಏಸು, ಬುದ್ಧ, ಜಿನ, ಅಲ್ಲಾ ಎಂದು ಅವರವರಂತೆ ಕರೆದಿರುವುದುಂಟು. … Read more

ಇಳಿ ಸಂಜೆಯ ಮೌನ… ಮಂಜುಗಣ್ಣಿನ ಮಾತು:ಶ್ರೀವತ್ಸ ಕಂಚೀಮನೆ

  ಏಳು ದಶಕಗಳ ಹಣ್ ಹಣ್ಣು ಬದುಕು…ಹೆಸರು ಆನಂದರಾವ್… ಮಣ್ಣ ಮನೆಯಲಿ ಮಲಗುವ ಮುನ್ನಿನ ಮಂಜುಗಣ್ಣಿನ ಹಿನ್ನೋಟದಲ್ಲಿ, ಹೆಸರಲ್ಲಿ ಮಾತ್ರ ಕಂಡ ಆನಂದದ ಅರ್ಥ ಹುಡುಕುತ್ತಾ ಕಂಗಾಲಾಗಿದ್ದೇನೆ… ಈದೀಗ ಮನದಿ ಸುಳಿದಿರುಗುತ್ತಿರೋ ಭಾವ ಇದೊಂದೇ "ಎಷ್ಟುಕಾಲ ಬದುಕಿದ್ದೊಡೇನು – ಜೀವಿಸಲಾಗದಿದ್ದೊಡೆ ನನ್ನಂತೆ ನಾನು…" ಈ ಬದುಕಿಗೆ (ನನ್ನನ್ನೂ ಸೇರಿ ಈ ಜನಕ್ಕೆ) ಅದ್ಯಾಕೆ ಅಷ್ಟೊಂದು ಪ್ರೀತಿಯೋ ಮುಖವಾಡಗಳ ಮೇಲೆ…ಇಂದೀಗ ಬಯಲ ಹಸಿರ ತಂಗಾಳಿ ನಡುವೆಯೂ ಉಸಿರುಗಟ್ಟುವ ಭಾವ ನನ್ನಲ್ಲಿ… ಏನೆಲ್ಲ ಇತ್ತಲ್ಲವಾ ಬದುಕ ದಾರೀಲಿ…ಸೊಗಸಾದದ್ದು, ಆಹ್ಲಾದವನೀಯುವಂಥದ್ದು…ಪುಟ್ಟ ಪುಟ್ಟದು…ಆಸ್ವಾದಿಸಿದರೆ … Read more

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ: ರುಕ್ಮಿಣಿ ಎನ್.

ಹುಟ್ಟಿದಾಗಿನಿಂದ ಇವತ್ತಿನವರ್ಗು ನಾ ಮದ್ವಿ ಮುಂಜಿ, ಜಾತ್ರೀ ಅಂತ್ ಹೇಳಿ ಊರೂರ್ ತಿರಿಗಿದ್ ಭಾಳ ಕಡಿಮಿ ರೀ. ಮದ್ವಿಅಂದ್ರ್ ಸಿನಿಮಾದಾಗ್ ನೋಡು ಸೀನ್ ಅಷ್ಟ್ ಗೊತ್ತಿತ್ರ್ ನಂಗ್. ಅದರೀ.. ಹುಡುಗನ ಕಡೆಯಿಂದ ಅವನ್ ಗೆಳ್ಯಾರು, ಹುಡುಗಿ ಕಡೆಯಿಂದ ಅಕಿ ಗೆಳತ್ಯಾರು, ಮದ್ವಿ ಒಂದ್ ವಾರ್ ಇರುತ್ಲೇನ್ ಬರಾತಾರು. ಏನೇನರ ಕೆಂತಿ ಮಾಡ್ತಾರು, ಯಾರಗೋ ಯಾರದೋ ಮ್ಯಾಲ್ ಲವ್ವ್ ಅಕ್ಕೈತಿ… ಮದ್ವಿ ದಿನ, ಊಟ ಮದಲ್ ಇರ್ತೈತಿ. ಆಮ್ಯಾಕ್ ಅಕ್ಕಿಕಾಳ್ ಒಗಿತಾರು. ಮದ್ವಿ ಆತ್ ಆತ್ ಅನುಗುಡ್ದ, ಹುಡುಗಿ … Read more

ನನ್ನ ಪುಟ್ಟ ಕನಸು:ವೀರ್ ಸಂತೋಷ್

  ನನ್ನ ಪುಟ್ಟ ಕನಸಿನ ಹೆಸರು, “ಪೂರ್ವಿ”. ಅವಳು ನನ್ನ ಜೀವನಕ್ಕೆ ಬಂದು ಇವತ್ತಿಗೆ ಸರಿಯಾಗಿ ಒಂದು  ವರ್ಷವಾಯ್ತು. ಒಂದು ವರ್ಷದ ಹಿಂದೆ ಇದ್ದ ಸಂತೋಷ ಇವತ್ತಿಗೂ ಹಾಗೇ ಇದೆ. ದಿನದಿಂದ ದಿನಕ್ಕೆ ಅವಳ ಮೇಲಿನ ಪ್ರೀತಿ ಜಾಸ್ತಿಯಾಗ್ತಾ ಇದೆ. ಅವಳನ್ನು ನೋಡಿದ ಮೊದಲನೇ ದಿನ ಇನ್ನೂ ನನ್ನ ಕಣ್ಣಲ್ಲಿ ಹಸಿರಾಗಿದೆ. ಅವಳನ್ನು ನೋಡಿದ ಮರುಕ್ಷಣವೇ ನನ್ನ ಜೀವನ ಪರಿಪೂರ್ಣವಾಯಿತು. ಅವಳ ನೋಟದ ಶಕ್ತಿಯೇ ಅಂತಹದ್ದು.  ಅವಳ ಪುಟ್ಟ ಕೈ ಬೆರಳುಗಳು ನನ್ನ ಕನಸಿನ ಲೋಕವನ್ನು ಚಿತ್ರಿಸಲು … Read more

ಮೂವರ ಕವನಗಳು:ಈಶ್ವರ ಭಟ್,ಎಂ.ಎಸ್.ಕೃಷ್ಣಮೂರ್ತಿ,ಅಶೋಕ್ ಕುಮಾರ್ ವಳದೂರು

  ಆವರ್ತಿತ ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು ಕಿರಣಗಳು ಹೊಳಪಿಸಿದ ಬಣ್ಣಗಳನು ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು? ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು.  ಇದು ಕೆಂಪು ನಾಲಗೆಯು ಹೊರಳಿ ಕೇಸರಿಯಾಗಿ ಮೂಡಿ ಕಾಮನಬಿಲ್ಲು ಹನಿಗಳೊಳಗೆ ಮತ್ತೇನನೋ ತಂದು ತನ್ನ ವ್ಯಾಪ್ತಿಯ ಪರಿಧಿ ಮೀರಿ ಸಾಗುವ ಮನಕೆ ಎಷ್ಟು ಘಳಿಗೆ? ಸತ್ಯಕ್ಕೆ ಬಿಳಿಮುಖವೆ? ರವಿಯಕಿರಣವು ನೆಪವೆ? ಆರಿಹೋಗುವುದೇನು ಖಚಿತ ಸಾವೆ? ಮಂಜು ಹುಟ್ಟುವುದೆಂತು ಹನಿಯ ಹಡೆಯುವುದೆಂತು ರಾತ್ರಿ ಬೆಳಗಿನ ವರೆಗೆ ಸುಖದ ನಾವೆ ನಾಳೆ ನಾ ಕಾಯುವೆನು … Read more

ನನ್ನ ಜೀವನವನ್ನು ಬದಲಿಸಿದ ಆ ಚಿತ್ರ:ವಾಸುಕಿ ರಾಘವನ್

  ಬಹುಶಃ 1998ರ ಆಗಸ್ಟ್ ಇರಬೇಕು. ಸೆಮಿಸ್ಟರ್ ಕೊನೆಯ ದಿನ ಕಾಲೇಜಿನಿಂದ ಹಾಲ್ ಟಿಕೆಟ್ ಇಸ್ಕೊಂಡು ಬರಕ್ಕೆ ಹೋಗಿದ್ದೆ. ವಾಪಸ್ಸು ಮನೆಗೆ ಬಾರೋವಾಗ ನನಗೇ ಗೊತ್ತಿಲ್ಲದಂತೆ ವುಡ್-ಲ್ಯಾಂಡ್ಸ್ ಥೀಯೇಟರ್ ಕಡೆಗೆ ನನ್ನ ಗಾಡಿ ತಿರುಗಿಸಿದ್ದೆ. ಆ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಓದಿದ್ದೆನಾ ಅಥವಾ ಪರೀಕ್ಷೆ ಶುರು ಆಗೋದರ ಒಳಗೆ ಒಂದು ಸಿನಿಮಾ ನೋಡಿಬಿಡಬೇಕು ಅನ್ನೋ ಚಡಪಡಿಕೆ ಇತ್ತಾ ನೆನಪಿಗೆ ಬರ್ತಾ ಇಲ್ಲ. ನನಗೆ ಆಗ ಆ ಚಿತ್ರದ ನಿರ್ದೇಶಕನಾಗಲೀ, ನಟರಾಗಲೀ ಯಾರೂ ಗೊತ್ತಿರಲಿಲ್ಲ. ಆದರೆ ಚಿತ್ರಮಂದಿರದಲ್ಲಿ … Read more

ಭ್ರಮೆ:ಪ್ರವೀಣ್ ಕೆ

  ಗುರು ಕಾಡು ದಾಟಿ ಹೊಳೆಯ ದಂಡೆಗೆ ಬಂದು ಹಸಿಮಣ್ಣು ಕಂಡರೂ ಅದರ ಮೇಲೆ ಕುಳಿತುಕೊಂಡ.  ಕಾಡಿನ ಗವ್ವೆನ್ನುವ ಧ್ವನಿ, ನದಿಯ ಜುಳುಜುಳು ನಾದ, ಹಕ್ಕಿಗಳ ಕಲರವ ಯಾವುದೂ ಅವನ ಕಿವಿ ಸೇರುತ್ತಿರಲಿಲ್ಲ.  ತಾನು ಇಷ್ಟು ದಿನ ನಂಬಿಕೊಂಡು ಬಂದಿದ್ದ ಬದುಕು ಹೀಗೆ ತನ್ನನ್ನೇ ತಿನ್ನುವ ರಾಕ್ಷಸವಾಗುತ್ತದೆ ಎಂದು ಅವನು ಅಂದುಕೊಂಡಿರಲಿಲ್ಲ.   ನದಿ ತನ್ನ ಪಾಡಿಗೆ ತಾನು ಹರಿಯುತ್ತಿತ್ತು.  ಅದರ ಗುರಿ ಸಮುದ್ರ ಸೇರುವುದು ಎಂದು ಯಾರೋ ಹೇಳಿದ್ದನ್ನು ಕೇಳಿ ಗಹಗಹಿಸಿ ನಕ್ಕಿದ್ದ.  ಅದಕ್ಕೇನ್ ತಲಿ … Read more

ಹೇಳಿ-ಕೇಳಿ…: ಗೋಪಾಲ ವಾಜಪೇಯಿ

  ನಾಲ್ಕು ಮಾತ ನೀನು ಹೇಳು, ನಾಲ್ಕು ನನ್ನ ಮಾತ ಕೇಳು…  ನಾಲ್ಕು ದಿನದ ಬಾಳು ಅಲ್ಲಾ, ನಾಲ್ಕು ಹೆಜ್ಜಿ ನಡೆಯಿದಲ್ಲಾ… ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ…  ಗೆಳತಿ, ಬಾಳಿ ಬದುಕುವಾ… ಬಾರೆ, ಬಾಳಿ ಬದುಕುವಾ…                                          ನಾಲ್ಕು ಜನರ ಓಣಿಯೊಳಗ, ನಾಲ್ಕು ಜನರು ಬಂಧು ಬಳಗ…  ನಾಲ್ಕು ಹೆಜ್ಜಿ ತಪ್ಪದಾಂಗ, ನಾಲ್ಕು … Read more

ನನ್ನೊಳಗಿನ ಗುಜರಾತ (ಭಾಗ 10): ಚಿನ್ಮಯ್ ಮಠಪತಿ

  ಅವು ತುಂಬು ಸಿಹಿಯಾದ ಅನುಭವಗಳು. ಅವುಗಳ ಕಡೆಗೆಯೇ ಸಾಗಿ ಮತ್ತೆ ಮತ್ತೆ ಅಲ್ಲಿಗೆ ನುಸುಳುತ್ತಿತ್ತು ಮನಸ್ಸು, ತುಂಬು ಚಿತ್ತವನ್ನು ತನ್ನ ಬೆನ್ನೇರಿಸಿಕೊಂಡು. ಎಷ್ಟೇ ಪ್ರಯತ್ನ ಪಟ್ಟರು ಆ ವಲಯದಿಂದ ಹೊರ ಬರಲಾಗಲೇ ಇಲ್ಲ. ಯಾಕೆ ನಾವು  ಒಮ್ಮೊಮ್ಮೆ ಇನ್ನೊಬ್ಬರು ಧಾರೆ ಎರೆವ ಪ್ರೀತಿ ವಿಶ್ವಾಸಗಳ ಅಭಿಮಾನಿಗಳಾಗಿ ಬಿಡುತ್ತೇವೆ? ಅವರನ್ನು ಅಷ್ಟಾಗಿ ಹಚ್ಚಿಕೊಂಡು ಬಿಡುತ್ತೇವೆ ? ಅವರ ಜೊತೆಗಾರಿಕೆ, ಸಾಂಗತ್ಯಕ್ಕೆ ಹಾತೋರೆಯುತ್ತೇವೆ? ಅವರಿಲ್ಲದ ಕ್ಷಣಗಳಲ್ಲಿ ಅವರಿಗಾಗಿ ಕನವರಿಸುತ್ತೇವೆ? ಎಲ್ಲವುಗಳಿಗೆ ಉತ್ತರವಂತೂ ಇದ್ದೆ ಇದೇ. ಅದೇ ಪ್ರೀತಿ ವಿಶ್ವಾಸವಲ್ಲವೇ? … Read more