“ಕತ್ತಲ ಹೂವು” ನೀಳ್ಗತೆ (ಕೊನೆಯ ಭಾಗ): ಎಂ.ಜವರಾಜ್

ಚೆನ್ನಬಸವಿ ಸತ್ತು ವರ್ಷದ ಮೇಲಾಯ್ತು. ಒಂದೆರಡು ವರ್ಷಗಳಿಂದ ಹೊಟ್ಟೆ ನೋವು ಸುಸ್ತು ಸಂಕ್ಟ ವಾಂತಿ ಬೇಧಿ ಬಾಧೆಯಿಂದ ನರಳುತ್ತ ಮಲಗಿದ ಮಗ್ಗುಲಲ್ಲೇ ಹೇಲು ಉಚ್ಚೆ ಎಲ್ಲನು ಮಾಡಿಕೊಳ್ಳುತ್ತಿದ್ದಳು. ಇದನ್ನು ನೋಡಿ ಸೊಸೆ ‘ತೂ ಛೀ..’ ಅಂತ ರೇಗ್ತಾ ಉಗಿತಾ ಮಲಗಿದ್ದವಳನ್ನು ಎತ್ತಿ ದರದರ ಎಳೆದು ಜಾಡಿಸಿ ಒದ್ದು ಮನೆಯಿಂದ ಹೊರಕ್ಕೆ ಬಿಸಾಕಿದ್ದಳು. ಮೊಕ್ಕತ್ತಲ ಬೆನ್ನಿಗೆ ಬಂದ ಸಿದ್ದೇಶ ಕುಡಿದ ಮತ್ತಿನಲ್ಲಿ ‘ಅವ್ವುನ್ಗ ಈತರ ಮಾಡಿದ್ದಯಲ್ಲ ಲೌಡಿಮುಂಡ’ ಅಂತ ಹೆಂಡತಿ ಮುಂದಲೆ ಹಿಡಿದು ಬೀದಿಲಿ ನಿಲ್ಸಿ ಒದ್ದಿದ್ದ. ಅವಳು … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೫): ಎಂ.ಜವರಾಜ್

ಮಲೆ ಮಾದೇಶ್ವರನ ಬೆಟ್ಟದಿಂದ ಬಂದ ಶಂಭುಲಿಂಗೇಶ್ವರ ಮಲ್ಲಿಕಾರ್ಜುನ ಬಸ್ಸುಗಳು ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿದ್ದ ಹುಣಸೇಮರ ತೋಪಿನ ಸೈಡಿನಲ್ಲಿ ನಿಂತಾಗ ರಾತ್ರಿ ಎಂಟಾಗಿತ್ತು.ಬಸ್ಸೊಳಗೆ ಕುಂತು ನಿಂತವರನ್ನು ನಿದ್ರಾದೇವಿ ಆತುಕೊಂಡು ಡ್ರೈವರ್ ಕ್ಲೀನರನ ಕೂಗಿಗೆ ಲಗುಬಗೆಯಿಂದ ಎದ್ದರೆ ಇನ್ನು ಕೆಲವರು ಆಕಳಿಸುತ್ತಲೇ ಕಣ್ಣು ಮುಚ್ಚಿ ಹಾಗೇ ಒರಗುತ್ತಿದ್ದರು. ಕ್ಲೀನರು ಇಳಿರಿ ಇಳಿರಿ ಟೇಮಾಗುತ್ತ ಅಂತ ಎಲ್ಲರನ್ನು ಏಳಿಸಿ ಇಳಿಸಿ ರೈಟ್ ರೈಟ್ ಅಂತ ಬಾಯಲ್ಲೇ ನಾಲಿಗೆ ಮಡಚಿ ಒಂದು ಜೋರು ವಿಶೆಲ್ ಹಾಕಿದೇಟಿಗೆ ಜಗನ್ ಜಾತ್ರೆಯಂತಿದ್ದ ಜನಗಳ … Read more

ಬೊಗಸೆ ಬರ್ನಾರ್ಡ್: ಎಫ್.ಎಂ.ನಂದಗಾವ್

ಮೈಸೂರಿನ ನಂದಿತ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿರುವ, ಎಫ್.ಎಂ.ನಂದಗಾವ ಅವರ ಹೊಸ ಕಥಾ ಸಂಕಲನ ಇನ್ನಾಸಪ್ಪ ಮತ್ತು ಬಂಡೆಗಳು’ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಅದರಲ್ಲಿ ಒಟ್ಟು ಹತ್ತು ಕತೆಗಳಿದ್ದು, ಅವುಗಳಲ್ಲಿನ ಕೆಲವು ನಾಡಿನ ಹಲವಾರು ಪತ್ರಿಕೆಗಳಲ್ಲಿ ಈಗಾಗಲೆ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ. ಪ್ರಸ್ತುತಇನ್ನಾಸಪ್ಪ ಮತ್ತು ಬಂಡೆಗಳು’ ಕಥಾ ಸಂಕಲನದಲ್ಲಿನ ಬೊಗಸೆ ಬರ್ನಾರ್ಡ್’ ಕತೆಪಂಜು’ವಿನ ಓದುಗರಿಗಾಗಿ.. ಮೇ ತಿಂಗಳ ಸೂಟಿ. ದೊಡ್ಡಪ್ಪ ಇರುವ ಊರಿಗೆ ಬಂದಿದ್ದೆ. ಅಲ್ಲಿ ಬಿಸಿಲೋ ಕಡುಬಿಸಿಲೋ ಒಂದೂ ಗೊತ್ತಾಗುತ್ತಿರಲಿಲ್ಲ. ಫಂಕಾ ಹಾಕಿಕೊಂಡರೆ ಬಿಸಿ ಬಿಸಿ ಗಾಳಿ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೪): ಎಂ.ಜವರಾಜ್

ಒಂಭತ್ತನೇ ಅಟೆಂಪ್ಟ್ ನಲ್ಲಿ ಎಸೆಸೆಲ್ಸಿ ಪಾಸು ಮಾಡಿದ ಚಂದ್ರ ಊರಲ್ಲಿ ಬೀಗುತ್ತಿದ್ದ. ಅವನ ಕಾಲು ನಿಂತಲ್ಲಿ ನಿಲ್ಲುತ್ತಿಲ್ಲ. ‘ಲೆ ಇವ್ನೆ ಎಸ್ಸೆಲ್ಸಿ ಪಾಸ್ ಮಾಡ್ಬುಟೆಂತ್ಯಾ ಸಕ್ರ ಬಾಳೆಣ್ಣು ಕೊಡಲ್ವ’ ಅಂತ ರೇಗಿಸಿದರೆ ಉಬ್ಬಿ ‘ಊ್ಞ ಕೊಡ್ತಿನಿ ಇರಿ’ ಅಂತ ಛಂಗನೆ ನೆಗೆದು ಓಡಿಬಿಡುತ್ತಿದ್ದ. ಈಗವನು ಅವನಣ್ಣ ಸೂರಿ ಮುಂದೆ ಹೆದರಿಕೆ ಇಲ್ಲದೆ ಕುಂತ್ಕತಿದ್ದ ನಿಂತ್ಕತಿದ್ದ ಮಾತಾಡ್ತಿದ್ದ. ಸೂರಿನು ತಮ್ಮನ ಎಸೆಸೆಲ್ಸಿ ಪಾಸಾದದ್ದನ್ನು ತನ್ನ ಜೊತೆಗಾರರಿಗೆ ‘ಅವ್ನ ಎಲ್ಯಾರ ಸೇರುಸ್ಬೇಕು. ಅಂತು ಇಂತು ಪಾಸಾಯ್ತಲ್ಲ’ ಅಂತ ಹೇಳ್ತ ಇದ್ದುದು … Read more

ವೆಂಕಿ ಬಂದನೇ?: ಸುವ್ರತಾ ಅಡಿಗ ಮಣೂರು

ವೆಂಕಿ ಬರ್ತಾನೆ ಅಂತ ಹೇಳಿದ್ದ, ಇನ್ನು ಬಂದಿಲ್ಲ. ಕಳೆದ ಭಾನುವಾರ ಅವನ ಸೊಸೆಯ ಫೋನಿಗೆ ಕಾಲ್ ಮಾಡಿದ್ದೆ. ʻಪದೇ ಪದೇ ಕಾಲ್ ಮಾಡ್ಬೇಡ್ವೋ ಇವರಿಗೆ ಕಿರಿಕಿರಿ ಆಗುತ್ತೆʼ ಅಂತ ಹೇಳಿದ್ದ. ಮುಂದಿನ ಭಾನ್ವಾರ ಬರ್ತಿನಿ ಅಂತ ಹೇಳಿದ್ದ. ಇನ್ನೂ ಬಂದಿಲ್ವಲ್ಲ ಎಂದುಕೊಳ್ಳುತ್ತಾ ರಾಯರು, ಬಾಗಿಲು ತೆರೆದು ನೋಡಿದರು.“ಮಾವ … ಧೂಳ್ ಬರುತ್ತೆ ಬಾಗಿಲು ಹಾಕಿ” ಎಂದು ಅಡುಗೆ ಮನೆಯಿಂದ ಸುಮ ಕೂಗಿಕೊಂಡಳು.ಅಬ್ಬ.. ಅವಳ ಕಿವಿ ಎಷ್ಟು ಚುರುಕು. ಎಲ್ಲವೂ ಕೇಳಿಸುತ್ತೆ, ಹಿಂದೊಮ್ಮೆ ವೆಂಕಿ ಬಂದಾಗ, ನಾವು ನಿಧಾನವಾಗಿಯೆ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೩): ಎಂ.ಜವರಾಜ್

ಭಾಗ – 13 ಬೆಳಗ್ಗೆ ನಾಲ್ಕರ ಹೊತ್ತು. ಹುಣಸೇ ಮರದ ಬೊಡ್ಡೆಯಲ್ಲಿ ಚಳಿಗೆ ರಗ್ಗು ಮುದುಡಿ ಮಲಗಿದ್ದ ದೊಡ್ಡಬಸವಯ್ಯನ ಕಿವಿಗೆ – ಅಲ್ಲಿ ನಿಂತರೆ ಎಲ್ಲವೂ ಕಾಣುವ, ದೂರದಲ್ಲಿದ್ದ ಸೇತುವೆ ದಾಟಿ ಸ್ವಲ್ಪ ಮುಂದೆ ಹೋದರೆ ಅಗಸ್ತೇಶ್ವರ ದೇವಸ್ಥಾನದ ಗೋಪುರದಲ್ಲಿ ಕಟ್ಟಿದ್ದ ರೇಡಿಯೋದಲ್ಲಿ “ಶಿವಪ್ಪ ಕಾಯೊ ತಂದೆ ಮೂ ಲೋಕ ಸ್ವಾಮಿದೇವ” ಹಾಡು ಕೇಳಿತು. ಹಾಡು ಕೇಳುತ್ತ ಕೇಳುತ್ತ ಮುಸುಕು ತೆಗೆದು ಕಣ್ಣಾಡಿಸಿದ. ಇನ್ನೂ ನಿದ್ದೆಯ ಮಂಪರು. ಕಣ್ಣಿಗೆ ಕತ್ತಲು ಕತ್ತಲಾಗಿ ಕಂಡಿತು. ಅಲ್ಲೆ ಕಣ್ಣಳತೇಲಿ ಬೇಲಿಗೆ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೨): ಎಂ.ಜವರಾಜ್

ಭಾಗ – 12 ಚೆನ್ನಬಸವಿ ಚೆಲ್ಲಿಕೊಂಡ ಕವ್ಡಗಳನ್ನೇ ನೋಡುತ್ತಲೇ ತುಟಿ ಕುಣಿಸುತ್ತ ಕೈಬೆರಳು ಒತ್ತಿ ಎಣಿಸುತ್ತಿದ್ದ ಕಡ್ಡಬುಡ್ಡಯ್ಯ ಹೇಳುವ ಮಾತಿಗೆ ಕಾದಂತೆ ಕಂಡಳು. ಬಿಸಿಲು ರವ್ಗುಟ್ಟುತ್ತಲೇ ಇತ್ತು. ಆಗ ಹರಿದ ಲುಂಗಿ ಎತ್ತಿಕಟ್ಟುತ್ತ ಪಣ್ಣನೆ ಜಗುಲಿಗೆ ನೆಗೆದ ಚಂದ್ರ ಬಾಗಿಲತ್ತಿರ ಹೋದವನಿಗೆ ಕಂಚಿನ ತಣಗಕ್ಕೆ  ತಂಗ್ಳಿಟ್ಟು ಹಾಕಂಡು, ಅದಕ್ಕೆ ಈರುಳ್ಳಿ ಉಪ್ಪು ಬೆರುಸ್ಕೊಂಡು, ನೀರು ಉಯ್ಕಂಡು ಕಲಸಿ ಕಲಸಿ ಅಂಬ್ಲಿತರ ಮಾಡ್ಕಂಡು ಸೊರಸೊರ ಅಂತ ಕುಡೀತಿದ್ದ ಸೂರಿ ಕಂಡೊಡನೆ ಹೆದರಿ ಪಣ್ಣಂತ ಕೆಳಕ್ಕೆ ನೆಗೆದು ನೀಲ ನಿಂತಿದ್ದ … Read more

ತಮವ ಕಳೆದಾಗ: ಶೇಖರಗೌಡ ವೀ ಸರನಾಡಗೌಡರ್

ಸಿಲಿಕಾನ್ ಸಿಟಿ ಬೃಹತ್ ಬೆಂಗಳೂರು ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ “ಮಧುವನ” ಕಾಲೋನಿಯ “ಅನಿರೀಕ್ಷಿತಾ” ಅಪಾರ್ಟಮೆಂಟಿನಲ್ಲಿ ವಾಸಿಸುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ರಾಹುಲ್ ಪಕ್ಕದ ಕಾಲೋನಿಯಲ್ಲಿ “ಸರಳ ಯೋಗ ಸಂಸ್ಥೆ”ಯವರು ಆಯೋಜಿಸಿದ್ದ ಹತ್ತು ದಿನಗಳ ಯೋಗ ಶಿಬಿರದಲ್ಲಿ ಭಾಗವಹಿಸಲು ತನ್ನ ಹೆಸರನ್ನು ನೊಂದಾಯಿಸಿದ್ದ. “ಧ್ಯಾನ, ಪ್ರಾಣಾಯಾಮ, ಭಕ್ತಿಯೋಗ, ಆಹಾರ ಪದ್ಧತಿ, ವ್ಯಕ್ತಿತ್ವ ವಿಕಸನ ಮತ್ತು ಸಾರ್ಥಕ ಜೀವನಕ್ಕಾಗಿ ಯೋಗ. ಅಲರ್ಜಿ, ಅಸ್ಥಮಾ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸಂಧಿವಾತಗಳಂಥಹ ರೋಗಗಳನ್ನು ದೂರವಿಡುವುದಕ್ಕೆ ಯೋಗ. ಪೂಜ್ಯ ವಿವೇಕಾನಂದ ಗುರೂಜಿಯವರ ಅಮೃತವಾಣಿಯ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೧): ಎಂ.ಜವರಾಜ್

ಭಾಗ – 11 ಈಗ ಚೆನ್ನಬಸವಿ ಮೊದಲಿನಂತಿಲ್ಲ. ಅಲ್ಲಿ ಇಲ್ಲಿ ಸುತ್ತುವುದೂ ಕಮ್ಮಿಯಾಗಿತ್ತು. ಹೊಟ್ಟೆನೋವು, ಮೈ ಕೈ ನೋವು, ಸುಸ್ತು ಸಂಕ್ಟದ ಮಾತಾಡುತ್ತಿದ್ದಳು. ಯಾರಾದರು ಸುಮ್ನೆ “ಇದ್ಯಾಕಕ್ಕ” ಅಂತ ಕೇಳಿದರೆ “ನಂಗ ಯಾರ ಏನಾ ಕೆಟ್ಟದ್ ಮಾಡರ.. ಅದ್ಕೆ ಏನ್ ಮಾಡುದ್ರು ನನ್ ಸಂಕ್ಟ ನಿಲ್ದು” ಅಂತ ನಟಿಕೆ ಮುರಿದು ಶಾಪಾಕ್ತ ದೇವ್ರು ದಿಂಡ್ರು ಅಂತ ಮಾಡೋಕೆ ಶುರು ಮಾಡಿದ್ದಳು. ಊರಿನಲ್ಲಿ ಒಬ್ಬ ಗೋವಿಂದ ಅಂತ. ಅವನು ನಿಧಾನಕ್ಕೆ ಜಬರ‌್ದಸ್ತ್ ಪುಡಾರಿಯಾಗಿ ಬೆಳೀತಿದ್ದ. ಊರಾಚೆ ದೊಡ್ಡ ಮನೆಯನ್ನೇ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೦): ಎಂ.ಜವರಾಜ್

ಭಾಗ – 10 ನೀಲಳ ಅಪ್ಪ ನಿಂಗಯ್ಯನಿಗೆ ದಮ್ಮು ಸೂಲು ಬಂದು ಏನು ಮಾಡಿದರು ಆಗದೆ ಸತ್ತು ಹೋಗಿ ಈಗ್ಗೆ ಮೂರ‌್ನಾಕು ವರ್ಷಗಳೇ ಆಗಿದ್ದವು. ನೀಲಳ ಕೂದಲು ನೆರೆದು ತಲೆ ಕೂದಲು ಗಂಟುಗಂಟಾಗಿ ಗಟ್ಟಿಯಾಗಿ ಬೆಳ್ಳಗೆ ಕರ‌್ರಗೆ ಮಿಕ್ಸ್ ಆಗಿರೋ ತರ ಆಗಿ ಜಡೆ ಜಡೆಯಾಗಿತ್ತು. ಸುಶೀಲ ಎರಡನೆಯದರ ಮಗೂಗೆ ಬಾಣಂತನಕ್ಕೆ ಬಂದು ಕುಂತಿದ್ದಳು. ಪೋಲಿ ಅಲೀತಿದ್ದ ಸಿದ್ದೇಶನ ಮದ್ವೆ ಮಾತುಕತೆಗಳು ನಡೆದಿದ್ದವು. ಶಿವಯ್ಯ ತನ್ನ ಹನ್ನೊಂದು ಮಕ್ಕಳ ಪೈಕಿ ಗಂಡು ಮಕ್ಕಳು ಬಿಟ್ಟು ಉಳಿದ ಹೆಣ್ಣು … Read more

“ಕತ್ತಲ ಹೂವು” ನೀಳ್ಗತೆ (ಭಾಗ ೯): ಎಂ.ಜವರಾಜ್

ಭಾಗ -9 ಅವತ್ತು ಅಡಿನಿಂಗಿ ಸಿಲ್ಕ್ ಫ್ಯಾಕ್ಟರಿ ಕಾಂಪೌಂಡ್ ಮೂಲೇಲಿದ್ದ ಮರದ ಕೆಳಗೆ ನೀಲ ಶಿವನಂಜ ನಿಂತಿದ್ದು ನೋಡಿ ಲಕಲಕ ಅಂತ ಊರಿಗೇ ಗೊತ್ತಾಗುವಂತೆ ಮಾತಾಡಿದ್ದಾಯ್ತು. ಆಮೇಲೆ ಏನಾಯ್ತು… ಅವತ್ತೊಂದಿನ ನಡು ಮದ್ಯಾಹ್ನ. ನೀಲ ಕಾಲೇಜು ಮುಗಿಸಿ ಒಬ್ಬಳೇ ಬರುತ್ತಿದ್ದಳು. ನಸರುಲ್ಲಾ ಸಾಬರ ಭತ್ತದ ಮಿಲ್ ಕಾಂಪೌಂಡ್ ಕ್ರಾಸ್ ಹತ್ರ ಟ್ರಿಣ್ ಟ್ರಿಣ್ ಅಂತ ಬೆಲ್ಲು ಮಾಡುತ್ತಾ ಸೈಕಲ್ ಏರಿ ಬಂದ ಶಿವನಂಜ ಸರ‌್ರನೆ ಸೈಕಲ್ ನಿಂದ ಇಳಿದು ಅವಳ ಹೆಜ್ಜೆಗೆ ಹೆಜ್ಜೆ ಹಾಕ್ತ ಸೈಕಲ್ ತಳ್ಳಿಕೊಂಡು … Read more

“ಕತ್ತಲ ಹೂವು” ನೀಳ್ಗತೆ (ಭಾಗ ೮): ಎಂ.ಜವರಾಜ್

ಭಾಗ – ೮ ಶಿವಯ್ಯನ ಅವ್ವ ಅಡಿನಿಂಗಿ ಸತ್ತು ಎರಡು ಎರಡೂವರೆ ವರ್ಷವೇ ಕಳೆದಿತ್ತು. ಅಡಿನಿಂಗಿ ಮಲಗುತ್ತಿದ್ದ ರೂಮೀಗ ಶಿವಯ್ಯನ ಹಿರೀಮಗನ ಓದಕೆ ಮಲಗಾಕೆ ಆಗಿತ್ತು. ಚಂದ್ರ ತನ್ನ ಅಣ್ಣನ ರೂಮಿಗೆ ಹೋಗಿ ಅವನ ಪುಸ್ತಕಗಳನ್ನು ಎತ್ತಿ ಎತ್ತಿ ನೋಡುತ್ತಿದ್ದ. ಒಂದು ಉದ್ದದ ಬೈಂಡಿತ್ತು. ಅದರ ಮೇಲೆ ಉದ್ದವಾದ ಮರದ ಸ್ಕೇಲಿತ್ತು. ಜಾಮಿಟ್ರಿ ಬಾಕ್ಸಿತ್ತು. ಮೂಲೇಲೆ ಒಂದು ದಿಂಡುಗಲ್ಲಿನ ಮೇಲೆ ಗ್ಲೋಬ್ ಇತ್ತು. ಅದನ್ನು ತಿರುಗಿಸಿದ. ಗೋಡೆಯಲ್ಲಿ ಇಂಡಿಯಾ ಮ್ಯಾಪು ಗಾಂಧೀಜಿ ಫೋಟೋ ತಗಲಾಗಿತ್ತು. ಹೊರಗೆ ಅಣ್ಣನ … Read more

ಚಾಕು ಹಿಡಿದು ನಿಲ್ಲುತ್ತಾನೆ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ಅವಳು ಯಾರ್ಯಾರೋ ಸುರಸುಂದರಾಂಗರು ಉನ್ನತ ಉದ್ಯೋಗದವರು ಬಂದರೂ ಬೇಡ ನನಿಗೆ ಇಂಜಿನಿಯರೇಬೇಕು ಎಂದು ಬಂದವರೆಲ್ಲರನ್ನು ನಿರಾಕರಿಸಿದಳು. ಕೊನೆಗೆ ಒಬ್ಬ ಇಂಜಿನಿಯರ್ ಒಪ್ಪಿಗೆಯಾದ. ಅವನಿಗೂ ಒಪ್ಪಿಗೆಯಾದಳು. ಮದುವೆಯೂ ಆಯಿತು. ಕಂಪನಿ ಕೊಟ್ಟ ಕಡಿಮೆ ರಜೆಯನ್ನು ಅತ್ತೆ ಮಾವರ, ನೆಂಟರಿಷ್ಟರ ಮನೆಯಂತೆ ಹನಿಮೂನಂತೆ ಅಂತ ಎಲ್ಲಾ ಸುತ್ತಿ ಮುಗಿಸಿದರು. ಎಲ್ಲಾ ಸುತ್ತಾಡಿದಮೇಲೆ ಉದ್ಯೋಗದ ಕೇಂದ್ರ ಸ್ಥಾನವನ್ನು ಬಂದು ಸೇರಲೇಬೇಕಲ್ಲ? ಇಬ್ಬರೂ ಪ್ರತಿದಿನ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದರು. ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಮನೆಬಿಟ್ಟು ಸಂಜೆ 6 ಗಂಟೆಗೆ ಮನೆಗೆ ಬರುತ್ತಿದ್ದರು. … Read more

ಪ್ರತಿ ಸಾವಿನ ಹಿಂದೆ: ಅಶ್ಫಾಕ್ ಪೀರಜಾದೆ

ಸಮೃದ್ಧವಾದ ಜಾನುವಾರು ಸಂಪತ್ತು ಹೊಂದಿದ್ದ ಜನಪದ ಜಗತ್ತು ಅಕ್ಷರಶಃ ತತ್ತರಿಸಿ ಹೋಗಿತ್ತು. ದನಕರುಗಳು ರಾಶಿ ರಾಶಿಯಾಗಿ ಉಸಿರು ಚೆಲ್ಲುತ್ತಿದ್ದವು. ಮೃತ ದೇಹಗಳನ್ನು ಜೇಸಿಬಿ ಬಳಸಿ ಭೂಮಿಯೊಡಲಿಗೆ ನೂಕಲಾಗುತ್ತಿತ್ತು. ಪ್ರಾಣಿಗಳ ಮೂಕ ರೋಧನ ಆ ಭಗವಂತನಿಗೂ ಕೇಳಿಸದಾಗಿ ಆ ದೇವರು ಎನ್ನುವ ಸೃಷ್ಟಿಯೇ ಸುಳ್ಳು ಎನ್ನುವ ಕಲ್ಪನೆ ರೈತಾಪಿ ಜನರಲ್ಲಿ ಮೂಡುವಂತಾಗಿತ್ತು. ಇಂಥ ಒಂದು ಭಯಾನಕ ದುಸ್ಥಿತಿ ಹಿಂದೆಂದೂ ಕಂಡು ಬಂದಿರಲಿಲ್ಲ. ಇಡೀ ರೈತ ಸಮುದಾಯ ಆತಂಕದ ಸ್ಥಿತಿಯಲ್ಲಿ ಕಣ್ಣೀರು ಸುರಿಸುತ್ತ ಕಂಗಾಲಾಗಿ ಕುಳಿತಿದ್ದರೆ ಪಶು ವೈದ್ಯ ಲೋಕ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೭): ಎಂ.ಜವರಾಜ್

ಭಾಗ 7 ದಂಡಿನ ಮಾರಿಗುಡಿಲಿ ಕುಣೀತಿದ್ದ ನೀಲಳಿಗೆ ಅವಳ ಅವ್ವ ಸ್ಯಬ್ಬದಲ್ಲಿ ಹೊಡೆದು ಕೆಂಗಣ್ಣು ಬಿಟ್ಟು ಕೆಂಡಕಾರಿದ್ದು ಕಂಡು ದಿಗಿಲುಗೊಂಡ ಚಂದ್ರ ನಿಧಾನಕೆ ಮುಂಡಗಳ್ಳಿ ಬೇಲಿ ಮರೆಯಲ್ಲೇ ಸಾವರಿಸಿಕೊಂಡು ದೊಡ್ಡವ್ವನ ಹಿಂದೆಯೇ ಬಂದು ನಿಂತಿದ್ದ. ಅವನ ಕಿರಿ ತಮ್ಮ ಗೊಣ್ಣೆ ಸುರಿಸಿಕೊಂಡು ಚಂದ್ರನ ತಲೆಯನ್ನು ಸಸ್ದು ಸಸ್ದು ದಂಡಿನ ಮಾರಿಗುಡಿಗೇ ಕರೆದುಕೊಂಡು ಹೋಗುವಂತೆ ಆಕಾಶ ಭೂಮಿ ಒಂದಾಗ ತರ ಕಿಟಾರನೆ ಕಿರುಚುತ್ತ ಕಣ್ಣೀರು ಹರಿಸುತ್ತ ಗೋಳೋ ಅಂತ ಅಳುತ್ತಿತ್ತು. ಚಂದ್ರ ಸಿಟ್ಟುಗೊಂಡು ಅಳುತ್ತಿದ್ದ ತಮ್ಮನನ್ನು ಸೊಂಟದಿಂದ ಕೆಳಗಿಳಿಸಿ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೬): ಎಂ.ಜವರಾಜ್

ಭಾಗ – 6 ದಂಡಿನ ಮಾರಿಗುಡಿಲಿ ಹಾಕಿರೊ ಮೈಕ್ ಸೆಟ್ಟಿಂದ ಪರಾಜಿತ ಪಿಚ್ಚರ್ ನ ‘ಸುತ್ತ ಮುತ್ತಲು ಸಂಜೆ ಗತ್ತಲು..’ ಹಾಡು ಮೊಳಗುತ್ತಿತ್ತು. ಸುಣ್ಣಬಣ್ಣ ಬಳಿದುಕೊಂಡು ಹೊಳೆಯುತ್ತಿದ್ದ ಮಾರಿಗುಡಿ ಮುಂದೆ ಐಕ್ಳುಮಕ್ಳು ಆ ಹಾಡಿಗೆ ಥಕ್ಕಥಕ್ಕ ಅಂತ ಕುಣಿಯುತ್ತಿದ್ದವು. ಅವುಗಳೊಂದಿಗೆ ಕಿಸಿಕಿಸಿ ಅಂತ ಪಾಚಿ ಕಟ್ಟಿಕೊಂಡಿದ್ದ ಹಲ್ಲು ಬಿಡುತ್ತ ನೀಲಳೂ ಕುಣಿಯುತ್ತಿದ್ದಳು. ಈ ಐಕಳು ಕುಣಿಯುತ್ತಾ ಕುಣಿಯುತ್ತಾ ಗುಂಪು ಗುಂಪಾಗಿ ಒತ್ತರಿಸಿ ಒತ್ತರಿಸಿ ಅವಳನ್ನು ಬೇಕಂತಲೇ ತಳ್ಳಿ ಇನ್ನಷ್ಟು ಒತ್ತರಿಸಿ ನಗಾಡುತ್ತಾ ಎಂಜಾಯ್ ಮಾಡುತ್ತಿದ್ದವು. ನೀಲಳು ಆ … Read more

ಸ್ವಾಮ್ಯಾರ `ಸೌಜನ್ಯ’ : ಎಫ್. ಎಂ. ನಂದಗಾವ

ಬೆಂಗಳೂರಿನ ಸಂಚಲನ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿರುವ, ಎಫ್. ಎಂ. ನಂದಗಾವ ಅವರ ಹೊಸ ಕಥಾ ಸಂಕಲನ ಘಟ ಉರುಳಿತು’ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಅದರಲ್ಲಿ ಒಟ್ಟು ಹತ್ತು ಕತೆಗಳಿದ್ದು, ಅವುಗಳಲ್ಲಿನ ಕೆಲವು ನಾಡಿನ ಹಲವಾರು ಪತ್ರಿಕೆಗಳಲ್ಲಿ ಈಗಾಗಲೆ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ. ಪ್ರಸ್ತುತಘಟ ಉರುಳಿತು’ ಕಥಾ ಸಂಕಲನದಲ್ಲಿನ ಸ್ವಾಮ್ಯಾರ ಸೌಜನ್ಯ’ ಕತೆ ‘ಪಂಜು’ವಿನ ಓದುಗರಿಗಾಗಿ. . “ಊರಾಗ, ಬಾಳ ಅನ್ಯಾಯ ಆಗಾಕ ಹತ್ತೇದ, ಸ್ವಾಮ್ಯಾರು ಎಡವಟ್ಟ . . ” ಸಂತ ಅನ್ನಮ್ಮರ ಗುಡಿಯ ವಿಚಾರಣಾ ಗುರುಗಳ … Read more

ದೀವಾಪುರ: ರವಿರಾಜ್ ಸಾಗರ್. ಮಂಡಗಳಲೆ.

ತವರು ನೆಲಕ್ಕೆ ಕಾಲಿಡುತ್ತಿದ್ದಂತೆ ಕಳೆದುಕೊಂಡ ಅಮೂಲ್ಯ ವಸ್ತುವೊಂದು ಮತ್ತೆ ಸಿಕ್ಕಾಗಿನ ಸಂತಸ, ಮತ್ತದೇನೂ ಅನುಭೂತಿ, ನವ ಯುವಕರಲ್ಲಿ ಕಾಣುವಷ್ಟು ಉತ್ಸಾಹ, ಎಂಭತ್ತರ ಇಳಿವಯಸ್ಸಿನ ನಾರಣಪ್ಪನಲ್ಲಿ ಆದ್ರೆಮಳೆಯ ವರದಾನದಿಯಂತೆ ಉಕ್ಕಿ ಹರಿಯುತ್ತಿತ್ತು. ಬಹಳ ದಶಕದ ನಂತರ ಅಮೆರಿಕದಿಂದ ಊರಿಗೆ ಬರುತಿದ್ದ ನಾರಣಪ್ಪ ಅವರನ್ನು ಸ್ವಾಗತಿಸಲು ಊರಿನ ಅರಳೀಕಟ್ಟಿ ಬಳಿ ಒಂದಿಷ್ಟು ಜನ ಜಮಾಯಿಸಿದ್ದರು. ಅಮೆರಿಕದಿಂದ ಬರುತ್ತಿದ್ದಾರೆ ಎಂದಮೇಲೆ ನಾರಣಪ್ಪ ಅವರು ಅಲ್ಲಿ ಇಂಜಿನಿಯರೋ, ಡಾಕ್ಟರೋ, ವಿಜ್ಞಾನಿಯೋ, ಯಾವುದೋ ದೊಡ್ಡ ನೌಕರಿಗೋ ಹೋಗಿರಬೇಕೆಂದು ತಿಳಿಯಬೇಡಿ. ಅವರು ಎಪ್ಪತ್ತರ ದಶಕದ ಗೇಣಿ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೫): ಎಂ.ಜವರಾಜ್

ಭಾಗ 5 ಬೆಳಗಿನ ಜಾವದೊತ್ತಲ್ಲಿ ಮುಂಗಾರು ಬೀಸ್ತಿತ್ತು. ಶೀತಗಾಳಿ. ದೊರ, ವಾಟೀಸು, ಕಾಂತ, ಕುಮಾರ, ಚಂದ್ರ ಎಲ್ಲ ಶಿಶುವಾರದ ಜಗುಲಿ ಮೇಲೆ ಶೀತಗಾಳಿಗೆ ನಡುಗುತ್ತ ತುಟಿ ಅದುರಿಸುತ್ತ ಪಚ್ಚಿ ಆಡುತ್ತಿದ್ದವು. ಶೀತಗಾಳಿ ಜೊತೆಗೆ ಸಣ್ಣ ಸಣ್ಣ ಹನಿ ಉದುರಲು ಶುರು ಮಾಡಿತು. ಶಿಶುವಾರದ ಜಗುಲಿ ಕೆಳಗೆ ನೆಲ ಕೆಂಪಗಿತ್ತು. ಕೆಮ್ಮಣ್ಣು. ಕೆಂಪು ಅಂದ್ರೆ ಕೆಂಪು. ಹನಿ ಉದುರುವುದ ಕಂಡು ಪಚ್ಚಿ ಆಡುವುದನ್ನು ನಿಲ್ಲಿಸಿ ಕೆಳಗಿಳಿದು ಮೊನಚಾದ ಬೆಣಚು ಕಲ್ಲು, ಕಡ್ಡಿ ತೆಗೆದುಕೊಂಡು ಕೆಮ್ಮಣ್ಣು ಕೆದಕಿ ಅಲ್ಲೆ ಅವರವರದೇ … Read more

ಮಗಾ ಸಾಹೇಬ..! : ಶರಣಗೌಡ ಬಿ ಪಾಟೀಲ ತಿಳಗೂಳ

ಅಂಚಿನ ಮನೀ ಚಂದ್ರಣ್ಣ ಬಿಸಿಲು ನಾಡಿನ ಕೊನೆಯಂಚಿನ ಹಳ್ಳಿಯವನು. ತಮ್ಮೂರ ಯಾವಾಗ ದೊಡ್ಡದಾಗ್ತಾದೋ ಏನೋ ಅಂತ ಆಗಾಗ ಚಿಂತೆ ಮಾಡತಿದ್ದ ಊರ ಕುದ್ಯಾ ಮಾಡಿ ಮುಲ್ಲಾ ಬಡು ಆದಂಗಾಯಿತು ಅಂತ ಹೆಂಡತಿ ಶಾಂತಾ ಮುಗ್ಳನಕ್ಕಿದ್ದಳು. ಇವನ ಹಳ್ಳಿ ಬಹಳ ಅಂದ್ರ ಬಹಳ ಸಣ್ಣದು ಬೆರಳಿನಿಂದ ಎಷ್ಟು ಬಾರಿ ಎಣಿಸಿದರೂ ಲೆಕ್ಕ ತಪ್ಪುತಿರಲಿಲ್ಲ ಹಳ್ಳಿಯಲ್ಲಿ ಹೆಚ್ಚಿಗೆ ಓದಿವರೂ ಇರಲಿಲ್ಲ ಕೆಲವರು ಹತ್ತನೇ ಒಳಗೇ ಓದು ಮುಗಿಸಿದರೆ ಇನ್ನೂ ಕೆಲವರು ಹೆಬ್ಬೆಟ್ಟೊತ್ತುವವರಾಗಿದ್ದರು. ಚಂದ್ರಣ್ಣ ಅತ್ತ ಅಕ್ಛರಸ್ತನೂ ಅಲ್ಲದೆ ಅನಕ್ಛರಸ್ತನೂ ಅಲ್ಲದೆ … Read more

ಪೀಗ: ಡಾ. ಶಿವಕುಮಾರ್‌ ಡಿ ಬಿ

ಪರ್ನಳ್ಳಿ ಗಂಗಪ್ಪ ಅಲಿಯಾಸ್ ಪೀಗ ತಂದೆಯ ಕಾರಣದಿಂದಾಗಿ ಸಮಾಜದ ನಿರ್ಲಕ್ಷಕ್ಕೆ ಗುರಿಯಾಗಿದ್ದ. ಈತನ ತಂದೆ ನಾಗಪ್ಪ ಕುಡುಕ. ಹೆಂಡತಿ ಮಕ್ಕಳ ಮೇಲೆ ಒಂದು ಚೂರು ಜವಾಬ್ದಾರಿ ಇಲ್ಲದವ, ಊರಿನ ಯಾವುದೋ ಒಂದು ಜಗಳದಲ್ಲಿ ಕಾಲಿಗೆ ಗಾಯ ಅದು ಗ್ಯಾಂಗ್ರಿನ್ ಆಗಿ ಗುಣಪಡಿಸಲಾಗದೆ ಸತ್ತ. ಈ ನಾಗಪ್ಪನಿಗೆ ಹುಟ್ಟಿದವರು ಮೂರು ಜನ ಗಂಡು ಮಕ್ಕಳು. ಮೂರು ಜನರ ಶಿಕ್ಷಣ ಬಾಲ್ಯದಲ್ಲಿಯೇ ಮೊಟಕಾಯಿತು. ತಾಯಿಯ ಮಾತನ್ನು ಕೇಳದ ಈ ಮೂವರು ಐದು, ಆರರವರೆಗೂ ಶಾಲೆಯಲ್ಲಿ ಕಲಿಯಲಿಲ್ಲ. ಹೊಲ ಗದ್ದೆ ಬಯಲುಗಳಲ್ಲಿ … Read more

ಕರ್ಮ……..: ರೂಪ ಮಂಜುನಾಥ

“ಥೂ ಬೋ…. ಮಕ್ಳಾ! ಹರಾಮ್ ಚೋರ್ಗುಳಾ? ಕೆಲ್ಸಕ್ ಬಂದು ಬೆಳ್ಬೆಳಗ್ಗೇನೇ ಏನ್ರೋ ನಿಮ್ ಮಾತುಕತೆ ಕಂಬಕ್ತ್ ಗುಳಾ!ಇರಿ ಇರಿ ನಿಮ್ಗೆ ಹೀಗ್ ಮಾಡುದ್ರಾಗಲ್ಲ. ಸರ್ಯಾಗ್ ಆಪಿಡ್ತೀನಿ ಇವತ್ತಿಂದ ನೀವ್ ಮಾಡೊ ದರಿದ್ರದ ಕೆಲಸಕ್ಕೆ ನಿಮ್ ಕೂಲಿ ಐವತ್ತು ರೂಪಾಯಿ ಅಷ್ಟೆ. ಬೇಕಾದ್ರೆ ಇರಿ. ಇಲ್ದೋದ್ರೆ, ನಿಮ್ಗೆಲ್ಲಿ ಬೇಕೋ ಅಲ್ಲಿ ನೆಗೆದ್ಬಿದ್ದು ಸಾಯ್ರೀ”, ಅಂದು ಮಂಡಿಯೂರಿ ಕೂತು ಬಾರ್ ಬೆಂಡಿಂಗ್ ಮಾಡುತ್ತಿದ್ದ ಕೆಲಸದವರು ಭುವನ್ ಮತ್ತೆ ಅಮೋಲ್ ನನ್ನ ಮಾಲೀಕ ಬಿಪುಲ್ ತನ್ನ ಬೂಟು ಕಾಲಿನಿಂದ ಒದ್ದು, ಇಬ್ಬರ … Read more

ಅಂಡೇ ಪಿರ್ಕಿ ಅಮೀರ..: ಶರಣಬಸವ. ಕೆ.ಗುಡದಿನ್ನಿ

ದೋ ಅಂತ ಮೂರಾ ಮುಂಜಾನಿಯಿಂದ ಬಿಡ್ಲಾರದ ಸುರಿಯೋ ಮಳ್ಯಾಗ ಅವನ್ಗೀ ಎಲ್ಲಿ ನಿಂತ್ಕಂಡು ಚೂರು ಸುಧಾರಿಸ್ಕೆಳ್ಳಬೌದೆಂಬ ಅಂದಾಜು ಹತ್ಲಿಲ್ಲ. ಹಂಗಾ ನೆಟ್ಟಗ ನಡದ್ರ ಪೂಜಾರಿ ನಿಂಗಪ್ಪನ ಮನೀ ಅದರ ಎಡಕ್ಕಿರದೇ ಅಮೀರನ ತೊಟಗು ಮನಿಯಂಗ ಕಾಣೊ ತಗ್ಡಿನ ಶೆಡ್ಡು. ಗಂವ್ವೆನ್ನುವ ಇಂತಾ ಅಪರಾತ್ರ್ಯಾಗ ಅಮೀರನೆಂಬೋ ಆಸಾಮಿ ಹಿಂಗ್ ಅಬ್ಬೇಪಾರಿಯಂಗ ಓಣಿ ಓಣ್ಯಾಗ ತಿರಗಾಕ ಅವ್ನ ಹಾಳ ಹಣೀಬರ ಮತ್ಯಾ ಮಾಡ್ಕೆಂಡ ಕರುಮಾನ ಕಾರಣ ! ಅವ್ನ ಹೇಣ್ತೀ ನೂರಾನಿ ರಾತ್ರ್ಯಾಗಿಂದ ಒಂದ್ಯಾ ಸವನ ಹೆರಿಗಿ ಬ್ಯಾನಿ ಅಂತ … Read more

ಮಾನ್ಸೀ. . . : ಗೀತಾ ನಾಗರಾಜ.

ಮುಗ್ಧ ಮಾನ್ಸಿ ಗೆ ಸಿಕ್ಕ ಮಹಾ ಒರಟು ಗಂಡ ಪರೀಕ್ಷಿತ್.ಅವನ ಒರಟುತನಕ್ಕೆ ಬೇಸತ್ತು ಹೋಗಿದ್ದರೂ ಹೇಗೋ ಸಂಸಾರವನ್ನು ನಿಭಾಯಿಸಲೇ ಬೇಕಾದ ಅನಿವಾರ್ಯತೆ ಅವಳಿಗೆ. ಅಣ್ಣ ಸಂಪ್ರೀತನಿಗೆ ಅವಳೆಂದ್ರೆ ಪ್ರಾಣ.ಡಬಲ್ ಡಿಗ್ರಿ ಮಾಡಿದ್ದ. ತುಂಬಾ ನೇ ಇಂಟಲಿಜೆಂಟ್.ಪರಸ್ಪರ ಸದಾಕಾಲ ಇಬ್ಬರೂ ಕಷ್ಟ – ಸುಖಗಳನ್ನು ಹಂಚಿಕೊಳ್ಳುತ್ತಾರೆ.ಇದೊಂದೆ ಅವರ ಮನ ತೃಪ್ತಿಹೊಂದುವ ಆಯಾಮವಾಗಿತ್ತು. ಹೀಗೇ, ಕೆಲ ದಿನಗಳ ನಂತರ ಸಂಪ್ರೀತನಿಗೆ ಅವನದೇ ಕಂಪನಿಯ ಸ್ಟೆನೋ ಕನಕಳ ಪರಿಚಯವಾಗುತ್ತದೆ.ಪರಿಚಯ ಪ್ರೀತಿಯಾಗಿ, ಪ್ರೀತಿ ಪ್ರೆಮವಾಗಿ, ಒಂದು ಹದಕ್ಕೆ ಬಂದಾಗ,ಅವನೇ “ಮಾನ್ಸಿ ನಾನೊಂದು ಹುಡಗೀನ್ನ … Read more

ಕನ್ನಡ ಸಂಘ: ಮನು ಗುರುಸ್ವಾಮಿ

“ಏನ್ರಯ್ಯ ಇಡೀ ಕರ್ನಾಟಕನೇ ಆಳೋ ಪ್ಲಾನ್ನಿದ್ದಂಗದೆ.” ಕಾಡಾ ಆಫೀಸಿನ ಸಿಬ್ಬಂದಿಯೊಬ್ಬ ವ್ಯಂಗ್ಯವಾಡಿದ. “ಆಗೇನೂ ಇಲ್ಲ ಸರ್; ಸಮಾಜಮುಖಿ ಕೆಲಸಕ್ಕಾಗಿ” ವಿಶಾಲ್ ಸಮರ್ಥಿಸಿಕೊಂಡ.“ನಂಗೊತ್ತಿಲ್ವೇ ? ನೀವ್ ಮಾಡೋ ಉದ್ಧಾರ! ಹಾಕಿ ಹಾಕಿ ಸೈನಾ..” ಮತ್ತದೇ ಅಪಹಾಸ್ಯ ಕಿವಿಮುಟ್ಟಿತು.“ಉದ್ಧಾರನೋ ಹಾಳೋ; ಕೆಲ್ಸ ಮುಗಿದಿದ್ರೆ ಪತ್ರ ತತ್ತರಲ್ಲ ಇತ್ಲಾಗೆ” ವಿನೋದ ಕಿಡಿಕಾರಿದ.ಸಂಸ್ಥೆಯೊಂದರ ನೊಂದಣಿಗೆ ಈ ಯುವಕರಿಷ್ಟು ಎಣಗಾಡಿದ್ದು ಆ ಸಿಬ್ಬಂದಿಗೆ ತಮಾಷೆಯಾಗಿ ಕಂಡರೂ ಆ ಹತ್ತದಿನೈದು ಐಕ್ಳು ಮಾತ್ರ ಏನ್ನನ್ನೋ ಸಾಧಿಸಲಿಕ್ಕಿದು ಮುನ್ನುಡಿಯೆಂದೇ ಭಾವಿಸಿದ್ದರು. ಅಂದಹಾಗೆ ಅದು ಆಲಹಳ್ಳಿ. ಹಚ್ಚಹಸಿರಿನಿಂದ ಕೂಡಿರುವ … Read more

ಕನ್ನಡ ಮುತ್ತು: ಶ್ರೀನಿವಾಸ

ಶಂಕರಯ್ಯ ರೂಮು ಬಿಟ್ಟು ಹೊರಟ. ಅವನು ಗೋಕಾಕ್ ವರದಿ ಜಾರಿಗೆ ತರಲೇಬೇಕೆಂಬ ಪಣ ಮನದಲ್ಲಿ ತೊಟ್ಟು ಹೊರಟಿದ್ದ. ರಾಷ್ಟ್ರ ಕವಿ ಕುವೆಂಪು ಅವರ ” ಬಾರಿಸು ಕನ್ನಡ ಡಿಂಡಿಮವ… ” ಗೀತೆ ಅವನ ಕಿವಿಯಲ್ಲಿ ಮೊಳಗುತ್ತಿತ್ತು. ” ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ” ಎಂಬ ಉದ್ಘೋಷ ಅವನ ಮನದಲ್ಲಿ ಮೊಳುಗುತ್ತಿತ್ತು. ಶಂಕರಯ್ಯ ಮೈಸೂರಿನ ಕಡೆಯವನು. ಇದ್ದುದರಲ್ಲಿ ಹೇಗೋ ಒಂದಿಷ್ಟು ಓದಿಕೊಂಡು ಬೆಂಗಳೂರು ಸೇರಿದ್ದ. ಅವನ ಹಳ್ಳಿಯ ಹತ್ತಿರದ ತಾಲೂಕಿನಲ್ಲಿ ತನ್ನ ಪದವಿ ಮುಗಿಸಿ ಕೆಲಸ ಹುಡುಕಿ … Read more

ವೃದ್ಧಜೀವ ಹರೋಹರ!: ಹುಳಗೋಳ ನಾಗಪತಿ ಹೆಗಡೆ

ಅಂದಾಜು ಮೂರು ದಿನಗಳಾಗಿರಬಹುದು, ಬಾಳಕೃಷ್ಣ ಮಾಮಾ ತಮ್ಮ ಊರುಗೋಲಿಗಾಗಿ ತಡಕಾಡಲು ಪ್ರಾರಂಭಿಸಿ. ಯಾವ ಸುತ್ತಿನಲ್ಲಿ ತಡಕಾಡಿದರೂ ಕೈಗೆ ಸಿಗೂದೇ ಇಲ್ಲ ಅದು! ತಡಕಾಡುವ ಐಚ್ಛಿಕ ಕ್ರಿಯೆಯೊಂದಿಗೆ ‘ಪಾರತೀ, ನನ್ ದೊಣ್ಣೆ ಎಲ್ಲಿ…?’ ಎಂಬ ಅನೈಚ್ಛಿಕ ಕರೆಯೂ ಬೆರೆತಿದೆ. ಪಿತುಗುಡುವ ವೃದ್ಧಾಪ್ಯದ ಸಿನುಗು ನಾತದೊಂದಿಗೆ ಮೂರು ದಿನಗಳ ಅವರ ಮಲಮೂತ್ರಾದಿ ಸಕಲ ವಿಸರ್ಜನೆಗಳೂ ಒಂದರೊಳಗೊಂದು ಬೆರೆತು ಮನುಷ್ಯ ಮಾತ್ರರು ಕಾಲಿಡಲಾಗದಂತಹ ದುರ್ನಾತ ಆ ಕೋಣೇಲಿ ಇಡುಕಿರಿದಿದೆ. ಬಾಳಕೃಷ್ಣ ಮಾಮನ ಗೋಳನ್ನು ಕೇಳಿ ಅವನನ್ನು ಆ ಉಚ್ಚಿಷ್ಟಗಳ ತಿಪ್ಪೆಯಿಂದ ಕೈಹಿಡಿದು … Read more

“ಪರಿಸರ”: ನಳಿನ ಬಾಲಸುಬ್ರಹ್ಮಣ್ಯ

ಈ ಪರಿಸರದ ಮಧ್ಯೆ ನಾವು ಜೀವಿಸಿ ರುವುದು, ನಮ್ಮ ಪರಿಸರ ನಮ್ಮ ಜೀವನ. ಅರಣ್ಯ ಸಂಪತ್ತು ತುಂಬ ಉಪಯುಕ್ತವಾದದ್ದು ಹಾಗೂ ಅಮೂಲ್ಯವಾದದ್ದು. ಪೀಠೋಪಕರಣಗಳಿಗೆ ಅಥವಾ ಮನೆ ಅಲಂಕಾರಕ್ಕೆಂದು ಮರಗಳನ್ನು ಕಡಿಯುತ್ತೇವೆ, ಇದರಿಂದ ಕಾಡು ನಾಶವಾಗಿ ಮಳೆ ಇಲ್ಲದಂತಾಗುತ್ತದೆ, ಅಂತರ್ಜಲ ಕಡಿಮೆಯಾಗುತ್ತದೆ. ಕಾಡು ಪ್ರಾಣಿಗಳು ನಾಡಿಗೆ ನುಗ್ಗುವ ಕಾಲ ಅದಾಗಲೇ ಬಂದಿದೆ. ಸಸಿ ನೆಡುವುದು ಆಗಲಿಲ್ಲವೆಂದರೆ ತೊಂದರೆಯಿಲ್ಲ, ಬೆಳೆಸಿದ ಮರಗಳನ್ನು ಕಡಿಯುವ ಕೆಟ್ಟ ಕೆಲಸಕ್ಕೆ ಇಳಿಯುವುದು ಬೇಡ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ. ಗಿಡ ಮರಗಳನ್ನು … Read more

“ಹೀಗೊಂದು ಪ್ರೇಮ ಕಥೆ. . !” : ಅರವಿಂದ. ಜಿ. ಜೋಷಿ.

ಹುಡುಗ:-“I, love you, . . ನೀನು ನನ್ನನ್ನು ಪ್ರೀತಿಸುವೆಯಾ?. . ಹಾಗಿದ್ದರೆ ನಾ ಹೆಳಿದ ಹಾಗೆ “ಏ ಲವ್ ಯು”ಅಂತ ಹೇಳು.ಹುಡುಗಿ:-” ನಿನ್ನ ಪ್ರಶ್ನೆಗೆ ಉತ್ತರೀಸುವೆ. . . ಆದರೆ ಒಂದು ಕಂಡೀಷನ್ ಮೇರೆಗೆ”ಹುಡುಗ, :-“ಆಯ್ತು. . ಅದೇನು ಕಂಡೀಷನ್ , ಹೇಳು”ಹುಡುಗಿ:-“ನೀನು ಬದುಕಿನುದ್ದಕ್ಕೂ ನನ್ನ ಜೊತೆ ಇರುವುದಾದರೆ ಮಾತ್ರ ಉತ್ತರಿಸುವೆ.ಹುಡುಗ:-(ಮುಗುಳು ನಗೆ ನಗುತ್ತ) “ಅಯ್ಯೋ. . ಪೆದ್ದೇ ಇದೂ ಒಂದು ಕಂಡೀಷನ್ನಾ? ನಾನಂತೂ ತನು-ಮನದಿಂದ ನಿನ್ನವನಾಗಿದ್ದೇನೆ, ಇಂತಹುದರಲ್ಲಿ ನಿನ್ನ ಬಿಟ್ಟು ನಾ ಎಲ್ಲಿ ಹೋಗಲಿ?”ಹುಡುಗಿಗೆ, … Read more

“ಕತ್ತಲ ಹೂವು” ನೀಳ್ಗತೆ (ಭಾಗ ೪): ಎಂ.ಜವರಾಜ್

-೪- ಮದ್ಯಾಹ್ನದ ಚುರುಚುರು ಬಿಸಿಲು. ಊರಿನ ಮುಂಬೀದಿ ಹಳ್ಳ ಕೊಳ್ಳ ಕಲ್ಲು ಮಣ್ಣಿಂದ ಗಿಂಜಿಕೊಂಡು ಕಾಲಿಟ್ಟರೆ ಪಾದ ಮುಳುಗಿ ಧೂಳೇಳುತ್ತಿತ್ತು. ಮಲ್ಲ ಮೇಷ್ಟ್ರು ಮನೆಯ ಎರಡು ಬ್ಯಾಂಡಿನ ರೇಡಿಯೋದಲ್ಲಿ ಪ್ರದೇಶ ಸಮಾಚಾರ ಬಿತ್ತರವಾಗುತ್ತಿತ್ತು. ಆಗ ಬಿಸಿಲ ಝಳಕ್ಕೆ ತಲೆ ಮೇಲೆ ಟವೆಲ್ ಇಳಿಬಿಟ್ಟು ಲಳಲಳ ಲಳಗುಟ್ಟುವ ಕ್ಯಾರಿಯರ್ ಇಲ್ಲದ ಅಟ್ಲಾಸ್ ಸೈಕಲ್ಲಿ ಭರ್ರಂತ ಬಂದ ಮಂಜ ಉಸ್ಸಂತ ಸೈಕಲ್ ಇಳಿದು ತಲೇಲಿದ್ದ ಟವೆಲ್ ಎಳೆದು ಬೆವರು ಒರೆಸಿಕೊಂಡು ತೆಂಗಿನ ಮರ ಒರಗಿ ನಿಂತಿದ್ದ ನೀಲಳನ್ನು ಒಂಥರಾ ನೋಡಿ … Read more