ಆಸಕ್ತಿಯು ಹವ್ಯಾಸವಾಗಿ ಬದಲಾದ ಕಥೆ…: ಅಶೋಕ ಬಾವಿಕಟ್ಟಿ

ವ್ಯಾಪಾರ, ಮನೆ ಮಕ್ಕಳು …ಇಷ್ಟೇ ಎನ್ನುವಂತಿದ್ದ ಕಾಲವದು. ಬೆಂಗಾಡಿನಂತಿದ್ದ ನಮ್ಮೂರ‌‌ ಪರಿಸರವೂ ಸಹಜವಾಗಿ ಹಸಿರು, ಜಲಪಾತ, ಬೆಟ್ಟಗುಡ್ಡ, ದಟ್ಟಕಾಡು, ನೀರಿನ ಹರಿವು ಇವುಗಳೆಡೆ ಒಂದು ಆಕರ್ಷಣೆ ಹುಟ್ಟಿಸುತ್ತಿದ್ದವು. ಶಾಲಾ ಕಾಲೇಜು ಸಮಯದಲ್ಲಿ ಪ್ರವಾಸಕ್ಕೆಂದು ಹೋದಾಗ ಇಳಿದ ಜೋಗದ ಗುಂಡಿಯೂ ಏರಿದ ಮುಳ್ಳಯ್ಯನಗಿರಿ ಬೆಟ್ಟವೇ ನಮ್ಮ ಪಾಲಿನ ಕೌತುಕಗಳು ಮತ್ತು ದಾರಿಯಲ್ಲಿ ಬರುವ ದಟ್ಟಕಾಡು, ಭೋರ್ಗರೆವ ಜಲಪಾತ, ಮಳೆಗಳೇ ಚೇತೊಹಾರಿ ಚಿತ್ರಗಳು. ವಿಪರೀತ ಆಸ್ಥೆಯಿಂದ ಗಿಡ ನೆಟ್ಟು , ನೀರುಣಿಸಿ, ಟಿಸಿಲೊಡೆದ ಚಿಗುರು ನೋಡಿ ” ನಾ ನೆಟ್ಟ … Read more

ಸೋನೆ ಮುಗಿಲಿನ ಕವಿ ಡಾ.ನಲ್ಲೂರು ಪ್ರಸಾದ್ ಅವರ ಕಾವ್ಯ ಜಿಜ್ಞಾಸೆ: ಸಂತೋಷ್ ಟಿ

“ಕವಿತೆ ನನ್ನೊಳಗೆ ಕೂತು ಪದ ಹಾಡುವುದಿಲ್ಲಜೇಡನಾಗಿ ಅದು ಬಲೆ ನೇಯುವುದೂ ಇಲ್ಲಬದಲಾಗಿ ಕಾಡುತ್ತದೆ ಸುತ್ತೆಲ್ಲಾ ನೋಡುತ್ತದೆಬತ್ತಲಾದ ಬಯಲಲ್ಲಿ ಸೋಮನ ಕುಣಿತ ಮಾಡುತ್ತದೆ”(ಕಾಡುತ್ತವೆ ನೆನಪುಗಳು ಕವಿತೆ, ನವಿಲು ಜಾಗರ) ಎನ್ನುವ ಕಾವ್ಯ ಪ್ರೀತಿಯ ಆಶಯ ಹೊಂದಿರುವ ಕವಿ ಕೆ.ಆರ್. ಪ್ರಸಾದ್ ತಮ್ಮ ಸ್ವ-ಅನುಭವದಿಂದ ಗಟ್ಟಿಗೊಳ್ಳಿತ್ತಾ ಮೊದಲ ಕವಿತೆಯಲ್ಲಿಯೆ ತನ್ನ ತನವನ್ನು ಕಾವ್ಯದ ಬಗೆಗಿನ ಉತ್ಕಟ ಆಕಾಂಕ್ಷೆಯನ್ನು ತೆರೆದಿಡುತ್ತಾರೆ. ಇಲ್ಲಿ ಕಾವ್ಯವು ಸಾರ್ವಜನಿಕ ಇತ್ಯಾತ್ಮಕ ದೃಷ್ಟಿಗೆ ನಿಲುಕುವ ಬತ್ತಲಾದ ಬಯಲಲ್ಲಿ ಇರುವಂತದ್ದು ಮತ್ತು ಸೋಮನ ಕುಣಿತ ಮಾಡುವಂತದ್ದು ಎಂದರೆ ನೇರವಾಗಿ … Read more

ಗುರುಗಳ ಪಾಠ: ಬಿ.ಟಿ.ನಾಯಕ್

ಅದಪ್ಪ ಮೇಸ್ಟ್ರು ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅವರು ಎಂದೂ ಯಾವ ಮಕ್ಕಳಿಗೂ ಶಿಕ್ಷಿಸಿರಲಿಲ್ಲ. ಅದರ ಬದಲು ಅವರು ಮಕ್ಕಳಿಗೆ ತಮ್ಮ ತುಂಬು ಪ್ರೀತಿಯನ್ನು ಕೊಡುತ್ತಿದ್ದರು. ತಿಂಗಳಿಗೊಮ್ಮೆ ಯಾವುದಾದರೂ ಒಂದು ಸಿಹಿ ತಿಂಡಿಯನ್ನು ತಮ್ಮ ಮನೆಯಲ್ಲಿ ತಯಾರಿಸಿ ತಂದು ಶಾಲೆಯಲ್ಲಿ ಮಕ್ಕಳಿಗೆ ಹಂಚುತ್ತಿದ್ದರು. ಅಲ್ಲದೇ, ತಮ್ಮ ಬೋಧನಾ ಅವಧಿಯಲ್ಲಿ ಯಾವುದೋ ವಿಶೇಷವಾದ ಘಟನೆ ಅಥವಾ ಮನ ಮುಟ್ಟುವ ಒಂದು ಕಥೆಯನ್ನು ಐದರಿಂದ ಹತ್ತು ನಿಮಿಷಗಳಲ್ಲಿ ಹೇಳಿ ಮುಗಿಸುತ್ತಿದ್ದರು. ಹಾಗಾಗಿ, ಅವರ ಸ್ವಭಾವ, ಮಕ್ಕಳ ಬಗ್ಗೆ ಚಿಂತನೆ ಮತ್ತು … Read more

ಕಲಿಕೆಯೋ ನರಳಿಕೆಯೋ !? ಜಿಜ್ಞಾಸೆ: ಡಾ. ಹೆಚ್ ಎನ್ ಮಂಜುರಾಜ್

ಕಲಿಕೆ ನಿರಂತರ ಎಂಬ ಮಾತನ್ನು ಎಲ್ಲರೂ ಬಲ್ಲೆವು. ಆದರೆ ಯಾವುದು ಕಲಿಕೆ? ಯಾವುದು ಅಲ್ಲ? ಎಂಬುದನ್ನು ತಿಳಿಯುವುದು ಕಷ್ಟವೇ. ಇದು ಒಬ್ಬರಿಂದ ಒಬ್ಬರಿಗೆ ಬೇರೆಯೇ ಆಗುವಂಥದು. ನಂಬಿಕೆ ಮತ್ತು ಮೂಢನಂಬಿಕೆಗಳ ವಿಚಾರದಂತೆ. ‘ನನ್ನದು ಮಾತ್ರ ವೈಜ್ಞಾನಿಕ ಮನೋಭಾವ, ಉಳಿದವರದು ಕೇವಲ ನಂಬಿಕೆ’ ಎಂಬ ಅಹಂಭಾವ ಬಹುತೇಕರದು. ಕೆಲವರು ಇನ್ನೂ ಮುಂಬರಿದು ‘ಅವರದು ಮೂಢನಂಬಿಕೆ’ ಎಂದು ಜರಿಯುವರು. ವಿಚಾರವಾದಿಗಳ ವರಸೆ ಇದು. ಇನ್ನೊಬ್ಬರನ್ನು ಮತ್ತು ಇನ್ನೊಂದನ್ನು ಹೀನಾಯವೆಂದು ಪರಿಗಣಿಸುವುದೇ ಮಾನವತೆಗೆ ಮಾಡುವ ದ್ರೋಹ. ತಮ್ಮಂತೆಯೇ ಇತರರೂ ಇರಬೇಕೆಂಬ ಹಕ್ಕೊತ್ತಾಯವೇ … Read more

ನಾಲ್ಮೊಗದ ಬ್ರಹ್ಮನಂತೆ…: ಡಾ.ವೃಂದಾ ಸಂಗಮ್

“ಲೇ, ನಾ ಸುಮ್ಮನಿದ್ದೇನೆಂದರ, ಏನರ ತಿಳೀಬ್ಯಾಡ, ಇಷ್ಟ ದಿನ ನನ್ನ ಒಂದು ಮುಖಾ ನೋಡಿದ್ದಿ, ಇನ್ನ ಮುಂದ ನನ್ನ ಇನ್ನೊಂದು ಮುಖಾ ನೋಡ ಬೇಕಾಗತದ.” ಅಂತ ಯಾರೋ ಯಾರಿಗೋ ಬೈಯಲಿಕ್ಕೆ ಹತ್ತಿದ್ದು ಕೇಳಿಸಿತು. ಬಹುಷಃ ಅದು ಜಂಗಮ ದೂರವಾಣಿಯಲ್ಲಿ ಕಂಡು ಬಂದ ಒಂದು ಕಡೆಯ ಸಂಭಾಷಣೆ ಇರಬೇಕು, ಇನ್ನೊಂದು ಕಡೆಯವರ ಮಾತು ನನಗೆ ಕೇಳಲಿಲ್ಲ. ಆದರೂ, ಯಾರಿಗೋ ತಾವು ಅಂದುಕೊಂಡಂಗ ಕೆಲಸ ಆಗಿಲ್ಲ, ಅದಕ್ಕ, ಅವರು ಇನ್ನೊಬ್ಬರನ್ನ ಬೈಯಲಿಕ್ಕೆ ಹತ್ತಿದ್ದು ಖರೇ. ನಾನು ಈ ಬೈದವರು ಯಾರೂ … Read more

ಮೌಲ್ಯಾಧಾರಿತ ಶಿಕ್ಷಣದ ಕೊರತೆ: ವಿಜಯ್ ಕುಮಾರ್ ಕೆ.ಎಂ.

“ಶಿಕ್ಷಣ”ವೆಂಬುದು ಮನುಷ್ಯನ ಜ್ಞಾನಕ್ಕೆ ಹಚ್ಚುವ ಜ್ಯೋತಿ. ಅಂತಹ ಜ್ಯೋತಿಯಿಂದ ಮೌಢ್ಯದ ತಾಮಸವನ್ನು ಅಳಿಸಿ ಮೌಲ್ಯಯುತ ಮನುಜನಾಗಲು ಸಾಕ್ಷಿಯಾಗಿರುವ ಇಂದಿನ ಶಿಕ್ಷಣದ ವ್ಯವಸ್ಥೆ ಹತ್ತಾರು ಆಯಾಮಗಳಲ್ಲಿ ತನ್ನ ಸತ್ವ ಕಳೆದುಕೊಂಡು ಕೇವಲ ಅಂಕಗಳಿಗೆ ಸೀಮಿತವಾಗಿ ವ್ಯಾಪಾರೀಕರಣದೆಡೆಗೆ ಸಾಗುತ್ತಿರುವಾಗ ಇಂದಿನ ಮಕ್ಕಳ ಮುಂದಿನ ಭವಿಷ್ಯ ನಿಜಕ್ಕೂ ಚಿಂತನೆಗೆ ಎಡೆ ಮಾಡಿಕೊಡದೆ ಇರದು. ಐದು ದಶಕಗಳ ಹಿಂದೆ ತಾಂತ್ರಿಕತೆ ಹೆಚ್ಚಾಗಿರದಿದ್ದರು ಶಾಲಾ ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೇನು ಕೊರತೆ ಇರಲಿಲ್ಲ. ಕಾರಣ ಅಂದಿನ ಶಿಕ್ಷಣದಲ್ಲಿ ಕೇವಲ ಪಠ್ಯಧಾರಿತ ಶಿಕ್ಷಣವಲ್ಲದೆ ಮಗುವಿನ ಭವಿಷ್ಯಕ್ಕೆ ಬೇಕಾದ … Read more

ಕಪ್ಪೆರಾಯನ ಟ್ರೈನಿಂಗ್….: ರೂಪ ಮಂಜುನಾಥ

ಮನುಷ್ಯ ಭಾಳ ಸ್ವಾರ್ಥಿ ಕಣ್ರೀ. ಏನಾದ್ರೂ ಒಳ್ಳೆಯದಾಗ್ಲಿ, ಕರ್ಮ, ವಿಧಿ, ಹಣೆಬರಹ, ಪ್ರಾರಬ್ಧಗಳನ್ನೆಲ್ಲಾ ಮರ್ತೇಬಿಡ್ತಾನೆ. ತನ್ನ ಸಫಲತೆಯ ಕಾರಣಕ್ಕೆ ತನ್ನ ಸಾಧನೆಯ ಹಾದಿಯ ಪಟ್ಟಿಯನ್ನೇ ಕೊಡ್ತಾನೆ. ಅದೇ ಏನಾದ್ರೂ ವಿಷ್ಯ ಉಲ್ಟಾ ಆಯ್ತಾ, ಆ ಸೋಲಿಗೆಲ್ಲಾ ಕರ್ಮ, ವಿಧಿ…..ಮುಂತಾದವುಗಳ ಮೇಲೆ ಆರೋಪ ಹೊರಿಸಿ ತಾನು ಬಲು ಸಾಚಾ ಅಂತ ತನ್ನ ಹುಳುಕನ್ನ ತೇಪೆ ಹಾಕಿ ಮುಚ್ಚಿಕೊಳ್ತಾನೆ. ನಾನೂ ಮನುಷ್ಯಳೇ ಆಗಿರುವುದರಿಂದ ಇದಕ್ಕೆ ನಾನೂ ಹೊರತಲ್ಲ ಬಿಡಿ.ಇದೇ ರೀತಿ ನಾವು ನುಣುಚಿಕೊಳ್ಳೋದೂಂದ್ರೆ,”ಅಯ್ಯೋ ಯಾಕೋ ಸಮಯ ಕೂಡಿ ಬರ್ಲೇ ಇಲ್ಲ”,ಅಂತ … Read more

ಇದು ಬೇಬಿ ಮೀಲ್ಸ್ ಕಾಲವಯ್ಯ: ಸರ್ವ ಮಂಗಳ ಜಯರಾಮ್

ಮೊನ್ನೆ ನಮಗೆ ಪರಿಚಯದವರೊಬ್ಬರ ಮದುವೆಗೆ ಹೋಗಿದ್ದೆವು. ಮದುವೆ ಊಟಕ್ಕೆ ರಶ್ಶೋ ರಶ್ಶು.. ಹೋಗಲಿ ಮೊದಲು ವೇದಿಕೆ ಹತ್ತಿ ಗಂಡು ಹೆಣ್ಣನ್ನು ಮಾತನಾಡಿಸಿ ಪ್ರೆಸೆಂಟೇಷನ್ ಕವರ್ ಕೊಟ್ಟು ಫೋಟೋಗೆ ಫೋಸ್ ನೀಡಿ ನಂತರ ಊಟಕ್ಕೆ ಹೋಗೋಣವೆಂದು ಹೋದರೆ ಅಲ್ಲಿಯೂ ವಿಪರೀತ ರಶ್ಶು.. ಮತ್ತೇನು ಮಾಡುವುದು ಸರತಿ ಸಾಲಿನಲ್ಲಿ ಒಂದು ಗಂಟೆ ನಿಂತು ಮುಂದೆ ಹೋಗಿದ್ದಾಯಿತು. ಮದುವೆಯಲ್ಲಿ ಗಂಡು ಹೆಣ್ಣಿನ ಸಂಭ್ರಮವೇ ಸಂಭ್ರಮ. ಅವರು ತಮ್ಮದೇ ಆದ ಪ್ರೇಮಲೋಕದಲ್ಲಿ ಅದಾಗಲೇ ವಿಹರಿಸುತ್ತಾ ಇರುತ್ತಾರೆ. ಸುಮ್ಮನೆ ನೆಪ ಮಾತ್ರಕ್ಕೆ ಅಲ್ಲಿ ಬಂದವರ … Read more

ಕನ್ನಡಕ್ಕಾಗಿ ಒಂದನ್ನು ಒತ್ತಿ: ಪಿ. ಎಸ್. ಅಮರದೀಪ್

“ನೀವು ಕರೆ ಮಾಡಿದ ಚಂದಾದಾರರು ಬೇರೊಂದು ಕರೆಯಲ್ಲಿ  ಕಾರ್ಯನಿರತರಾಗಿದ್ದಾರೆ”. ಧ್ವನಿ ಕೇಳಿದಾಗೊಮ್ಮೆ ನಿಮಗೆ ಏನನ್ನಿಸುತ್ತೆ ಹೇಳಿ?!!!!  ಆ ಕಡೆಯವರು ಬಿಜಿ ಇದಾರೆ ಅಂತೆಲ್ಲಾ ನೀವು ಹೇಳಬಹುದು….. ಆದರೆ ನನಗೆ ಮಾತ್ರ  “ಅವ್ರು ಕರ್ನಾಟಕದಲ್ಲೇ ಇದ್ದಾರಪ್ಪ”. ಅಂತ.. ಹೌದಲ್ಲ?!! ಮಾತಿಗೆ ಹೇಳಿದೆ….  ಪ್ರತಿ ಬಾರಿ ಏನಾದರೊಂದು ಬರಹ ಶುರು ಮಾಡುವ ಮುನ್ನ ಏನು ಬರೆಯಬೇಕು… ಯಾವುದರ ಬಗ್ಗೆ ಬರೀಬೇಕು. ಯಾಕೆ ಬರೀಬೇಕು ಅಂತೆಲ್ಲಾ ಅನ್ಸುತ್ತೆ… ಬರೆವಾಗ ನಿಜಕ್ಕೂ ಅಷ್ಟುದ್ದ ಏನಾದರೂ ಬರೆದೇನು ಎಂಬ ಖಾತರಿ ಇರುವುದಿಲ್ಲ….  ನನಗೆ ಸ್ಪಷ್ಟವಾಗಿ … Read more

ಮಧ್ಯಮವರ್ಗದ ಪಾಠವನ್ನು ಮತ್ತೆ ಪರಿಚಯಿಸಿಕೊಟ್ಟ ಆ ಸಂಜೆ. . .: ಡಾ. ಅಮೂಲ್ಯ ಭಾರದ್ವಾಜ್‌

ಒಮ್ಮೆ ಕಾಲೇಜಿನಿಂದ, ಮೀಟಿಂಗ್ ಮುಗಿಸಿ ಹೊರಡುವಷ್ಟರಲ್ಲಿ ತಡವಾಗಿತ್ತು. ಪರೀಕ್ಷೆಯ ಸಮಯವಾದ್ದರಿಂದ ಪ್ರಿನ್ಸಿಪಾಲರು ಎಲ್ಲಾ ಶಿಕ್ಷಕರನ್ನು ಕರೆಸಿ ತಮ್ಮ ತಮ್ಮ ಪ್ರಶ್ನೆ-ಪತ್ರಿಕೆಗಳನ್ನು ತಯಾರಿಸಿ ಕೊಡಲು ನಿರ್ದೇಶಿಸಿದ್ದರು. ಅಂತೆಯೇ ನಾನು ನಿರ್ವಹಿಸುತ್ತಿದ್ದ, ‘ಸಮಾಜಶಾಸ್ತ’್ರ ಪ್ರಶ್ನೆ-ಪತ್ರಿಕೆಯ ಮೂರು ಜೊತೆಯನ್ನು ಸಲ್ಲಿಸಿದ್ದೆ. ಶಕ್ಕುವೂ ತನ್ನ ಇಂಗ್ಲಿಷ್ ಭಾಷೆಯ ಕುರಿತು ನೀಡಿದ್ದಳು. ಎಲ್ಲಾ ಮುಗಿಸಿ ಹೊರಡುವ ಅವಸರದಲ್ಲಿ, ನನಗೆ ಅರಿವಿಲ್ಲದೆ ಪ್ರಿನ್ಸಿಪಾಲರ ಕೊಠಡಿಯಲ್ಲಿಯೇ ನನ್ನ ಪಠ್ಯಕ್ರಮ-ನಕಾಶೆಯನ್ನು ಬಿಟ್ಟು ಬಂದಿದ್ದೆ. ಕಾಲೇಜಿನಾಚೆ ಬಂದಾಗ, ನನ್ನ ಸಹೋದ್ಯೋಗಿ ಮತ್ತು ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಚಂದ್ರಶೇಖರ ಹೆರೂರರು … Read more

“ದೇಶ ದೇಶದಾರತಿ ಬಂದೋ”: ಗೋಳೂರ ನಾರಾಯಣಸ್ವಾಮಿ

ಅಕ್ಕ ಮಾರಮ್ಮ ಗುಡಿಗಾ ಚಿಕ್ಕವೆರೆಡು ಗಿಳಿಬಂದೋ….ಕಪ್ಪು ತುಂಬಿವೋ ಗುಡಿಗೆಲ್ಲಾಕಪ್ಪು ತುಂಬಿವೋ ಗುಡಿಗೆಲ್ಲಾ ಮಾರಮ್ಮ-ಬಣ್ಣ ಬಳದಾವೋ ಗುಡಿಗೆಲ್ಲದೇಶ ದೇಶದಾರತಿ ಬಂದೋ|| ಹಟ್ಟಿ ಮುಂದ ಹರಡಿಕೊಂಡಿದ್ದ ಸೂಜಿ ಮಲ್ಲುಗ ಚಪ್ಪರದ ಕೆಳಗೆ ಕುಳಿತು ಇದುವರೆಗೂ ನಾನು ನಮ್ಮ ಸೀಮೆಯೊಳಗೆ ಎಲ್ಲೂ ಕ್ಯೋಳದೇ ಇರುವ ಈ ಅಪರೂಪದ ಸಾಲುಗಳನ್ನು ಹಾಡುತ್ತಿದ್ದ ನಮ್ಮಜ್ಜಿ ಪುಟ್ಟಸಿದ್ದಮ್ಮನ ಈ ಹಾಡು, ಈ ಹಾಡಿನ ಮೇಲು ಸ್ವರವ ಕೇಳಿ ನನ್ನೆದೆಯೊಳಗಿಂದೆದ್ದ ಸಂಕಟಕ್ಕೆ ಕೊನೆಯಿಲ್ಲದಾಯಿತು. ಆಗ ತಾನೇ ಗದ್ದ ಕೆಲಸದಿಂದ ಬಂದ ನನ್ನ ನೋಡಿದ ಅಜ್ಜಿ ತಾನು ಹಾಡುತ್ತಿದ್ದ … Read more

ಶಿಸ್ತು ಮತ್ತು ನಾವು: ಪರಮೇಶ್ವರಿ ಭಟ್

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸುಭಾಷಿತಗಳು, ನೀತಿ ವಾಕ್ಯಗಳು ಇರುವುದು ಎಲ್ಲಿ ಅಂತ ಕೇಳಿದರೆ ಭಾರತದಲ್ಲಿ ಅಂತ ಸುಲಭವಾಗಿ ಹೇಳಿಬಿಡಬಹುದು. ಬೇರೆ ದೇಶಗಳಲ್ಲಿಯೂ ಇರಬಹುದು, ಆದರೆ ನಮ್ಮಲ್ಲಿ ಇರುವಂತಹ ನೀತಿಕಥೆಗಳು ವಿಶ್ವದಾದ್ಯಂತ ಹೆಸರು ಪಡೆದಿವೆ. ಕೆಲವು ವರ್ಷಗಳ ಹಿಂದೆ ನೋಬೆಲ್ ಪುರಸ್ಕಾರ ಪಡೆದ ಯುಗೋಸ್ಲಾವೀಯಾದ ಸಾಹಿತಿಯೊಬ್ಬ “ನಾನು ಭಾರತದ ಜಾತಕದ ಕಥೆಗಳನ್ನು, ಪಂಚತಂತ್ರದ ಕಥೆಗಳನ್ನು ಓದಿ ಬೆಳೆದವನು” ಅಂತ ಹೇಳಿದಾಗ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಹೆಮ್ಮೆಯೂ ಆಯಿತು. ಹಿಂದಿನ ಕಾಲದಲ್ಲಿ ಅನುವಾದಿತ ಪುಸ್ತಕಗಳ ಮುಖಾಂತರವೇ ಇತರ ಭಾಷೆಗಳ … Read more

ತ್ವಾಡದ ಶಿಕಾರಿ: ಡಾ. ದೋ. ನಾ. ಲೋಕೇಶ್

ಬಿಲಕ್ಕೆ ನೀರು ಬಿಟ್ಟಿದ್ದೇ ತಡ ಬುಳ, ಬುಳ, ಬುಳಾಂತ ನೀರಲ್ಲಿ ಗುಳ್ಳೆ ಬಂದ ತಕ್ಷಣವೇ ಪಂಚೇಂದ್ರಿಯಗಳೆಲ್ಲ ಎಚ್ಚರವಾಗಿ ಕೈಲಿದ್ದ ಗುದ್ದಲಿಯನ್ನು ಒನಕೆ ಓಬವ್ವನ ಭಂಗಿಯಲ್ಲಿ ಎತ್ತಿ ನಿಂತು ಕಾಯುತ್ತಾ, “ಈ ಬಿಲದಲ್ಲಿ ಪಕ್ಕಾ ತ್ವಾಡ ಐತೆ ಕಣೋ ಅಂದ” ನಟಿ ಅಣ್ಣ. ಉಪ್ಪು ಖಾರ ಹಚ್ಚಿ ಬೆಂಕಿಲಿ ಸುಟ್ಟ ತ್ವಾಡದ ಬಾಡಿನ ರುಚಿ ನೆನೆಯುತ್ತಾ ಬಾಯಲ್ಲಿ ಉದ್ಭವಿಸಿದ ಜೊಲ್ಲನ್ನು ನುಂಗಿ ತದೇಕ ಚಿತ್ತದಿಂದ ಬಿಲದ ಕಡೆ ನೋಡುತ್ತಾ ತೊಡ ಹೊರಬರುವುದನ್ನೇ ಕಾಯುತ್ತಾ ನಿಂತೆ. ಹಿಂದೆಲ್ಲ ಬಯಲುಸೀಮೆಯ ರೈತ … Read more

ಅಮೇರಿಕಾದ ‘ಶ್ವೇತ ಪುಷ್ಪ’ ಎಮಿಲಿ ಡಿಕಿನ್ಸನ್: ಗೀತಾ ಕೆ ಆಚಾರ್ಯ

ಆಂಗ್ಲ ಕವಯಿತ್ರಿ ಎಮಿಲಿ ಬಗ್ಗೆ ಒಂದಿಷ್ಟು ಪರಿಚಯ. 19ನೇ ಶತಮಾನದ ಪ್ರಮುಖ ಕವಯಿತ್ರಿಗಳಲ್ಲಿ ಒಬ್ಬರು ಎಮಿಲಿ ಡಿಕಿನ್ಸನ್. ಅಮೇರಿಕಾದ ಕವಯಿತ್ರಿಯಾದ ಈಕೆಯ ಪೂರ್ಣ ಹೆಸರು ಎಮಿಲಿ ಎಲಿಜಬೆತ್ ಡಿಕಿನ್ಸನ್. 10 ಡಿಸೆಂಬರ್ 1830ರಲ್ಲಿ ಮ್ಯಾಸಚೂಸೆಟ್ಸ್‌ನ ಅಮ್ಹೆರ್ಸ್ಟ್‌ನಲ್ಲಿ ಜನನ. ತಂದೆ ಎಡ್ವರ್ಡ್ ಡಿಕಿನ್ಸನ್, ವಕೀಲರಾಗಿದ್ದವರು. ತಾಯಿ ಎಮಿಲಿ ನಾರ್ಕ್ರಾಸ್ ಡಿಕಿನ್ಸನ್. ಒಬ್ಬ ಸಹೋದರ ಮತ್ತು ಒಬ್ಬಾಕೆ ಸಹೋದರಿ ಎಮಿಲಿಗಿದ್ದರು. ಕವಯಿತ್ರಿ ಎಮಿಲಿ ‘Nun of Amherst’ಎಂದು ಕರೆಯಲ್ಪಡುತ್ತಿದ್ದರು. ಅವರು ನಿತ್ಯ ಶ್ವೇತವಸ್ತ್ರವನ್ನೇ ಧರಿಸಲು ಇಷ್ಟಪಡುತ್ತಿದ್ದರಂತೆ. ಬರಹದ ಹೊರತಾಗಿ ಎಮಿಲಿಯವರಿಗೆ … Read more

ಸೀತಾಳೆ ಹೂ: ಬಿಲಾಲ್ ಶೇಖ್

ಮಳೆ ನಾಡಿನ ಕಾನನದ ಹೂವು ಸೀತಾಳೆ. ಇದು ಒಂದು ಆರ್ಕಿಡ್ ಪ್ರಭೇಧವಾಗಿದ್ದು, ಇದರ ವೈಜ್ಞಾನಿಕ ಹೆಸರು Rhynchostylis retusa. ಧರೆಗೆ ಮಳೆ ಸುರಿಯಲು ಪ್ರಾರಂಭವಾಗಿದ್ದ ಮಳೆಗೆ ಸ್ವಾಗತಿಸಲು ಈ ಸೀತಾಳೆ ಹೂವುಗಳು ಎಲ್ಲೆಡೆ ಅರಳಿ ಕಾಡಿನ ಸೊಬಗನ್ನು ಹೆಚ್ಚಿಸುತ್ತದೆ. ನೋಡಲು ಬಿಳಿ – ನೇರಳ ಅಥವಾ ಬಿಳಿ – ಕಂದು ಬಣ್ಣಗಳ ಮಿಶ್ರಿತವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ, ಹೂವಿನ ಗುಂಚಲುಗಳು ಯಾರೋ ಇದನ್ನು ಕೈಯಿಂದ ಮಾಲೆಗಳನ್ನಾಗಿ ಮಾಡಿ ತೂಗಿ ಬಿಟ್ಟಂತೆ ಕಾಣುತ್ತದೆ. ಇದಕ್ಕೆ ಸಾಮಾನ್ಯವಾಗಿ ಸ್ಥಳಿಯರು ಸೀತಾದಂಡೆ … Read more

ಮಾಮನ್ನನ್‌ ಎನ್ನುವ ಕಹಿ ಮದ್ದು: ಎಂ ನಾಗರಾಜ ಶೆಟ್ಟಿ

`ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿ ಚಿತ್ರ ನೋಡುವುದು ಮತ್ತು ಅದರ ಬಗ್ಗೆ ಬರೆಯುವುದು ಕಷ್ಟದ ಕೆಲಸ. ಆಗಲೇ ಹಲವರು ಅದರ ಬಗ್ಗೆ ಬರೆದು-ಹೇಳಿ ಬಿಟ್ಟಿರುತ್ತಾರೆ. ಅವರ ಅಭಿಪ್ರಾಯಗಳು ನಮ್ಮ ತಲೆಯಲ್ಲೂ ನೆಲೆಗೊಂಡು ಬಿಟ್ಟಿರುತ್ತವೆ. ಅದರಿಂದ ಹೊರಬರಲು ಸಾಕಷ್ಟು ತಿಣುಕಬೇಕು. ಕೆಲವು ವಿಮರ್ಶೆಗಳು ಖಂಡಿಸಲೆಂದೇ ಹುಟ್ಟಿಕೊಳ್ಳುತ್ತವೆ! ಕೆಲವರಿಗೆ ಸಿನಿಮಾದ ಅಂತ್ಯವನ್ನು ಹೇಳುವ ಆತುರ. ಇದರಿಂದ ಚಿತ್ರದ ರಸಾಸ್ವಾದನೆಗೆ ಖಂಡಿತ ಧಕ್ಕೆಯಾಗುತ್ತದೆ. ʼಮಾಮನ್ನನ್‌ʼ ನೋಡಿದಾಗ ನನಗೂ ಅದೇ ಆಯಿತು. ಪುಣ್ಯವಶಾತ್‌ ನೋಡುವಂತಿಲ್ಲವೆಂದು ಯಾರೂ ಹೇಳಿರಲಿಲ್ಲ. ʼಪೆರಿಯೇರುಂ ಪೆರುಮಾಳ್‌ʼ ʼಕರ್ಣನ್‌ʼ ಚಿತ್ರದ … Read more

ತೇಜಸ್ವಿ ಹೆಸರಲ್ಲಿ ʼಡೇರ್‌ ಡೆವಿಲ್‌ ಮುಸ್ತಾಫʼ: ಎಂ ನಾಗರಾಜ ಶೆಟ್ಟಿ

           ಪೂರ್ಣಚಂದ್ರ ತೇಜಸ್ವಿಯವರ ʼಡೇರ್‌ ಡೆವಿಲ್‌ ಮುಸ್ತಾಫಾ” ಕತೆಯನ್ನು ಸಿನಿಮಾ ಮಾಡುತ್ತಾರೆಂದು ತಿಳಿದಾಗ ಆಶ್ಚರ್ಯವಾಗಿತ್ತು. ʼಡೇರ್‌ ಡೆವಿಲ್‌ ಮುಸ್ತಾಫಾ” ವ್ಯವಸ್ಥೆಯನ್ನು ಕೀಟಲೆಗಣ್ಣಿಂದ ನೋಡುವ, ಸಂಘರ್ಷಕ್ಕೆ ಅನುವಿಲ್ಲದ, ಸಾಮಾನ್ಯವೆನ್ನಿಸುವ ಕತೆ. ಇದು ಸಿನಿಮಾಕ್ಕೆ  ಹೊಂದುತ್ತದೆಂದು ಅನ್ನಿಸಿರಲಿಲ್ಲ. ಕೊನೆಗೆ ಆಗಿದ್ದೂ ಹಾಗೆಯೇ! ನಿರ್ದೇಶಕ ಶಶಾಂಕ್‌ ಸೊಗಾಲ್‌ ಕತೆಯ ಹೆಸರನ್ನು, ಪಾತ್ರಗಳ ಹೆಸರನ್ನು, ಕತೆಯ ಕೆಲವು ಅಂಶಗಳನ್ನು ಬಳಸಿಕೊಂಡು ತನ್ನದೇ ಚಿತ್ರ ಮಾಡಿದ್ದಾರೆ. ಅವರ ಕಲ್ಪನಾ ಶಕ್ತಿ ಮೆಚ್ಚುವಂತದ್ದೇ! ಅತ್ತ ಮುನ್ಸಿಪಾಲಿಟಿಯೂ ಅಲ್ಲದ, ಇತ್ತ ಗ್ರಾಮ ಪಂಚಾಯತಿಗೂ ಸೇರದ ಪುಟ್ಟ ಪಟ್ಟಣವೊಂದರ … Read more

ಚುನಾವಣೆ ಬಂತು ಚುನಾವಣೆ: ಡಾ.ವೃಂದಾ ಸಂಗಮ್

“ಮೇಡಂ, ನಿಮಗೆ ಬಂತಾ” ಅನ್ನುವ ಪ್ರಶ್ನೆ ಸಹೋದ್ಯೋಗಿಗಳಿಂದ ಬಂದರೆ, “ಛೇ ಛೇ ಇದೆಂಥಾ ಅಸಹ್ಯ,” ಎಂದು ಕೊಳ್ಳಬೇಡಿ. ಇದು ಚುನಾವಣೆ ಸಮಯದಲ್ಲಿ ಸರ್ಕಾರಿ ನೌಕರರ ಅತೀ ಸಾಮಾನ್ಯ ಪ್ರಶ್ನೆ. ನಿಮ್ಮನ್ನೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆಯೇ, ಯಾವ ಮತಕ್ಷೇತ್ರ ಎಂಬ ನಿಯೋಜನಾ ಆದೇಶ ನಿಮಗೆ ಬಂತಾ ಎಂಬ ಕುಶಲ ವಿಚಾರಣೆ ಅಷ್ಟೇ ಇದು.  ಇನ್ನೇನು ಚುನಾವಣೆ, ಮುಂದಿನ ವರುಷ ಎಂದಾಗಲೇ, ಈ ಚುನಾವಣೆಯ ಬಿಸಿ ಸರ್ಕಾರಿ ನೌಕರರಿಗೆ ತಟ್ಟುತ್ತದೆ. ಮತದಾರರಿಗೆ ಚುನಾವಣೆ ಅಂದರೆ, ಒಂದು ದಿನ, ಅದೂ ಮತದಾನ … Read more

ಇಂದಿನ ಯುವಕರಲ್ಲಿ ಹೆಚ್ಚಾಗುತ್ತಿರುವ ಮನೋಬಲದ ಕೊರತೆ: ವಿಜಯ್ ಕುಮಾರ್ ಕೆ.ಎಂ.

ಮನುಷ್ಯನಿಗೆ ದೈಹಿಕ ಬಲದ ಅವಶ್ಯಕತೆ ಎಷ್ಟಿದೆಯೋ ಅಷ್ಟೇ ಮಟ್ಟದ ಮನೋಬಲದ ಅತ್ಯವಶ್ಯಕತೆಯು ಬೇಕಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಈ ಮನೋಬಲದ ಅತಿಯಾದ ಕೊರತೆ ನಮ್ಮ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವುದು ಯುವ ಪೀಳಿಗೆಯ ಭವಿಷ್ಯವನ್ನು ಚಿಂತೆಗೀಡು ಮಾಡುವಂತಿದೆ.ತಮ್ಮ ಆಯ್ಕೆಗಳಲ್ಲಾಗಲಿ, ನಿರ್ಧಾರಗಳಲ್ಲಾಗಲಿ ತೀರ್ಮಾನ ತೆಗೆದುಕೊಳ್ಳ ಬೇಕಾದ ತಮ್ಮ ಚಿತ್ತವನ್ನು ಗೊಂದಲಕ್ಕೆ ಸಿಲುಕಿಸಿ ಪೇಚಾಡುವ ಸ್ಥಿತಿಗೆ ತಲುಪಿರುವಲ್ಲಿ ಅವರ ಮನಸ್ಥಿತಿಯ ಶಕ್ತಿ ಎಷ್ಟರ ಮಟ್ಟಕ್ಕಿದೆ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕದೆ ಇರದು. ಹಾಗಾದರೆ ಮನೋಬಲ ಎಂದರೆ ಏನು?ಅದಿಲ್ಲದೆ ಆಗಬಹುದಾದ ತೊಡಕುಗಳಾದರೂ ಏನು? ಎನುವಾಗ. … Read more

ಅಮ್ಮನಾಗಿ ನಾನು……: ಶಿಲ್ಪಾ ಎಂ. ಕುಕನೂರ್‌

ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ತಾಯಂದಿರ ದಿನಾಚರಣೆಯನ್ನು ಆಚರಿಸಲಾಯಿತು. ಇದು ಪಾಶ್ಚಿಮಾತ್ಯಾ ಸಂಪ್ರದಾಯ ನಾವೇಕೆ ಆಚರಿಸಬೇಕು ಎನ್ನುವ ಮನೋಭಾವ ಕೆಲವರಲ್ಲಿರಬಹುದು. ಆದರೆ ನಮ್ಮ ಭಾರತೀಯ ಪರಂಪರೆಯಲ್ಲೂ ಋಷಿಮುನಿಗಳು ಮಾತೃದೇವೋಭವ ಎಂದು ಹೇಳಿ ತಾಯಿಯನ್ನು ದೇವರಿಗೆ ಹೋಲಿಸಿದ್ದಾರೆ. ಭಾರತದಲ್ಲಿಂದು ಆಧುನಿಕತೆ ಹೆಚ್ಚಾದಂತೆಲ್ಲ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ತಂತ್ರಜ್ಞಾನ ಯುಗದಲ್ಲಿ ನಾಗರಿಕ ಸಮಾಜ ಹೆಚ್ಚು ಶಿಕ್ಷತರಾದಂತೆಲ್ಲ ಭಾವನಾರಹಿತ ಜೀವಿಗಳಾಗಿ ಬದುಕುತ್ತಿದ್ದಾರೆ, ಸಂಭಂದಗಳ ಮೌಲ್ಯಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಬೆಳೆಯುವ ಮಕ್ಕಳಿಗೆ, ಯುವ ಪೀಳಿಗೆಗೆ ಒಂದು ಆದರ್ಶಪ್ರಾಯ ಮಾರ್ಗದರ್ಶನದ ತಳಹದಿ ಒದಗಿಸುವ ಸಲುವಾಗಿ … Read more

ಸಂಡಿಗ್ಯೋಪಾಖ್ಯಾನ: ಡಾ.ವೃಂದಾ ಸಂಗಮ್

ಕನ್ನಡದಾಗ ಋತು ಮಾನ ಮತ್ತ ಋತು ಸಂಹಾರ ಅಂತ ಒಂದು ಶಬ್ದ ಅದ. ಅಂದರ, ಋತುಗಳನ್ನ ಮಾನಕ ಅಂದರ ಅಳತೀ ಮಾಡೋದು ಅಥವಾ ಋತುಗಳನ್ನ ಲೆಕ್ಕ ಹಾಕೋದು ಅಂತನೋ ಇರಬೇಕು. ಇನ್ನ ಕಾಳಿದಾಸ ಅಂದಕೂಡಲೇ ನೆನಪಾಗೋದು ಋತು ಸಂಹಾರ. ಎಲ್ಲಾ ಬಿಟ್ಟು ಈ ಋತುಗಳನ್ಯಾಕೆ ಸಂಹಾರ ಮಾಡಬೇಕೋ ರಾಕ್ಷಸರ ಹಂಗ ಅನ್ನಬ್ಯಾಡರೀ. ನನಗೂ ಗೊತ್ತಿಲ್ಲ. ಆದರ, ವಸಂತ ಋತು ಬಂದಾಗಲೇ ಮಾವು ಹಣ್ಣಾಗಿ, ರಸ ತುಂಬಬೇಕು, ಮಲ್ಲಿಗೆ ಹೂವರಳಿ ಘಮ ಚಲ್ಲಬೇಕು ಎಂದು ಯಾರು ತಿಳಿಸುವರೋ ತಿಳೀಲಿಲ್ಲ … Read more

ಬೇಸರವಾಗದಿರಲಿ ಬೇಸಿಗೆ ರಜೆ: ವಿಜಯ್ ಕುಮಾರ್ ಕೆ. ಎಂ.

ಅದೊಂದಿತ್ತು ಕಾಲ ಬೇಸಿಗೆ ರಜೆ ಎಂದರೆ ಭಾವನೆಗಳ ಸಮಾಗಮ, ಬಂಧುಗಳ ಸಮ್ಮಿಲನ ಇಂದಿರುವ ಈ ಕಾಲ ಬೇಸಿಗೆ ಶಿಬಿರಗಳ, ತಾಪಮಾನದ ತಾಪತ್ರಯಗಳ ಸಂಕಲನ. ಹೌದು ಮಿತ್ರರೇ, 90ರ ದಶಕದ ನಂತರ ಬೇಸಿಗೆ ರಜೆ ಎಂಬುದು ಮಕ್ಕಳ ಮತ್ತು ಪೋಷಕರ ಮನಸ್ಸಿನಲ್ಲಿ ಮಹತ್ತರ ಬದಲಾವಣೆ ತಂದಿರುವುದು ನಮಗೆಲ್ಲಾ ತಿಳಿದ ವಿಚಾರವೇ ಸರಿ. ಆದರೂ ಈ ಕಾಲಘಟ್ಟಕ್ಕೆ ಹೊಂದುಕೊಳ್ಳುವುದಕ್ಕಿಂತಲು ಅಂದಿನ ಕಾಲಘಟ್ಟದ ಸಮಯ ಸಂದರ್ಭಗಳನ್ನು ಈ ಸಮಯಕ್ಕೆ ಅರ್ಥೈಸುವುದೇ ಬಹುಮುಖ್ಯ ಕಾರ್ಯವಾಗಿದೆ. ಅಂದೆಲ್ಲಾ ಬೇಸಿಗೆ ರಜೆ ಬಂತೆಂದರೆ ಕುಟುಂಬ ಕುಟುಂಬಗಳ … Read more

ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ: ಸಂತೋಷ್ ಟಿ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ, ಸಂಶೋಧನೆ, ಕಾವ್ಯ , ಪ್ರಬಂಧ, ವಿಮರ್ಶೆಗಳಿಂದ ಕ್ರಿಯಾಶೀಲ ಲೇಖಕಿಯಾದ ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ ಚಿಂತನೆಗಳು ವಾಸ್ತವಿಕ ನೆಲೆಗಟ್ಟಿನ ಮೇಲೆ ಆಕ್ರತಿ ಪಡೆಯುವಂತಹದ್ದು. ಕಾವ್ಯ ಜಿಜ್ಞಾಸೆಯು ಎಂದಿಗೂ ನಿಂತ ನೀರಲ್ಲ, ಅದು ಸದಾ ಹರಿಯುತ್ತಲೇ ತನ್ನ ಸುತ್ತ ಹಸಿರನ್ನು ಕಾಣುತ್ತದೆ. ಹಾಗಾಗಿಯೇ ಇವರ ಕವಿತೆಗಳಿಗೆ ಸಾಂಕೇತಿಕವಾದ ಚಲನಶೀಲತೆ ಒದಗಿಬರುತ್ತದೆ. ಮಳೆ, ಮರ,ಆಕಾಶ ಮತ್ತು ಭೂಮಿಗಳನ್ನು ಬಳಸಿಬಂದ ಕವಯತ್ರಿ ಎಲ್ಲಿಯೂ ನಿಲ್ಲುವುದಿಲ್ಲ. ಪ್ರಕ್ರತಿಯೇ ಅವರಿಗೆ ಮೆಟಾಫರ್. “ನದಿ ಹರಿಯುತಿರಲಿ” ಸಮಗ್ರ ಕಾವ್ಯ ಸಂಪುಟ ಇವರದಾಗಿದೆ. ಸೇತುವೆಗಳಿರುವುದೇ … Read more

ತೋತಾಪುರಿ ಮೂವಿಯ ನಂಜಮ್ಮನ ಕಥೆ ವ್ಯಥೆ: ಕಿರಣ್ ಕುಮಾರ್ ಡಿ

ತೋತಾಪುರಿ ೨೦೨೨ ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಲನಚಿತ್ರವನ್ನು ವಿಜಯ ಪ್ರಸಾದ್ ಅವರು ನಿರ್ದೇಶಿಸಿದ್ದರೆ, ಕೆ ಎ ಸುರೇಶ್ ರವರು ನಿರ್ಮಾಪಕರಾಗಿರುತ್ತಾರೆ. ಈ ಚಲನಚಿತ್ರದಲ್ಲಿ ಜಗ್ಗೇಶ್, ಡಾಲಿ ಧನಂಜಯ, ಸುಮನ್ ರಂಗನಾಥನ್, ಅದಿತಿ ಪ್ರಭುದೇವ ಮತ್ತು ಮುಂತಾದವರು ನಟನೆ ಮಾಡಿರುತ್ತಾರೆ. ಈ ಚಲನಚಿತ್ರದಲ್ಲಿ ಸ್ವತಃ ವಿಜಯ ಪ್ರಸಾದ್ ರವರು ತಮ್ಮ ಬಾಲ್ಯದಿಂದ ಅರಿವು ಬರುವವರೆಗೂ ನೋಡಿದ ಜಾತಿ ಸಂಘರ್ಷಗಳನ್ನು ಮತ್ತು ಅರಿವು ಬಂದ ಮೇಲೆ ಆದ, ಅದೇ ಜಾತಿ ಸಂಘರ್ಷಗಳ ಅನುಭವವನ್ನ ದೃಶ್ಯರೂಪಕ್ಕೆ ಅಳವಡಿಸಿ ಕೊಟ್ಟಿದ್ದಾರೆ. … Read more

ಶಂಕರ್ ಸಿಹಿಮೊಗ್ಗೆ ಅವರ “ದೇವರ ಕಾಡು” ಕಥೆಯ ವಿಶ್ಲೇಷಣೆ: ಅನುಸೂಯ ಯತೀಶ್

ಶಂಕರ್ ಸಿಹಿಮೊಗ್ಗೆ ಅವರ ಕವಿತೆ, ಲೇಖನ, ಕಥೆ ಸೇರಿದಂತೆ ಯಾವುದೇ ಪ್ರಕಾರಗಳನ್ನು ಓದಿದರೂ ನಮಗೆ ವೈಚಾರಿಕತೆಯ ವಿಚಾರಗಳು, ಚಿಂತನಾಶೀಲ ಅಭಿವ್ಯಕ್ತಿ ಹಾಗೂ ವೈಜ್ಞಾನಿಕ ತಳಹದಿ ಬಹುವಾಗಿ ಗೋಚರಿಸುತ್ತವೆ. ಬಹುಶಃ ಇವರು ವಿಜ್ಞಾನ ವಿದ್ಯಾರ್ಥಿಯಾಗಿದ್ದರ ಫಲಶೃತಿಯಿರಬಹುದು. ಅಂತಹುದೇ ಒಂದು ನೆಲೆಗಟ್ಟಿನಲ್ಲಿ ಸೃಷ್ಟಿಯಾದ ಕಥೆ ಶಂಕರ್ ಸಿಹಿಮೊಗ್ಗೆ ಅವರ ಈ ‘ದೇವರ ಕಾಡು’. ಇದು ಮಾನವನ ದುರಾಸೆಯ ಫಲಿತವಾಗಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿರುವ ಆಘಾತಕಾರಿ ಸಂಗತಿಯನ್ನು ತಮ್ಮ ಪರಿಸರ ಪ್ರೀತಿ ಮತ್ತು ವೈಚಾರಿಕ ಪ್ರಜ್ಞೆಯಡಿಯಲ್ಲಿ ಕಥಾನಕವಾಗಿಸಿದ್ದಾರೆ. ಅಪ್ಪಟ ಗ್ರಾಮೀಣ … Read more

ಬೈಸಿಕಲ್ ಥೀವ್ಸ್ ವಿಮರ್ಶೆ: ಕಿರಣ್ ಕುಮಾರ್ ಡಿ

‘ಬೈಸಿಕಲ್ ಥೀವ್ಸ್’ ೧೯೪೮ರಲ್ಲಿ ಇಟಾಲಿಯನ್ ಭಾಷೆಯಲ್ಲಿ ತೆರೆಕಂಡ ಚಲನಚಿತ್ರ. ಇಟಾಲಿಯಲ್ಲಿ “ಲಾದ್ರಿ ದಿ ಬೈಸಿಕ್ಲೆಟ್” ಹೆಸರಿನಲ್ಲಿ ತೆರೆಕಂಡಿತು. ಚಲನಚಿತ್ರದ ಕಥೆಯನ್ನು ಸಿಸೇರ್ ಜವಟ್ಟಿನಿಯವರು ೧೯೪೬ರಲ್ಲಿ ಪ್ರಕಟಗೊಂಡ “ಲಾದ್ರಿ ದಿ ಬೈಸಿಕ್ಲೆಟ್” ಕಾದಂಬರಿಯಿಂದ ಅಳವಡಿಸಿಕೊಂಡು ಬರೆದಿದ್ದಾರೆ. ಈ ಚಲನಚಿತ್ರವನ್ನು ವಿಟ್ಟೋರಿಯಾ ಡಿ ಸಿಕಾ ಅವರು ನಿರ್ದೇಶಿಸಿದ್ದಾರೆ. ಈ ಚಲನಚಿತ್ರ ೨ನೇ ವಿಶ್ವಯುದ್ಧದ ನಂತರ ತೆರೆಕಂಡಿದ್ದು. ೨ನೇ ವಿಶ್ವಯುದ್ಧ ಮುಗಿದ ಮೇಲೆ ಇಟಾಲಿಯಲ್ಲಿ ಎದುರಾದ ಉದ್ಯೋಗದ ಸಮಸ್ಯೆಯನ್ನು ಮತ್ತು ಬಡತನವನ್ನು ಹಲವಾರು ಪಾತ್ರದ ಮೂಲಕ ಹೇಳುತ್ತದೆ ಈ ಚಲನಚಿತ್ರ. ಚಲನಚಿತ್ರದ … Read more

“ನೇರ ವ್ಯಕ್ತಿತ್ವ ಶಕ್ತಿಯೇ…?? “: ರೇಖಾ ಶಂಕರ್.

ಆತ್ಮೀಯ ಓದುಗರೇ, ನಾನಿವತ್ತು ಹೇಳ್ತಿರೊ ವಿಷ್ಯ ಅಂದ್ರೆ ನೇರ ವ್ಯಕ್ತಿತ್ವದ ಬಗ್ಗೆ, ಅದೇ ಇದ್ದಿದ್ದು ಇದ್ದಂಗೆ ಹೇಳುದ್ರೆ ಎದ್ ಬಂದ್ ಎದೆಗೆ ಒದ್ರಂತೆ ಅಂತ ಗಾದೆ ಹೇಳ್ತಾರಲ್ಲ. ಅದೇ ವಿಷಯ…., ಅದಕ್ಕೆ ನೇರ ನುಡಿಯ ವ್ಯಕ್ತಿತ್ವ ಅಂತ್ಲೂ ಹೇಳ್ಬೌದು. ನೋಡೋಕೆ ಮನುಷ್ಯ ಒಂದೆ ಥರ ಕಾಣ್ತಿದ್ರೂ ಅವನಲ್ಲಿ ಇರೊ ಗುಣ ಸ್ವಭಾವಗಳು ವಿಭಿನ್ನವಾಗಿರತ್ತೆ, ಅವ ನಡೆಯೊ ಹಾದಿ ಆಡುವ ಮಾತು ತನ್ನ ನೋಡುವ ನೋಟ ಒಟ್ಟಾರೆ ತನ್ನ ಬದುಕುವ ಶೈಲಿಯನ್ನೆ ವಿಭಿನ್ನವಾಗಿಟ್ಕೊಂಡಿರ್ತಾನೆ. ” ಲೋಕೊ ಭಿನ್ನ ರುಚಿಃ … Read more

ನಾಸಿಕ ಪುರಾಣ: ಡಾ.ವೃಂದಾ ಸಂಗಮ್,

ನಾಸಿಕದಾಗ ಅಂತ ನಮ್ಮ ಶೀನೂ ಮಾಮಾ ಮಾತು ಶುರು ಮಾಡಿದರೂಂದರ, ನಾವೆಲ್ಲಾ, ಮೂಗಿನ ಮೇಲೊಂದು ಬೆರಳಿಟ್ಟುಕೊಂಡು ಕೂತಿರಬೇಕು. ಯಾಕಂದರ ನಮ್ಮ ಶೀನೂ ಮಾಮಾ ಅಂದರ ಅಸಾಧಾರಣ ವ್ಯಕ್ತಿ. ಹಂಗಂತ, ಭಾಳ, ಭಾಳ ಸಾಧನಾ ಮಾಡ್ಯಾರ ಅಂತಲ್ಲ. ಸೀದಾ ಹಾದಿಯವರಲ್ಲ. ಸೊಟ್ಟ ಮೂಗಿನವರು. ಅಂದರ, ಹೀಂಗ, ಮಾತು ಶುರು ಮಾಡಿದಾಗ, ನಾವು ಯಾವ ರೀತಿ ವಿಚಾರ ಮಾಡಿದರೂ, ಇವರು ಈ ವಿಷಯದ ಹರಟಿ ಪ್ರಾರಂಭಿಸಬಹುದು ಅಂತ ಒಂದು ಅಂದಾಜು ಇಟ್ಟಕೊಂಡಿದ್ದರ, ಅದನ್ನೆಲ್ಲಾ, ಮುರದು, ಹೊಸಾ ದಾರಿಯೊಳಗೇನೇ ಹರಟೀ ಪ್ರಾರಂಭ … Read more

ಸಂಕ್ರಮಣ: ಡಾ. ವೃಂದಾ ಸಂಗಮ್

ಎಲ್ಲಾ ಕತೀಗಳೂ ಸಹ ಒಂದೂರಾಗ, ಅಂತ ಶುರುವಾಗೋ ಹಂಗ, ಹರಟೆಗಳು ಮಾತ್ರ ನಮ್ಮೂರಾಗ ಅಂತ ಶುರುವಾಗತಿರಬೇಕು. ನಮ್ಮೂರಾಗ ಅಷ್ಟ ಅಲ್ಲ, ನಾವು ಸಣ್ಣವರಿದ್ದಾಗ, ಅಂತನೂ ಇರತಾವ. ಯಾಕಂದರ, ಸಣ್ಣವರಿದ್ದಾಗ ಇದ್ದ ಕುತೂಹಲ, ಗಳಿಸಿದ ವಿಶೇಷ ಅನುಭದಷ್ಟು ಮುಂದಿನ ಜೀವನದಾಗ ಇರೋದಿಲ್ಲ. ಹಬ್ಬ ಹರಿದಿನಗಳ ನೆನಪಂತೂ ಬಾಲ್ಯದ ಅನುಭವಕ್ಕಿಂತಾ ಮುಂದ ಯಾವುದೂ ನೆನಪಿರೋದಿಲ್ಲ. ಮತ್ತ, ಅದನ್ನ ಹಂಚಿಕೊಳ್ಳೋದರಾಗೂ ಇರತದ. ಹಂಗನ ಇದು ಸಂಕ್ರಮಣ ಹಬ್ಬ. ಸಂಕ್ರಮಣ ಅಂದರ, ಇರೋ ಹನ್ನೆರಡು ರಾಶಿಗಳೊಳಗ, ಪ್ರತಿಯೊಂದು ರಾಶಿಯೊಳಗ ಸೂರ್ಯ ಚಲಸತಾನ, ಅಂದರ … Read more

ಯುವ ಮಂದಿಯಲ್ಲಿ ತಂತ್ರಜ್ಞಾನ ಶಿಕ್ಷಣದ ಕೊರತೆ: ಕಿರಣ್ ಕುಮಾರ್ ಡಿ

ಯುವ ಪೀಳಿಗೆಯನ್ನು ದೇಶದ ಶಕ್ತಿ ಎಂದು ಹೇಳುತ್ತಾರೆ. ಅನೇಕ ಮಹನೀಯರು ಯುವ ಸಮೂಹವನ್ನು ದೇಶದ ಭವಿಷ್ಯ ಎಂದು ಕರೆದಿದ್ದಾರೆ. ದೇಶ ಕಟ್ಟಲು ಈ ಯುವಸಮೂಹ ಬಹಳ ದೊಡ್ಡ ಪಾತ್ರವನ್ನು ನಿಭಾಯಿಸುತ್ತಾರೆ. ನಮ್ಮ ದೇಶದ ಸಂಪತ್ತನ್ನು ಹೆಚ್ಚಿಸಲು ಈ ಯುವಸಮೂಹ ಬಹಳ ಶ್ರಮ ವಹಿಸುತ್ತಾರೆ. ನಮ್ಮ ದೇಶದ ಒಂದಿಷ್ಟು ಯುವಸಮೂಹ ಬಹಳಷ್ಟು ಸಾಧನೆ ಮತ್ತು ಅವಿಷ್ಕಾರಗಳನ್ನು ಮಾಡ್ಡಿದ್ದಾರೆ. ನಮ್ಮ ದೇಶದ ಜನಸಂಖ್ಯೆ ೧೩೦ ಕೋಟಿ ಅದರಲ್ಲಿ ಯುವಸಮೂಹ ೬೦ ಕೋಟಿಗೂ ಹೆಚ್ಚು. ಈ ಎಲ್ಲಾ ಯುವ ಮಂದಿಯಲ್ಲಿ ಎಷ್ಟು … Read more