ಮತ್ತೊಮ್ಮೆ ‘ವೀರ ಸಿಂಧೂರ ಲಕ್ಷ್ಮಣ’ ದರ್ಶನ: ಹಿಪ್ಪರಗಿ ಸಿದ್ಧರಾಮ

ಸಮೃದ್ಧ ಪರಂಪರೆಯುಳ್ಳ ಇಂಡಿಯಾ ದೇಶದ ಸಾಮಾಜಿಕ ಮತ್ತು ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೇಡೆಯಾದರೆ ಜಾಗೃತ ಯುವಮನಸ್ಸುಗಳು, ಶೋಷಿತರ ಮತ್ತು ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ನಾಡ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರಾಣಾರ್ಪಣೆಗೈದಿದ್ದು ಇನ್ನೊಂದೆಡೆ. ಸುರಪುರ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಮೈಲಾರ ಮಹಾದೇವ, ಹಲಗಲಿಯ ಬೇಡರು, ಸಂಗೊಳ್ಳಿ ರಾಯಣ್ಣ ಹೀಗೆ ಇನ್ನೂ ಅನೇಕ ಅನಾಮಿಕರ … Read more

ನಾಟಕಕಾರರಾಗಿ ಕುವೆಂಪು (ಭಾಗ-20) : ಹಿಪ್ಪರಗಿ ಸಿದ್ದರಾಮ್, ಧಾರವಾಡ

                ಇಲ್ಲಿಯವರೆಗೆ   ಆತ್ಮೀಯ ಓದುಗಪ್ರಭುಗಳೇ,   ಮೋಡದ ಜೊತೆಗೆ ಆಟವಾಡ ಬಯಸುವ ಪುಟ್ಟ ಹುಡುಗ, ಮನುಷ್ಯರ ದುರಾಶೆಗೆ ಬಲಿಯಾಗುವ ಕಾಡು, ಮುಕ್ತವಾಗಿ ಆಕಾಶದಲ್ಲಿ ತೇಲಿ ಓಡಾಡುವ ಮೋಡ ಇವು ನಿಸರ್ಗದ ಸಹಜವಾದ ಮೂರು ರೂಪಗಳು. ಮಹಾಕವಿಗಳ ವಿಶ್ವಮಾನವ ಸಂದೇಶ, ಪೂರ್ಣದೃಷ್ಟಿ ಮತ್ತು ಅನಿಕೇತನವಾಗುವ ಪ್ರಕ್ರಿಯೆಯ ಬೀಜಗಳು ಕಳೆದ ಸಂಚಿಕೆಯಲ್ಲಿ ನಾವು ನೋಡಿದ ಚಿಣ್ಣರಿಗಾಗಿ ರಚಿಸಿದ ‘ಮೋಡಣ್ಣನ ತಮ್ಮ’ ರಂಗಕೃತಿಯಲ್ಲಿ ಮೊಳಕೆಯೊಡೆಯುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲಾ ಬಂಧನಗಳನ್ನು … Read more

ನಾಟಕಕಾರರಾಗಿ ಕುವೆಂಪು (ಭಾಗ-19) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ಓದುಗಪ್ರಭುಗಳೇ, ಇಲ್ಲಿಯವರೆಗೆ ನಾವು ಕವಿ ಹೃದಯದ ಮಹಾಕವಿ ಕುವೆಂಪುರವರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಥಾವಸ್ತುಗಳೊಂದಿಗೆ ಅವರ ವಾಙ್ಮಯದ ವಿಸ್ತಾರತೆಯಲ್ಲಿ ಅರಳಿದ ರಂಗ(ಕೃತಿ)ಕುಸುಮಗಳು ಕರುನಾಡಿನ ಸಾಹಿತ್ಯದ ಸಂದರ್ಭದಲ್ಲಿ ಮಹತ್ವಪೂರ್ಣವಾಗಿರುವುದನ್ನು ನಾವೀಗಾಗಲೇ ಗಮನಿಸಿದ್ದೇವೆ. ಅವರ ರಂಗಕೃತಿಗಳು ರಚನೆಯಾದಂದಿನಿಂದ (ಶತಮಾನದುದ್ದಕ್ಕೂ) ವಿಶ್ವದ ಹಲವೆಡೆ ಅನೇಕ ಸಾಂಸ್ಕೃತಿಕ ವಾಗ್ವಾದಗಳಿಗೆ ಎಡೆಮಾಡಿಕೊಡುವುದರೊಂದಿಗೆ ತಮ್ಮ ತಾಜಾತನವನ್ನು ಕಾಪಿಟ್ಟುಕೊಂಡಿವೆ. ಹಾಗೆಯೇ ರಂಗಕೃತಿಗಳ ವಸ್ತು, ಭಾಷೆ, ಪಾತ್ರ, ಸನ್ನಿವೇಶಗಳನ್ನು ಮಾತ್ರ ಗಮನಿಸದೆ ಅವುಗಳ ರೂಪಕ, ಅರ್ಥ, ಅನುಸಂಧಾನ ಮತ್ತು ಮುನ್ನೋಟಗಳನ್ನು ನಾವು ಹೆಚ್ಚು ಹೆಚ್ಚು ಅರ್ಥಮಾಡಿಕೊಂಡಂತೆಲ್ಲ … Read more

ನಾಟಕಕಾರರಾಗಿ ಕುವೆಂಪು (ಭಾಗ-18) : ಹಿಪ್ಪರಗಿ ಸಿದ್ದರಾಮ್, ಧಾರವಾಡ

    ಬಲಿದಾನ (1948) : ಆತ್ಮೀಯ ಓದುಗಪ್ರಭುಗಳೇ,   ಹಿಂದಿನ ಸಂಚಿಕೆಯಲ್ಲಿ ಮಹಾಕವಿಗಳ ‘ಬಲಿದಾನ’ ರಂಗಕೃತಿಯ ಎರಡು ದೃಶ್ಯಾವಳಿಗಳ ಕುರಿತು ತಿಳಿದುಕೊಂಡಿದ್ದೇವೆ. ಆರಂಭದ ದೃಶ್ಯದಲ್ಲಿ ಹಾಳುಬಿದ್ದ ಕತ್ತಲುಗವಿದಿರುವ ಕಾಳಿಕಾ ಮಂದಿರದಲ್ಲಿ ಭರತಸುತನು ನೋವು-ನಿರಾಶೆ-ಹತಾಶೆ ಭಾವಗಳಿಂದ ಮಲಗಿಕೊಂಡಿರುವಾಗ ಭಾರತಾಂಬೆಯು ಪ್ರತ್ಯಕ್ಷಳಾಗಿ, ಪರಿಚಯಿಸಿಕೊಂಡು ತನಗೊದಗಿರುವ ಸ್ಥಿತಿಯನ್ನು ವಿವರಿಸುತ್ತಾಳೆ. ತನ್ನನ್ನು ಈ ಬಂಧನದ ಸಂಕೋಲೆಗಳಿಂದ ಬಿಡಿಸಬೇಕಾದರೆ ಅದರ ಕೀಲಿಕೈ ಮಿತ್ರರಾಗಿ ಆಗಮಿಸಿ ಆಕ್ರಮಿಸಿಕೊಂಡಿರುವವರ ಹತ್ತಿರವಿದೆ. ಅದನ್ನು ತೆಗೆದುಕೊಂಡು ಬರಲು ಹೇಳುತ್ತಾಳೆ. ಅದರಂತೆ ಭರತಸುತನು ಹೊರಡುತ್ತಾನೆ. ಮುಂದಿನ ದೃಶ್ಯದಲ್ಲಿ ಹಾಳುಬಿದ್ದ ಕಾಳಿಕಾ … Read more

ನಾಟಕಕಾರರಾಗಿ ಕುವೆಂಪು (ಭಾಗ-17) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ಓದುಗಪ್ರಭುಗಳೇ, ಕಳೆದ ಸಂಚಿಕೆಯಲ್ಲಿ ಮಹಾಕವಿಗಳ ಸಾರ್ವಕಾಲಿಕ ಸರ್ವಶ್ರೇಷ್ಟ ರಂಗಕೃತಿಗಳಲ್ಲಿಯೇ ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಮತ್ತು ಆಧುನಿಕ/ಇಂದಿನ ಕಾಲದಲ್ಲಿ ಜಾಣ್ಮೆ, ವಿದ್ಯೆ ಮುಂತಾದ ಸಂಗತಿಗಳು ಕೇವಲ ಉನ್ನತ ಕುಲದವರ ಸ್ವತ್ತಲ್ಲ, ಅದು ಸ್ಥಾಪಿತ ಸ್ವ-ಹಿತಾಸಕ್ತಿಯ ಬಂಧನಕ್ಕೊಳಗಾಗುವುದಿಲ್ಲ ಮುಂತಾದ ಅಂಶಗಳ ಕುರಿತು ಆತ್ಮಾವಲೋಕನಕ್ಕೆ ಗುರಿಪಡಿಸುವ ‘ಜಲಗಾರ’ ಕೃತಿಯ ಕುರಿತು ತಿಳಿದುಕೊಂಡಿದ್ದೇವೆ. ಹಾಗೆ ನೋಡಿದರೆ ‘ಜಲಗಾರ’ ರಂಗಕೃತಿಯ ವಸ್ತು ವರ್ಣ-ವರ್ಗಗಳ ಸಂಘರ್ಷದ ನೆಲೆಯಾಗಿದೆ. ‘ಜಲಗಾರ’ ಇಲ್ಲಿ ಪರಂಪರೆಯ ಶೋಷಣೆಯ ಎಲ್ಲಾ ಮಗ್ಗಲುಗಳನ್ನು ಅರಿತವನು. ಅದರಿಂದ ಬಿಡುಗಡೆ ಪಡೆದು ತನ್ನ ಜೀವನದಲ್ಲಿ … Read more

ನಾಟಕಕಾರರಾಗಿ ಕುವೆಂಪು (ಭಾಗ-16) : ಹಿಪ್ಪರಗಿ ಸಿದ್ದರಾಮ್

ಆತ್ಮೀಯ ಓದುಗಪ್ರಭುಗಳೇ, ಷೇಕ್ಸ್ ಪಿಯರ್‍‍ನ ‘ಹ್ಯಾಮ್ಲೆಟ್’ ನಾಟಕದ ಆತ್ಮವನ್ನು ಇಟ್ಟುಕೊಂಡು ಶರೀರವಾಗಿಯೆಂಬಂತೆ ಕನ್ನಡದ ಪರಿಸರಕ್ಕೆ ಸ್ವತಂತ್ರ ಕಥಾನಕವೆನಿಸುವಂತೆ ರೂಪಾಂತರಿಸಿದ ‘ರಕ್ತಾಕ್ಷಿ’ ರಂಗಕೃತಿಯ ಸಂದರ್ಭದಲ್ಲಿ ಮೂಲಕೃತಿಯ ತಾತ್ವಿಕತೆಗೆ ಭಿನ್ನವಾದ ದೃಷ್ಟಿಕೋನವನ್ನು ಮಹಾಕವಿಗಳು ಪ್ರತಿಪಾದಿಸುವ ಮೂಲಕ ಸಾಂಸ್ಕೃತಿಕವಾಗಿ ಒಂದು ಮಹತ್ವದ ಬದಲಾವಣೆಯೆಂಬಂತೆ, ಅದರಲ್ಲೂ ಮುಖ್ಯವಾಗಿ ಶಪಿಸಲಾರದ, ಕೇವಲ ಆಶೀರ್ವದಿಸಬಲ್ಲ ಮನಸ್ಸು ‘ರಕ್ತಾಕ್ಷಿ’ಯಲ್ಲಿ ಪ್ರಧಾನವಾಗಿ ಕಂಡು ಬರುತ್ತದೆ. ಇಂತಹ ಮಹಾನ್ ರಂಗಕೃತಿಯನ್ನು ಕನ್ನಡ ನಾಡಿನ ಇತಿಹಾಸದ ನೈಜ ಘಟನೆಯೊಂದಕ್ಕೆ ತಳುಕು ಹಾಕಿ, ಮೈಸೂರು ಪ್ರಾಂತದ ಬಿದನೂರಿನ ರಾಜಮನೆತಕ್ಕೆ ಸಂಬಂಧ ಕಲ್ಪಿಸಿಕೊಂಡು ರೂಪಾಂತರಿಸಿರುವುದನ್ನು … Read more

ನಾಟಕಕಾರರಾಗಿ ಕುವೆಂಪು (ಭಾಗ-15) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ರಂಗಾಸಕ್ತ ಓದುಗಪ್ರಭುಗಳೇ, ನಾವೀಗ ಮಹಾಕವಿ ಷೇಕ್ಸ್ ಪಿಯರ್‍ನ ‘ಹ್ಯಾಮ್ಲೆಟ್’ ನಾಟಕಕೃತಿಯನ್ನು ಯುಗದಕವಿ ಕುವೆಂಪುರವರು ಕನ್ನಡದಲ್ಲಿ ರೂಪಾಂತರವಾಗಿಸುವುದರೊಂದಿಗೆ ಸುದೀರ್ಘವಾಗಿರುವ ರುದ್ರರಸ ಪ್ರಧಾನ ‘ರಕ್ತಾಕ್ಷಿ’ ರಂಗಕೃತಿಯ ಕುರಿತು ಹಿಂದಿನ ಸಂಚಿಕೆಯಿಂದ ನೋಡುತ್ತಿದ್ದೇವೆ. ಅದರ ಮುಂದುವರಿದ ಕಥಾನಕ ನಿಮಗಾಗಿ…   ಸೆರೆಮನೆಯಲ್ಲಿದ್ದ ಬಸವಯ್ಯ ಮತ್ತು ಲಿಂಗಣ್ಣನವರನ್ನು ಬಿಡುಗಡೆ ಮಾಡಲು ಸನ್ಯಾಸಿಯ ಮಾರ್ಗದರ್ಶನದಲ್ಲಿ ಶಿವಯ್ಯ ಮತ್ತು ಹೊನ್ನಯ್ಯ ಯಶಸ್ವಿಯಾಗುತ್ತಾರೆ. ನಂತರ ಅವರನ್ನು ಕಂಸಿ ಮಾರ್ಗವಾಗಿ ಶಿವಮೊಗ್ಗೆಯ ಹತ್ತಿರ ತುಂಗಾತೀರದಲ್ಲಿರುವ ಹೈದರಾಲಿಯ ಬಿಡಾರಕ್ಕೆ ಕಳುಹಿಸುವುದರೊಂದಿಗೆ ತೀಕ್ಷ್ಣಮತಿಯೂ, ಕುಶಲಮತಿಯೂ ಆದ ಸನ್ಯಾಸಿಯೂ ಬಿಡುಗಡೆಯ ವಿಷಯದಲ್ಲಿ … Read more

ನಾಟಕಕಾರರಾಗಿ ಕುವೆಂಪು (ಭಾಗ-14) : ಹಿಪ್ಪರಗಿ ಸಿದ್ದರಾಮ್

ಎರಡನೆಯ ಅಂಕದ ಮೊದಲನೆಯ ದೃಶ್ಯದಲ್ಲಿ ಅರಮನೆಯ ಹೆಬ್ಬಾಗಿಲ ಬಳಿ ಕಾವಲು ಕಾಯುತ್ತಾ ನಡುರಾತ್ರಿಯಲ್ಲಿ ಕೆಂಚಣ್ಣನಿರುವಾಗ ಹೊನ್ನಯ್ಯನೊಂದಿಗೆ ರಾಜಕುಮಾರ ಬಸವಯ್ಯ ಆಗಮಿಸುತ್ತಾನೆ. ಆ ಸಂದರ್ಭದ ಮದ್ಯರಾತ್ರಿಯ ಮೌನದಲ್ಲಿ ಬೆಳದಿಂಗಳ ಮಾಯೆಯನು ನೋಡಿ ಬಸವಯ್ಯನ ಮನಸ್ಸು ಸೌಂದರ್ಯೋಪಾಸನೆಯ ವರ್ಣನೆಯನ್ನು ಹೀಗೆ ಮಾಡುತ್ತಾನೆ : ನೋಡಿದೋ ಎಂತಹ ಶಾಂತಿ ಕಡಲಾಡುತಿದೆ ! ಎಂತಹ ಸೊಬಗು ಸುರೆಯಾಗಿಹುದು ಈ ನಮ್ಮ  ತಿರೆಯಲ್ಲಿ ! ಈ ಪ್ರಕೃತಿ ಸೌಂದರ್ಯವೆಮ್ಮನು  ಕೈಬೀಸಿ ಕರೆಯುತಿದೆ ಉತ್ತಮ ಪ್ರಪಂಚಕ್ಕೆ.  ………………………………………………………. ಸತ್ತಮೇಲೆಮೆಗೆ ಪುರಸತ್ತು ; ಆದರೀ ಚೆಲ್ವು ಸಿಗುವುದೇ? … Read more

ನಾಟಕಕಾರರಾಗಿ ಕುವೆಂಪು (ಭಾಗ-13) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ರಕ್ತಾಕ್ಷಿ (1932) ನಾಟಕ ಕುರಿತ ಲೇಖನದ ಮುಂದುವರಿದ ಭಾಗ ಕೃತಿಯ ಆರಂಭದ ದೃಶ್ಯವು ಹ್ಯಾಮ್ಲೆಟ್ ಕೃತಿಯ ಆರಂಭವನ್ನು ನೆನಪಿಸುತ್ತದೆ. ಮೊದಲ ಅಂಕದ ಮೊದಲ ದೃಶ್ಯದಲ್ಲಿ ಹಾಲು ಚೆಲ್ಲಿದ ಬೆಳದಿಂಗಳ ರಾತ್ರಿಯಲ್ಲಿ ಕೆಳದಿ ಅರಮನೆಯ ಹೆಬ್ಬಾಗಿಲ ಬಳಿ ಕೆಂಚಣ್ಣನು ಭಯಗೊಂಡವನಂತೆ ಕಾವಲು ತಿರುಗುತ್ತಿದ್ದಾನೆ. ಹಿಂದಿನ ರಾತ್ರಿ ಆತ ಕಾವಲು ತಿರುಗುತ್ತಿದ್ದಾಗ ತೀರಿಕೊಂಡ ದೊರೆ ಬಸಪ್ಪನಾಯಕರಂತೆ ಕಾಣುವ ಭೂತವನ್ನು ಕಂಡು ತತ್ತರಿಸಿ ಮರುದಿನ ಬಿದನೂರಿನ ರಾಜಕುಮಾರ ಬಸವಯ್ಯನ ಆಪ್ತಮಿತ್ರ ಹೊನ್ನಯ್ಯನಿಗೆ ಹೇಳಿದ್ದಾನೆ. ಅದರ ಸತ್ಯಾಸತ್ಯತೆಯನ್ನು ಪರಿಕ್ಷಿಸಲು ಈ ದಿನ ತಾನೇ … Read more

ನಾಟಕಕಾರರಾಗಿ ಕುವೆಂಪು (ಭಾಗ-12) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ರಂಗಾಸಕ್ತ ಓದುಗಪ್ರಭುಗಳೇ, ಸಿದ್ಧಾರ್ಥ ಬುದ್ಧನಾಗುವ ಮಹತ್ವದ ಮತ್ತು ಇಂದಿಗೂ ಆಕರ ಕೃತಿಯಾಗಿ ಶೋಭಾಯಮಾನವಾಗಿರುವ ‘ಮಹಾರಾತ್ರಿ’ ರಂಗಕೃತಿಯಲ್ಲಿ ವ್ಯಕ್ತಿತ್ವವೊಂದು ರೂಪಾಂತರವಾಗುವ ಮಹತ್ವದ ಕಥಾನಕದ ಹಿನ್ನಲೆಯಲ್ಲಿ ಮಹಾಕವಿಗಳು ತಮ್ಮ ಪ್ರಧಾನ ತಾತ್ವಿಕ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ರಾಜಕುಮಾರ ಸಿದ್ಧಾರ್ಥನ ಪಾತ್ರದ ಮೂಲಕ ‘ಜಗಕಾಗಿ ಕಣ್ಣೀರ ಸುರಿಸುವೆನು, ಅದಕಾಗಿ ಸತಿಗಾಗಿ ಕಂಬನಿಯ ಕರೆಯೆ, ಮುಂದೆದೆಯ ಬೆಣ್ಣೆಯನು ಮಾಡಿ, ಇಂದದನು ಕಲ್ಲಾಗಿ ಮಾಡಿ’ ಎಂದು ಹೇಳಿಸುತ್ತಾರೆ. ಇಲ್ಲಿ ಸಿದ್ಧಾರ್ಥನು ವೈಯಕ್ತಿಕ ಭೋಗಕ್ಕಿಂತ ಸಾಮಾಜಿಕ ಸಾಮೂಹಿಕ ಹಿತ ಮುಖ್ಯ ಎಂಬುದು ಬುದ್ಧದೇವನ ಮೂಲಮಂತ್ರವಾಗಿರುವಿಕೆಯನ್ನು … Read more

ನಾಟಕಕಾರರಾಗಿ ಕುವೆಂಪು (ಭಾಗ-11): ಹಿಪ್ಪರಗಿ ಸಿದ್ದರಾಮ್

ಮಹಾಕವಿಗಳ ‘ಬಿರುಗಾಳಿ’ ರಂಗಕೃತಿಯು ಷೇಕ್ಸ್‍ಪಿಯರ್‍ನ ‘ಟೆಂಪೆಸ್ಟ್’ ನಾಟಕದ ಅನುವಾದವಾದರೂ ಇಂಗ್ಲಿಷ ಬಾರದ ಜನರಿಗೆ ಸ್ವತಂತ್ರ ಕೃತಿಯಂತೆ ಕಾಣುತ್ತದೆ. ಮಾನವನ ಮನೋರಂಗದಲ್ಲಿ ಯಾವಾಗಲೂ ದುಷ್ಟ ಶಕ್ತಿ ಮತ್ತು ಶಿಷ್ಟಶಕ್ತಿಗಳ ಹೋರಾಟ ನಿರಂತರ ನಡೆಯುತ್ತಲೇ ಇರುತ್ತದೆ. ಒಂದು ಕಡೆ ಲೋಭ, ಮೋಹ, ಛಲ, ವಂಚನೆ, ಅಹಂಕಾರ ಮೊದಲಾದ ಪಾಶವೀ ಶಕ್ತಿಗಳು, ಮತ್ತೊಂದು ಕಡೆ ತ್ಯಾಗ, ಪ್ರೇಮ, ಕ್ಷಮೆ, ಸತ್ಯ ಶಾಂತಿ ಮೊದಲಾದ ದೈವೀಶಕ್ತಿಗಳು. ಇವುಗಳ ಹೋರಾಟವೇ ಬಾಹ್ಯಪ್ರಪಂಚದಲ್ಲಿ ಯುದ್ಧ, ಕೊಲೆ, ರಕ್ತಪಾತ ಮೊದಲಾದ ಅನಾಹುತಗಳ ರೂಪದಲ್ಲಿ ಪ್ರಕಟಗೊಳ್ಳುತ್ತವೆ. ಈ ಹೋರಾಟದಲ್ಲಿ … Read more

ನಾಟಕಕಾರರಾಗಿ ಕುವೆಂಪು (ಭಾಗ-10): ಹಿಪ್ಪರಗಿ ಸಿದ್ದರಾಮ್

ಆತ್ಮೀಯ ರಂಗಾಸಕ್ತ ಓದುಗಸ್ನೇಹಿತರೇ, ಇಲ್ಲಿಯವರೆಗೆ ಮಹಾಕವಿಗಳ ರಂಗಕೃತಿಗಳ ಪೌರಾಣಿಕ ಲೋಕದಲ್ಲಿ ವಿಹರಿಸುತ್ತಾ, ಅವರ ಪ್ರತಿಭಾಜ್ವಾಲೆಯಲ್ಲಿ ಅರಳಿದ ಹಲವು ಪೌರಾಣಿಕ ಪ್ರಸಂಗಗಳು ಆಧುನಿಕ ರಂಗರೂಪದೊಂದಿಗೆ ಹೊರಹೊಮ್ಮುವುದರೊಂದಿಗೆ, ಇಂದಿಗೂ ಕನ್ನಡ ರಂಗಭೂಮಿಯಲ್ಲಿ ಹೊಸತನಕ್ಕೆ ಪ್ರಚೋಧನಾತ್ಮಕವಾಗಿರುವ ಪೌರಾಣಿಕ ರಂಗಕೃತಿಗಳ ಕುರಿತಾಗಿ ಇಲ್ಲಿಯವರೆಗೆ ನೋಡಿದ್ದೇವೆ. ಮಹಾಕವಿಗಳು ಕೇವಲ ಪೌರಾಣಿಕ ಪ್ರಸಂಗಗಳಿಗೆ ಸೀಮಿತವಾಗದೇ ಮುಂದುವರೆದು ತಮ್ಮ ಲೇಖನಿಯಲ್ಲಿ ಐತಿಹಾಸಿಕ ಕಥನಕಗಳನ್ನು ಸಹ ಹೊಸ ರೂಪಾಂತರದೊಂದಿಗೆ ಇಂದಿನ ಕಾಲದ ರಂಗಕರ್ಮಿಗಳ ಪ್ರತಿಭೆಗೆ ಸವಾಲೊಡ್ಡುವಂತಹ ವಿಷಯಾಧಾರಿತ ಮತ್ತು ಪ್ರಸಂಗಾಧಾರಿವಾದ ರಂಗಕೃತಿಗಳನ್ನು ನೀಡಿದ್ದಾರೆ. ಅವುಗಳನ್ನು ನಾವೀಗ ಅವುಗಳ ರಚನೆಯ … Read more

ನಾಟಕಕಾರರಾಗಿ ಕುವೆಂಪು (ಭಾಗ-9): ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯರೇ, ಈ ಹಿಂದಿನ ಸಂಚಿಕೆಯಲ್ಲಿ ನಾವು ಮಹಾಕವಿಗಳ ‘ಚಂದ್ರಹಾಸ’ ರಂಗಕೃತಿಯ ಕುರಿತು ನೋಡಿದ್ದೇವೆ. ಆ ರಂಗಕೃತಿಯು ಲಕ್ಷ್ಮೀಶನಂತಹ ಪ್ರಾಚೀನ ಕನ್ನಡಕವಿಗಳು ಕಾವ್ಯರೂಪದಲ್ಲಿ (ನಾನು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿದ್ದಾಗ (1986-87) ಚಂದ್ರಹಾಸೋಪಾಖ್ಯಾನದಲ್ಲಿಯ ‘ಚಂದ್ರಹಾಸನ ಬಾಲ್ಯ’ ಭಾಗವು ಪದ್ಯ-ಪಠ್ಯವಾಗಿತ್ತು. ವೈಭವದಿಂದ ಮೆರೆದಾಡಬೇಕಿದ್ದ ಚಂದ್ರಹಾಸನ ದುರ್ದೈವದ ಸ್ಥಿತಿಗೆ, ಆತನನ್ನು ಸಲಹುತ್ತಿರುವ ಮುದುಕಿಯಾಗಿರುವ ರಾಜದಾಸಿಯು ವ್ಯಥೆಪಡುವ ಪ್ರಸಂಗವನ್ನು ದುಃಖಿಸುತ್ತಲೇ ಪಾಠ ಮಾಡಿದ ಗುರುಗಳನ್ನು ಮರೆಯಲಾಗುವುದಿಲ್ಲ) ಚಿತ್ರಿಸಿದ ಕಥಾನಕವನ್ನು ಅದ್ಭುತ ದೃಶ್ಯಾವಳಿಗಳ ಸೃಷ್ಟಿಯೊಂದಿಗೆ ಕಟ್ಟಿಕೊಡುವ ಒಂದು ಪ್ರಯತ್ನವಾಗಿ ಮಹಾಕವಿಗಳು ರಂಗಕೃತಿಯಲ್ಲಿ ಆಕಸ್ಮಿಕಗಳ ಸರಮಾಲೆ, … Read more

ನಾಟಕಕಾರರಾಗಿ ಕುವೆಂಪು (ಭಾಗ-8): ಹಿಪ್ಪರಗಿ ಸಿದ್ದರಾಮ್

ಕಾಡಿನ ಸಂಸ್ಕೃತಿಯಲ್ಲಿ ತನ್ನ ಸೃಜಶೀಲತೆಯನ್ನು ಬೆಳೆಸಿಕೊಂಡ, ವಿದ್ಯೆಯನ್ನು ಅರ್ಜಿಸಿಕೊಂಡ ಏಕಲವ್ಯನು ದ್ರೋಣನನ್ನು ಕಲ್ಪಿತ ಗುರುವನ್ನಾಗಿ ಇಟ್ಟುಕೊಂಡು ಏಕಾಗ್ರತೆಯಿಂದ ವಿದ್ಯೆಯನ್ನು ಗಳಿಸಿದರೂ, ವ್ಯವಸ್ಥೆ ಅದಕ್ಕೆ ಪ್ರತಿಫಲವನ್ನು ಕೇಳುವುದರೊಂದಿಗೆ ಬಲಿ ತೆಗೆದುಕೊಳ್ಳ್ಳುತ್ತದೆ. ಆದರೆ ಇಂತಹ ಅಮಾನುಷ ದೌರ್ಜನ್ಯಗಳಿಗೆ ಮುಂದೊಂದು ದಿನ ತನ್ನ ಪ್ರತಿಕಾರವೊಂದು ಕಾದಿದೆ ಎನ್ನುವ ಧ್ವನಿ/ವಿಚಾರ ತುಂಬ ಶಕ್ತಿಶಾಲಿಯಾದದ್ದು. ಹೀಗಾಗಿ ‘ಶೂದ್ರ ತಪಸ್ವಿ’ ರಂಗಕೃತಿಗಿಂತಲೂ ಭಿನ್ನವಾಗಿ ಕೆಳವರ್ಗದ ಪ್ರತಿಭಟನೆಯ ಇನ್ನೊಂದು ಮಾದರಿ ‘ಬೆರಳ್-ಗೆ-ಕೊರಳ್’ ರಂಗಕೃತಿಯ ಸಂದರ್ಭದಲ್ಲಿ ನಾವು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈ ರಂಗಕೃತಿಯು ಆಗಿನ ಸಂದರ್ಭದಲ್ಲಿ ಆಧುನಿಕ … Read more

ನಾಟಕಕಾರರಾಗಿ ಕುವೆಂಪು (ಭಾಗ-7): ಹಿಪ್ಪರಗಿ ಸಿದ್ದರಾಮ್

ಓರ್ವ ವಿದ್ಯಾವಂತ ಘನ ಬ್ರಾಹ್ಮಣೋತ್ತಮನು ಧರ್ಮಭೀರುವಾಗಿದ್ದರೂ ಪರಂಪರೆಯಿಂದ ಬಂದ ಶಾಸ್ತ್ರದ ಕುರಿತ ಶ್ರದ್ಧೆ ಆತನ ವಿಕಾಸವನ್ನು ಮೊಟಕುಗೊಳಿಸುತ್ತಾ ತನ್ನಂತೆ ಇತರರು ಆಗಬಾರದೆನ್ನುವ ಅಸೂಯಾಗುಣ ಅವನನ್ನು ಹೇಗೆ ಕೆಳಮಟ್ಟಕ್ಕೆ ತಳ್ಳುವದರೊಂದಿಗೆ ಆತನನ್ನು ಹಿಂದೆ-ಮುಂದೆ ಗೊತ್ತಿಲ್ಲದೇ ಬೆಂಬಲಿಸಿದವರೂ ಸಹ ಚಿಕ್ಕವರಾಗುತ್ತಾರೆ ಎಂಬುದರಿಂದ ಹಿಡಿದು ಕೊನೆಯಲ್ಲಿ ತನ್ನ ತಪ್ಪಿನ ಅರಿವಾಗಿ ವಕ್ರಬುದ್ಧಿಯನ್ನು ತಿದ್ದಿಕೊಂಡು ಪಶ್ಚಾತ್ತಾಪ ಪಡುವುದು, ನಂತರದಲ್ಲಿ ಶ್ರೀರಾಮಚಂದ್ರನು ಆದರ್ಶಪ್ರಾಯನಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸುವುದು ಹೀಗೆ ಪೌರಾಣಿಕ ಕಾಲದ ಅಂಧಶ್ರದ್ಧೆಯ ಕಥೆಯೊಂದು, ಮಹಾಕವಿಗಳ ಪ್ರತಿಭಾಲೋಕವನ್ನು ಪ್ರವೇಶಿಸಿ ಹೇಗೆ ಪುನರ್ಜನ್ಮವನ್ನು ಪಡೆದು ಪ್ರಜ್ವಲಿಸುವ ಬೆಳಕನ್ನು … Read more

ನಾಟಕಕಾರರಾಗಿ ಕುವೆಂಪು (ಭಾಗ-6): ಹಿಪ್ಪರಗಿ ಸಿದ್ದರಾಮ್

ಅಲ್ಪನೋರ್ವ ಆಡಿದನೆಂಬ ಕೊಂಕು ಮಾತಿಗೆ ಕಿವಿಗೊಟ್ಟು ಅರಮನೆಯಿಂದಲೇ ಗರ್ಭಿಣಿಯಾಗಿದ್ದ ಅರ್ಧಾಂಗಿಯನ್ನು ಕಾಡಿಗಟ್ಟುವ ಭರತಖಂಡದ ಆದರ್ಶ ವ್ಯಕ್ತಿತ್ವದ ರಾಮನ ವಿವಾದಾಸ್ಪದ ವಿಚಾರದಿಂದ ನಡೆಯುವ ಪ್ರಸಂಗದಲ್ಲಿ ಭಾಗ್ಯಶಾಲಿಯಾದ ರಾಮಾಯಣದ ಪಾತ್ರವೆಂದರೆ ವಾಲ್ಮೀಕಿ ಮಹರ್ಷಿಗಳು. ಮಹಾಕವಿ ಕುವೆಂಪು ಅವರ ತರ್ಕದ ಹಿನ್ನಲೆಯು ಈ ಪ್ರಸಂಗಕ್ಕೆ ಸೂತ್ರಧಾರಕ ಶಕ್ತಿಯಂತೆ ತೋರುವುದರೊಂದಿಗೆ ‘ವಾಲ್ಮೀಕಿಯ ಭಾಗ್ಯವೇ !’ ಎಂದು ರಂಗಕೃತಿಯ ಪ್ರಸಂಗದ ಕೊನೆಯಲ್ಲಿ ಮಹರ್ಷಿಗಳ ಬಾಯಿಯಿಂದಲೇ ಹೇಳಿಸುವುದರೊಂದಿಗೆ ಮಹಾಕವಿಗಳು ಆಧುನಿಕ ರಂಗತಂತ್ರಗಳ ಝಲಕ್ ಎಂಬಂತೆ ಚಮಾತ್ಕಾರಿಕ ಸಂಭಾಷಣೆಯ ಅಂತ್ಯ ನೀಡಿರುವುದನ್ನು ಹಿಂದಿನ ಸಂಚಿಕಯಲ್ಲಿ ನೋಡಿದ್ದೇವೆ. ಈಗ … Read more

ನಾಟಕಕಾರರಾಗಿ ಕುವೆಂಪು (ಭಾಗ-5):ಹಿಪ್ಪರಗಿ ಸಿದ್ದರಾಮ್

1931ರಲ್ಲಿ ರಚನೆಯಾದ ಮಹಾಕವಿ ಕುವೆಂಪರವರ ‘ಸ್ಮಶಾನ ಕುರುಕ್ಷೇತ್ರಂ’ ರಂಗಕೃತಿಯು ಇಂದಿಗೂ ಅತ್ಯಂತ ಪ್ರಸ್ತುತವಾಗುತ್ತಾ, ನಮ್ಮನ್ನು ಸದಾಕಾಲ ಸಾಮಾಜಿಕ ಸನ್ನಿವೇಶಗಳೊಂದಿಗೆ ಅನುಸಂಧಾನ ಮಾಡುವ ಕಥಾವಸ್ತು ಹೊಂದಿರುವ ಈ ರಂಗಕೃತಿಯಲ್ಲಿ ಯುದ್ಧೋತ್ತರ ಮಹಾಭಾರತದ ಚಿತ್ರಣ, ಪಂಪ, ರನ್ನ ಮುಂತಾದ ಕವಿಗಳು ಕುರುಕ್ಷೇತ್ರದ ಯುದ್ಧದ ಕೊನೆಯ ದೃಶ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿರುವುದನ್ನು ತಮ್ಮ ಪ್ರಾಂಜಲ ಮನದಿಂದ ಪರೋಕ್ಷವಾಗಿ ಮಹಾಕವಿಗಳು ಕೃತಜ್ಞತೆಯೊಂದಿಗೆ ಸ್ಮರಿಸಿಕೊಳ್ಳುತ್ತಾರೆ. ಇಂದಿನ ಜಾಗತೀಕರಣೋತ್ತರ ಭಾರತ ಮತ್ತು ಸಮಕಾಲೀನ ಸಂದರ್ಭದ ಜಗತ್ತಿನ ಪ್ರಭಲ ರಾಷ್ಟ್ರಗಳೆಲ್ಲವೂ ಸ್ವರಕ್ಷಣೆಯ ನೆಪದಲ್ಲಿ ಸಿಡಿಮದ್ದು, ಕ್ಷಿಪಣಿಗಳನ್ನು … Read more

ನಾಟಕಕಾರರಾಗಿ ಕುವೆಂಪು (ಭಾಗ-4):ಹಿಪ್ಪರಗಿ ಸಿದ್ದರಾಮ್

  ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ. ಈ ಮೊದಲಿನ ದೃಶ್ಯಗಳಲ್ಲಿ ಕೌರವಕುಲೇಂದ್ರನ್, ಕುರುಪತಿ, ಕೌರವೇಂದ್ರ, ಕುರುಚಕ್ರವರ್ತಿ, ದುರ್ಯೋಧನನೆಂದು ಪಾತ್ರಗಳ ಸಂಭಾಷಣೆಗಳಲ್ಲಿ ಉಲ್ಲೇಖವಾಗುತ್ತಿದ್ದ ಪಾತ್ರವು ರಂಗದಲ್ಲಿ ಬರುವುದರೊಂದಿಗೆ ನಾಟಕವು ಉತ್ತುಂಗಸ್ಥಿತಿಗೇರಿ ಕಳೆಕಟ್ಟಲಾರಂಭಿಸುವುದು ಆರನೇಯ ದೃಶ್ಯದಿಂದ, ರಣಭೂಮಿಯ ಕರಾಳತೆಯು ತುಂಬಿಕೊಂಡಿರುವ ವೈಶಂಪಾಯನ ಸರೋವರದ ದಡದಲ್ಲಿ ಕತ್ತಲೆ ಕವಿದಿರುವಾಗ ಗದಾಯುದ್ಧದಲ್ಲಿ ಕೃಷ್ಣನ ಕುತಂತ್ರದ ಫಲವಾಗಿ ಭೀಮನಿಂದ ತೊಡೆಮುರಿದುಕೊಂಡು ವಿಷಾದದ ನೋವಿನೊಂದಿಗೆ ನೆಲಕ್ಕುರುಳಿರುವ ಅಷ್ಟಾದಶಾಕ್ಷೋಹಿಣೀ ಒಡೆಯನಾಗಿ ಮೆರೆದಾಡಿದ್ದ ಚಕ್ರವರ್ತಿ ದುರ್ಯೋಧನ ಮಹಾರಾಜರು ದೇಸಿಗನಂತೆ ಹೊರಳಾಡುತ್ತಿದ್ದಾರೆ. ‘ಎಲವೋ ಅಗಸ್ತ್ಯ ನಕ್ಷತ್ರವೇ…’ಎಂಬರ್ಥದಲ್ಲಿ ಇದ್ದರೂ ಇಲ್ಲದವನಂತೆ … Read more

ನಾಟಕಕಾರರಾಗಿ ಕುವೆಂಪು (ಭಾಗ-3):ಹಿಪ್ಪರಗಿ ಸಿದ್ದರಾಮ್

  ಹೆಣ್ಣಿನ ಆತ್ಮವಿಶ್ವಾಸ, ಛಲ ಮತ್ತು ಅಸಾಧ್ಯವಾದುದನ್ನು ಸಾಧ್ಯಮಾಡುವ ಶಕ್ತಿಯ ದ್ಯೋತಕವಾದ ಮಹಾಕವಿ ಕುವೆಂಪುರವರ ‘ಯಮನ ಸೋಲು’ ರಂಗಕೃತಿಯಲ್ಲಿ ಪ್ರೇಮಾನುರಾಗವು ಧರ್ಮವನ್ನು ಮೀರಿದುದು ಎಂಬ ಮಾತನ್ನು ಸಾಧಿಸುವುದರೊಂದಿಗೆ ಪ್ರೇಮಮಯಿಯಾದ ಸಾವಿತ್ರಿಗೆ ಯಮರಾಯನು ಸೋತಿದ್ದು ಆಶ್ಚರ್ಯಕರ ಸಂಗತಿಯಲ್ಲ ಎನ್ನುವ ಆಶಾಭಾವದ ನುಡಿಯೊಂದಿಗೆ, ಇಲ್ಲಿ ಯಮರಾಯನ ಸೋಲು ಹೆಣ್ಣಿನ ಆತ್ಮವಿಶ್ವಾಸದ ಮೂಲಕ ಸಾಧ್ಯ ಎಂಬ ವಿಚಾರವನ್ನು ಮಹಾಕವಿಗಳು ಪ್ರಸ್ತುತಪಡಿಸಿರುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈಗ ಮಹಾಕವಿಗಳ ರಂಗಯಾತ್ರೆಯಲ್ಲಿಯ ಮತ್ತೊಂದು ಪೌರಾಣಿಕ ರಂಗಕುಸುಮ ಮತ್ತು ಕಳೆದ ಶತಮಾನದಲ್ಲಿ ಅನೇಕ ವೃತ್ತಿನಾಟಕ ಕಂಪನಿಯ … Read more

ನಾಟಕಕಾರರಾಗಿ ಕುವೆಂಪು (ಭಾಗ-2): ಹಿಪ್ಪರಗಿ ಸಿದ್ದರಾಮ್

  ಕುವೆಂಪುರವರ ನಾಟಕ(ರಂಗಕೃತಿ)ಗಳು :  ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಮಕ್ಕಳ ರಂಗಭೂಮಿಗಾಗಿ ಕುವೆಂಪುರವರು ಸರಿಸುಮಾರು ಹದಿನಾಲ್ಕು ನಾಟಕ(ರಂಗಕೃತಿ)ಗಳನ್ನು ರಚಿಸಿದ್ದಾರೆ. ಪ್ರತಿಯೊಂದರಲ್ಲಿಯ ವಸ್ತುವೈವಿಧ್ಯತೆಗಳನ್ನು ಆಯ್ಕೆ ಮಾಡಿಕೊಂಡಿರುವುದು ನಾವು ಗಮನಿಸಿದರೆ ಕನ್ನಡ ರಂಗಸಾಹಿತ್ಯದ ಬೆಳವಣಿಗೆಯ ಆಯಾ ಕಾಲಘಟ್ಟವನ್ನು ಪರಿಚಯಿಸಿಕೊಂಡ ಅನುಭವವಾಗುತ್ತದೆ. ತಮ್ಮ ಸೃಜಶೀಲತೆಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ರಂಗಭೂಮಿಯನ್ನು ಬಳಸಿಕೊಂಡಿರುವುದು ಮಹಾಕವಿಗಳ ಶ್ರೇಷ್ಟತೆಯನ್ನು ತೋರಿಸುತ್ತದೆ. ಪಾತ್ರ ಪೋಷಣೆ, ಸಂಭಾಷಣೆಯ ತಂತ್ರ, ದೃಶ್ಯಗಳ ಜೋಡಣೆ, ಹಳೆಗನ್ನಡ/ನಡುಗನ್ನಡ ಶೈಲಿಯ ಛಂದಸ್ಸಿನ ಶೈಲಿಯ ಸರಳ ರಗಳೆಯಂತಿರುವ ಸಂಭಾಷಣೆ ಹಾಗೂ ಹಾಡುಗಳಂತಹ ಸಾಹಿತ್ಯದ ಹಲವಾರು ಪ್ರಕಾರಗಳನ್ನು … Read more

ನಾಟಕಕಾರರಾಗಿ ಕುವೆಂಪು (ಭಾಗ-1): ಹಿಪ್ಪರಗಿ ಸಿದ್ದರಾಮ್

  ಸಮೃದ್ಧ ಕನ್ನಡ ಸಾಹಿತ್ಯ ಪ್ರಕಾರದ ಬೆಳವಣಿಗೆಯಲ್ಲಿ ಇಪ್ಪತ್ತನೆಯ ಶತಮಾನವೆಂಬುದು ಹಲವಾರು ದೃಷ್ಟಿಕೋನಗಳಿಂದ ವಿಶಿಷ್ಟ ಮತ್ತು ಅಪರೂಪದ ನವೋದಯ ಕಾಲವಾಗಿ ಬೆಳೆದಿರುವುದು ಸಾಹಿತ್ಯಾಸಕ್ತರಿಗೆ ಗೊತ್ತಿರುವ ಸಂಗತಿಯಾಗಿದೆ. ಆಂಗ್ಲರ ಆಳಿಕೆಯ ದೆಸೆಯಿಂದಾಗಿ ಭಾಷೆಯೆಂಬ ಸಂವಹನ ಸಾಧನದ ಮೂಲಕ ಪಡೆದುಕೊಂಡ ಪರಿಜ್ಞಾನದ ವಿವಿಧ ಮಗ್ಗಲುಗಳು ದೇಶದ ಪ್ರಜ್ಞಾವಂತರ ಮನಸ್ಸನ್ನು ತಾಕಿದ್ದು ಸುಳ್ಳೇನಲ್ಲ. ಇದರ ಪರಿಣಾಮವಾಗಿ ಸಾಹಿತ್ಯಕ್ಷೇತ್ರವೂ ಪ್ರಚೋಧಿತವಾದಂತಾಯಿತು. ಸಾಹಿತ್ಯವು  ಹಲವಾರು ಮಗ್ಗಲುಗಳನ್ನು ಕಂಡುಕೊಂಡಂತೆ ರಂಗಭೂಮಿಯಲ್ಲಿಯೂ ವಿವಿಧ ಪ್ರಕಾರದ ವಿಭಿನ್ನ ಪ್ರದರ್ಶನ-ಪ್ರಯೋಗಗಳು ಚಾಲ್ತಿಗೆ ಬಂದು, ಸಾಹಿತಿಗಳು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೇ … Read more